ಶ್ರೀನಿವಾಸಪುರ: ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಎಂಜಿ ರಸ್ತೆಯಲ್ಲಿ ಅವರೆ ಕಾಯಿ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ನಡೆಯುತ್ತಿದ್ದ ಅವರೆಕಾಯಿ ವಹಿವಾಟು ನಿಲ್ಲಿಸಲು ಹೋದ ಪೊಲೀಸ್ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ರಸ್ತೆಯ ಎರಡೂ ಕಡೆ ದೊಡ್ಡ ಮಟ್ಟದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ಅವರೆಕಾಯಿ ವಹಿವಾಟು ನಡೆಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದಾಗಿ ತಿಳಿಸಿ ವ್ಯಾಪಾರಿಗಳ ಮನವೊಲಿಸಲಾಯಿತು.
ಪುರಸಭೆ ಕಚೇರಿ ಸಭಾಂಗಣದಲ್ಲಿ ವ್ಯಾಪಾರಿಗಳ ಸಭೆ ನಡೆಸಲಾಯಿತು. ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಪಟ್ಟಣದ ನಾಗರಿಕೆ ಹಿತದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ಮಂಡಿ ಮಾಲೀಕರು ಅವರೆ ಕಾಯಿ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಿದರು. ಮಾರುಕಟ್ಟೆ ನಿಯಮ ಪಾಲಿಸುವಂತೆ ಸೂಚಿಸಿದರು.
ವ್ಯಾಪಾರಿಗಳು ಜ.6 ರಿಂದ ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲು ಸಮ್ಮತಿಸಿದರು. ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ರಾಜ್ಯ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದ್ದರು. ವಹಿವಾಟು ಸ್ಥಳಾಂತರ ತಡವಾದರೆ ತಾಲ್ಲೂಕಿನ ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮನೆಗಳ ಮುಂದೆ ಪ್ರತಿಭಟನೆ ನಡೆಸುವ ಬೆದರಕೆ ಹಾಕಿದ್ದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಎಪಿಎಂಸಿ ಕಾರ್ಯದರ್ಶಿ ಉಮಾ, ಪುರಸಭೆ ಅಧಿಕಾರಿಗಳಾದ ಕೆ.ಜಿ.ರಮೇಶ್, ವಿ.ನಾಗರಾಜ್, ಎನ್.ಶಂಕರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಜಯರಾಂ, ರಮಾದೇವಿ, ಎಂ.ಡಿ.ನಾರಾಯಣಪ್ಪ ಇದ್ದರು.
Day: January 6, 2024
“ವಿದ್ಯಾಜ್ಯೋತಿಯನ್ನು ಬೆಳಗಿದ ವಿದ್ಯಾರಂಗ” -ಸೂರ್ಯಕಾಂತ ಖಾರ್ವಿ
ಕುಂದಾಪುರ : ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ ಸೀಮಿತ ಎಂಬಂತೆ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದ ಕ್ಲಿಷ್ಟಕರ ಕಾಲದಲ್ಲಿ ಸಮಾನ ಮನಸ್ಕರ ಮಿಲನದಿಂದ ಸಮಾಜದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ವಿದ್ಯಾರಂಗ ಮಿತ್ರ ಮಂಡಳಿಗೆ ಸಲ್ಲುತ್ತದೆ ಎಂದು ಬೈಂದೂರು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಸೂರ್ಯ ಕಾಂತ ಖಾರ್ವಿ ಹೇಳಿದರು ಅವರು ಕುಂದಾಪುರ ಖಾರ್ವಿ ಕೇರಿಯ ವಿದ್ಯಾರಂಗ ಹಾಗೂ ವಿದ್ಯಾನಿಧಿ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾ ಶಂಸನೆ ನುಡಿಗಳನ್ನಾಡಿದರು.
ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಾನಂದ ಖಾರ್ವಿ, ಶ್ರೀಯುತ ಪ್ರಸಾದ ಪ್ರಭು, ಉದ್ಯಮಿಗಳು,ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು,ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಮ್ಮ ರವಿಯವರು ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವೋತಮುಖ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕುಮಾರಿ ಸೌಮ್ಯ ಎಸ್.ಖಾರ್ವಿ ಸ್ಕಾಲರ್ ಶಿಪ್ ಪಡೆಯುವ ವಿದ್ಯಾರ್ಥಿ -ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ರಾದ ದಿನಕರ ಖಾರ್ವಿ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಪಿಯುಸಿಯಲ್ಲಿ ರಾಜ್ಯಕ್ಕೆ,6ನೇ (rank)ಸ್ಥಾನಿಯಾಗಿದ್ದ ಕುಮಾರಿ ಐಶ್ವರ್ಯ ಖಾರ್ವಿಯವರನ್ನು ಸನ್ಮಾನಿಸಲಾಯಿತು. 116 ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ 2,25,000 (ಎರಡು ಲಕ್ಷದ ಇಪ್ಪತ್ತೈದು ಸಾವಿರ) ವಿದ್ಯಾರ್ಥಿ ವೇತನ ವಿತರಿಸಲಾಯಿತು. ಫಲಾನುಭವಿಗಳ ಪಟ್ಟಿಯನ್ನು ನಾಮದೇವ ಖಾರ್ವಿ, ಲಕ್ಷ್ಮೀ ಚಂದ್ರಕಾಂತ,ಮೋಹನ ಖಾರ್ವಿ, ಗಣಪತಿ ಖಾರ್ವಿ, ದಯಾನಂದ ಖಾರ್ವಿ ಓದಿದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಜನಪದ ಕಲಾತಂಡದ ಮುಖ್ಯಸ್ಥರಾದ ಶ್ರೀ ಮುಕುಂದ ಖಾರ್ವಿ ಪ್ರಾರ್ಥಿಸಿದರು. ನಾಮದೇವ ಖಾರ್ವಿ ಮತ್ತು ಮುಕುಂದ ಖಾರ್ವಿ ಸಂಸ್ಥೆಯ ಉದಯಗೀತೆ” ವಿದ್ಯಾರಂಗ ಉದಯತರಂಗ” ಹಾಡಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಸಂದೀಪ್ ಎಸ್. ಖಾರ್ವಿ ವಾಚಿಸಿದರು.ಚಂದ್ರಶೇಖರ ಖಾರ್ವಿ ನಿರೂಪಿಸಿ, ಸತೀಶ್ ಎಸ್ ಖಾರ್ವಿ ವಂದಿಸಿದರು
ಚಾಲಕ ನಿರ್ವಾಹಕರು ಉತ್ತಮ ಆರೋಗ್ಯ ಹೊಂದಿರಬೇಕೆಂಬ ದೃಷ್ಟಿಯಿಂದ ಆರೋಗ್ಯತಪಾಸಣಾ ಶಿಭಿರ
ಶ್ರೀನಿವಾಸಪುರ: ರಾಜ್ಯಾದ್ಯಂತ ಮೂಲೆ ಮೂಲೆಗೂ ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಸೇವೆ ಸಲ್ಲಿಸುತ್ತಿದ್ದು, ಈ ಸೇವೆ ಸಲ್ಲಿಸುತ್ತಿರುವ ಚಾಲಕರು, ನಿರ್ವಾಹಕರುಉತ್ತಮಆರೋಗ್ಯ ಹೊಂದಿರಬೇಕೆಂಬ ದೃಷ್ಟಿಯಿಂದ ಈ ಆರೋಗ್ಯತಪಾಸಣಾ ಶಿಭಿರವನ್ನು ಏರ್ಪಡಿಸಿದ್ದು, ಇದರಉಪಯೋಗವನ್ನುಪಡೆದುಕೊಳ್ಳಬೇಕೆಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ನಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು.
ಪಟ್ಟಣದಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯಡಿಪೆÇೀದಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು, ಚಾಲಕರು, ಮತ್ತು ಸಿಬ್ಬಂಧಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಪವನ್ಆಸ್ಪತ್ರೆ ಶ್ರೀನಿವಾಸಪುರ ಹಾಗೂ ವಾಸನ್ ಐ ಕೇರ್, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಆರೋಗ್ಯತಪಾಸಣಾ ಶಿಭಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದಎಸ್.ಎನ್. ಮಂಜುನಾಥರೆಡ್ಡಿ, ಸಾರಿಗೆ ಸಂಸ್ಥೆಯಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು ಹಾಗೂ ಚಾಲಕರುರಾಜ್ಯಾಧ್ಯಂತ ಸಾವಿರಾರು ಪ್ರಯಾಣಿಕರನ್ನುಒಂದುಕಡೆಯಿಂದ ಮತ್ತೊಂದುಕಡೆಗೆ ಸುರಕ್ಷಿತವಾಗಿಕರೆದೊಯುತ್ತಿರುವುದು ಶ್ಲಾಘನೀಯವಾಗಿದೆ, ಹಾಗೆಯೇ ಈ ಕಾರ್ಯ ನಿರ್ವಹಿಸುತ್ತಿರುವಚಾಲಕರು ನಿರ್ವಾಹಕರುಆರೋಗ್ಯದಿಂದಿರಬೇಕೆಂಬ ಉದ್ದೇಶದಿಂದಇವರಿಗೆಕಣ್ಣುದೃಷ್ಟಿತಪಾಸಣೆ ಮಾಡಿಅವಶ್ಯಕತೆಇರುವಂತಹವರಿಗೆಕನ್ನಡಕವನ್ನು ಸಹ ಉಚಿತವಾಗಿ ವಾಸನ್ ಐ ಕೇರ್ಕೋಲಾರಇವರ ವತಿಯಿಂದ ನೀಡಲಾಗುವುದು, ಹಾಗೆಯೆ ಸಾಮಾನ್ಯತಪಾಸಣೆಯನ್ನು ಮಾಡಲಾಗುವುದುಎಂದು ತಿಳಿಸಿದರು.
ಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ವ್ಯವಸ್ಥಾಪಕರಾದವೆಂಕಟೇಶ್ ಮಾತನಾಡಿ, ರೋಟರಿ ಸಂಸ್ಥೆಯಿಂದ ನಮ್ಮಘಟಕದ ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ವರ್ಗದವರಿಗೆಉಚಿತಆರೋಗ್ಯತಪಾಸಣಾ ಶಿಭಿರವನ್ನು ಹಮ್ಮಿಕೊಂಡಿರುವುದುತುಂಬಾಉಪಯುಕ್ತವಾದಂತಹಕಾರ್ಯಕ್ರಮವಾಗಿದ್ದು, ನಮ್ಮ ಸಿಬ್ಬಂಧಿಯು ಆರೋಗ್ಯದತಪಾಸಣೆಗಾಗಿ ಹೊರಗಡೆ ಹೋದಾಗ ಸಾವಿರಾರು ರೂಗಳು ಖರ್ಚಾಗುವುದರಿಂದಇಂತಹಉಚಿತಆರೋಗ್ಯ ಶಿಭಿರವನ್ನು ಏರ್ಪಡಿಸಿರುವುದು ಶ್ಲಾಘನೀಯವೆಂದರು.
ವಾಸನ್ ಐ ಕೇರ್ನಡಾ: ಚರಣ್ ಮಾತನಾಡಿ, ನಾವು ರೋಟರಿ ಸಂಸ್ಥೆಯಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಬಳಿ ಮಾತನಾಡಿ, ಶ್ರೀನಿವಾಸಪುರದಲ್ಲಿಉಚಿತವಾಗಿ ಐ ಚೆಕ್ಅಪ್ಕ್ಯಾಂಪನ್ನು ಮಾಡಲುತಯಾರಿದ್ದೇವೆಎಂದತಕ್ಷಣಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕದ ಸಿಬ್ಬಂದಿಗೆ ಆರೋಗ್ಯತಪಾಸಣೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ, ಹಾಗೆಯೆತಾಲ್ಲೂಕಿನಯಾವುದೇ ಸಂಘ ಸಂಸ್ಥೆಯ ಮುಖಾಂತರಉಚಿತವಾಗಿಆರೋಗ್ಯ ಶಿಭಿರವನ್ನು ಮಾಡಲು ಸಿದ್ದರಿದ್ದೇವೆ, ಮುಂದಿನ ವಾರ ಪಟ್ಟಣದನ್ಯಾಯಾಲಯದ ವಕೀಲರ ಸಂಘದಎಲ್ಲಾ ಸದಸ್ಯರಿಗೆ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಿಬ್ಬಂದಿಗೆ ಉಚಿತವಾಗಿಆರೋಗ್ಯ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿದರು. ಘಟಕದ ಸುಮಾರು260 ಸಿಬ್ಬಂಧಿಯವರು ಉಚಿತಆರೋಗ್ಯತಪಾಸಣೆಗೆ ಒಳಪಟ್ಟಿದ್ದರು.
ಈ ಸಂದರ್ಭದಲ್ಲಿರೋಟರಿ ಶ್ರೀನಿವಾಪುರ ಸೆಂಟ್ರಲ್ನನಿರ್ದೇಶಕರಾದ ಹೆಚ್.ಎನ್. ನಾಗೇಶ್,ಎನ್. ಕೃಷ್ಣಮೂರ್ತಿ, ಸುರೇಶ್, ಸ್ಥಳೀಯ ಘಟಕದಟಿ.ಎ.ರಾಮಚಂದ್ರ, ಮಣಿ, ಸಿಬ್ಬಂಧಿ ವಾಣಿ, ಮಾದೇಶ್, ಪವನ್ಆಸ್ಪತ್ರೆಯ ಸಿಬ್ಬಂಧಿಯಾದ ಭಾರತಿ, ಕೆ. ಶಿವರಾಜ್, ಮತ್ತುಘಟಕದ ಸಿಬ್ಬಂಧಿ ಹಾಜರಿದ್ದರು.