ದಿನಾಂಕ 14 -01- 2024 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ದಿವ್ಯ ಜ್ಯೋತಿ ಸಂಚಾಲಕರಾದ ವಂದನೀಯ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸೇಬಸ್ಟಿಯನ್ ನರ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನವನ್ನು ನೀಡಲಾಯಿತುತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ನಿಟ್ಟೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್, ಪಂಚಾಯತ್ ಸದಸ್ಯರಾದ ರಾಜೇಶ್ ಸ್ವಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್ ದಿವ್ಯಜ್ಯೋತಿಯ ನಿರ್ದೇಶಕರಾದ ವ0ದನೆಯ ಸಿರಿಲ್ ಲೋಬೊ,
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಶ್ರೀಮತಿ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ತದನಂತರ ಮಾತನಾಡಿದ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ನಿತಿನ್ ಸಾಲಿಯಾನ್ ಇವರು ಈ ಹಬ್ಬ ನಮ್ಮ ಊರಿನ ಜಾತ್ರೆಯಾಗಿದೆ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು. ತದನಂತರ ವಾOದನೆಯ ಲ್ಯಾರಿ ಪಿಂಟೊ ಇವರು ಪ್ರಾರ್ಥನೆಯ ಮೂಲಕ ಹಬ್ಬದ ಮೇಲೆ ಆಶೀರ್ವಚನವಿತಾರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಸಿದುರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ. ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
Day: January 16, 2024
ಶಿವಯೋಗಿ ಸಿದ್ದರಾಮೇಶ್ವರರು ಭಕ್ತಿ, ಭಕ್ತ ಹಾಗೂ ವಾಸ್ತವದಲ್ಲಿನ ನಡವಳಿಕೆ ಕುರಿತು ತಿಳಿಸಿದ್ದಾರೆ-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ 2 : ಭಕ್ತಿ, ಭಕ್ತ ಹಾಗೂ ವಾಸ್ತವದಲ್ಲಿನ ನಡವಳಿಕೆ ಕುರಿತು ತಿಳಿಸಿದ್ದಾರೆ. ಅಂತಹ ಮಹನೀಯರ ಸಾಧನೆ ನಮಗೆ ಸ್ಪೂರ್ತಿಯಾಗಬೇಕಿದ್ದು, ಹಿಂದುಳಿದ ಸಮಾಜ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ತಾಲೂಕಿಗೆ ಸಂಬಂದಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ 3 ಸಾವಿರ ಎಕರೆಗಳಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸೃಷ್ಟಿ ಮಾಡಿ ನಿರುದ್ಯೋಗ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು. ಕ್ಷೇತ್ರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರು ತಮಗೆ ಬೇಕಾದ ಮೂಲಸೌಲಭ್ಯಗಳ ಬಗ್ಗೆ ನನ್ನ ಗಮನಕ್ಕೆ ತಂದು ಅವುಗಳ ಸರಿಪಡಿಸಿಕೊಂಡು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವುದು. ಹಾಗು ಸಾರ್ವಜನಿಕರು ತಮ್ಮ ಮಕ್ಕಳ ಶಿಕ್ಷಣ , ಆರೋಗ್ಯ, ಯಾವುದೇ ಇಲಾಖೆಗೆ ಸಂಬಂದಿಸಿದ ಕೆಲಸ ಕಾರ್ಯಗಳು ಇದ್ದ ಪಕ್ಷದಲ್ಲಿ ನನ್ನ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿಕೊಳ್ಳವಂತೆ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರವನ್ನು ಹಾಕುವುದರ ಮೂಲಕ ನಮನ ಸಲ್ಲಿಸಿದರು ಸಮುದಾಯದಲ್ಲಿನ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಲೋಕೋಪಯೋಗಿ ಇಲಾಖೆ ಎಇಇ ನಾರಾಯಣಸ್ವಾಮಿ, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಆರ್ಐ ಮುನಿರೆಡ್ಡಿ, ಪಶುಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್, ನಿವೃತ್ತ ಶಿಕ್ಷಕ ತಿಪಣ್ಣ, ಜೆ.ವಿ.ಕಾಲೋನಿ ಗ್ರಾ.ಪಂ.ಸದಸ್ಯ ರಾಜಣ್ಣ, ಮುಖಂಡರಾದ ಶಿವಪುರ ಗಣೇಶ್. , ಬೈರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್,ಪ್ರಸನ್ನ, ನಾರಾಯಣಸ್ವಾಮಿ ಅಭಿಷೇಕ್ ಇದ್ದರು.
