ಶ್ರೀನಿವಾಸಪುರ: ಸಂಘ ಜೀವಿಯಾದ ಮನುಷ್ಯ ಸ್ವಾಭಿಮಾನದಿಂದ ಬದುಕಲು ಮೂಲಭೂತ ಹಕ್ಕುಗಳು ಅವಕಾಶ ಕಲ್ಪಿಸುತ್ತವೆ. ಮಾನವ ಹಕ್ಕು ನಿರಾಕರಣೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ವಕೀಲರ ಸಂಘದಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ಬದಲಾದ ಪರಿಸ್ಥಿತಿಯಲ್ಲಿ ಹಕ್ಕುಗಳ ರಕ್ಷಣೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಮಾನವ ಹಕ್ಕು ಸಾಮಾಜಿಕ ಹಕ್ಕಾಗಿದ್ದು, ಸಾಂಘಿಕ ಪ್ರಯತ್ನದ ಮೂಲಕ ಸಂರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಶೋಷಣೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಸ್ಥಳೀಯ ಜೆಎಂಎಫ್ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಮಾನವನ ಘನತೆ ರಕ್ಷಣೆ ಉದ್ದೇಶದಿಂದ ವಿಶ್ವದ ಎಲ್ಲ ದೇಶಗಳೂ ಮಾನವ ಹಕ್ಕುಗಳನ್ನು ಒಪ್ಪಿಕೊಂಡಿವೆ. ಎರಡನೇ ಜಾಗತಿಕ ಯುದ್ಧದಲ್ಲಿ ಸಂಭವಿಸಿದ ಅಮಾನವೀಯ ಘಟನೆಗಳು ಮಾನವ ಹಕ್ಕುಗಳ ಜಾರಿಗೆ ಕಾರಣವಾದವು ಎಂದು ಹೇಳಿದರು.
ಮಾನವ ಹಕ್ಕು ಆಯೋಗ, ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುತ್ತದೆ. ಮಾನವ ಹಕ್ಕು ನಿರಾಕರಣೆ ಆದಲ್ಲಿ, ನೊಂದವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ, ಪರಿಹಾರ ಪಡೆದುಕೊಳ್ಳಬಹುದಾಗಿದೆ. ಅದಕ್ಕೆ ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಅರಿತಿರಬೇಕು. ಅರ್ಹ ಫಲಾನುಭವಿಗಳು ಉಚಿತ ಕಾನೂನು ನೆರವು ಪಡೆಯುವ ಅವಕಾಶವೂ ಇದೆ. ಕಾನೂನು ಗೊತ್ತಿಲ್ಲದಿರುವುದು ಕ್ಷಮೆಗೆ ಅರ್ಹವಾಗುವುದಿಲ್ಲ ಎಂದು ಹೇಳಿದರು.
ಮಾನವ ಹಕ್ಕುಗಳು ಹಾಗೂ ಭಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಪ್ರಾಂಶುಪಾಲೆ ಆರ್.ಮಾಧವಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಪ್ಪ ಮಾತನಾಡಿದರು.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳಾದ ಅಬ್ದುಲ್ ವಾಜೀದ್ ಸಾಬ್, ನಾಗೇಂದ್ರ, ರವಿ, ಉಪ ಪ್ರಾಂಶುಪಾಲೆ ರಾಧಾಮಣಿ, ಉಪನ್ಯಾಸಕ ಶೇಷಗಿರಿ, ರಾಮ್ಚರಣ್, ಶ್ರೀತೇಜ ಇದ್ದರು.
Day: December 31, 2023
ಶ್ರೀನಿವಾಸಪುರ: ಶ್ರದ್ಧೆಯಿಂದ ಓದಿದರೆ ಯಶಸ್ಸು ಖಂಡಿತ ಕಟ್ಟಿಕಟ್ಟ ಬುತ್ತಿ – ಪ್ರಾಂಶುಪಾಲ ಸೀನಪ್ಪ
ಶ್ರೀನಿವಾಸಪುರ 4 : ಶ್ರದ್ಧೆಯಿಂದ ಓದಿದರೆ ಯಶಸ್ಸು ಖಂಡಿತ ಕಟ್ಟಿಕಟ್ಟ ಬುತ್ತಿ ಎಂದು ಪ್ರಾಂಶುಪಾಲ ಸೀನಪ್ಪ ಕರೆನೀಡಿದರು.
