ಕುಂದಾಪುರ: ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸುಧಾರಿತ ಸಮಾಜ ನಮ್ಮ ಮೊದಲ ಆದ್ಯತೆ ಮತ್ತು ಉದ್ದೇಶವಾಗಿರಬೇಕು ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಡಿಸೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಭವಿಷ್ಯವಿದೆ. ಭಾರತದ ಶೇಕಡಾ 60ರಷ್ಟು ಭಾಗ ಭೂಮಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ. ನೀವು ಖರ್ಚು ಮಾಡಿದ ಹಣ ಸಮಾಜಕ್ಕಾಗಿ ಅದರ ಅಭಿವೃದ್ಧಿಗೆ ಹೋಗುತ್ತದೆ. ಪ್ರತಿಯೊಬ್ಬರೂ ಅವರವರ ಕುರಿತು ಅರಿವು ಇರಬೇಕು. ನಮಗಾಗಿ ನಮ್ಮ ನಾಳೆಗಳ ಭವಿಷ್ಯಕ್ಕಾಗಿ ಹಣ ಬೇಕು. ಆದರೆ ಸ್ವಂತಿಕೆಗಾಗಿ ಮಾತ್ರ ನಮ್ಮ ದುಡಿಮೆ ಮುಖ್ಯವಾಗಬಾರದು. ನಮ್ಮ ದುಡಿಮೆಯ ಹಣ ಸಮಾಜಕ್ಕಾಗಿ ಮೀಸಲಿಡಬೇಕು. ಅಂತೆಯೇ ನನಗೆ ಆಲೋಚನಾ ಶಕ್ತಿ ಮತ್ತು ಕ್ರಮವನ್ನು ಕಲಿಸಿದೆ ಈ ವಿದ್ಯಾಸಂಸ್ಥೆಯ ಸನ್ಮಾನ ಮತ್ತು ನನ್ನ ಊರ ಸನ್ಮಾನ ನನಗೆ ತುಂಬಾ ಅಪ್ಯಾಯಮಾನವಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಸಹಾಯ ಮಾಡುವುದು ಅತ್ಯಂತ ಒಳ್ಳೆಯ ಕೊಡುಗೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಮಾಡುವಂತಹ ಸೇವೆ ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ. ಜೀವನ ಮತ್ತು ಮರಣದ ನಡುವಿನ ಈ ಜೀವನದಲ್ಲಿ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್ ಎಸ್. ಬಲ್ಲಾಳ್ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಡಾ.ಹೆಚ್.ಎಸ್.ಶೆಟ್ಟಿಯವರ ಬದುಕೆ ಒಂದು ಆದರ್ಶ. ಸಮಾಜದ ಅಭಿವೃದ್ಧಿಗೆ ನೆರವಾಗವ ಅವರ ಚಿಂತನೆ ಸ್ಪೂರ್ತಿದಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಇದರ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಕಾಲೇಜಿನ ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಪ್ರಕಾಶ್ ಸೋನ್ಸ್, ಸದಾನಂದ ಚಾತ್ರ, ಯು.ಎಸ್.ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Day: December 8, 2023
ಗಂಗೊಳ್ಳಿ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಾವು ಯೇಸುಕ್ರಿಸ್ತರ ಭರವಶೆಯ ಮಾರ್ಗದಲ್ಲಿ ನಡೆಯೋಣ: ಫಾ|ಚಾರ್ಲ್ಸ್ ಮಿನೆಜೆಸ್
ಕುಂದಾಪುರ,ಡಿ.8: 397 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.6 ರಂದು ‘ಮೇರಿ ಮಾತೆಯಂತೆ ಯೇಸು ಕ್ರಿಸ್ತರಲ್ಲಿ ನೂತನ ವಿಶ್ವಾಸದಿಂದ ಜೀವಿಸೋಣ’ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ವಲಯದ ಪ್ರಧಾನ ಧರ್ಮಗುರು ಅ|ವಂ|ಚಾರ್ಲ್ಸ್ ಮಿನೇಜೆಸ್ “ನಾವು ನವ ಭರವಶೆಯಿಂದ ಮೇರಿ ಮಾತೆಯಂತೆ ಯೇಸುವಿನಲ್ಲಿ ಭರವಶೆ ಇಟ್ಟು