ಕುಂದಾಪುರ,ಫೆ.14: ಕಂಡ್ಲೂರು ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟ ನೂತನ ಚರ್ಚ್ ಕಟ್ಟಡವನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಇವರು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಚರ್ಚಿನ ಎದುರುಗಡೆ ನಿರ್ಮಾಣಗೊಂಡ ಮೇರಿ ಮಾತೆಯ ಗ್ರೊಟ್ಟೊವನ್ನು ಉಡುಪಿ ಧರ್ಮಪ್ರಾಂತ್ರದ ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶಿರ್ವವಚನ ಮಾಡಿ ಉದ್ಘಾಟನೆ ಮಾಡಿದರು.
ಚರ್ಚಿನ ನೂತನ ಕಟ್ಟಡಕ್ಕೆ 2019 ರಲ್ಲಿ ಶಂಕುಸ್ಥಾಪನೆ ಮಾಡಿದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಈಗ ಪುರ್ಣಗೊಂಡ ನೂತನ ಚರ್ಚ್ ಕಟ್ಟಡವನ್ನು ಉದ್ಘಾಟನೆ ಮಾಡಿ ಆಶಿರ್ವಚಿಸಿ, ನೂತನ ಚರ್ಚ್ನ್ನು ಆಶಿರ್ವದಿಸುವ ಎಲ್ಲಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಪವಿತ್ರ ಬಲಿದಾನದ ನೇತ್ರತ್ವನ್ನು ವಹಿಸಿಕೊಂಡು, ದಿವ್ಯ ಬಲಿದಾನವನ್ನು ಅರ್ಪಿಸಿ “ದೇವಾಲಯವು ದೇವರು ವಾಸಿಸುವ ಪವಿತ್ರ ಸ್ಥಳ, ಇದು ದೇವರ ಅಸ್ಥಿತ್ವವುಳ್ಳ ಜಾಗ ಇದು. ದೇವರು ನಮ್ಮ ಜತೆ ಇದ್ದು ನಮ್ಮ ಜತೆ ಜೀವಿಸುವ ಸ್ಥಳ. ದೇವಾಲಯವು ಸ್ವರ್ಗದ ದ್ವಾರವಾಗಿದೆ, ದೇವಾಲಯದ ದ್ವಾರದಿಂದ ಸರ್ವಶ್ವರನ ಮಹಿಮೆ ಪ್ರವೇಶಿಸಿ ದೇವಾಲಯದೊಳಗೆಲ್ಲ ತುಂಬುತ್ತದೆ, ಆದರಿಂದ ಇದು ಬಹು ಪವಿತ್ರ ಥಳವಾಗಿದೆ. ಆದರಿಂದ ನಾವೆಲ್ಲ ಈ ಥಳದಲ್ಲಿ ಭಯ ಭಕ್ತಿಯಿಂದ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಶುಭ ಸಂದೇಶ ನೀಡಿದರು.
ಈ ಪವಿತ್ರ ಆಶಿರ್ವಚನ ಮತ್ತು ಬಲಿದಾನದ ಕಾರ್ಯಕ್ರಮದಲ್ಲಿ ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ರದ ಛಾನ್ಸಲರ್ ಅ|ವಂ|ರೋಶನ್ ಡಿಸೋಜಾ, ಕುಂದಾಪುರ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಭಾಗಿಯಾದರು. ಧರ್ಮಗುರು ವಂ|ಸಿರಿಲ್ ಲೋಬೊ ಧಾರ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರ ನೆಡದ ಸಭಾಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ಸ್ವಾಗತಿಸಿದರು. ಪಾಲನ ಮಂಡಳಿ ಕಾರ್ಯದರ್ಶಿ ಲವೀನಾ ಡೆಸಾ ವರದಿಯನ್ನು ವಾಚಿಸಿದರು, ಕಂಡ್ಲೂರು ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಇಲಿಯಾಸ್ ನಾಡ್ವಿ ಇವರು ಸಂದೇಶ ನೀಡಿದರು. ಅ|ವಂ| ಸ್ಟ್ಯಾನಿ ತಾವ್ರೊ ಈ ಚರ್ಚಿನ ಕಾಮಗಾರಿಗಾಗಿ ನಮ್ಮ ವಂದನೀಯ ಬಿಷಪ್ ಜೆರಾಲ್ಡ್ ತುಂಬ ಮುತುವರ್ಜಿಯನ್ನು ವಹಿಸಿಕೊಂಡಿದ್ದರೆಂದು ತಿಳಿಸಿ, ನಿಮ್ಮ ಚರ್ಚಿನಲ್ಲಿ ನಮ್ಮ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಚರ್ಚ್ ಆದ ಕುಂದಾಪುರ ಚರ್ಚಿನ ಪಾಲಕಿ ರೋಜರಿಮಾತೆಯ ವರ್ಣಚಿತ್ರವನ್ನು ಹಾಕಿ, ರೋಜರಿ ಮಾತೆ ಈ ಕಡೆಯ ಎಲ್ಲಾ ಚರ್ಚಗಳ ಮಾತೆಯೆಂದು ಬಿಂಬಿಸಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಚರ್ಚಿನಲ್ಲಿ ಹಿಂದೆ ಸೇವೆ ನೀಡಿದ ಧರ್ಮಗುರುಗಳನ್ನು, ಇತರ ಧರ್ಮಗುರುಗಳನ್ನು, ಕಟ್ಟಡ ರಚನೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು. ಚರ್ಚಿನ ಧರ್ಮಗುರು ವಂ| ವಂ|ಕೆನ್ಯೂಟ್ ಬಾರ್ಬೊಜಾ ಇವರನ್ನು ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಬಿಷಪರು ಸನ್ಮಾನಿಸಿದರು. ಬಿಷಪ್ ಜೆರಾಲ್ಡ್ ಲೋಬೊರವರನ್ನು ಫಾ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಗೌರವಿಸಲಾಯಿತು. ಬಿಶಪರು “ಈ ನೂತನ ಕಟ್ಟಡ ಪೂರ್ಣಗೊಂದಿದಕ್ಕೆ ಸಂತೋಷವಾಗಿದೆ, ನಿಮ್ಮ ಶ್ರಮ ತ್ಯಾಗ ಮತ್ತು ಇತರ ಚರ್ಚುಗಳ ಉದಾರ ಮನಸ್ಸಿನವರಿಂದ ಇದು ಸಾಕಾರಗೊಂಡಿದೆ” ಎಂದು ಶುಭಕೋರಿ ಅಭಿನಂದಿಸಿದರು.ವೆನೀಶಾ ಡಿಸೋಜಾ ಮತ್ತು ಜ್ಯೋತಿ ಬುತೆಲ್ಲೊ ನಿರೂಪಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ವಿನೋದ್ ಡಿಸೋಜಾ ವಂದಿಸಿದರು.
Day: February 14, 2024
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಹಿಳಾ ವಿಭಾಗದ ಥ್ರೋಬಾಲ್ ಪಂದ್ಯಾಟ ಸಮಾರೋಪ ಬೆಳುವಾಯಿ ಪ್ರಕಾಶ್ ಫ್ರೆಂಡ್ಸ್ ತಂಡಕ್ಕೆ ಪ್ರಥಮ ಪ್ರಶಸ್ತಿ ಹಾಗೂ ಬೋಳ ವೀರ ಮಾರುತಿ ‘ಎ’ ತಂಡಕ್ಕೆ ದ್ವಿತೀಯ ಪ್ರಶಸ್ತಿ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ - ನಂದಳಿಕೆಯ ರಜತ ವರ್ಷದ ಸರಣಿ ಕಾರ್ಯಕ್ರಮದ ಅಂಗವಾಗಿ ಮಹಿಳಾ – ಯುವತಿಯರ ವಿಭಾಗದ ಥ್ರೋಬಾಲ್ ಪಂದ್ಯಾಟವು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ರಂಗ ಮಂದಿರದ ಬಳಿ ಆದಿತ್ಯವಾರ ಜರಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮಹಿಳಾ ಸಂಘಟನಾ ಕಾರ್ಯದರ್ಶಿ ಅಬ್ಬನಡ್ಕ ಪದ್ಮಶ್ರೀ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಕ್ಷೇತ್ರದ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ, ಬೋಳ ಕ್ಷೇತ್ರದ ನಿಕಟ ಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪ ಸತೀಶ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮೇಶ್ವರೀ ಶೆಟ್ಟಿ, ಮೂಡಬಿದಿರೆ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಇನ್ನಾ ಕ್ಷೇತ್ರದ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯ ಎಸ್. ಕೋಟ್ಯಾನ್, ರೋಟರಿ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕೆ., ನಿಟ್ಟೆ-ಕೆಮ್ಮಣ್ಣು ರೋಟರಿ ಸಮುದಾಯದಳದ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಬೋಳ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಸಂಧ್ಯಾ ಶೆಟ್ಟಿ, ಬೆಳ್ಮಣ್ಣು ಶ್ರೀ ದೇವಿ ಕ್ಯಾಟರರ್ಸ್ ಮಾಲಕರಾದ ಸತ್ಯನಾರಾಯಣ ಭಟ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಪಂದ್ಯಾಟದ ನಿರ್ದೇಶಕರಾದ ಹರಿಣಾಕ್ಷಿ ಪೂಜಾರಿ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಪದ್ಮಶ್ರೀ ಪೂಜಾರಿ ಸ್ವಾಗತಿಸಿದರು, ಲೀಲಾ ಪೂಜಾರಿ ವಂದಿಸಿದರು, ಬೋಳ ನಿಶ್ಮಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಬೆಳುವಾಯಿ ಪ್ರಕಾಶ್ ಫ್ರೆಂಡ್ಸ್ ತಂಡಕ್ಕೆ ಪ್ರಥಮ ಪ್ರಶಸ್ತಿ ಹಾಗೂ ಬೋಳ ವೀರ ಮಾರುತಿ ‘ಎ’ ತಂಡಕ್ಕೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.
