ಕುಂದಾಪುರ : ಕುಂದಪ್ರಭ ಆಶ್ರಯದಲ್ಲಿ ಪ್ರದಾನ ಮಾಡಲಾಗುವ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 7 ರಂದು ಭಾನುವಾರ ಸಂಜೆ 4 ಗಂಟೆಗೆ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಜರುಗಲಿದೆ.
ಖ್ಯಾತ ವಿದ್ವಾಂಸ, ರಂಗ ನಿರ್ದೇಶಕ, ನಟ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕರ್ನಾಟಕ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ, ಕೋಟ ಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕುಂದಾಪುರ ವಲಯದ ಗೃಹ ರಕ್ಷಕರಿಗೆ ಗೌರವ ನೀಡಲಿದ್ದಾರೆ.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಭಿನಂದನಾ ಮಾತುಗಳನ್ನಾಡಲಿರುವರು.
ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಆರಂಭದಲ್ಲಿ ಕೋಟೇಶ್ವರ ವೇಣುಗೋಪಾಲ ಭಟ್ ಹಾಗೂ ತಂಡದವರಿಂದ ಲಘು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವನಿಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸರ್ವರನ್ನು ಆಹ್ವಾನಿಸಿದ್ದಾರೆ.
Day: January 4, 2024
ನರಸಾಪುರ ಗ್ರಾಮದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಒತ್ತಾಯ
ಕೋಲಾರ,ಜ.04: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇ
ನರಸಾಪುರ ಮದರ್ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ನರಸಾಪುರ ಹೋಬಳಿಯ ಗ್ರಾಮಸ್ಥರು ಹಾಗೂ ಯುವ ಮುಖಂಡ ಎನ್.ವಿ.ಗೋಪಿ ಅವರ ನೇತೃತ್ವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ಇದ್ದು ಇದನ್ನು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿರುತ್ತದೆ. ಕಾರಣ ನರಸಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಗೊಂಡಿದ್ದು, ಕಾರ್ಖಾನೆಗಳು ಸ್ಪಾಪನೆಯಾಗಿ ಸುಮಾರು 10 ರಿಂದ 15 ವರ್ಷಗಳಾಗಿದ್ದು, ಪ್ರಸಿದ್ದ ಕಂಪನಿಗಳಾದ ಹೋಂಡಾ ಮೋಟಾರ್ಸ್ ಲಿಮಿಟೆಡ್, ವಿಸ್ಟ್ರಾನ್ (ಐಪೋನ್), ಎಕ್ಸಿಡಿ, ಬಡವೆ, ಸ್ಕ್ಯಾನಿಯಾ, ಲುಮ್ಯಾಕ್ಸ್ ಹಾಗೂ ಮಹೀಂದ್ರ ಏರೋ ಸ್ಪೇಸ್ ಹಾಗೂ 50 ಕ್ಕಿಂತಹೆಚ್ಚು ಇನ್ನು ಇತರ ಹಲವಾರು ರಾಷ್ಟ್ರೀಯ ಮತ್ತು ಅಂತರ ರಾಷ್ರೀಯ ಕಂಪನಿಗಳು ಇದ್ದು ಲಕ್ಷಾಂತರ ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ, ಇದರಿಂದಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕಂಪನಿಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸಿ, ಕಾರ್ಯೋನ್ಮುಕವಾಗಲು ತುಂಬಾ ತಡವಾಗುತ್ತದೆ, ಹಾಗೂ ನರಸಾಪುರ ಹೋಬಳಿಯಲ್ಲಿ ಸುಮಾರು 40 ರಿಂದ 45 ಸಾವಿರ ಮಂದಿ ವಾಸ ಮಾಡುತ್ತಿರುತ್ತಾರೆ, ಜೊತೆಗೆ ಈ ಕೇಂದ್ರ ಹತ್ತಿರವಾಗಿ ಕೆಲವು ವಕ್ಕಲೇರಿ ಹೋಬಳಿಯ ಗ್ರಾಮಗಳು ಇದ್ದು ಅಲ್ಲಿಯೂ ಸಹ ಸುಮಾರು 35 ರಿಂದ 40 ಜನ ವಾಸಿಸುತ್ತಿರುತ್ತಾರೆ, ಈ ಗ್ರಾಮಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಹಾಗೂ ಇನ್ನು
ಇತರೇ ಪ್ರಕರಣಗಳು ಉಂಟಾದಾಗ 14 ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಕೋಲಾರಕ್ಕೆ ಹೋಗಬೇಕಾಗುತ್ತದೆ.