ಜೀವಿಸಬೇಕು. ನಾವು ಪಾಪದಿಂದ ಜೀವಿಸುತ್ತಾ ಇದ್ದೆವೆ, ಯೇಸು ಕ್ರಿಸ್ತರು ಶಿಲುಭೆ ಹೊತ್ತುಅ ನಡೆಯುವಾಗ ಬಿದ್ದಿದ್ದರು, ಆದರೆ ಅವರೆದ್ದು ನಡೆದರು, ಅದುವೇ ನಮಗೆ ಮಾರ್ಗದರ್ಶನ, ನಾವೂ ಪಾಪದಿಂದಲೇ ಬಿದ್ದಿರಬಾರದು, ನಾವು ಪಾಪದಿಂದ ಮೇಲೆಳಬೆಕು, ಚಿನ್ನ ಎಲ್ಲರಿಗೂ ಪ್ರಿಯ, ಆದರೆ ಚಿನ್ನದಿಂದ ನಗ ನಾಣ್ಯಗಳನ್ನು ಮಾಡಬೇಕಾದರೆ, ಚಿನ್ನವನ್ನು ಬೆಂಕಿಗೆ ಹಾಕಿ, ಪುಟವೀಡಬೇಕು, ಅದನ್ನು ತಿದ್ದಿ ಗುದ್ದಿ ರೂಪ ಕೊಡಬೇಕು ಆಗ ಮಾತ್ರ ಚಿನ್ನಕ್ಕೆ ಸುಂದ ರೂಪ ಬಂದು ಧರಿಸಬಹುದಾಗುತ್ತದೆ, ಹಾಗೇ ನಮಗೆ ಸ್ವರ್ಗ ಸೀಗಬೇಕಿದ್ದರೆ ಜೀವನದಲ್ಲಿ ಸತ್ಯ ನೀತಿ ಸನ್ಮಾರ್ಗದಲ್ಲಿ ನಡೆಯಬೇಕು, ಸನ್ಮಾರ್ಗದಲ್ಲಿ ನಡೆಯುವುದು ಸುಲಭದ ಮಾರ್ಗವಲ್ಲ. ಅಲ್ಲಿ ಕಶ್ಟನಶ್ಟಗಳು ಸಿಗುತ್ತವೆ. ಈ ಕಶ್ಟ ನಶ್ಟಗಳನ್ನು ಎದುರಿಸಲು ನಾವು ಯೇಸುಕ್ರಿಸ್ತ ಭರವಶೆಯ ಮಾರ್ಗದಲ್ಲಿ ನಡೆಬೇಕು” ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯದ ನುಡಿಗಳನ್ನಾಡಿದರು. ಗಂಗೊಳ್ಳಿಯ ಧರ್ಮಗುರು ವಂ| ರೋಶನ್ ಥಾಮಸ್ ಡಿಸೋಜಾ ವಂದಿಸಿದರು. ಕುಂದಾಪುರ ವಲಯದ ಧರ್ಮಕೇಂದ್ರದ ಅನೇಕ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ವಾರ್ಷಿಕ ಮಹಾ ಹಬ್ಬದ ಪೋಷಕರಾದ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಗಂಗೊಳ್ಳಿ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು. ಪಾಲನ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ, ಗ್ಲೋರಿಯಾ ಡಿಸೋಜಾ , ಆಯೋಗಗಳ ಸಂಯೋಜಕಿ ರೆನಿಟಾ ಬಾರ್ಬೆಸ್, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.
ಉಡುಪಿಯ ಜಿಲ್ಲಾಸ್ಪತ್ರೆಯ ವೈದ್ಯೆ ಚಿಕಿತ್ಸೆ ನೀಡುತ್ತಿರುವಾಗಲೇ ಹೃದಯಾಘಾತದಿಂದ ನಿಧನ
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ವೈದ್ಯರೊರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.ಮೃತರನ್ನು ಡಾ. ಶಶಿಕಲಾ ಎಂದು ಗುರುತಿಸಲಾಗಿದೆ.
ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುತ್ತೀರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ, ಕೂಡಲೇ ಡಾ. ಶಶಿಕಲಾ ಅವರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಅಷ್ಟರಲ್ಲಿ ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಶಿಕಲಾ ಅವರು 2022ರ ಫೆಬ್ರವರಿಯಲ್ಲಿ ವಯೋನಿವೃತ್ತಿ ಹೊಂದಿದ್ದರು. ಆದರೆ, ವೈದ್ಯರಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಹೊರಗುತ್ತಿಗೆಯಲ್ಲಿ ಮುಂದುವರಿಸಲಾಗಿತ್ತು. ಅವರು ಹೊರರೋಗಿಗಳ ವಿಭಾಗದಲ್ಲಿ ಪ್ರಮುಖವಾಗಿ ರೋಗಿಗಳನ್ನು ನೋಡುತ್ತಿದ್ದರು ಎನ್ನಲಾಗಿದೆ.
ಸಂತ ಮೇರಿಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವ
ಕುಂದಾಪುರ, ಡಿ.8: ಸ್ಥಳೀಯ ಹೆಸರುವಾಸಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿ.7 ರಂದು ಶಾಲಾ ಮೈದಾನದಲ್ಲಿ ವಿಜ್ರಂಬಣೆಯಿಂದ ನಡೆಯಿತು. ಶಾಲ ವರದಿಯನ್ನು ಡಿಜೀಟಲ್ ಪರದೆಯ ಮೂಲಕ ಪ್ರಸ್ತೂತ ಪಡಿಸಲಾಯಿತು.
ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ, ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿಯಾದ ಡಾ.ಕೆ.ಪ್ರೇಮಾನಂದ ಅಗಮಿಸಿ “ಪ್ರಾರ್ಥಮಿಕ, ಪ್ರೌಢಶಾಲೆಗಳಲ್ಲಿ ಕಲಿಯುತ್ತೀರು ಸಮಯದ ಕ್ಷಣಗಳು ಮರೆಯಾಲರದಂತವು, ನಮಗೆ ಕಲಿಸಿದ ಪಾಠಗಳು ನೆನಪಿನಲ್ಲಿರುವುದು ಕಷ್ಟವಾದರೂ, ಬಾಲ್ಯದ ಆ ಕ್ಷಣಗಳು, ಪ್ರವಾಸ, ಸಾಂಸ್ಕ್ರತಿಕ ಕಾರ್ಯಕ್ರಮ, ಚಟುವಟಿಕೆ ಸ್ಮರಣೀಯವಾಗಿರುತ್ತೀವೆ. ಶಾಲೆಯಲ್ಲಿ ನೀಡುವ ಮಾರ್ಗದರ್ಶನ ಆವಾಗ ಅರ್ಥವಾಗದಿದ್ದರೂ, ಜೀವನದಲ್ಲಿ ಕ್ರಮೇಣ ಅವು ನಮಗೆ ಉಪಯುಕ್ತವಾಗುತ್ತವೆ. ನನಗೆ ಮತ್ತು ನನ್ನ ಒಡಹುಟ್ಟಿದವರಿಗೆಲ್ಲರಿಗೂ ವಿಧ್ಯೆ ಬುದ್ದಿ ನೀಡಿದ ಈ ಶಾಲೆ ಹೆಸರುವಾಸಿ ಶಾಲೆ. ನನ್ನ ಜೀವನದಲ್ಲಿ ಶಿಸ್ತು, ನೀತಿ, ನಿಯಮ ಕಲಿತ್ತದದ್ದು ಇದೇ ಶಾಲೆ” ಎಂದು ಅವರು ತಮಗೆ ಶಿಕ್ಷಣ ನೀಡಿದ ಶಾಲೆಯ ಶಿಕ್ಷಕರನ್ನು ನೆನೆಸಿಕೊಳ್ಳುತ್ತಾ “ಕನ್ನಡ ಶಾಲೆಯೆಂದು ಕೀಳಾಗಿ ಕಾಣುವ ಅಗತ್ಯವಿಲ್ಲಾ, ಕನ್ನಡ ಮಾದ್ಯಮದಲ್ಲಿ ಕಲಿತವರಿಗೆ ಇಂಜಿನಿಯರಿಂಗ್, ವೈದ್ಯ ಪದವಿಯ ಸೆರ್ಪಡೆಗೆ ಹೆಚ್ಚಿನ ಅನುಕೂಲವಿದೆಯೆಂದು ಅವರು ತಿಳಿಸಿದರು.
