ಕೋಲಾರ,ಜ.10: ಇಂದಿನ ಅಧುನಿಕತೆಯ ಸಂಶೋಧನೆಗಳಲ್ಲಿ ಎಷ್ಟೇ ಅವಿಷ್ಕಾರಗಳು ಕಂಡು ಬಂದರೂ ಸಹ ಟೆಕ್ನಲಾಜಿಗಳು ಬದಲಾಗದು. ಇಂದು ರೊಬೊಟಿಕ್ಸ್ ತಂತ್ರಜ್ಞಾನ ಮತ್ತು ಕೃತಕ ಬುದ್ದಿವಂತಿಕೆ ಪರಿಚಯದೊಂದಿಗೆ ಶಸ್ತ್ರ ಚಿಕಿತ್ಸೆ ವಿಧಾನವು ಬದಲಾಗುತ್ತಿದೆ ಇದರಿಂದ ರೋಗಿಗಳಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ಹೆಚ್ಚಿನ ಅನುವುಂಟಾಗುತ್ತಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸ್ಪೈನ್ ಸರ್ಜರಿ ಮತ್ತು ಕನ್ಸಲ್ಟೆಂಟ್-ರೋಬೋಟಿಕ್ ಸ್ಪೈನ್ ಸರ್ಜರಿ ವಿಭಾಗದ ಅಧ್ಯಕ್ಷರು ಹಾಗೂ ಎಚ್.ಓ.ಡಿ. ಡಾ. ಎಸ್. ವಿದ್ಯಾಧರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆಯ ವಿವಿಧ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ನಿಖರತೆ, ಸುಧಾರಿತ, ದಕ್ಷತೆ ಮತ್ತು ಕನಿಷ್ಠ ಹಾನಿಯೊಂದಿಗೆ ಕ್ಲಿಷ್ಟಕರ ಶಸ್ತ್ರ ಚಿಕತ್ಸೆಗಳನ್ನು ನಿರ್ವಹಿಸಲು ಶಸ್ತ್ರ ಚಿಕಿತ್ಸಕರಿಗೆ ಪ್ರಯೋಜವಾಗುವ ಎಐ ಮತ್ತು ರೊಬೋಟಿಕ್ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಭಾರತದಲ್ಲಿ ರೊಬೊಟಿಕ್ ಮಾರ್ಗದರ್ಶನದ ಶಸ್ತ್ರ ಚಿಕಿತ್ಸೆಗಳು ಶೇ 99.99 ರಷ್ಟು ಯಶಸ್ವಿಯಾಗಿರುವುದು. ಹಿಂದಿನ ಸಂಪ್ರಾದಾಯಿಕ ವಿಧಾನಗಳಿಗೆ ಹೋಲಿಸಿದರೆ ಅಪಾಯದ ಪ್ರಮಾಣವು ಕಡಿಮೆ, ಶಸ್ತ್ರ ಚಿಕಿತ್ಸೆ ಸಮಯವು ಕಡಿಮೆ ಹಾಗೂ ನಿಖರತೆ ಇದೆ ಸುದೀರ್ಘ ಕಾಲಾವಧಿಯವರೆಗೆ ಸಮಸ್ಯೆ ಕಂಡು ಬರುವುದಿಲ್ಲ, ಯಾವೂದೇ ಅನಾಹುತಗಳಿಗೆ ಅವಕಾಶ ಇಲ್ಲದಂತೆ ಅವಶ್ಯಕತೆ ತಕ್ಕಷ್ಟು ಮಾತ್ರ ಕಾರ್ಯ ನಿರ್ವಹಿಸಲು ರೊಬೊಟಿಕ್ ಅನುವು ಮಾಡಿ ಕೊಡಲಾಗುವುದು ಎಂದರು.
ಪ್ರಶ್ನೆಯೊಂದಕ್ಕೆ ವೈದ್ಯರುಗಳಿಗೆ ಯಾವೂದೇ ಸಂಶಕ್ಕೆ ಅವಕಾಶ ಇಲ್ಲದಂತೆ ಮಾರ್ಗದರ್ಶನವನ್ನು ರೊಬೊಟಿಕ್ ನೀಡುತ್ತದೆ. ಸ್ಕ್ರೋ ಅಳವಡಿಸುವಿಕೆ, ಹೆಚ್ಚು ರಕ್ತಸ್ರಾವವಾಗದಂತೆ, ಹೆಚ್ಚು ನೋವಿಲ್ಲದಂತೆ, ಕಡಿಮೆ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ದೋಷ ಮುಕ್ತವಾಗಿ ಪೂರ್ಣಗೊಳಿಸಲು ಸಲಹೆಗಳನ್ನು ಪಡೆಯಬಹುದಾಗಿದೆ. ಇದರ ವೆಚ್ಚ ಸಾಮಾನ್ಯವಾಗಿ 50 ಸಾವಿರ ರೂಗಳಿಂದ 1.5 ಲಕ್ಷದವರೆಗೆ ಇರುತ್ತದೆ ಎಂದು ತಿಳಿಸಿದರು.