ನರಸಾಪುರ ಮುಖ್ಯ ಕೇಂದ್ರದಿಂದ ವಕ್ಕಲೇರಿ ಮುಖ್ಯಕೇಂಧ್ರಕ್ಕೆ ಅಂದಾಜು ಕೇವಲ 7 ಕಿ.ಮೀ ಮಾತ್ರ ಇರುವುದರಿಂದ ವಕ್ಕಲೇರಿಯ ಕೆಲವು
ಗ್ರಾಮಗಳನ್ನು ಹಾಗೂ ನರಸಾಪುರ ಹೋಬಳಿ ಎಲ್ಲಾ ಗ್ರಾಮಗಳನ್ನು ಸೇರಿಸಿ ನರಸಾಪುರ ಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ತಂದು ನರಸಾಪುರ ಹೊರಠಾಣೆಯನ್ನು ಮೇಲ್ದರ್ಜೇಗೆ ಏರಿಸಿ ಅವುಗಳಲ್ಲಿ ವಿಲೀನ ಮಾಡಬೇಕು ಹಾಗೂ ನರಸಾಪುರ ಹೊರ ಠಾಣೆ ಸರಹದ್ದು ಸೂಕ್ಷ್ಮ ಪ್ರದೇಶವಾದ್ದರಿಂದ, ಮತ್ತು ನರಸಾಪುರ ಹೊರ ಠಾಣಾ ಸರಹದ್ದಿನಲ್ಲಿ 8 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ 75 ಯ
ನಾಲ್ಕು ಪತದ ರಸ್ತೆ ಹಾದು ಹೋಗಿದ್ದು ರಸ್ತೆ ಅಪಘಾತಗಳು ಆಗಿಂದ್ದಾಗೆ,ಸಂಭವಿಸಿ ಹೆಚ್ಚಿನ ಸಂಖೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿರುವುದರಿಂದ ಹಾಗೂ ಇತರೇ ಅಪರಾಧಗಳು ಆಗಿಂದ್ದಾಗೆ ಸಂಭವಿಸುತ್ತಿರುವುದರಿಂದ, ಹಾಗೂ ನರಸಾಪುರ ಹೊರ ಠಾಣಾ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಪ್ಯಾಕ್ಟರಿಗಳು ಇರುತ್ತವೆ, ಹೆಚ್ಚಿನ ವ್ಯಾಪಾರ ವಹಿವಾಟು ಹಾಗೂ ಸಿವಿಲ್ ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವುಗಳಿಗೆ ರಕ್ಷಣೆ ಕೊಡುವುದು, ಹಾಗೂ ಅಪಘಾತ ನಡೆದಸಂಧರ್ಭದಲ್ಲಿ ಕೂಡಲೇ ಸ್ಥಳಕ್ಕೆ ದಾವಿಸಿ ಕ್ರಮ ಕೈಗೊಳ್ಳಲು ಹಾಗೂ ಇತರೇ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವುದು ಅತ್ಯವಶ್ಯಕತೆ ಇರುತ್ತೆ, ಅದ್ದರಿಂದ ಕೂಡಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ, ಈ ಹಿಂದೆ ಇದ್ದಂತಹ ಮಾನ್ಯ ಗೃಹ
ಮಂತ್ರಿಗಳಿಗೂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದು ಏನು ಪ್ರಯೋಜನವಾಗಿರುವುದಿಲ್ಲ ಎಂದರು.
ಈ ವೇಮಗಲ್ ಪೊಲೀಸ್ ಠಾಣಾ ಮತ್ತು ನರಸಾಪುರ ಹೊರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ ನಕಲು ಪ್ರತಿಯನ್ನು ಲಗತ್ತಿಸಿದೆ, ತಾವುಗಳು ದಯವಿಟ್ಟು ನರಸಾಪುರ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇ ಪೊಲೀಸ್
ಠಾಣೆಯನ್ನಾಗಿ ಮೇಲ್ದರ್ಜೇಗೆ ಏರಿಸಬೇಕೆಂದು ಹಾಗೂ ನರಸಾಪುರ ಹೋಬಳಿ ಕುರ್ಕಿ ಗ್ರಾಮದ ಸರ್ವೇ ನಂಬರು 119 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂದಾಜು 2.20.0ಎಕರೆ ಸರ್ಕಾರಿ ಸ್ಥಳ ಇರುತ್ತದೆ ಪೊಲೀಸ್ ಠಾಣೆಗೆ ಮೀಸಲಿರಿಸಿ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವಿಕರಿಸಿದ ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಪತ್ರದಲ್ಲಿ ನರಸಾಪುರ ಕೇಂದ್ರ ಸ್ಥಾನದಲ್ಲಿಯೇ ಪೊಲೀಸ್ ಹೊರ