ಮಾವು ರೋಗಗಳಿಂದ ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಬೇಸರ
ಶ್ರೀನಿವಾಸಪುರ 1 : ಕಳೆದ ಸಾಲಿನಲ್ಲಿ ವಿವಿಧ ಹೆಚ್ಚು ರೋಗಗಳಿಂದ ಮಾವು ಫಸಲು ಸರಿಯಾಗಿ ಬಾರದೆ ಔಷಧಿಯನ್ನು ಸಿಂಪಡಣೆ ಮಾಡಿದರೂ ಸಹ ರೋಗವನ್ನು ತಡೆಗಟ್ಟಲು ಸಾಧ್ಯವಾಗದೆ ಹಾಗೂ ಮಾರುಕಟ್ಟೆಯಲ್ಲಿ ಇರುವಂತಹ ಒಳ್ಳೆಯ ಫಸಲಿಗೆ ನಿಗಧಿತ ಬೆಲೆ ಇಲ್ಲದೆ ಮಾವು ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶಂಕರಮಠದ ಬಳಿಯ ಕರ್ನಾಟಕ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಸೋಮವಾರ ಜಿಲ್ಲೆಯ ಮಾವು ಬೆಳಗಾರ ಮಂಡಲಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಮಾವು ಬೆಳಗಾರ ಸಂಘವು ಹೋರಾಟಗಳೇ ಮಾಡಿಕೊಂಡು ಬಂದಿದ್ದವು , ಆದರೆ ಈ ಬಾರಿ ವಿಶೇಷವಾಗಿ ಮಾವು ಬೆಳೆಗಾರ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಮಾವು ಬೆಳೆಯ ಪ್ರಾರಂಭ ಹಂತದಲ್ಲಿಯೇ ವಿವಿಧ ರೀತಿಯ ರೋಗಗಳನ್ನು ತಡೆಗಟ್ಟಲು ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಸ್ಥೆ ಹಾಗು ಕೋಲಾರ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳನ್ನು 17 ರಂದು ಪಟ್ಟಣದ ಮಾರುತಿ ಸಬಾಭವನದಲ್ಲಿ ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಇಲಾಖೆ , ಮಾವು ಅಭಿವೃದ್ಧಿ ಮಂಡಲಿ , ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಮಾವು ಬೆಳಗಾರ ತೋಟಗಳಿಗೆ ರೋಗಗಳನ್ನು ತಡೆಗಟ್ಟಲು ಔಷಧಿಗಳನ್ನು ಯಾವ ರೀತಿಯಲ್ಲಿ ಸಿಂಪಡಣೆ ಮಾಡಬೇಕು ಎಂಬುದನ್ನ ವಿಜ್ಞಾನಿಗಳು ತಿಳಿಸಿಕೊಡಲಾಗುವುದು , ಈ ಕಾರ್ಯಾಗಾರದಲ್ಲಿ ವಿಜ್ಞಾನಿಗಳು ರೈತರಿಗೆ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಲಿದ್ದಾರೆ. ಈ ಒಂದು ಕಾರ್ಯಾಗಾರದಲ್ಲಿ ಜಿಲ್ಲಾಯಾದ್ಯಾಂತ ಮಾವು ಬೆಳಗಾರರು ಪಾಲ್ಗುಂಡು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಲಹೆಗಳನ್ನು ಪಡೆಯಬಹದಾಗಿದೆ ಎಂದರು.
ವಿಜ್ಞಾನಿಗಳು ಕೊಟ್ಟಂತಹ ಸಲಹೆ , ಮಾರ್ಗದರ್ಶನ , ಸೂಚನೆಗಳನ್ನು ಸದುಪಯೋಗವನ್ನು ಪಡೆದು ಈ ಬಾರಿ ಉತ್ತಮ ಫಸಲನ್ನು ಪಡೆಯಲು ಮನವಿ ಮಾಡಿದರು. ಒಂದು ದಿನದ ಕಾರ್ಯಾಗಾರದಲ್ಲಿ ವಿವಿಧ ಔಷಧಿ ಕಂಪನಿಗಳು ತಮ್ಮ ಕಂಪನಿಯಿಂದ ಮಳಿಗೆಗೆಗಳನ್ನು ತರೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮಾತನಾಡಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದ್ದು, ಮಾರುಕಟ್ಟೆ ಬೇಡಿಕೆ ಆಧಾರಿತವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಯಲು ರೈತರಿಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಅನುಕೂಲವಾಗಲಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಾತಕೋಟೆ ನವೀನ್ ಮಾತನಾಡಿದರು. ರೈತ ಸಂಘದ ಸದಸ್ಯ ಅಸ್ಲಾಂಪಾಷಾ ಇದ್ದರು.
ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು/First Christian Badminton Premier League by Christian Sports Association held at Father Mullers Indoor Stadium
ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ರವರ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಅನ್ನು ಜನವರಿ 14, 2024 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಭವ್ಯವಾದ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು, ಮುಖ್ಯ ಅತಿಥಿಗಳಾಗಿ ಎಂ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರೊನಾಲ್ಡ್ ಡಿಸೋಜಾ ಅವರು ಭಾಗವಹಿಸಿದರು. ಶ್ರೀ ಮೆಲ್ವಿನ್ ಪೆರಿಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಅಜಯ್ ಟೆರೆನ್ಸ್ ಸ್ವಾಗತಿಸಿದರು. ಶ್ರೀ ಅರುಣ್ ಬ್ಯಾಪ್ಟಿಸ್ಟ್ ಪಂದ್ಯಾವಳಿಯ ಸಂಚಾಲಕರಾಗಿ ದಿನದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಜಾನ್ ಪೈಸ್ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸುವುದರೊಂದಿಗೆ ಉದ್ಘಾಟನಾ ಕಾರ್ಯವು ಕೊನೆಗೊಂಡಿತು. ಶ್ರೀ ಲಾರೆನ್ಸ್ ಕ್ರಾಸ್ತಾ, ಶ್ರೀ ಅನಿಲ್ ಪಿಂಟೋ ಮತ್ತು ಶ್ರೀ ಆಗ್ನೆಲ್ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಆರು ಉತ್ಸಾಹಿ ತಂಡಗಳು ಭಾಗವಹಿಸಿದ್ದವು.
- ಸ್ಟೆಲ್ಲರ್ ಸ್ಮಾಷರ್ಸ್
- ರೆಡ್ ಇಂಡಿಯನ್ಸ್
- ಶಟಲ್ ಬ್ಲಾಕರ್ಸ್
- ಪೈಸ್ ಶಟ್ಲರ್ಸ್
- ರಾಯ್ ರಾಕರ್ಸ್
- ಸ್ಪೋರ್ಟ್ಸ್ ಗ್ಯಾರೇಜ್
ರೋಚಕ ಅಂತಿಮ ಪಂದ್ಯದಲ್ಲಿ, ಉಡುಪಿಯ ರಾಯ್ ರಾಕರ್ಸ್ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ವಿಜಯಶಾಲಿಯಾದರು, ಮಂಗಳೂರಿನ ಶಟಲ್ ಬ್ಲಾಕರ್ಸ್ ತಂಡವು ರನ್ನರ್ಸ್-ಅಪ್ ಆಗಿ ಶ್ಲಾಘನೀಯ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಐವನ್ ಪತ್ರಾವೊ, ಪತ್ರಾವೊ ಕೆಟರಾರ್ಸ್ ಇದರ ಮಾಲೀಕರು ಹಾಗೂ ಶ್ರೀ ಪ್ರದೀಪ್ ಡಿಸೋಜ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ, ಮಂಗಳೂರು ಇವರು ಬಹುಮಾನ ವಿತರಿಸಿದರು. ರಾಷ್ಟ್ರ ಮಟ್ಟದ ಆಟಗಾರ ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡಾಸ್ಫೂರ್ತಿ ಮತ್ತು ಸೌಹಾರ್ದತೆಯ ಮನೋಭಾವನೆಯೊಂದಿಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮುಕ್ತಾಯಗೊಳಿಸಿತು.