ರೊಬೊಟಿಕ್ ಮಾರ್ಗದರ್ಶನ ಬಳಕೆಯ ಮೂಲಕ ಸ್ಕೋಲಿಯೋಸಿಸ್ ಕರೆಕ್ಷನ್ಗಳು ಬೆನ್ನಮೊಳೆಯ ಪ್ಲಾಸ್ಟಿಗಳು, ಕೈಪೋಪ್ಲಾಸ್ಟಿಗಳು, ಸರ್ವಿಕಲ್ ಕಾರ್ಪೆಕ್ಟೊಮಿಗಳು ಮತ್ತು ಸರ್ವಿಕಲ್ ಪೆಡಿಕ್ಯೊಲ್ ಸ್ಕ್ರೋ ಫಿಕ್ಸೆಷನ್ಗಳ ತರಹದ ವಿವಿಧ ಸಂದರ್ಭಗಳಲ್ಲಿ ನಾವು ರೊಬೊಟಿಕ್ ನೆರವಿನಿಂದ ನಿಖರತೆಯನ್ನು ಸಾಧಿಸಿ ಸುರಕ್ಷತೆಯನ್ನು ಪಡೆದಿರುವುದಾಗಿ ವಿವರಿಸಿದರು.
ಆರ್ಥೋಪೆಡಿಕ್ಸ್ ಮತ್ತು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿ ವಿಭಾಗದ ಹಿರಿಯ ತಜ್ಞ ಡಾ. ಸುನಿಲ್ ಜಿ.ಕಿಣಿ ಮಾತನಾಡಿ, ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ಗಳ ಆರೈಕೆ ರೋಗಿಗಳಿಗೆ ಹಲವಾರ ಪ್ರಯೋಜನಗಳಿವೆ ಶಸ್ತ್ರ ಚಿಕಿತ್ಸೆ ನಂತರ ನೋವು ಗುಣಮುಖವಾಗಲಿದೆ. ತೊಡಕು ಅಪಾಯಗಳು ಕಡಿಮೆಯಾಗಿ ರೋಗಿಗಳು ದೀರ್ಘವದಿಯವರೆಗೆ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ ರೋಗಿಯು ಚೇತರಿಸಿಕೊಳ್ಳಲು ಅನುವುಂಟಾಗುವುದು ಎಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿರುವ ಮೈಕೋ ರೋಬೋಟ್ ಹೊಂದಿದ್ದು ಇದರಿಂದ ಮೊಣಕಾಲು ಮತ್ತು ಸೊಂಟದ ಬದಲಿಗಳನ್ನು ಅತ್ಯಂತ ನಿಖರತೆಯೊಂದಿಗೆ ನಿರ್ವಹಿಸಲು ನೆರವುಂಟಾಗುವುದು ಎಂದರು.
ರೋಬೋಟಿಕ್ ವ್ಯವಸ್ಥೆಯಿಂದ ರೋಗಿಗಳಿಗೆ ನೈಸರ್ಗಿಕ ಜಾಯಿಂಟ್ ಚಲನೆಯನ್ನು ಪರಿಗಣಿಸುತ್ತದೆ ಮತ್ತು ಅಸ್ಥಿರಜ್ಮುಗಳು ಮತ್ತು ಮೃದು ಅಂಗಾಂಶಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಶಸ್ತ್ರ ಚಿಕಿತ್ಸೆಯ ಸಂದರ್ಭಗಳಲ್ಲಿ ರೋಗಿಗಳಿಗೆ ಅನುವುಂಟಾಗುವಂತ ಮಾರ್ಗದರ್ಶನಗಳಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಸರ್ಜಿಕಲ್ ಆಂಕೋಲಾಜಿ ಮತ್ತು ರೋಬೋಟಿಕ್ ಸರ್ಜರಿ ಕನ್ಸಲ್ವೆಂಟ್ ಡಾ. ಹೇಮಂತ್ ಜಿ.ಎನ್ ಮಾತನಾಡಿ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯಲ್ಲಿ ರೊಬೋಟಿಕ್ ಬಹುಪಾತ್ರದ ನೆರವನ್ನು ಪಡೆಯಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರೊಬೋಟಿಕ್ ಸಹಾಯದಿಂದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯು ಗಮನಾರ್ಹ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ಹಿಂದೆ ಕ್ಯಾನ್ಸರ್ ಶಸ್ತ್ರಚಿಕ್ಸಿತ್ಸೆಯು ದೊಡ್ಡ ಗಾಯದ ಗುರುತುಗಳು, ದೀರ್ಘಕಾಲದ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯ ಬೇಕಾಗಿತ್ತು, ರೋಗಿಗಳಲ್ಲಿ ಚೇತರಿಕೆಯು ಅಪರೂಪವಾಗಿದ್ದು ಭಯವುಂಟು ಮಾಡುವ ದಿನಗಳಾಗಿತ್ತು, ಅದರೆ ಇವುಗಳನ್ನು ರೋಬೋಟಿಕ್ ಮಾರ್ಗದರ್ಶನದಲ್ಲಿ ವಿವಿಧ ಕ್ಲಿನಿಕಲ್ ಪ್ರಯೋಗಳ ಮೂಲಕ ಸಂಪ್ರಾದಯಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಿಂತ ಸುಧಾರಿತ,ಗುಣಮಟ್ಟದ, ತೃಪ್ತಿಕರವಾದ ಶಸ್ತ್ರಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ಪಡೆಯ ಬಹುದಾಗಿದೆ ಎಂದು ಹೇಳಿದರು.