ಠಾಣೆಯನ್ನು ಮೇಲ್ದರ್ಜೇಗೆ ಏರಿಸಬೇಕೆಂದು ಗ್ರಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿ ಗೃಹಮಂತ್ರಿಗಳು ಕ್ರಮ ವಹಿಸುವುದಾಗಿ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸೊಸ್ಯಟಿ ಮುನಿರಾಜು, ಸಿ.ಎಂ.ಎಂ.ಮಂಜುನಾಥ್, ಎಸ್.ನಾರಾಯಣಸ್ವಾಮಿ, ವಾಸೀಮ್, ಶ್ರೀನಾಥ್, ನಾ.ಲೋಕೇಶ್, ಶಾಂತಮ್ಮ ಇನ್ನಿತರರು ಇದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಿಗೆ – ಎಂ.ಜಿ.ರಸ್ತೆಯಲ್ಲಿ ಅವರೇಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರ ವಿರುದ್ದ ಕ್ರಮಕೈಗೊಳ್ಳಿ – ರೈತ ಸಂಘ
ಶ್ರೀನಿವಾಸಪುರ ಜ-4, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದು ಎಂ.ಜಿ.ರಸ್ತೆಯಲ್ಲಿ ಅವರೇಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರ ವಿರುದ್ದ ಕ್ರಮಕೈಗೊಂಡು ಅವರೆ ಕಾಯಿ ವಹಿವಾಟನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಇಲ್ಲವೆ ಸೂಕ್ತವಾದ ಜಾಗ ಗುರುತಿಸಿ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಇಂದ್ರಾ ಭವನ ಸರ್ಕಲ್ನಲ್ಲಿ ಅವರೆಕಾಯಿ ಸಮೇತ ಹೋರಾಟ ಮಾಡಿ ತಾಲ್ಲೂಕು ದಂಡಾಧಿಕಾರಿಗಳು ಎ.ಪಿ.ಎಂ.ಸಿ. ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತ ಮೂರು ತಿಂಗಳು ಭೂಮಿ ತಾಯಿಗೆ ಕಷ್ಟಾಪಟ್ಟು ರೋಗ ನಿಯಂತ್ರಣಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡಿ ಬೆಳೆದಿರುವ ಅವರೇಕಾಯಿ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಇದ್ದರೂ, ಕಾರ್ಯದರ್ಶಿಗಳು ಹಾಗೂ ಆಡಳಿತ ಅಧಿಕಾರಿಗಳು ಬೇಜವಾಬ್ದಾರಿಯಿಂದ ಪರವಾನಿಗೆದಾರರ ಕಾನೂನಿನ ಭಯವಿಲ್ಲದೆ, ರಾಜಾರೋಷವಾಗಿ ಎಂ.ಜಿ. ಮಾರುಕಟ್ಟೆಯಲ್ಲಿ ಅವರೇ ಕಾಯಿ ವಹಿವಾಟು ನಡೆಸಿ ಮಾರುಕಟ್ಟೆಗೆ ಬರುವ ಶುಲ್ಕ ಹಾಗೂ ರೈತರಿಗೆ ಸೂಕ್ತವಾದ ಬೆಲೆ ನೀಡದೆ ಹರಾಜುನಲ್ಲಿ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದರೂ ಕಣ್ಣಿದ್ದು, ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮೂರು ತಿಂಗಳು ಕಷ್ಟಾಪಟ್ಟು ಬೆಳೆದ ಅವರೇಕಾಯಿ 30 ನಿಮಿಷ್ಯದಲ್ಲಿ ಹರಾಜು ಹಾಕಿ 10 ರೂಪಾಯಿ ಕಾನೂನು ಬಾಹಿರ ಕಮೀಷನ್ ಪಡೆದು 100 ಕ್ಕೆ 5ಕೆಜಿ. ಲೆಸ್ ಮಾಡಿ ರೈತರನ್ನು ವ್ಯಾಪಾರಸ್ಥರು ವಂಚನೆ ಮಾಡುತ್ತಿದ್ದರೂ, ಅಧಿಕಾರಿಗಳು ವ್ಯಾಪಾರಸ್ಥರ ಜೊತೆ ಶಾಮೀಲಾಗಿ ರೈತರ ಬೆವರ ಹನಿಯ ಕಷ್ಟವನ್ನು ಕಸಿಯುತ್ತಿದ್ದಾರೆ. ಏಕೆಂದರೆ ರೈತರು ಬೆಳೆದ ಬೆಳೆಯನ್ನು ಅಧಿಕಾರಿಗಳು ಕಷ್ಟಾಪಡದೆ ಮೂರು ಹೊತ್ತು ಹೊಟ್ಟೆ ತುಂಬಾ ತಿನ್ನುತ್ತಾರೆಲ್ಲಯೇ ಅದೇ ರೈತರು ಮಾಡಿದ ತಪ್ಪು ರೈತರ ಕಷ್ಟ ತಿಳಿದಿದ್ದರೆ, ಅವರೆಕಾಯಿ ವಹಿವಾಟನ್ನು ಕಾನೂನುಬಾಹಿರವಾಗಿ ನಡೆಸುತ್ತಿರುವ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕತ್ತು ಇಲ್ಲವೆಂದು ಪ್ರಶ್ನೆ ಮಾಡಿದರು.ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಅಧಿಕಾರಿಗಳನ್ನು ಕೇಳಿದೆರ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯಾಗಿದೆ. ಪರವಾನಿಗೆದಾರರು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಬೆಕ್ಕಿನ ಕಥೆ ಹೇಳುತ್ತಿದ್ದಾರೆ. ಅವರೆಕಾಯಿ ವಹಿವಾಟು ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವುದರಿಂದ ಟ್ರಾಪಿಕ್ ಸಮಸ್ಯೆಯ ಜೊತೆಗೆ ಹರಾಜು ಸಮಯದಲ್ಲಿ ಜನಸಂದಣಿ ಹೆಚ್ಚಾಗಿ ಅಪಘಾತಗಳು ಸಂಭವಿಸಿ ಪೊಲೀಸ್ ಠಾಣೆ ಮೆಟ್ಟಲು ಏರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇಕೆ. ಪರವಾನಿಗೆದಾರರು ಕಾನೂನಿನ ಭಯವಿಲ್ಲದ ಜೊತೆಗೆ ನಮಗೆ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲ ವಿದೆ ಎಂದು ಅಧಿಕಾರಿಗಳ ವಿರುದ್ದವೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಅಸಮದಾನ ವ್ಯಕ್ತಪಡಿಸಿದರು.
ಅವರೆಕಾಯಿ ವಹಿವಾಟು ನಡೆಸುತ್ತಿರುವ ಕೆಲವರು ಯಾವುದೇ ಪರವಾನಿಗೆ ಪಡೆದಿಲ್ಲ. ಆದರೂ ಸಹ ರಾಜಾರೋಷವಾಗಿ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ ಹಣದಲ್ಲಿ ಮೋಸವಾದರೆ ಯಾರಿಗೆ ದೂರು ಕೊಡಬೇಕು. ಅಧಿಕಾರಿಗಳನ್ನು ಕೇಳಿದರೆ ನಮ್ಮ ವ್ಯಾಪ್ತಿಗೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ವ್ಯಾಪ್ತಿಗೆ ಬರಲ್ಲ ಎಂದರೆ ದಯವಿಟ್ಟು ಎ.ಪಿ.ಎಂ.ಸಿ.ಯನ್ನು ಬೀಗ ಹಾಕಿ ಮನೆಗೆ ತೆರಳಿ ಆಯಾಗಿರಿ ಎಂದು ಸಲಹೆ ನೀಡಿದರು.
48 ಗಂಟೆಯಲ್ಲಿ ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟನ್ನು ಎ.ಪಿ.ಎಂ.ಸಿ. ಸ್ಥಳಾಂತರಿಸಿ ಇಲ್ಲವೆ ಸೂಕ್ತವಾದ ಜಾಗವನ್ನು ನಿಗಧಿ ಮಾಡಿ ರೈತರಿಗೆ ಹರಾಜು ಹಾಗೂ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಿ ಇಲ್ಲವಾದರೆ ಅವರೆ ಕಾಯಿ ಸಮೇತ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿಗಳು ಎ.ಪಿ.ಎಂ.ಸಿ. ಅಧಿಕಾರಿಗಳು ಅವರೆಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರಿಗೆ ಎಷ್ಟೇ ನೋಟಿಸ್ ನೀಡಿದರು ಬದಲಾಗುತ್ತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆ ಹರಿಸುವ ಬರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಲವಾಟ ಶಿವು, ದ್ಯಾವಂಡಹಳ್ಳಿ ರಾಜೇಂದ್ರ, ಹುಲ್ಲಪ್ಪ, ಶೇಕ್ಷಪಿವುಲ್ಲಾ, ಸಹದೇವಣ್ಣ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಸುಪ್ರಿಂ ಚಲ, ವಿನು, ಗಿರೀಶ್, ಮುಂತಾದವರು ಇದ್ದರು.
ಸೋಲು ಗೆಲುವಿಗಿಂತ ಕ್ರೀಡಾ ಸ್ಪೂರ್ತಿ ಬಹುಮುಖ್ಯ-ಗೌತಮ್ ಶೆಟ್ಟಿ
ಮಲ್ಪೆ-ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ-2023 ಜರುಗಿತು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ
“ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ“
ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಯುವಕರು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ವೀರಮಾರುತಿ ಫ್ರೆಂಡ್ಸ್ ಸಾಧನೆ ಶ್ಲಾಘನೀಯ” ಎಂದರು.