ತಾಲೂಕಿನ ಮುತ್ತಕಪಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಕ್ರವಾರ ಪಾಮುಚ ಸಾಹಿತ್ಯ ಹಾಗು ಸಾಂಸ್ಕøತಿಕ ಸಂಸ್ಥೆ ಯಿಂದ ನಡೆದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೃಡಸಂಕಲ್ಪ , ಆತ್ಮವಿಶ್ವಾಸ, ನಿಷ್ಟೆ ಇವರಲ್ಲವೂ ಇದ್ದಾಗ ನಾವೆಲ್ಲರೂ ಸಾಧಕರ ಹಾದಿಯಲ್ಲಿ ಸಾಗಬಹುದಾಗಿದೆ , ಆದ್ದರಿಂದ ವಿದ್ಯಾರ್ಥಿಗಳು ದೊಡ್ಡಗುರಿಯನ್ನು ಹೊಂದಿ ಮುನ್ನೆಡಯಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಎಂ.ವಿ.ಬಷೀರ್ ಮಾತನಾಡಿ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನ ಸಾಧನೆ ಮಾಡಲು ಬೇಕಾದ ಶ್ರಮವನ್ನು ಪಡೆಬೇಕು ಎಂದರು.
ಸಾಹಿತಿ ಪಾತಮುತ್ತಕಪಲ್ಲಿ ಮು.ಚಲಪತಿಗೌಡರು ನಮ್ಮ ಜಿಲ್ಲೆಯ ಅನೇಕರು ಸಾಹಿತ್ಯ ವಲಯ ಹಾಗು ನಮ್ಮ ಜಿಲ್ಲೆಯ ಅನೇಕರು ಅಧಿಕಾರ ವರ್ಗದಲ್ಲಿ ,ರಾಜಕೀಯ ಹಾಗು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸಾಧಕರಿರುವದು ಶ್ಲಾಘನೀಯ ಎಂದರು. ಈ ನೆಲದ ಜನರಿಗೆ ಸಾಧಿಸುವ ಛಲ , ಗುಣ ಇದೆ ಪ್ರತಿಯೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಹುದಾಗಿದೆ . ಆದ್ದರಿಂದ ಎಲ್ಲರೂ ಸಿಗುವ ಅವಕಾಶಗಳನ್ನು ಬಳಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿಗಳಾದ ಶಂಕರೇಗೌಡ , ರಾಮಾಂಜಿ, ನಿವೃತ್ತ ಶಿಕ್ಷಕ ಚಿನ್ನಪ್ಪ ಮಾತನಾಡಿದರು. ಪ್ರೌಡಶಾಲೆ 3 ವಿದ್ಯಾರ್ಥಿಗಳು , ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು. ಇದೇ ಸಂದರ್ಭದಲ್ಲಿ ಚೆನ್ನಪ್ಪ, ಎಂ.ವಿ.ಬಷೀರ್, ಸತೀಶ್ ರವರನ್ನ ಸನ್ಮಾನಿಸಲಾಯಿತು.
ಗ್ರಾಮದ ಮುಖಂಡರಾದ ಸಾಬುಲಾಲ್, ಹುಸೇನ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಉಪನ್ಯಾಸಕರಾದ ನವೀನ್ಕುಮಾರ್, ಲೋಕೇಶ್, ಶಿಲ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಇದ್ದರು.
ಮೊದಲ ಮದುವೆ ಬಚ್ಚಿಟ್ಟು ಸಾಂಪ್ರದಾಯಿಕವಾಗಿ ನನ್ನನ್ನು ಮದುವೆಯಾಗಿ ಮೂರನೇ ಮದುವೆಗೆ ಸಿದ್ದನಾದ ಗಂಡನ ವಿರುದ್ದ ಕೆ.ಎಲ್. ಭಾವನ ದೂರು
ಶ್ರೀನಿವಾಸಪುರ 1 : ಇತ್ತೀಚೆಗೆ ನನ್ನನ್ನು ಎರಡನೇ ಮದುವೆ ಆಗಿ ನಂಬಿಸಿ ಮದುವೆ ಸಮಯದಲ್ಲಿ ವರೋಪಚಾರವನ್ನು ಪಡೆದುಕೊಂಡು, ನನ್ನ ಪತಿಯಲ್ಲೇ ಲೋಪವಿದ್ದರೂ ಇದನ್ನು ಬಚ್ಚಿಟ್ಟು, ಮೂರನೆ ಮದುವೆಗೆ ಪ್ರಯತ್ನ ಮಾಡುತ್ತಿರುವುದು ನನಗೆ ಮಾಹಿತಿ ಬಂದಿದ್ದು ನನಗಾಗಿರುವ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದೆಂದು ನನ್ನ ಆಶಯ ಎಂದು ತನಗಾಗಿರುವ ನೋವನ್ನು ಬೆಂಗಳೂರಿನ ವಿಜಯನಗರದ ವಾಸಿಯಾದ ಕೆ.ಎಲ್. ಭಾವನ ವ್ಯಕ್ತಪಡಿಸಿದ್ದಾರೆ.