ಕ್ಯಾನ್ಸರ್ನಲ್ಲಿ ಹಲವಾರು ವಿಧಗಳಿವೆ, 3ನೇ ಹಂತದವರೆಗೆ ಚಿಕಿತ್ಸೆಯನ್ನು ರೊಬೋಟಿಕ್ ನೆರವಿನಿಂದ ನೀಡಲು ಸಾಧ್ಯ, ಹೃದಯ ಶಸ್ತ್ರ ಚಿಕಿತ್ಸೆಗಳಲ್ಲೂ ಇತ್ತೀಚೆಗೆ ರೋಬೋಟಿಕ್ ನೆರವು ಪಡೆಯಲಾಗುತ್ತಿದೆ. ಹೊಟ್ಟೆ, ಕತ್ತು ಮುಂತಾದ ಶಸ್ತ್ರ ಚಿಕಿತ್ಸೆಗಳಲ್ಲಿ ರೊಬೋಟಿಕ್ ಪಾತ್ರವನ್ನು ಪ್ರಧಾನವನ್ನಾಗಿಸಿ ಕೊಂಡಲ್ಲಿ ಯಾವೂದೇ ಸಮಸ್ಯೆಗಳಿದ್ದರೂ ಬಗೆಹರಿಸಬಹುದಾದ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ನಿಸ್ಸಂದೇಹವಾಗಿ ಹೇಳುವುದಾದರೆ ಕೃತಕ ಬುದ್ದಿಮತ್ತೆಯ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ವರ್ಧಿತ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸಾ ಪರಿಸ್ಥಿತಿಗಳನ್ನು ನಿರ್ವಹಿಸಲು ರೋಬೋಟಿಕ್ ಶಸ್ತ್ರಚಿಕಿತ್ಸೆಯು ಪ್ರಾಥಮಿಕ ಅಧ್ಯತೆಯಾಗಲಿದೆ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷತೆಯೊಂದಿಗೆ ರೋಬೋಟಿಕ್ ತಂತ್ರಜ್ಞಾನದ ವಿಧಾನಗಳನ್ನು ಪ್ರದರ್ಶಿಸಲಾಯಿತು.
Day: January 10, 2024
ಎಂ.ಶ್ರೀನಿವಾಸನ್ ಕೊಲೆ ಆರೋಪಿಗಳಿಂದ ನಿಜವಾದ ಸತ್ಯವನ್ನು ಬಹಿರಂಗಗೊಳಿಸಬೇಕಿದೆ ಎಂ.ಶ್ರೀನಿವಾಸನ್ ಪತ್ನಿ ಡಾ. ಚಂದ್ರಕಳಾ ಒತ್ತಾಯ
ಶ್ರೀನಿವಾಸಪುರ 1 : ಕೊಲೆಯ ಹಿಂದೆ ಒಂದು ಸಂಚು ಇದ್ದು, ಕೊಲೆಯನ್ನು ಏಕೆ ಮಾಡಿದರು, ಯಾರು ಮಾಡಿಸಿದರು ಎಂಬುದನ್ನ ಆರೋಪಿಗಳಿಂದ ನಿಜವಾದ ಸತ್ಯವನ್ನು ಬಹಿರಂಗಗೊಳಿಸಬೇಕಿದೆ ಎಂದು ದಿವಗಂತ ಎಂ.ಶ್ರೀನಿವಾಸನ್ ಧರ್ಮಪತ್ನಿ ಡಾ|| ಚಂದ್ರಕಳಾಶ್ರೀನಿವಾಸನ್ ಒತ್ತಾಯಿಸಿದರು.
ಪಟ್ಟಣದ ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿ||ಎಂ.ಶ್ರೀನಿವಾಸನ್ ರವರ ಮನೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಂ.ಶ್ರೀನಿವಾಸನ್ ಅವರಿಲ್ಲದ ತಬ್ಬಲಿತನವು ನಮ್ಮ ಕುಟುಂಬ ವರ್ಗವನ್ನು ಎಷ್ಟು ಕಾಡುತ್ತಿದೆಯೋ ಅಷ್ಟೇ ತಬ್ಬಲಿತನವನ್ನು ನಮ್ಮ ಬಂಧು-ಬಳಗ ಹಾಗು ಸಮಸ್ತ ಸಾರ್ವಜನಕರ ಬಂಧುಗಳೂ ಅನುಭವಿಸುತ್ತಿದೆ. ಇಂತಹ ದೈರ್ಯಶಾಲಿ ಜನನಾಯಕನನ್ನು ನಮಗಾರಿಗೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು. ನನಗೆ, ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವು ಯಾರಿಗೂ ಆಗಬಾರದು ಎಂದು ದುಃಖತಪ್ತರಾದರು.