ಒಟ್ಟು ನಂದಳಿಕೆ, ಬೆಳ್ಮಣ್ಣು, ಬೋಳ, ಕೆದಿಂಜೆ, ಮಾಳ, ನಿಟ್ಟೆ, ಶಿರ್ವ, ಕಾರ್ಕಳ, ಬೇಲಾಡಿ, ಬೆಳುವಾಯಿ, ಮೂಡಬಿದ್ರೆ, ಹೆಬ್ರಿ ಪರಿಸರದ ಒಟ್ಟು 19 ತಂಡಗಳು ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿವೆ.
St. Anthony Relic (holy tongue) Feast at St. Annes friary / ಸೇಂಟ್ ಆನೆಸ್ ಮಠದಲ್ಲಿ ಸೇಂಟ್ ಆಂಥೋನಿ ಅವಶೇಷದ (ಪವಿತ್ರ ನಾಲಿಗೆಯ) ಹಬ್ಬ
The feast of St Antony’s relic (holy tongue) was celebrated with solemn high Mass at St Anne’s friary Chapel on the 13th of February at 6pm by Rev Dr Rocky D’Cunha the superior of the house. It was concelebrated by all the fathers of the friary. Hundreds of devotees were gathered to thank St Antony for the favours received. A candle light procession was held from the grotto of St Antony followed by Mass. During the homily Fr Rocky highlighted the importance of using our god-given tongue for proclaiming the word of God and defending our faith against the heretics. St Antony’s tongue was kept free from corruption for preaching the word of God. This was the great reward God gave to St Antony said the preacher quoting the words of St Bonaventure the then general of the Order. Mr Joe and group (Padre Pio choir) conducted the melodious choir and led the people to pray. All with the lit candles prayed for peace among 40 war stricken countries. . Fr Richard thanked all those who worked for the success of the feast. At the end of the Mass all were given St Antony’s bread and a home made soft drink.
ಸೇಂಟ್ ಆನೆಸ್ ಮಠದಲ್ಲಿ ಸೇಂಟ್ ಆಂಥೋನಿ ಅವಶೇಷದ (ಪವಿತ್ರ ನಾಲಿಗೆಯ) ಹಬ್ಬ
ಫೆಬ್ರುವರಿ 13 ರಂದು ಸಂಜೆ 6 ಗಂಟೆಗೆ ಸೇಂಟ್ ಆ್ಯನ್ಸ್ ಫ್ರೈರಿ ಚಾಪೆಲ್ನಲ್ಲಿ ಸೇಂಟ್ ಆಂಟೋನಿ ಅವರ ಸ್ಮಾರಕದ (ಪವಿತ್ರ ಭಾಷೆ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇದನ್ನು ಫ್ರೈರಿಯ ಎಲ್ಲಾ ಪಿತಾಮಹರು ಆಚರಿಸಿದರು. ನೂರಾರು ಭಕ್ತರು ಸಂತ ಆಂಟನಿ ಅವರಿಗೆ ಧನ್ಯವಾದ ಅರ್ಪಿಸಿದರು. ಸೇಂಟ್ ಆಂಟೋನಿ ಗ್ರೊಟ್ಟೊದಿಂದ ಮೇಣದಬತ್ತಿಯ ಮೆರವಣಿಗೆಯನ್ನು ನಡೆಸಲಾಯಿತು, ನಂತರ ಮಾಸ್, ಧರ್ಮೋಪದೇಶದ ಸಮಯದಲ್ಲಿ ಫಾದರ್ ರಾಕಿ ಅವರು ದೇವರ ವಾಕ್ಯವನ್ನು ಘೋಷಿಸಲು ಮತ್ತು ಧರ್ಮದ್ರೋಹಿಗಳ ವಿರುದ್ಧ ನಮ್ಮ ನಂಬಿಕೆಯನ್ನು ರಕ್ಷಿಸಲು ನಮ್ಮ ದೇವರು ನೀಡಿದ ನಾಲಿಗೆಯನ್ನು ಬಳಸುವ ಮಹತ್ವವನ್ನು ತಿಳಿಸಿದರು. ದೇವರ ವಾಕ್ಯವನ್ನು ಬೋಧಿಸುವುದಕ್ಕಾಗಿ ಸೇಂಟ್ ಆಂಟನಿಯವರ ನಾಲಿಗೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಾಯಿತು. ಇದು ಸಂತ ಆಂಟೋನಿ ಅವರಿಗೆ ದೇವರು ನೀಡಿದ ದೊಡ್ಡ ಪ್ರತಿಫಲವಾಗಿದೆ ಎಂದು ಬೋಧಕರು ಅಂದಿನ ಆರ್ಡರ್ ಜನರಲ್ ಸೇಂಟ್ ಬೊನಾವೆಂಚರ್ ಅವರ ಮಾತುಗಳನ್ನು ಉಲ್ಲೇಖಿಸಿದರು. ಶ್ರೀ ಜೋ ಮತ್ತು ಗುಂಪು (ಪಡ್ರೆ ಪಿಯೊ ಗಾಯಕ) ಸುಮಧುರ ಗಾಯನವನ್ನು ನಡೆಸಿ ಜನರನ್ನು ಪ್ರಾರ್ಥನೆಗೆ ಕರೆದೊಯ್ದರು. ಎಲ್ಲರೂ ಬೆಳಗಿದ ಮೇಣದಬತ್ತಿಗಳೊಂದಿಗೆ 40 ಯುದ್ಧ ಪೀಡಿತ ದೇಶಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು. . ಹಬ್ಬದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಫಾದರ್ ರಿಚರ್ಡ್ ಕೃತಜ್ಞತೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ಕೊನೆಯಲ್ಲಿ ಎಲ್ಲರಿಗೂ ಸೇಂಟ್ ಆಂಟೋನಿ ಬ್ರೆಡ್ ಮತ್ತು ಮನೆಯಲ್ಲಿ ತಯಾರಿಸಿದ ತಂಪು ಪಾನೀಯವನ್ನು ನೀಡಲಾಯಿತು.
ಎಸ್ಎಫ್ಎಸ್ ಪಿಯು ಕಾಲೇಜಿಗೆ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಕೆ
ಕೋಲಾರ,ಫೆ.13: ಭಾರತ ದೇಶದ ಅತ್ಯಂತ ಪ್ರತಿಷ್ಠಿತ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಹೊರವಲಯದಲ್ಲಿರುವ ಎಸ್ಎಫ್ಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ.
ಜೆಇಇ ಮೇನ್ಸ್ ಮೊದಲ ಫಲಿತಾಂಶ ಹೊರಬಂದಿದ್ದು, ಅಭಿಷೇಕ್ ರೆಡ್ಡಿ ಆರ್ 99.339 ಮತ್ತು ಪ್ರಣವ ಭಟ್ 97,380 ನೊಂದಿಗೆ ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿಗಳಾಗಿ ಹೊರಬಂದಿದ್ದಾರೆಂದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಸಂತಸದಿಂದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿಯೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗಳಲ್ಲಿ ದೇಶದಲ್ಲಿ 93, 207, 745 ಜೆಇಇ ಮೇನ್ಸ್ನಲ್ಲಿ 419, 547 ರ್ಯಾಂಕ್ ಮತ್ತು ನೀಟ್ ಪರೀಕ್ಷೆಯಲ್ಲಿಯೂ ದೇಶದಲ್ಲಿ 180ನೇ ರ್ಯಾಂಕ್ ನೊಂದಿಗೆ 11 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾರೆಂದು ಪ್ರಾಂಶುಪಾಲರು ತಿಳಿಸಿರುತ್ತಾರೆ.
ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿಯೂ ನಮ್ಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆಂದು ಆಶಾಭಾವನೆ ವ್ಯಕ್ತಪಡಿಸಿರುತ್ತಾರೆ.