ಕೆ.ಎಲ್. ಭಾವನತನಗಾಗಿರುವ ನೋವನ್ನು ಶುಕ್ರವಾರ ಮಾಧ್ಯಗಳ ಮುಖೇನ ವ್ಯಕ್ತಪಡಿಸಿ ಕಳೆದ 40 ದಿನಗಳ ಹಿಂದೆ ಪಟ್ಟಣದಎಂ.ಜಿ.ರಸ್ತೆಯಲ್ಲಿರುವ ನಿವೃತ್ತಇಂಜಿನಿಯರ್ಎಂ.ಆರ್. ರಮೇಶ್ಅವರ ಮಗನಾದ ಸಾಯಿ ಚೇತನ್ ನನ್ನನ್ನು ಸಾಂಪ್ರದಾಯಿಕವಾಗಿ ಇಚ್ಚೆಪಟ್ಟು ನಮ್ಮಿಬ್ಬರ ಎರಡನೇ ವಿವಾಹವಾಗಿದ್ದು, ನಂತರ ದಿನಾಂಕ: 28.08.2023ರಂದು ಉಪ ನೊಂದಣಾಧಿಕಾರಿಗಳ ಕಚೇರಿ, ಶ್ರೀನಿವಾಸಪುರದಲ್ಲಿ ವಿವಾಹ ನೊಂದಾವಣಿಯಾಗಿರುತ್ತದೆ. ಕಳೆದ ಕೆಲವು ದಿನಗಳ ಬಳಿಕ ಸಾಂಸಾರಿಕವಾಗಿ ಸಾಯಿ ಚೇತನ್ನಲ್ಲಿ ಶಾರೀರಿಕ ಲೋಪವಿದ್ದು ಸಂಬಂಧಿಸಿದಂತೆ ವೈಧ್ಯರೂ ಸಹ ವರಧಿ ನೀಡಿರುತ್ತಾರೆ, ಈ ವಿಚಾರವಾಗಿ ವೈಧ್ಯರ ಸಲಹೆಯನ್ನು ಸಾಯಿ ಚೇತನ್ ತಿರಸ್ಕರಿಸಿರುತ್ತಾನೆ.
ಆದರೆ ಉದ್ದೇಶ ಪೂರ್ವಕವಾಗಿ ನನ್ನ ಮಾವ ಎಂ.ಆರ್. ರಮೇಶ್ ಮತ್ತು ನನ್ನ ಪತಿಯ ತಂಗಿಯ ಗಂಡ ರೇಣುಜ್ ಇಲ್ಲ ಸಲ್ಲದ ಕಿರುಕುಳ ನೀಡಿ ದೈಹಿಕ ಹಿಂಸೆ ನೀಡಿ ಬೆದರಿಕೆ ಹಾಕಿರುತ್ತಾರೆ. ಇದರ ಬಗ್ಗೆ ನಾನು ಬೆಂಗಳೂರಿನ ವಿಜಯನಗರ ಮತ್ತು ಬಸವನಗುಡಿಯಲ್ಲಿ ಪ್ರಕರಣದಾಖಲು ಮಾಡಿರುತ್ತೇನೆ. ಶ್ರೀನಿವಾಸಪುರಠಾಣೆಗೂ ಅಂಚೆ ಮೂಲಕ ದೂರನ್ನು ಸಲ್ಲಿಸಿರುತ್ತೇನೆ. ಶ್ರೀನಿವಾಸಪುರಠಾಣೆಯಲ್ಲಿರಾಜಿ ಸಂದಾನವೂ ಸಹ ನಡೆಯಲಾಗಿದ್ದು, ಅರ್ದದಷ್ಟು ಚಿನ್ನ ನನಗೆ ಒಪ್ಪಿಸಿರುತ್ತಾರೆ. ಇದರ ಬೆಳವಣಿಗೆಯಲ್ಲೇ ಸಾಯಿ ಚೇತನ್ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುತ್ತಾನೆ.
ಅಲ್ಲದೆ ಮೂರನೇ ವಿವಾಹವಾಗಲು ಪ್ರಯತ್ನದಲ್ಲಿ ಇದ್ದಾನೆ ಎಂಬ ಮಾಹಿತಿ ನನಗೆ ನೆರೆಹೊರೆಯವರ ಜನತೆಯಿಂದ ಮಾಹಿತಿ ಬಂದಿರುವುದರಿಂದ ನನಗಾಗಿರುವ ಈ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದು, ಈಗಾಗಲೇ ನನಗಿಂತ ಮೊದಲು ಸಾಯಿ ಚೇತನ್ಆಂದ್ರದ ಮದನಪಲ್ಲಿ ಮೂಲದಒಬ್ಬರನ್ನುಮೊದಲನೇ ಮದುವೆಯಾಗಿ ನಂತರ ಬಿರುಕು ಬಂದುರಾಜಿ ಸಂದಾನಆಗಿರುತ್ತದೆ. ನನ್ನನ್ನು ನಂಬಿಸಿ ಒಡವೆ, ವರದಕ್ಷಿಣೆಎಲ್ಲವನ್ನು ಪಡೆದು ಈ ರೀತಿ ಯಾಮಾರಿಸುವ ಇವರ ಕುಟುಂಬಕ್ಕೆತಕ್ಕ ಪಾಠ ಕಾನೂನು ಮೂಲಕ ನೀಡಬೇಕಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.