ನಮ್ಮ ಕುಟುಂದ ಹಿತ ಚಿಂತಕರೆಲ್ಲರೂ ಸೇರಿ ದಿನಾಂಕ 13-1-2024 ರ ಶನಿವಾರ ದಂದು ಬೆಳಗ್ಗೆ 11 ಗಂಟೆಗೆ ತಹಶೀಲ್ದಾರ್ ಕಛೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಸಾಮೂಹಿಕ ಶ್ರದ್ಧಾಂಜಲಿಯನ್ನು ನಡೆಸಲಾಗುತ್ತಿದ್ದು, ಶ್ರೀನಿವಾಸನ್ ಅಭಿಮಾನಿಗಳು ಹಾಗು ಸಾರ್ವಜನಿಕರು ಸಾಮೂಹಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೊಲೆ ಆರೋಪಿಗಳಿಂದ ಸುಳ್ಳು ಮಾಹಿತಿ : ಪವನ್ ಕಲ್ಯಾಣ್ ಎಂಬ ಯುವಕನ ಪ್ರೇಮವಿಚಾರದಲ್ಲಿ ಕೌನ್ಸಿಲರ್ ಎಂ.ಶ್ರೀನಿವಾಸನ್ ಮಧ್ಯಪ್ರವೇಶಿಸಿ ತೊಂದರೆ ಮಾಡಿ ಪವನ್ಕಲ್ಯಾಣ್ ಸಾವಿಗೆ ಕಾರಣರಾಗಿದ್ದರೆ ಎನ್ನುವ ವಿಚಾರಕ್ಕೆ ಸಂಬಂಸಿದಂತೆ ಪವನ್ ಕೊಲೆಗೆ ಸೇಡು ತೀರಿಸುವ ನೆಪದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ.
ಆದರೆ ಪವನ್ ಕಲ್ಯಾನ್ ಸಾವಿಗೆ ನಮ್ಮ ಯಜಮಾನರಾದ ಎಂ.ಶ್ರೀನಿವಾಸನ್ ರವರಿಗೆ ಯಾವುದೇ ಸಂಬಂದವಿಲ್ಲ ಎಂಬುದು ತಿಳಿಸುತ್ತಾ, ಪವನ್ಕಲ್ಯಾಣ್ 28.09.2022 ರಿಂದ 19.10.2022 ರವರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಟಿಬಿ ಮತ್ತು ಶುಗುರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂಬುದನ್ನ ಆರ್ಟಿಐ ಅರ್ಜಿ ಸಲ್ಲಿಸಿ ಆರ್ಟಿಐ ಮುಖಾಂತರ ಪವನ್ಕಲ್ಯಾಣ್ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡುತ್ತಾ, ಆರೋಪಿಗಳು ಸುಳ್ಳು ಕಾರಣ ಹೇಳಿ ನಿಜವಾದ ಕಾರಣವನ್ನು ಬಚ್ಚಿಇಡುತ್ತಿದ್ದಾರೆ ಎಂದು ಹೇಳುತ್ತಾ ಕೊಲೆಗೆ ನಿಜವಾದ ಕಾರಣವನ್ನು ಆರೋಪಿಗಳಿಂದ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಜನವರಿ 13 ರಂದು ನಡೆಯುವ ಸಾಮೂಹಿಕ ಶ್ರದಾಂಜಲಿ ಸಭೆಗೆ ವಿವಿಧ ಮಠಗಳ ಸ್ವಾಮಿಗಳು ಹಾಗು ವಿಶೇಷ ಆಹ್ವಾನಿತರಾಗಿ ಪ್ರಗತಿಪರ ಹೋರಾಟಗಾರ ಅಹಿಂಸಾ ಚೇತನ್ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ಪಿಐ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ ದಿ|| ಎಂ.ಶ್ರೀನಿವಾಸನ್ ಕೊಲೆ ಎ1 ಆರೋಪಿ ವ್ಯಯಕ್ತಿಕ ವಿಚಾರಕ್ಕೆ ಕೊಲೆ ನಡೆಸಲಾಗಿದೆ ಎಂದು ಆರೋಪಿಗಳು ಬಿಂಬಿಸುತ್ತಿದ್ದಾರೆ. ಆದರೆ ಕೊಲೆಗೆ ಸಂಚಿನ ಹಿಂದೆ ಯಾರೋ ಇದ್ದಾರೆ ಎಂಬುದನ್ನು ಆರೋಪಿಗಳು ಇದುವರೆಗೂ ಹೇಳಿಕೆಯನ್ನು ನೀಡುತ್ತಿಲ್ಲ ಆದ್ದರಿಂದ ಆರೋಪಿಗಳನ್ನು ಮಂಪರು ಪರೀಕ್ಷೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಒತ್ತಾಯಪಡಿಸದರು. ಇದುವರೆಗೂ ಕ್ರಮಕೈಗೊಂಡಿಲ್ಲ.
ಶ್ರದ್ಧಾಂಜಲಿ ಸಭೆಯನ್ನು ಶಾಂತಿಯುತವಾಗಿ ನಡೆಸಬೇಕು. ಶ್ರೀನಿವಾಸನ್ ಕುಟುಂಬಕ್ಕೆ ಸಾಂತ್ವನವನ್ನು ನಾವೆಲ್ಲರೂ ಹೇಳಿಬೇಕಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಪುರಸಭೆ ಸದಸ್ಯರಾದ ಭಾಸ್ಕರ್, ತಜಮುಲ್, ಮುಖಂಡರಾದ ಬಂಗವಾದಿ ನಾಗರಾಜ್, ಕೆ.ಕೆ.ಮಂಜುನಾಥ್, ಹೊಗಳಗೆರೆ ಆಂಜಿ, ರಾಮಾಂಜಮ್ಮ, ಉಪ್ಪರಪಲ್ಲಿ ತಿಮ್ಮಯ್ಯ, ಚಿಂತಾಮಣಿ ಈಶ್ವರ್, ಚಲ್ದಿಗಾನಹಳ್ಳಿ ಈರಪ್ಪ, ಚಿಕ್ಕಬಳ್ಳಾಪುರ ವೆಂಕಟರಮಣಪ್ಪ, ಶಂಕರ್, ವರ್ತನಹಳ್ಳಿ ವೆಂಕಟೇಶ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ವಾಸು, ತಾ.ಪಂ. ಮಾಜಿಸದಸ್ಯ ಆರ್.ಜಿ.ನರಸಿಂಹಯ್ಯ, ಪುರಸಭೆ ಮಾಜಿ ಸದಸ್ಯ ಶಂಕರ್ , ಹೆಬ್ಬಟ ಗ್ರಾ.ಪಂ. ಸದಸ್ಯ ಆನಂದ್ಕುಮಾರ್ ಇದ್ದರು.
ಶ್ರೀನಿವಾಸಪುರ:ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು-ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಮನವಿ
ಶ್ರೀನಿವಾಸಪುರ : ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು ಎಂದು ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಸದಸ್ಯರನ್ನ ಮನವಿ ಮಾಡಿದರು.
ತಾಲೂಕಿನ ಕಸಬಾ ಹೋಬಳಿಯ ಚಲ್ದಿಗಾನಹಳ್ಳಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರಿಗೂ ಸಮಪಾಲುನೊಂದಿಗೆ ಅನುದಾನಗಳನ್ನು ಹಂಚಿಕೆ ಮಾಡಲಾಗುವುದು. ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳು, ಚರಂಡಿಗಳ ನಿರ್ಮಾಣ, ಸ್ವಚ್ಚತೆ, ವಸತಿಯೋಜನೆಗಳಿಗೆ ಸಂಬಂದಿಸಿದಂತೆ ಗ್ರಾಮಪಂಚಾಯಿತಿಗೆ ಬರುವ ಅನುದಾನಗಳನ್ನು ಪಂಚಾಯಿತಿ ಅಭಿವೃದ್ಧಿಗಾಗಿ ಬಳಸಲು ಸಲಹೆ ನೀಡಿದರಲ್ಲದೆ, ಪಂಚಾಯಿತಿ ಅಭಿವೃದ್ಧಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಬ್ಬಟ ಹಾಗು ಶಿವಪುರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇದೆ. ಗ್ರಾಮಪಂಚಾಯಿತಿ ವ್ಯಾಪ್ತಿಯ 205 , 206 ರಲ್ಲಿ ಗ್ರಾಮಪಂಚಾಯಿತಿ ನೂತನ ಕಟ್ಟಡವನ್ನು ನಿರ್ಮಿಸಲು ಹಾಗು ಪಂಚಾಯಿತಿಗೆ ಸಂಬಂದಿಸಿದಂತೆ ವಾರದ ಸಂತೆಯನ್ನು ಶಿವಪುರ ಕ್ರಾಸ್ನ ಸರ್ವೆ ನಂಬರ್ 198 ರಲ್ಲಿ ಮಾಡಲು ಸರ್ವಸದಸ್ಯರು ಒಪ್ಪಿಗೆ ನೀಡಿದರು. ಮುಂದಿನ ಸಾಮಾನ್ಯ ಸಭೆಯಲ್ಲಿ ವಾರದ ಸಂತೆ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದರು.
ಪಿಡಿಒ ಕೆ.ಜಗದೀಶ್ಕುಮಾರ್ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಆನಂದ್ಕುಮಾರ್, ಗಿರಿಯಪ್ಪ, ವೆಂಕಟರೆಡ್ಡಿ, ಗ್ರಾ.ಪಂ ಕಾರ್ಯದರ್ಶಿ ಶಿವಣ್ಣ, ಎಫ್ಡಿಎ ನಾರಾಯಣಸ್ವಾಮಿ ಇದ್ದರು.
