ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ “ಪರಂಪರಾ” ಕಾರ್ಯಕ್ರಮ

ಕೋಲಾರ ರೈತ ಸಂಘ :ನಕಲಿ ಬಿತ್ತನೆ ಬೀಜ ಕೀಟನಾಶಕ ರಸಗೊಬ್ಬರ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ತಿರ್ಮಾನ

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಸ್ಕೃತ ಸಂಘದ ಆಶ್ರಯದಲ್ಲಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ

ಸುವರ್ಣ ಸೌಧದಲ್ಲಿ ಮಧ್ಯಪ್ರಿಯರ ಪ್ರತಿಭಟನೆ : ಬೇಡಿಕೆ ಕೇಳಿ ಸಚಿವ ಲಾಡ್ ಅಚ್ವರಿಗೊಳಗಾಗಿದ್ದಾರೆ/ Liquor lovers protest at Suvarna Soudha “Alcohol lovers not drunkards” many demands: Minister Lad surprise

  1. ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು
  2. ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10 ರಷ್ಟು ಮೀಸಲಿಡಬೇಕು
  3. ಲೀವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು
  4. ‘ಕುಡುಕ’ ಎಂಬ ಪದ ನಿಷೇಧಿಸಿ ಮದ್ಯ ಪ್ರಿಯರು ಎಂದು ಮಾಡಬೇಕು
  5. ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು
  6. ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು
  7. ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು
  8. ಮದ್ಯಪ್ರಿಯರ ಭವನ ಸ್ಥಾಪಿಸಬೇಕು
  9. ಡಿಸೆಂಬರ್ 31 ಮದ್ಯಾಪನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು
  10. ಮದ್ಯ ಸೇವಿಸಿ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು
  11. ಮದ್ಯಪಾನ ಪ್ರಿಯರ ಕುಟುಂಬದಲ್ಲಿ ವಿವಾಹವಾದರೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು

ಹೀಗೆ ವಿವಿಧ ಬೇಡಿಕೆಗಳನ್ನು ಮದ್ಯ ಪ್ರಿಯರು ಸಚಿವ ಸಂತೋಷ್ ಲಾಡ್ ಮುಂದಿಟ್ಟಿದ್ದಾರೆ. ಮದ್ಯಪ್ರಿಯರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಸಂತೋಷ್ ಲಾಡ್ ಭರವಸೆ ನೀಡಿದ್ದಾರೆ.

Belgaum: On the one hand, the Legislature session is going on in Belagavi Suvarnasoudha, on the other hand, various organizations have protested near Suvarnasoudha demanding the fulfillment of various demands. In the meantime, Madhyapriyas have also protested and demanded to meet many demands. Karnataka Liquor Lovers’ Struggle Association has protested near Suvarnasoudha, and Labor Minister Santosh Lad, who visited the place of protest of alcoholics, was shocked to hear the plea of Madhyapriyas. He also smiled

The demands put forward by Alcohol lovers are acceptable to the people, so what are their demands before the Minister!? The demands are as follows.

  1. A welfare fund for alcoholics should be established
  2. 10 percent of the income from the sale of liquor should be earmarked
  3. People suffering from liver problems should be treated
  4. The word ‘drunkard’ should be banned and it should be called alcohol lovers
  5. One quarter should be allotted to one
  6. Bars should be kept clean
  7. Ambulance should be arranged near the bars
  8. A house for alcoholics should be established
  9. Dec 31 should be declared as Alcohol Lover’s Day
  10. A compensation of 10 lakh rupees should be announced in case of death due to alcohol consumption
  11. Two lakh rupees if married in a family of alcoholics. Encouragement should be given

ಪ್ರಯಾಣಿಕರ ಗಮನಕ್ಕೆ ಡಿ. 14ರಿಂದ 18 ರವರೆಗೆ 2 ಗಂಟೆಯಿಂದ ರಾತ್ರಿ 8ರ ಸಮಯದಲ್ಲಿ ಓಡಾಡುವ ಬೆಂಗಳೂರು-ಮಂಗಳೂರು ರೈಲು ಸೇರಿದಂತೆ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು

ಬೆಂಗಳೂರು: ಮಂಗಳೂರು- ಬೆಂಗಳೂರು ನಡುವೆ ಕಾರ್ಯಾಚರಿಸುತ್ತಿರುವ ರೈಲುಗಳ ಪೈಕಿ ಕೆಲವು ರೈಲುಗಳ ಸಂಚಾರವನ್ನು ಡಿಸೆಂಬರ್‌ 14 ರಿಂದ ಡಿಸೆಂಬರ್‌ 22 ರ ವರೆಗೆ ರದ್ದು ಪಡಿಸಲಾಗಿದೆ.

ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಯಾರ್ಡ್ ಮರು ನಿರ್ಮಾಣಕ್ಕೆ ಅನುಕೂಲವಾಗುವಂತೆ ಡಿ. 14ರಿಂದ 18 ರವರೆಗೆ ಇಂಟರ್ ಲಾಕಿಂಗ್ ಹಾಗೂ ಡಿ. 19 ರಿಂದ 22 ರವರೆಗೆ ಪುನರ್ ನಿರ್ಮಾಣ ಕಾಮಗಾರಿಯನ್ನು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಹಾಗಾಗಿ ಈ ಸಮಯದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ. ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರೆಸ್ ಮತ್ತು ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರೆಸ್ ರೈಲನ್ನು ಡಿ. 16 ರಿಂದ 20 ರ ವರೆಗೆ, ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.14, 17, 19 ಮತ್ತು 21 ರಂದು ರದ್ದು ಪಡಿಸಲಾಗಿದೆ. ಹಾಗೆಯೇ ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.15, 18, 20 ಮತ್ತು 22 ರಂದು, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ಡಿ.16 ರಂದು, ಮಂಗಳೂರು ಜಂಕ್ಷನ್- ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ಸ್ ರೈಲನ್ನು ಡಿ.17 ರಂದು ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ಬೆಂಗಳೂರು- ಮಂಗಳೂರು ಸಂಪರ್ಕಿಸುವ ಏಕೈಕ ರೈಲು ಸಂಖ್ಯೆ 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್- ಬೆಂಗಳೂರು- ಮುರುಡೇಶ್ವರ ರೈಲು ಡಿ.14 ರಿಂದ 16 ರವರೆಗೆ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮೂಲಕ ಚಲಿಸಲಿದೆ. ಡಿ.17 ರಿಂದ 22 ರವರೆಗೆ ಮೈಸೂರು ಮಾರ್ಗವನ್ನು ಹೊರತುಪಡಿಸಿ ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮೂಲಕ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟನೆ ವಿವರಿಸಿದೆ.

ಎಸ್.ಡಿ.ಪಿ.ಐ ನಗರಸಭಾ ಸದಸ್ಯ ಸಮೀ ಉಲ್ಲಾ ವಿರುದ್ಧ ಕ್ರಮಕ್ಕೆ ಪೋಲಿಸ್ ದೂರು

ಶ್ರೀನಿವಾಸಪುರ:ವಿಧ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತೆ ಕುರಿತು ಪ್ರಬಂಧ