Christian Sports Association, Mangalore hosts first ever Christian Premier League, Badminton Tournament CPL 2024 Season 1:
Christian Sports Association organized the first-ever Christian Badminton Premier League Tournament on 14th January 2024, at Fr Muller’s Indoor Stadium. The inaugural function was graced by Mr Anil Lobo, Chairman of MCC Bank and Mr Ronald Dsouza, Founder and Executive Director of Leksa Lighting Technologies Pvt Ltd, as guests of honor. In his inaugural address Mr Lobo urged the association to host more events in the coming days to bring community together.
Melvin Peres hosted the programme. Ajay Terrence welcomed the gathering. The convener Arun Baptist briefed about the tournament. President John Pais thanked everyone for their presence, support and wishes. Secretary Lawrence Crasta, members Anil Pinto and Agnel D’Souza were present.
Six enthusiastic teams participated in the tournament and displayed their exceptional talents. 1. Stellar Smashers, Mangalore 2. Red Indians, Mangalore 3. Shuttle Blockers, Mangalore 4. Pais Shuttlers, Karkala 5. Roy Rockers, Udupi 6. Sports Garage, Madanthyar.
In an exciting finale, Roy Rockers, Udupi emerged victorious, showcasing exceptional skills, while Shuttle Blockers, Mangalore demonstrated commendable sportsmanship and secured 2nd place.
The valedictory ceremony was graced by Mr Ivan Patrao, Patrao Caterers, Valencia and Mr Pradeep D’Souza, District Skill development Officer as chief guests. Winners and runners were felicitated with trophies and cash prizes. On this occasion, Chris Anjen Baptist, a national level badminton doubles player was felicitated for his exceptional achievements. The event was concluded on a high note celebrating the spirit of sportsmanship and camaraderie.
ಅಲಂಗಾರ್ ದೇವಾಲಯದಲ್ಲಿ ಬಾಲಯೇಸುವಿನ ಹಬ್ಬವನ್ನು 14 ಜನವರಿ 2024 ರಂದು ಆಚರಿಸಲಾಯಿತು / The feast of Infant Jesus at Alangar Shrine was celebrated on 14th January 2024
ಅಲಂಗಾರ್ ದೇವಾಲಯದಲ್ಲಿ ಬಾಲಯೇಸುವಿನ ಹಬ್ಬವನ್ನು 14 ಜನವರಿ 2024 ರಂದು ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಿಶ್ರಾಂತ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮಹಾಮಸ್ತಕಾಭಿಷೇಕದ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ಪಾಲಿಕೆಯ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ದೇವರ ವಾಕ್ಯವನ್ನು ಬೋಧಿಸಿದರು. ಅವರು ತಮ್ಮ ಪ್ರವಚನದಲ್ಲಿ “ದೇವರು ನಮ್ಮೊಂದಿಗೆ, ನಾವು ನಮ್ಮ ನೆರೆಹೊರೆಯವರೊಂದಿಗೆ” ಎಂಬ ವಿಷಯವನ್ನು ಎತ್ತಿ ತೋರಿಸಿದರು. ಮೂಡುಬಿದಿರೆಯ ಧರ್ಮಾಧಿಕಾರಿಗಳಾದ ವೆರಿ ರೆ.ಫಾ ಓನಿಲ್ ಡಿಸೋಜ ಮತ್ತು ವರಡೋದ ಧರ್ಮಗುರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
The feast of Infant Jesus at Alangar Shrine was celebrated on 14th January 2024.
The feast of Infant Jesus at Alangar Shrine was celebrated on 14th January 2024. Most Rev. Dr Aloysius Paul Dsouza, Bishop Emeritus, Diocese of Mangalore being the main celebrant presided over the Eucharistic Celebration. Fr Clifford Fernandes parish priest of Kulshekar parish preached the word of God. In his homily he highlighted the theme ” God with us, we with our Neighbours. Very Rev. Fr Onil Dsouza, Vicar Vara of Moodbidri Deanery and priests from the varado were the concelebrants.
ಜ.22 : ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವರ್ಣ ಪಲ್ಲಕ್ಕಿ ಉತ್ಸವ
ಜ.22 : ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವರ್ಣ ಪಲ್ಲಕ್ಕಿ ಉತ್ಸವ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ವಿಗ್ರಹದ ಪ್ರಾಣ ಪ್ರತಿಷ್ಠಾನ ನಡೆಯುವ ಅಂಗವಾಗಿ ವಿಶೇಷ ಪೂಜೆ ಹಾಗೂ ದೀಪಾವಳಿ ಆಚರಣೆ ನಡೆಯಲಿದೆ. ಮುಂಜಾನೆಯಿಂದ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಸ್ವರ್ಣ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ರಾತ್ರಿ ಉತ್ಸವದ ನಂತರ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ದಿನ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಗೂ ಸ್ವರ್ಣಪಲ್ಲಕ್ಕಿ ಉತ್ಸವದಲ್ಲೂ ಸಮಾಜ ಬಾಂಧವರು ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.
ಶ್ರೀನಿವಾಸಪುರ: ವಯೋನಿವೃತ್ತಿ ಹೊಂದಿರುವ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಹರಳಕುಂಟೆ ಮುಖ್ಯ ಶಿಕ್ಷಕ ಮೋಹನ್ಕುಮಾರ್ ಗೆ ಸನ್ಮಾನ
ಶ್ರೀನಿವಾಸಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್ಸಿ, ಎಸ್ಟಿ ಶಿಕ್ಷಕರ ಸಂಘ ರಾಜ್ಯಶಾಖೆ ಮತ್ತು ಕೋಲಾರ ಜಿಲ್ಲಾ ಶಾಖೆ ವತಿಯಿಂದ ಇತ್ತೀಚಿಗೆ ವಯೋನಿವೃತ್ತಿ ಹೊಂದಿರುವ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಹರಳಕುಂಟೆ ಮುಖ್ಯ ಶಿಕ್ಷಕ ಮೋಹನ್ಕುಮಾರ್ ಗುಪ್ತರವರನ್ನ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಟಿ.ನಾಗರಾಜ್, ಜಿಲ್ಲಾಧ್ಯಕ್ಷ ಎನ್.ಮುನಿಯಪ್ಪ, ತಾಲೂಕು ಅಧ್ಯಕ್ಷ ಸಾಂಬಮೂರ್ತಿ, ಎನ್ಪಿಎಸ್ ಜಿಲ್ಲಾಧ್ಯಕ್ಷ ಅಪ್ಪೂರ್ ಮಂಜು, ತಾಲೂಕು ಅಧ್ಯಕ್ಷ ಅಶೋಕ್ಕುಮಾರ್, ಜಿಲ್ಲಾಖಜಾಂಚಿ ಎ.ನಾಗರಾಜ್, ಪ್ರಧಾನಕಾರ್ಯದರ್ಶಿ ಸಿ.ನಾಗೇಂದ್ರ, ಸಿಆರ್ಪಿ ವೇಣುಗೋಪಾಲ್,ನಟರಾಜ್, ಪೆದ್ದಪ್ಪಯ್ಯ, ರಾಧಕೃಷ್ಣ, ಚನ್ನಪ್ಪ, ಸೊನ್ನಪ್ಪ ಇದ್ದರು.