ಶ್ರೀನಿವಾಸಪುರ 2 : ತಹಶೀಲ್ದಾರ್ ಕಛೇರಿ ಆವರಣದಲ್ಲಿ ಹೆಚ್ಚಿನ ಸಾರ್ವಜನಿಕರು ಓಡಾಡುತ್ತಿದ್ದನ್ನು ಗಮನಿಸಿ, ಕಛೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ಇನ್ನು ಎರಡು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲು ತಹಶೀಲ್ದಾರ್ ರವರಿಗೆ ಸೂಚಿಸಿ, ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ಅವರ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಆಕ್ರಂಪಾಷ ತಿಳಿಸಿದರು.
ಪಟ್ಟಣದ ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿಗೆ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಶುಕ್ರವಾರ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಇದೇ ಸಮಯದಲ್ಲಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಶಿಸ್ತಿನಲ್ಲಿ ನಿಲ್ಲಿಸದೆ ಅಡ್ಡದಡ್ಡಿಯಾಗಿ ನಿಲ್ಲಿಸಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಸಾಮಾನ್ಯವಾಗಿ ನಾನು ಯಾವತ್ತು ಕಛೇರಿಗೆ ಬಂದ ವೇಳೆ ನನ್ನ ಕಾರನ್ನು ತಿರಿಗಿಸಿಕೊಳ್ಳಲು ಹಾಗು ತಹಶೀಲ್ದಾರ್ ರವರ ಕಾರನ್ನ ತಿರಿಗಿಸಿಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ ಎನ್ನುತ್ತಾ,
ದ್ವಿಚಕ್ರವಾಹನಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸುಲು , ಅಧಿಕಾರಿಗಳ ಕಾರುಗಳನ್ನು ಹೊರತು ಪಡಿಸಿ ಬೇರೆ ಕಾರುಗಳನ್ನು ಇಲ್ಲಿ ನಿಲ್ಲಿಸದಂತೆ ಹೋಮ್ಗಾರ್ಡ್ನ್ನು ನೇಮಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದರು.
ಇದೇ ಸಮಯದಲ್ಲಿ ಪಶು ಪಾಲನ ಇಲಾಖೆ ಕಛೇರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಪಶುಪಾಲನ ಅಧಿಕಾರಿ ಕಛೇರಿಗೆ ಹೋಗಿ ಬರಲು ದಾರಿಯಲ್ಲದ ಕಾರಣ , ಸಾರ್ವಜನಿಕ ಶೌಚಾಲಯವು ಅಡ್ಡವಿರುವುದರಿಂದ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ ಪಶುಪಾಲನ ಅಧಿಕಾರಿ . ಪಶುಪಾಲಾನ ಇಲಾಖೆಗೆ ಹೋಗಿಬರಲು ಅನುಕೂಲವಾಗುವಂತೆ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲು , ಶೌಚಾಲಯವು ಶಿಥಿಲಾವಸ್ಥೆಯಲ್ಲಿ ಇದ್ದು, ಬೇರೆಡೆಗೆ ಸ್ಥಳಾಂತರಿಸಲು ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.
ಹಾಗೂ ಪೊಲೀಸ್ ಠಾಣೆಗೆ ಬೇಟಿ ನೀಡಿ ವಿವಿಧ ಮಾಹಿತಿ ಪಡೆದರು. ಅಲ್ಲದೆ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ಅಪಘಾತಕ್ಕೆ ಒಳಗಾದ ಹಾಗು ಇತರೆ ಪ್ರಕರಣಗಳಿಗೆ ಸಂಬಂದಿಸಿದ ವಾಹನಗಳನ್ನು ತೆರವುಗೊಳಿಸಿ, ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು. ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪಾರ್ಕ್ನಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ವೃತ್ತ ನಿರೀಕ್ಷಕ ಎಂ.ಬಿ.ಮೆಹಬೂಬ್ ಗೊರವನಕೊಳ್ಳ, ಪಶುಪಾಲನ ಸಹಾಯಕ ನಿರ್ದೇಶಕ ಮಂಜುನಾಥರಡ್ಡಿ , ಡಾ|| ವಿಶ್ವನಾಥ್ ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಶಿರಸ್ತೇದಾರ್ ಬಲರಾಮಚಂದ್ರೆಗೌಡ, ಆರ್ಐ ಮುನಿರೆಡ್ಡಿ, ಪುರಸಭೆ ಇಂಜನೀಯರ್ ಶ್ರೀನಿವಾಸ್ ಇದ್ದರು.
1, ಎಸ್ವಿಪುರ್ 2 : ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿಗೆ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿದರು.
Day: December 2, 2023
ಕನ್ನಡ ನೆಲ, ಜಲ, ಬಾಷೆ ಉಳಿಯ ಬೇಕಾದರೆ ಎಲ್ಲರೂ ಕೈಜೋಡಿಸಿ ಸೈನಿಕರಂತೆ ಶ್ರಮಿಸಬೇಕು: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ 1 : ನೆಲ, ಜಲ, ಬಾಷೆ ಉಳಿಯ ಬೇಕಾದರೆ ಎಲ್ಲರೂ ಕೈಜೋಡಿಸಬೇಕು ಹಾಗು ಕನ್ನಡ ಭಾಷೆಯನ್ನು ಉಳಿಸಲು ಸೈನಿಕರಂತೆ ಶ್ರಮಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗುರುವಾರ ಚೈತನ್ಯ ಜನ ಜಾಗೃತಿ ವೇದಿಕೆವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾತ್ರಿ ರಸಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ .ಈ ಒಂದು ದೃಷ್ಟಿಯಲ್ಲಿ ಪಟ್ಟಣದ ಅಭಿವೃದ್ಧಿಗೆ 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಗುವುದು. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳಿಗೆ ಬೇಕಾದ ವ್ಯವಸ್ಥೆಗಳನ್ನು ಗ್ರಾಮಪಂಚಾಯಿತಿ ವತಿಯಿಂದ ಮಾಡಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ ಎಂದರು.