ಶ್ರೀನಿವಾಸಪುರ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮ ನಡೆಯಿತು
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಛೇರಿ ಪಕ್ಕದ ಮಾರುಕಟ್ಟೆ ಸಂಕೀರ್ಣದಲ್ಲಿ ಮಂಗಳವಾರ ಇವಿಯಂ ಜಾಗೃತಿ ತರಬೇತಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂಗಡಿ ವ್ಯಾಪಾರಿಗಳು ವಿವಿಪ್ಯಾಟ್ ನಲ್ಲಿ ತಾವು ದಾಖಲಿಸಿದ ಮತಗಳ ಬಗ್ಗೆ ಖಾತ್ರಿ ಪಡೆದರು. ಮತ್ತು ಇವಿಯಂ ಮತದಾನದ ಬಗ್ಗೆ ವಿಶ್ವಾಸವ್ಯಕ್ತಪಡಿಸಿದರು.
ತರಬೇತಿಯನ್ನು ಸೆಕ್ಟರ್ ಅಧಿಕಾರಿ ಜಿ.ಕೆ. ನಾರಾಯಣಸ್ವಾಮಿ ನಡೆಸಿಕೊಟ್ಟರು. ಮಾಸ್ಟರ್ ಟ್ರೈನರ್ ವಿ.ತಿಪ್ಪಣ್ಣ, ಪುರಸಭೆ ಮುಖ್ಯಾಧಿಕಾರಿ ವೈ,ಎನ್.ಸತ್ಯನಾರಾಯಣ್, ವ್ಯವಸ್ಥಾಪಕ ನವೀನ್ಚಂದ್ರ, ಪುರಸಭೆ ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ, ಕಛೇರಿ ಸಿಬ್ಬಂದಿ ಎನ್.ಶಂಕರ್, ನಾಗೇಶ್ ಇದ್ದರು
ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ
ಕೋಲಾರ ಜ.09 ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳವಾರ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರವನ್ನು ವಜಾ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಅರುಣ್ ಪ್ರಕಾಶ್, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಮೊಕದ್ದಮೆ,ಜೈಲ್ ವಾಸ ನಿರಂತರವಾಗಿ ನಡೆಯುತ್ತಿದ್ದು,ಪೆÇಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದಲ್ಲಿ ಗೋರಕ್ಷಕರಿಗೆ 48 ದಿನ ಜೈಲುವಾಸ, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಮೋದ್ ಮುತಾಲಿಕ್ ಅವರಿಗೆ ಪ್ರವೇಶ ನಿಬರ್ಂಧ, ಗ್ಯಾನೇಂದ್ರ ಜೈನ ಬಂಧನ, ಮಂಗಳೂರಿನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ಆದೇಶ,ಬೆಂಗಳೂರಿನಲ್ಲಿ ಹಿಂದೂ ಹೋರಾಟಗಾರರ ಬಂಧನ ಗುಂಡಾ ಆಕ್ಟ್ ಮೊಕದ್ದೊಮ್ಮೆ, ಕಲ್ಬುರ್ಗಿ ಹಿಂದೂ ಕಾರ್ಯಕರ್ತರಿಗೆ ರೌಡಿ ಶೀಟ್ ,ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್
ಹಬ್ಬದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕ ಹಿಂದೂಗಳ ಬಂಧನ,ಗಂಗಾವತಿಯಲ್ಲಿ ಗಣವತಿ ವಿಸರ್ಜನೆ ಸಂದರ್ಭದಲ್ಲಿ ಮಸೀದೆಗೆ ಆರತಿ ಮಾಡಿದ್ರು ಅಂತ ಕೇಸ್.ಚಿಕ್ಕಮಗಳೂರಿನಲ್ಲಿ 14 ಹಿಂದೂ ಕಾರ್ಯಕರ್ತರ 7 ವರ್ಷ ಹಳೆಯ ಕೇಸ್ ಮತ್ತೆ ಪ್ರಾರಂಭ.ಹೀಗೆ ಇನ್ನೂ ಹಲವಾರು ಅಹಿತಕರ ಹಿಂದೂ ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ಖಂಡನೀಯ ಕೂಡಲೇ ಮಾನ್ಯ ರಾಜ್ಯಪಾಲರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಗೊಳಿಸಿ ಹಿಂದೂಗಳ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಶ್ರೀ ರಾಮ ಸೇನೆ ಕೋಲಾರ ವಿಭಾಗಿಯ ಅಧ್ಯಕ್ಷರ ರಮೇಶ್ ರಾಜ್ ಅರಸ್,ಯೋಗ ರವಿ, ಶಂಕರ್, ನವೀನ್, ನಾಗೇಂದ್ರ ಶ್ರೀಕಾಂತ್, ಸುಭಾμï, ಕಾರ್ತಿಕ್, ವಿನೋದ್ ಮುಂತಾದವರು ಭಾಗವಹಿಸಿದ್ದರು.
ಜನಪರ ಹೋರಾಟಗಳೊಂದಿಗೆ ಹಾಸು ಹೊಕ್ಕಾದ ಕೋಲಾರದ ಪತ್ರಿಕೆಗಳು: ವಿಶ್ವಕುಂದಾಪುರ
ಉಡುಪಿ ಜಿಲ್ಲಾ ಬರಹಗಾರರ ಕೋಶ' ಬಿಡುಗಡೆಕಾರ್ಯಕ್ರಮದಲ್ಲಿಉಪನ್ಯಾಸ ಕೋಲಾರ: ಜಗತ್ತಿಗೆ ಅಪಾರ ಪ್ರಮಾಣದಲ್ಲಿ ಚಿನ್ನ ಕೊಟ್ಟ; ನಾಡಿಗೆ ಹಾಲು, ತರಕಾರಿ, ಟೊಮಾಟೋ, ಮಾವು ಕೊಡುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಯ ಶ್ರಮಜೀವಿಗಳ ಹೋರಾಟಗಳೊಂದಿಗೆ ಜಿಲ್ಲಾ ಪತ್ರಿಕೆಗಳು ಹಾಸುಹೊಕ್ಕಾಗಿವೆ. ಪತ್ರಿಕೆಗಳ ಜೊತೆ ಚಳವಳಿಗಳು ಬೆಳೆದಿವೆ, ಆಂದೋಲನಗಳ ಜೊತೆ ಪತ್ರಿಕೆಗಳು ಬೆಳೆದಿವೆ ಎನ್ನುವಷ್ಟರ ಮಟ್ಟಿಗೆ ಅವು ಒಂದಕ್ಕೊಂದು ಬೆಸೆದುಕೊಂಡಿವೆಎಂದು ಹಿರಿಯ ಪತ್ರಕರ್ತ, ಲೇಖಕ ವಿಶ್ವಕುಂದಾಪುರಅಭಿಪ್ರಾಯ ಪಟ್ಟಿದ್ದಾರೆ. ಭಾಷಾ ಅಸ್ಮಿತೆಯ ಹೋರಾಟಕ್ಕೂ ಭಾಷಾ ಸೌಹಾರ್ದತೆಗೂ ಬಯಲುಸೀಮೆಯ ಈ ನೆಲ ಉದಾಹರಣೆಯಾಗಿದೆಎಂದುಉಡುಪಿಯಎಂಜಿಎಂಕಾಲೇಜಿನಅಮೃತ ಮಹೋತ್ಸವದ ಸುಸಂದರ್ಭದಲ್ಲಿಕಾಲೇಜಿನರವೀಂದ್ರ ಭವನದಲ್ಲಿಜನವರಿ 7ರಂದು ಭಾನುವಾರ ನಡೆದ ಡಾ. ಅನಿಲ್ ಕುಮಾರ್ ಶೆಟ್ಟಿ ಸಂಪಾದಕತ್ವದ
ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಬಿಡುಗಡೆ ಸಮಾರಂಭದಲ್ಲಿಗಡಿನಾಡು-ಹೊರನಾಡು ಪತ್ರಿಕೆಗಳು ಕುರಿತ ವಿಚಾರಗೋಷ್ಠಿಯಲ್ಲಿಉಪನ್ಯಾಸ ನೀಡಿದ ವಿಶ್ವಕುಂದಾಪುರ ಹೇಳಿದರು. ನೀಲಿ ಮತ್ತು ಕೆಂಪು ಚಳವಳಿಗಳ ದಟ್ಟಇತಿಹಾಸ ಹೊಂದಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊನ್ನುಡಿ, ಸಂಚಿಕೆ ಮುಂತಾದಜಿಲ್ಲಾ ಪತ್ರಿಕೆಗಳು ಹೋರಾಟಗಳಲ್ಲಿ ವಹಿಸಿದ ಪಾತ್ರ ಮಹತ್ವದ್ದಾಗಿದೆ. ಕೋಲಾರ ಪತ್ರಿಕೆಯಂಥ ಜಿಲ್ಲಾ ಪತ್ರಿಕೆ ಸುವರ್ಣ ಮಹೋತ್ಸವ ಸಂದರ್ಭದಲ್ಲಿರುವುದುಗಮನಾರ್ಹವಾಗಿದೆಎಂದರು. ನೀರಿನಕೊರತೆಅನುಭವಿಸುತ್ತಿರುವಉಭಯ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಗಾಗಿಜನಸಮುದಾಯ ನಡೆಸಿದ ದೀರ್ಘ ಹೋರಾಟಗಳಿಗೆ ಪತ್ರಿಕೆಗಳೂ ತಮ್ಮಕೊಡುಗೆ ಸಲ್ಲಿಸಿವೆ ಎಂದು ಹೇಳಿದರು. ಶ್ರಮಜೀವಿಗಳ ಸಂಕಟಕ್ಕೆದನಿಯಾಗಿ, ಜನಪರ ಚಳವಳಿಗಳ ಮಾರ್ದನಿಯಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಿವೆ ಎಂದರು.
ಬಹುತ್ವದ ಮೇಲೆ ದಾಳಿ ನಡೆಯುತ್ತಿರುವಕಾಲಘಟ್ಟದಲ್ಲಿ ಭಾಷಾ ಹಾಗೂ ಸಾಂಸ್ಕøತಿಕ ವೈವಿಧ್ಯತೆಯನ್ನುಕಾಪಾಡುವಲ್ಲಿ ಪತ್ರಿಕೆಗಳ ಸಹಿತ ಮಾಧ್ಯಮದ ಪಾತ್ರ ಮಹತ್ವದ್ದುಎಂದರು. ಪ್ರಸ್ತುತ ಮಾಧ್ಯಮಕ್ಷೇತ್ರವು ವಾರೆನ್ ಬಫೆಟ್ನಿಂದ ಹಿಡಿದುಗೌತಮ್ಅದಾನಿ ವರೆಗೆಕಾರ್ಪೊರೇಟ್ಜಗತ್ತಿನ ಹಿಡತಕ್ಕೆ ಸಿಲುಕಿ ಪತ್ರಕರ್ತರು ಉಸಿರುಗಟ್ಟಿಸುವ ವಾತಾವರಣದಲ್ಲಿಕಾರ್ಯನಿರ್ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆಎಂದುಆತಂಕ ವ್ಯಕ್ತಪಡಿಸಿದರು.
ಪತ್ರಿಕಾ ವೃತ್ತಿ ಮತ್ತು ಸಾಹಿತ್ಯಕ್ಷೇತ್ರದಅನನ್ಯ ಸಾಧಕ ಡಿ.ವಿ. ಗುಂಡಪ್ಪ (ಡಿವಿಜಿ) ಕೋಲಾರಜಿಲ್ಲೆಯವರೆನ್ನುವುದು ಹೆಮ್ಮೆಯ ಸಂಗತಿಎಂದರು. ಜಿಲ್ಲೆಯಲ್ಲಿಎರಡುಡಜನ್ನಷ್ಟು ಸ್ಥಳೀಯ ಪತ್ರಿಕೆಗಳಿರುವುದು ಕರ್ನಾಟಕರಾಜ್ಯದಲ್ಲೇಅಪರೂಪದದಾಖಲೆಎಂದು ವಿಶ್ವಕುಂದಾಪುರ ಹೇಳಿದರು.
ತಮಿಳು ನಾಡು ಮತ್ತುಆಂಧ್ರ ಪ್ರದೇಶ ರಾಜ್ಯಗಳ ಗಡಿಗಳನ್ನು ಹಂಚಿಕೊಂಡಿರುವಜಿಲ್ಲೆಯಲ್ಲಿ ತಮಿಳು ಮತ್ತುತೆಲುಗು ಪತ್ರಿಕೆಗಳೂ ಪ್ರಸಾರದಲ್ಲಿವೆ. ಅಲ್ಪಸಂಖ್ಯಾತ ಸಮುದಾಯದವರ ನಡುವೆಉರ್ದು ಪತ್ರಿಕೆಗಳ ಪ್ರಸಾರವೂಇದೆ. ಇವೆಲ್ಲವೂಜಿಲ್ಲೆಯಲ್ಲಿನ ಭಾಷಾ ಸೌಹಾರ್ದತೆ ಹಾಗೂ ಅದನ್ನು ಪೋಷಿಸುವಲ್ಲಿ ಮಾಧ್ಯಮದ ಪಾತ್ರವನ್ನುತೋರಿಸುತ್ತವೆಎಂದುಅಭಿಪ್ರಾಯಪಟ್ಟರು.
ಮುದ್ದಣನ ಕಾಲದಿಂದ…
ಮುದ್ದಣನ ಕಾಲದಿಂದ (1870) ಹಿಡಿದು 2020ರವರೆಗಿನ ಒಂದುವರೆ ಶತಮಾನದಅವಧಿಯಉಡುಪಿ ಜಿಲ್ಲಾ ಬರಹಗಾರರ ಮಾಹಿತಿಯನ್ನು ಕೋಶ ಒಳಗೊಂಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಡಾ. ಸುಬ್ಬಣ್ಣರೈಕೃತಿ ಬಿಡುಗಡೆ ಮಾಡಿದರು. ಎಂಜಿಎಂಕಾಲೇಜ್ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣಕಾರಂತ, ವಿದ್ವಾಂಸರಾದಡಾ. ಪಾದೇಕಲ್ಲು ವಿಷ್ಣು ಭಟ್, ಬ್ಯಾಂಕ್ಆಫ್ ಬರೋಡಾಅಧಿಕಾರಿರವೀಂದ್ರರೈ, ಪ್ರಕಾಶಕರಾದ ಬೆಂಗಳೂರಿನ ಬಾಲಾಜಿ ಪಬ್ಲಿಷರ್ಸ್ನಉದಯ್ ಶೆಟ್ಟಿ ಮೊದಲಾದವರು ಮಾತನಾಡಿದರು. ಡಾ. ವರದರಾಜಚಂದ್ರಗಿರಿಅಧ್ಯಕ್ಷತೆ ವಹಿಸಿದ್ದರು. ಕೋಶದ ಸಂಪಾದಕಡಾ. ಅನಿಲ್ ಕುಮಾರ್ ಶೆಟ್ಟಿ-ಪತ್ನಿ ಮಲ್ಲಿಕಾದಂಪತಿಯನ್ನು ಸನ್ಮಾನಿಸಲಾಯಿತು.