ಇನ್ನೊರ್ವ ಅತಿಥಿ ಶಾಲಾ ಹಳೆವಿದ್ಯಾರ್ಥಿನಿ, ಎಚ್.ಎಂ.ಎಂ. ಮತ್ತು ವಿ.ಕೆ.ಆರ್. ಅಂಗ್ಲಾ ಮಾದ್ಯವi ಶಾಲೆಯ ಪ್ರಾಂಶುಪಾಲರಾದ ಡಾ|ಚಿಂತನಾ ರಾಜೇಶ್ “ಎಲ್ಲರ ಜೀವನದಲ್ಲಿ ನಾವು ಕಲಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಿನಗಳು ಅತ್ಯಂತ ಪ್ರಮುಖವಾಗಿರುತ್ತದೆ. ನನಗೆ ಬದ್ದತೆ, ನೀತಿ ಕಲಿಸಿಕೊಟ್ಟ ಶಾಲೆಯಿದು, ಸುಮರು 40-45 ವರ್ಷಗಳಿಂದ ಈ ಶಾಲೆಗಳು ನಿರಂತರ ತಮ್ಮ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಲು ಸಂತೋಷವಾಗುತ್ತದೆ. ಶಿಕ್ಷಕರು ಹೇಳಿಕೊಡುವ ನೀತಿ, ಬುದ್ದಿ ಮಾತು ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಒಳ್ಳೆಯವರಾಗಲು ತಾಯಂದಿರು ಕಾರಣವಾಗಬೇಕು, ಆದರಿಂದ ನಾವು ಉತ್ತಮ ತಾಯಂದಿರಾಗಬೇಕು” ಎಂದು ಅವರು ತಿಳಿಸಿದರು. ಮತ್ತೊರ್ವ ಅತಿಥಿ ಶಾಲಾ ಹಳೆ ವಿದ್ಯಾರ್ಥಿನಿ ಹಿಮಾಲಯನ್ ಬೈಕ್ ರೈಡರ್ ಸಾಧಕಿ, ಕಾಪೆರ್Çರೇಟರ್ ಟೈನರ್, ರಾಜ್ಯ ಮಟ್ಟದ ವಾಲಿಬಾಲ್ ಪಟು, ಸಾಹಸಿ ವಿಲ್ಮಾ ಕ್ರಾಸ್ಟೊ ಮಾತನಾಡಿ “ನಾನು ಈ ಶಾಲೆಯ ಹಳೆ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆಯನ್ನಿಸುತ್ತದೆ, ನಾನು ಶಾಲಾ ಜೀವನದಲ್ಲಿ ಎಂದು ವೇದಿಕೆ ಹತ್ತಲಿಲ್ಲಾ, , ಅಂದರೆ ನಾವು ಇಂದು ಏನು ಮಾಡಲೂ ಸಾಧ್ಯವಾಗದಿದ್ದರೂ, ಮುಂದಿನ ದಿನಗಳಲ್ಲಿ ಸಾಧಕಾರಾಗಬಹುದು, ಇದಕ್ಕೆ ನಮಗೆ ಸಣ್ಣವರಿರುವಾಗ ಶಾಲೆಯಲ್ಲಿ ಕಲಿಸಿದ ಶಿಕ್ಷಣ, ರೀತಿ ನೀತಿ ಶಿಕ್ಷಕರ ಉತ್ತೇಜನ ಕಾರಣವಾಗುತ್ತೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ, ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಹಾಗೂ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಕನ್ನಡ ಮಾದ್ಯಮ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತೀದೆ, ಇಂದಿನ ದಿವಸಗಳಲ್ಲಿ ಕನ್ನಡ ಅನುದಾನಿತ ಶಾಲೆಗಳಿಗೆ ಕಶ್ಟದ ಸಮಯ, ನಮಗೆ ನಮ್ಮ ಶಾಲೆಯ ಮುದ್ದು ಮಕ್ಕಳೇ ಆಸ್ತಿ, ಶಾಲೆಯ ಹಳೆ ವಿದ್ಯಾರ್ಥಿಗಳೆ ಸಂಪತ್ತು, ನಮ್ಮ ಶಾಲೆ ಗುಣ ಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ನಡತೆ, ಒಳ್ಳೆಯ ಸಂಸ್ಕಾರ, ಕಲಿಸಿಕೊಡುತ್ತೇವೆ, ಇಲ್ಲಿ ಕಲಿತರೆ ಮಕ್ಕಳು ಭಾರತದ ಮುಂದಿನ ಉತ್ತಮ ಪ್ರಜೆಳಾಗುವ ಭರವಶೆ ನಮ್ಮದಾಗಿದೆಯೆಂದು” ಸಂದೇಶ ನೀಡಿದರು.
ವಿಲ್ಮಾ ಕ್ರಾಸ್ಟೊ ಮತ್ತು ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟ ಪಾಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮ ಶಿಕ್ಷಕಿ ಜ್ಯೋತಿ ಡಿಸಿಲ್ವಾ ಮತ್ತು ಸುಶೀಲಾ ಖಾರ್ವಿ ನಡೆಸಿಕೊಟ್ಟರು. ತರಗತಿ ಒಂದರಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳು ನ್ರತ್ಯ, ಕುಣಿತ, ನಾಟಕ ಹೀಗೆ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಫಾ|ಸ್ಟ್ಯಾನಿ ತಾವ್ರೊ, ಪುರಸಭಾ ಸದಸ್ಯ ಪ್ರಭಾಕರ, ಅಶೋಕ್ ನಾೈಕ್ ಸಮನ್ವಯ ಅಧಿಕಾರಿ ಕುಂದಾಪುರ, ಸುನೀತಾ ಬಾಂಜ್, ಸಮೂಹ ಸಂಪನ್ಮೂಲ ವ್ಯಕ್ತಿ ವಡೇರಹೋಬಳಿ ಕ್ಲಸ್ಟರ್, ಹಳೆ ವಿದ್ಯಾರ್ಥಿ ಪ್ರವೀಣ್ ಕುಮಾರ್ ಟಿ. ಇವರು ಭಾಗವಹಿಸಿದ್ದರು. ಸಂಜೆಯ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಮುಖಂಡರಾದ ಮನ್ವಿತಾ ಬಿ. ಮತ್ತು ವೈಷ್ಣವಿ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು, ಸಂತ ಮೇರಿಸ್ ಹಿ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಮತ್ತು ಶಿಕ್ಷಕಿ ಸ್ಮಿತಾ ಡಿಸೋಜಾ ನಿರೂಪಿಸಿದರು.
ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಾರ್ಷಿಕ ಮಹೋತ್ಸವ ಅಂಗವಾಗಿ ಸಂಜಾ ಪ್ರಾರ್ಥನಾ ವಿಧಿ
ಉದ್ಯಾವರ: ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯ ಉದ್ಯಾವರ ಇಲ್ಲಿಯ ವಾರ್ಷಿಕ ಮಹೋತ್ಸವದ ಅಂಗವಾಗಿ ಸಂಜಾ ಪ್ರಾರ್ಥನಾ ವಿಧಿ ವಿಧಾನಗಳು ಭಕ್ತಿಯಿಂದ ನಡೆಯಿತು. ಇದಕ್ಕೂ ಮೊದಲು ಸಂತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆ ಮೇಲ್ಪೇಟೆಯಿಂದ ಸಂತ ಫ್ರಾನ್ಸಿಸ್ ಝೆವಿಯರ್ ರವರ ಪವಾಡ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಸಂಜಾ ಪ್ರಾರ್ಥನಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಉಡುಪಿ ಶೋಕ ಮಾತ ದೇವಾಲಯದ ಸಹಾಯಕ ಧರ್ಮ ಗುರುಗಳಾದ ವo. ಫಾ. ರೋಯ್ ಲೋಬೊ, ‘ದೇವರ ವಾಕ್ಯದ ಪ್ರೇರಣೆಯಿಂದ ವಿಶ್ವಾಸದ ಹಣತೆಯನ್ನು ಪ್ರಜ್ವಲಿಸಿ ಕಷ್ಟಕಾರ್ಪಣ್ಯಗಳ ಕತ್ತಲೆಯನ್ನು ಓಡಿಸೋಣ’ ಎಂಬ ಸಂದೇಶವನ್ನು ನೀಡಿದರು.
ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಅ. ವo. ಫಾ. ರೋಷನ್ ಡಿಸೋಜಾ, ಉಡುಪಿ ವಲಯದ ಪ್ರಧಾನ ಧರ್ಮ ಗುರುಗಳಾದ ಅ. ವo. ಫಾ. ಚಾರ್ಲ್ಸ್ ಮಿನೇಜಸ್, ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೋ, ಸಹಾಯಕ ಧರ್ಮ ಗುರುಗಳಾದ ವo. ಫಾ. ಲಿಯೋ ಪ್ರವೀಣ್ ಸಹಿತ 25ಕ್ಕೂ ಅಧಿಕ ಧರ್ಮ ಗುರುಗಳು ಸಂಜಾ ಪ್ರಾರ್ಥನಾ ವಿಧಿ ವಿಧಿಯಲ್ಲಿ ಭಾಗವಹಿಸಿದ್ದರು.