40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ-ಕೋಲಾರ ರಸ್ತೆ ಅಗಲೀಕರಣದ ಮೂಲಕ ರಸ್ತೆ ಅಭಿವೃದ್ಧಿಪಡಿಸಲಾಗುವುದು. 4 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಿ , ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಾಗುದು ಎಂದು ಭರವಸೆ ನೀಡಿದರು. ಶ್ರೀನಿವಾಸಪುರದಲ್ಲಿ ಕೈಗಾರಿಕಾ ಪ್ರಾಂಗಣವನ್ನು ಸ್ಥಾಪಿಸಲು ಕೋಲಾರದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ ಅನುಮೋದನೆಯನ್ನ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟಿನಲ್ಲಿ ಕ್ಷೇತ್ರವನ್ನ ಎಲ್ಲಾ ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಆರ್ಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೆಂಕಟಸ್ವಾಮಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ರಾಜ್ಯದಲ್ಲಿ ಕನ್ನಡರಾಜ್ಯೋತ್ಸವ ಆಚರಣೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದರವರಲ್ಲಿ ಪ್ರಮುಖರು. ಪಾಪನಪಲ್ಲಿ ಗ್ರಾಮಕ್ಕೆ ಶ್ರೀನಿವಾಸಪುರ ಹೆಸರನ್ನು ನಾಮಕರಣ ಮಾಡಿ, ಕನ್ನಡಭಾಷಾಭಿಮಾನವನ್ನು ಮೆರೆದರು.
ಈ ಕಾರ್ಯಕ್ರಮ ಕನ್ನಡ ಭಾಷೆ ಉಳಿಯಲು ಸಾಕ್ಷಿಯಾಗಿದೆ ಎಂದರು. ಅಲ್ಲದೆ ಈ ಭಾಗದಲ್ಲಿ ಐಎಎಸ್ ಹಾಗು ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸರಿಗಮಪ ಕಲಾವಿದರಾದ ಮೆಹಬೂಬು ಸಾಬ್, ಜ್ಞಾನ ಗುರುರಾಜ್, ಖುಷಿಕ್ ರವರು ಹಾಡುಗಳನ್ನು ಹಾಡುವುದರ ಮೂಲಕ ಜನರನ್ನು ರಂಜಿಸಿದರು. ಸಾಯಿ ಮೆಲೊಡೀಸ್ ಮತ್ತು ಸಾಯಿ ಈವೆಂಟ್ ರವರು ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕರಾದ ಜಯಾನಂದ್, ಮೆಹಬೂಬ್ ಗೊರವನಕೊಳ್ಳ, ತಾ.ಪಂ. ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್, ಚಲ್ದಿಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಜೆ.ತಿಮ್ಮಸಂದ್ರ ಗ್ರಾ.ಪಂ. ಉಪಾಧ್ಯಕ್ಷ ಶಂಕರರಡ್ಡಿ, ಮುಖಂಡರಾದ ಪೂಲ್ಶಿವಾರೆಡ್ಡಿ, ಮಧುಸೂದನ್ರಡ್ಡಿ, ಕಾರ್ಬಾಬು, ಸಿ.ಮುನಿಯಪ್ಪ, ಸಿ.ರವಿ , ಮನಿಗಾನಹಳ್ಳಿ ವೆಂಕಟೇಗೌಡ ಇದ್ದರು.
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬಕ್ಕೆ ಪ್ರೀತಿ ಪೂರ್ವಕ ಆಮಂತ್ರಣ-ಪ್ರಕೃತಿ ಮತ್ತು ಅಲ್ಟನ್
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವನ್ನು ಶ್ರೀಮತಿ ಪ್ರಕೃತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಅವರ ಕುಟುಂಬದವರ ಪೋಷಕತ್ವದಲ್ಲಿ ನಡೆಯಲಿದ್ದು, ಇವರುಗಳು ಪ್ರೀತಿಯಿಂದ ಎಲ್ಲರನ್ನು ಆಮಂತ್ರಿಸಿದ್ದಾರೆ.
ನೀವೆಲ್ಲರೂ ದಿನಾಂಕ 03.12.2023 ರಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿರುವ ಭ್ರಾತೃತ್ವದ ಭಾನುವಾರ ದಿವ್ಯ ಬಲಿಪೂಜೆಗೆ, ದಿನಾಂಕ 05.12.2023 ರಂದು ಸಂಜೆ ಗಂಟೆ 6.30 ನದೆಯಲಿರುವ ಸಂಧ್ಯಾವಂದನಾ (ದೇವರ ವಾಕ್ಯದ ಪ್ರಾರ್ಥನಾ ಸಭೆಗೆ, ಹಾಗೇ ದಿನಾಂಕ 6.12.2023 ರಂದು ನಡೆಯಲಿರುವ ಬೆಳಿಗ್ಗೆ ಗಂಟೆ 10.00 ವಾರ್ಷಿಕ ಹಬ್ಬದ ಸಂಭ್ರಮದ ದಿವ್ಯಬಲಿ ಪೂಜೆಗೆ ಭಾಗಿಯಾಗಬೇಕೆಂದು ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ. – ಶ್ರೀಮತಿ ಪ್ರಕ್ರತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಕುಟುಂಬ