‘Rohan City’ BejaiUnveiling of ‘7.50% Assured Return on Investment’ Scheme / ರೋಹನ್ ಸಿಟಿ ಬಿಜೈ ‘ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ’ ಸ್ಕೀಮಿನ ಅನಾವರಣ

Rohan City’ Bejai Unveiling of ‘7.50% Assured Return on Investment’ Scheme

The construction of the grand “Rohan City” in Bejai is progressing at a rapid pace. This progress is visible to anyone passing by or can also be observed on Google Maps.

Rohan City is proud to introduce a double benefit scheme for our esteemed customers, allowing them to own a property that appreciates in value while enjoying an assured return of 7.5%. This exclusive offer is available during the festive months of November and December, coinciding with the joyous occasions of Diwali and Christmas.

As part of this scheme, customers have the opportunity to book any of the 284 shop units at a special price until the end of December and, in return, be assured of a fixed 7.5% return on their investment. This offer stands out in comparison to traditional bank fixed deposits or financial institution schemes where the rate of interest can be highly volatile. Moreover, the additional attraction lies in the potential appreciation of the property over the coming years, making it an even more enticing investment opportunity.

‘Rohan City’, rising on an area of about 3.5 acres on Bejai Main Road, is the largest and most privileged project of Rohan Corporation so far. There is a 2 lakh square feet commercial outlet comprising 284 individual units. It is a vibrant development featuring a 6 lakh square feet residential area, consists of 546 apartments. The residential options cater to different needs with Duplex, 4 BHK, 6 BHK, 1405 to 1900 square feet 3 BHK, 1075 to 1135 square feet 2 BHK, and 700 to 815 square feet 1 BHK of living space. To ensure convenient parking, the development features a mechanized parking system that accommodates both two-wheelers and four-wheelers, providing efficient and secure parking facilities. With its well-designed residential and commercial spaces, coupled with a modern parking system, ‘Rohan City’ offers a seamless and convenient living environment for residents and a thriving business hub for commercial ventures.

Features of ‘Rohan City’ :•35000 sqft Hyper Market in 2 levels•2 escalator for commercial space•Residential, commercial, hotels, club, swimming pool,  and ample parking, all under one roof• Luxury facilities in the heart of Mangalore at affordable prices• Project approved by major national banks•Quick loan facility from leading banks• 100% power backup with Diesel Generators• Automatic power change over system•Advanced security system•Electric car charging points• Designed Landscape Spaces•Solid waste management System•Solar PV Panels•Lighting Automation feature (First time in Mangaluru)

Features of World Class Club:

•Fully air conditioned reception & spacious lounges •Family restaurant • Coffee shop • Indoor games•Basketball court•Badminton court•Video games zone •Fully equipped gym• Spa, unisex saloon •Ayurvedic wellness centre •3D theatre •Multi-purpose hall•Swimming pool•Jogging track • Senior citizen park•Kids play area •Library •Students activity room& many more.

RohanMonteirostepped into the real estate industry at a young age and today has grown to become the Managing Director of ‘Rohan Corporation’. His dedication and hard work in the profession has enabled him to build a vast real estate Company. RohanMonteiro as a producer has earned the admiration of consumers for his meticulousness, neatness and thoroughness in all his work. RohanMonteiro led his construction company at a high level, building renowned mega residential and commercial complexes in Mangalore city, staying in the limelight and having satisfied clients. Presently Rohan Estate in Pakshikere and kulashekar, Rohan Enclave and RohanAvenue in Surathkalhave been completed and Rohan Square in Capitanio near Pumpwell is in final stages of construction.

‘Rohan City’ has emerged as a highly favourable investment destination, boosting numerous advantages for investors. With its abundant commercial units, the city provides an exceptional platform for entrepreneurs, startups, and established businesses alike. The availability of diverse commercial spaces allow entrepreneurs to find the perfect setting to launch their ventures, while also catering to the expansion needs of existing businesses. Moreover, investors can seize the opportunity to acquire commercial properties and capitalize on the city’s thriving business environment. By investing in ‘Rohan City’, individuals can secure commercial properties and benefit from a stable rental market, ensuring a steady stream of income. Additionally, the city’s positive economic trajectory and growth prospects further enhance its appeal for long-term investors. With a robust market, ample opportunities, and a conducive business ecosystem, ‘Rohan City’ stands as an attractive choice for those looking to make sound investments and reap the rewards of a vibrant and prosperous urban center.

For more details, contact Rohan City, Bejai Main Road Office, or call 9845490100 / 9845607725 / 9845607724 / 9036392627. For more information, please visit the website at www.rohancity.in.

ರೋಹನ್ ಸಿಟಿ ಬಿಜೈ ‘ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ’ ಸ್ಕೀಮಿನ ಅನಾವರಣ

ರೋಹನ್‍ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್‍ಕಟ್ಟಡದ ನಿರ್ಮಾಣಕಾರ್ಯವು ಭರದಿಂದ ಸಾಗುತ್ತಿದೆ.
ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಬರುವ ದೀಪಾವಳಿ ಮತ್ತುಕ್ರಿಸ್ಮಸ್ ಹಬ್ಬದ ಪ್ರಯುಕ್ತಬಿಜೈಮುಖ್ಯರಸ್ತೆಯಲ್ಲಿನ ‘ರೋಹನ್ ಸಿಟಿ’ ವಾಣಿಜ್ಯ ಮಳಿಗೆಗಳ ಹೂಡಿಕೆದಾರರಿಗೆಖಚಿತ 7.50% ಪ್ರತಿಫಲ ನೀಡುವ ಸ್ಕೀಮನ್ನು ಎರಡು ತಿಂಗಳ ಅವಧಿಗೆ ಹಮ್ಮಿಕೊಳ್ಳಲಾಗಿದೆ.ಈ ಎರಡು ತಿಂಗಳುಗಳಲ್ಲಿ ವಿಶೇಷ ದರಕಡಿತದೊಂದಿಗೆ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಲಾಗುವುದು.ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ.ಮಾತ್ರವಲ್ಲದೆ, ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾಸಾಗುತ್ತಿವೆ.
‘ರೋಹನ್ ಸಿಟಿ’ ರೋಹನ್‍ ಕಾರ್ಪೋರೇಶನ್ ಇದರ ಇದುವರೆಗಿನ ಅತಿ ದೊಡ್ಡ ಮತ್ತು ಅತ್ಯಂತ ವಿಶೇಷಯೋಜನೆಯಾಗಿದೆ.284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಈ ಯೋಜನೆಯು 6 ಲಕ್ಷಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‍ಮೆಂಟ್‍ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್‍ಕೆ, 4 ಬಿಎಚ್‍ಕೆ, 1405 ರಿಂದ 1900 ಚದರ ಅಡಿ 3 ಬಿಎಚ್‍ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‍ಕೆ ಮತ್ತು 700 ರಿಂದ 815 ಚದರ ಅಡಿ 1 ಬಿಎಚ್‍ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ಯಾಂತ್ರೀಕೃತ ಪಾಕಿರ್ಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತುಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾಕಿರ್ಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕøಷ್ಟಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರಕೇಂದ್ರವಾಗಿದೆ.

ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು

•2 ಹಂತಗಳಲ್ಲಿ 35000 ಚದರ ಅಡಿ ಹೈಪರ್‍ಮಾರುಕಟ್ಟೆ•ವಾಣಿಜ್ಯಮಳಿಗೆಗಳಿಗೆ 2 ಎಸ್ಕಲೇಟರ್‍ವ್ಯವಸ್ಥೆ•ವಸತಿ, ವಾಣಿಜ್ಯ, ಸೂಪರ್‍ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್‍ ಹಾಗೂ ಇನ್ನಿತರಸೌಲಭ್ಯಗಳು ಒಂದೇಸೂರಿನಡಿ•ಮಂಗಳೂರಿನಹೃದಯಭಾಗದಲ್ಲಿಅತೀಸಮಂಜಸಬೆಲೆಗಳಲ್ಲಿಲಕ್ಸುರಿಸೌಲಭ್ಯಗಳು •ಪ್ರಮುಖನ್ಯಾಶನಲ್‍ಬ್ಯಾಂಕ್‍ಗಳಿಂದಪ್ರಾಜೆಕ್ಟ್‍ಅಂಗೀಕೃತ•ತ್ವರಿತಸಾಲಸೌಲಭ್ಯಸೇವೆ •ಡೀಸೆಲ್ ಜನರೇಟರ್‍ಗಳೊಂದಿಗೆ 100% ಪವರ್‍ಬ್ಯಾಕಪ್•ಸ್ವಯಂಚಾಲಿತಪವರ್‍ಚೇಂಜ್‍ಓವರ್‍ವ್ಯವಸ್ಥೆ•ಅತ್ಯಾಧುನಿಕಭದ್ರತಾವ್ಯವಸ್ಥೆ•ಎಲೆಕ್ಟ್ರಿಕ್‍ಕಾರ್‍ಚಾರ್ಜಿಂಗ್‍ವ್ಯವಸ್ಥೆ•ಹಸಿರುವನ, ಉದ್ಯಾನವನ•ಘನತ್ಯಾಜ್ಯಸಂಸ್ಕರಣಾಘಟಕ•ಸೌರಶಕ್ತಿಸಂಗ್ರಹಘಟಕ•ಲೈಟಿಂಗ್‍ಆಟೊಮೇಷನ್ (ಮಂಗಳೂರಿನಲ್ಲಿಮೊದಲಬಾರಿಗೆ)
ಅಂತರಾಷ್ಟ್ರೀಯದರ್ಜೆಯ ಸಿಟಿ ಕ್ಲಬ್‍ನ ವಿಶೇಷತೆಗಳು :• ಸಂಪೂರ್ಣಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ •ಫ್ಯಾಮಿಲಿರೆಸ್ಟೋರೆಂಟ್• ಕಾಫಿಶಾಪ್• ಒಳಾಂಗಣ ಕ್ರೀಡೆ• ಬಾಸ್ಕೆಟ್‍ಬಾಲ್‍ಕೋರ್ಟ್• ಬಾಡ್ಮಿಂಟನ್‍ಕೋರ್ಟ್• ವಿಡಿಯೋಗೇಮ್ಸ್‍ವಲಯ• ಸುಸಜ್ಜಿತಜಿಮ್• ಸ್ಪಾ, ಯುನಿಸೆಕ್ಸ್‍ಸಲೂನ್• ಆರ್ಯುವೇದಿಕ್‍ವೆಲ್‍ನೆಸ್‍ಸೆಂಟರ್• 3ಡಿ ಥಿಯೇಟರ್•ಮಲ್ಟಿ-ಪರ್ಪಸ್‍ಹಾಲ್• ಸ್ವಿಮ್ಮಿಂಗ್‍ಪೂಲ್• ಜಾಗಿಂಗ್‍ಟ್ರ್ಯಾಕ್• ಸೀನಿಯರ್‍ಸಿಟಿಜನ್‍ಪಾರ್ಕ್• ಚಿಣ್ಣರಆಟದವಲಯ• ಸುಸಜ್ಜಿತಗ್ರಂಥಾಲಯ• ವಿದ್ಯಾರ್ಥಿ ಕಲಿಕಾಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
ರೋಹನ್ ಮೊಂತೇರೊ – ಯಶಸ್ಸಿನ ರೂವಾರಿ : ರೋಹನ್ ಮೊಂತೇರೊಯುವ ಪ್ರಾಯದಲ್ಲೇರಿಯಲ್‍ಎಸ್ಟೇಟ್‍ಉದ್ಯಮಕ್ಕೆಹೆಜ್ಜೆಯನ್ನುಇಟ್ಟಿದ್ದು, ಇಂದು ‘ರೋಹನ್‍ ಕಾರ್ಪೋರೇಶನ್’ ಸಂಸ್ಥೆಯ ಮ್ಯಾನೇಜಿಂಗ್‍ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ವೃತ್ತಿಯಲ್ಲಿಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದ ರಿಯಲ್‍ ಎಸ್ಟೇಟ್‍ ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ.ರೋಹನ್ ಮೊಂತೇರೊ ನಿರ್ಮಾಪಕರಾಗಿ ಎಲ್ಲಾ ಕೆಲಸಗಳಲ್ಲೂ ಸೂಕ್ಷ್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರ ಅಭಿಮಾನವನ್ನು ಗಳಿಸಿದ್ದಾರೆ. ರೋಹನ್ ಮೊಂತೇರೊಇವರ ನಾಯಕತ್ವದಲ್ಲಿಅವರ ನಿರ್ಮಾಣ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿರೋಹನ್‍ಎಸ್ಟೇಟ್, ಸುರತ್ಕಲ್‍ನಲ್ಲಿ

ರೋಹನ್‍ ಎನ್‍ಕ್ಲೇವ್ ಮತ್ತು ರೋಹನ್‍ ಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‍ವೆಲ್ ಬಳಿಯ ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ನಿರ್ಮಾಣದಕೊನೆಯ ಹಂತದಲ್ಲಿದೆ.
‘ರೋಹನ್ ಸಿಟಿ’ ಹೆಚ್ಚು ಅನುಕೂಲಕರ ಹೂಡಿಕೆ ತಾಣವಾಗಿ, ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅದರ ಹೇರಳವಾದ ವಾಣಿಜ್ಯ ಘಟಕಗಳೊಂದಿಗೆ, ನಗರವು ವಾಣಿಜ್ಯೋದ್ಯಮಿಗಳು, ಸ್ಟಾರ್ಟ್‍ಅಪ್ಸ್‍ಗಳು ಮತ್ತು ಸ್ಥಾಪಿತ ವ್ಯವಹಾರಗಳಿಗೆ ಉತ್ತಮ ವೇದಿಕೆಯನ್ನುಒದಗಿಸುತ್ತದೆ.ವೈವಿಧ್ಯಮಯ ವಾಣಿಜ್ಯ ಸ್ಥಳಗಳ ಲಭ್ಯತೆಯು, ಉದ್ಯಮಿಗಳು ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ, ಹಾಗೆಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳ ವಿಸ್ತರಣೆಯ ಅಗತ್ಯಗಳನ್ನು ಪೂರೈಸುತ್ತದೆ.ಇದಲ್ಲದೆ, ಹೂಡಿಕೆದಾರರು ವಾಣಿಜ್ಯ ಆಸ್ತಿಗಳನ್ನು ಖರೀದಿಸುವ ಅವಕಾಶವನ್ನು ಬಳಸಿ, ನಗರದಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಪರಿಸರದ ಲಾಭವನ್ನು ಪಡೆಯಬಹುದು.‘ರೋಹನ್ ಸಿಟಿ’ಯ ವಾಣಿಜ್ಯ ಮಳಿಗೆಗಳಲ್ಲಿಹೂಡಿಕೆ ಮಾಡಿ, ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು, ಸ್ಥಿರವಾದ ಆದಾಯವನ್ನು ಖಾತ್ರಿ ಪಡಿಸಿಕೊಳ್ಳಬಹುದು. ಹೀಗಾಗಿ ದೃಢವಾದ ಮಾರುಕಟ್ಟೆ, ಸಾಕಷ್ಟು ಅವಕಾಶಗಳು ಮತ್ತುಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯೊಂದಿಗೆ, ‘ರೋಹನ್ ಸಿಟಿ’ ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮೃದ್ಧ ನಗರಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆಆಕರ್ಷಕಆಯ್ಕೆಯಾಗಿದೆ.
ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845490100 / 9845607725 / 9845607724 / 9036392627 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ website www.rohancity.in. ಅಂತರ್‍ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಕುಂದಾಪುರದಲ್ಲಿ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು


ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಲಿದಾನವನ್ನು ಅರ್ಪಿಸಿದರು. ಪ್ರಧಾನ ಧರ್ಮಗುರು ಅ| ವಂ|ಸ್ಟ್ಯಾನಿ ತಾವ್ರೊ ಮತ್ತು ಕುಂದಾಪುರದವರೇ ಆದ ವಂ|ಧರ್ಮಗುರು ವಂ|ವೆನಿಲ್ ಡಿಸೋಜಾ ಸಹಬಲಿದಾನವನ್ನು ಅರ್ಪಿಸಿದರು.

ಬಲಿದಾನದ ಬಳಿಕ ಸಮಾಧಿಗೆ ತೆರಳಿ, ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿ ಭೂಮಿಯಲ್ಲಿರುವ ಸಮಾಧಿಗಳನ್ನು ಆಶಿರ್ವದಿಸಲಾಯಿತು. ಕಥೊಲಿಕ್ ಪವಿತ್ರ ಸಭೆಯು, ಪಾಪ ವಿಮೋಚನೆಯಿಂದ ಬಿಡುಗಡೆಯಾಗದೆ ಇರುವ ಆತ್ಮಗಳಿಗೆ, ಬಿಡುಗಡೆಯಾಗಿ ಸ್ವರ್ಗ ಸೇರಲು ನಮ್ಮ ಪ್ರಾರ್ಥನೆಯ ಅಗತ್ಯ ಇದೆಯೆಂದು ತಿಳಿಸುತ್ತದೆ. ಅದಕ್ಕಾಗಿ ಪವಿತ್ರಸಭೆಯ ನಿರ್ಣಯದಂತೆ, ಈ ದಿನವನ್ನು ಪ್ರಪಂಚದ ಎಲ್ಲೆಡೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಗಲಿದ ತಮ್ಮವರ ಸಮಾಧಿಗಳ ಮೇಲೆ ಮೇಣದ ಬತ್ತಿಗಳನ್ನು ಉರಿಸಿ ಪುಷ್ಪಗಳಿಂದ ಶ್ರಂಗಾರ ಮಾಡಲಾಗಿತ್ತು.

ಭಂಡಾರ್ಕಾರ್ಸ್: ಗ್ರಂಥಾಲಯದಲ್ಲಿ ಸಾಹಿತ್ಯ ಪ್ರದರ್ಶನ

ಕುಂದಾಪುರ: ನವೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಗ್ರಂಥಾಲಯದಲ್ಲಿ ” ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಪುಸ್ತಕಗಳ ಪ್ರದರ್ಶನ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಅವರು ಮಾತನಾಡಿ ಕನ್ನಡ ನಮ್ಮ ಭಾಷೆ. ಎಲ್ಲಾ ತಾಯಂದಿರನ್ನು ಪ್ರೀತಿಸಿ ಆದರೆ ನಮ್ಮ ನಾಡು ನುಡಿಯನ್ನು ಹೆಚ್ಚು ಪ್ರೀತಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ಗ್ರಂಥಾಲಪಾಲಕರಾದ ಮನೋಹರ್ ಉಪಾಧ್ಯಾಯ ವಂದಿಸಿದರು.

ಭಂಡಾರ್ಕಾರ್ಸ್: 48ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ

ಕುಂದಾಪುರ: ನವೆಂಬರ್ 1ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 48ನೇ ರಾಜ್ಯೋತ್ಸವ ತಾಳಮದ್ದಳೆ ಹಾಗೂ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಡಾ.ಪ್ರದೀಪ.ವಿ.ಸಾಮಗ ಇವರಿಗೆ 2023-24ನೇ ಸಾಲಿನ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಪುರಸ್ಕಾರವನ್ನು ಸ್ವೀಕರಿಸಿದ ಡಾ. ಪ್ರದೀಪ. ವಿ.ಸಾಮಗ ಮಾತನಾಡಿ ಭಂಡಾರ್ಕಾರ್ಸ್ ಕಾಲೇಜು ನನಗೆ ಜೀವನವನ್ನು ಕಲಿಸಿದೆ. ಭಂಡಾರ್ಕಾರ್ಸ್ ಕಾಲೇಜು ನನ್ನನ್ನು ಯಕ್ಷಗಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು. ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ ಪಳ್ಳಿ ಅವರು ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್ , ರಾಜೇಂದ್ರ ತೋಳಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಕಾಲೇಜಿನ ಲಲಿತಾ ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ನಂತರ “ಕೃಷ್ಣಾರ್ಜುನ ಕಾಳಗ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆ ಯಲ್ಲಿ ರಾಘವೇಂದ್ರ ಹೆಗಡೆ, ಯಲ್ಲಾಪುರ, ಚೆಂಡೆ ಯಲ್ಲಿ ರಾಮಕೃಷ್ಣ ಮಂದಾರ್ತಿ, ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ಹೆಚ್. ಸುಧೀಂದ್ರ ಹಂದೆ, ಡಾ. ಪ್ರದೀಪ.ವಿ.ಸಾಮಗ, ಶಿವಕುಮಾರ್ ಅಳಗೋಡು, ಶಶಾಂಕ್ ಕೆಳಮನೆ ಸಹಕರಿಸಿದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ “ಪ್ರೇರಣಾ-23” ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ / Father Muller Homoeopathic Medical College “Prerana-23” Annual National Homoeopathic Conference

ದೇರಳಕಟ್ಟೆ: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನವಂಬರ್ 4 ಮತ್ತು 5ರಂದು “ಪ್ರೇರಣಾ-23”, ದಕ್ಷಿಣ ಭಾರತದ ಹೋಮಿಯೋಪಥಿ ಫೆಸ್ಟ್ ಮತ್ತು 26ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ಆಯೋಜಿಸಿದೆ. ಇದರ ಉದ್ಘಾಟನಾ ಸಮಾರಂಭವು ನವಂಬರ್ 4ರಂದು ಬೆಳಿಗ್ಗೆ 9.00 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನೆರವೇರಲಿರುವುದು.

ಪಶ್ಚಿಮ ಬಂಗಾಳದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಸದ್ದಮ್ ನವಾಸ್ IಂS ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಕಂಕನಾಡಿ, ಮಂಗಳೂರು ಇದರ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಯೊ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ನವಂಬರ್ 4 ರಂದು ನಡೆಯುವ “ಪ್ರೇರಣಾ 23”, ದಕ್ಷಿಣ ಭಾರತದ ಹೋಮಿಯೋಪಥಿ ಫೆಸ್ಟ್‍ನಲ್ಲಿ ಒಟ್ಟು 10 ಸ್ಪರ್ದೆಗಳು ನಡೆಯುತ್ತಿದ್ದು ದಕ್ಷಿಣ ಭಾರತದ 16 ಕಾಲೇಜುಗಳಿಂದ ಸುಮಾರು 525 ಹೋಮಿಯೋಪಥಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿರುವರು ಹಾಗೂ ವಿಜೇತರಿಗೆ ಸುಮಾರು ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಘೋಷಿಸಲಾಗಿದೆ. ‘ಪ್ರೇರಣಾ’ – ಹೋಮಿಯೋಫೆಸ್ಟ್ ವಿವಿಧ ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಪಠ್ಯ ಮತ್ತು ಪಠ್ಯೇತರ ಪ್ರತಿಭೆಗಳನ್ನು ಬಿಂಬಿಸಲು ಒಂದು ವೇದಿಕೆಯಾಗಿದ್ದು, ಹೋಮಿಯೋಪಥಿ ಭ್ರಾತತ್ವದ ಸಾಂಸ್ಕ್ರತಿಕ ಶಕ್ತಿಯನ್ನು ಪ್ರದರ್ಶಿಸುವ ದಿನವಾಗಿದೆ.

26ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವು ನವಂಬರ್ 5ರಂದು ನಡೆಯಲಿದ್ದು ದೇಶದ ವಿವಿಧ ಭಾಗಗಳಿಂದ ಸುಮಾರು 720 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ವೈಜ್ಞಾನಿಕ ಅವಧಿಯಲ್ಲಿ ಡಾ. ಮನು’ಸ್ ಹೋಮಿಯೋಪಥಿಯ ಸಂಸ್ಥಾಪಕರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಶ್ರೀಕರ್ ಮನು ರವರು ‘ಹೆರಿಂಗ್ಸ್ ಲಾ ಆಫ್ ಕ್ಯೂರ್’ ಅನ್ನು ಪ್ರಸ್ತುತಪಡಿ ಸಲಿರುವರು. ಕಲ್ಕತ್ತಾ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳಾದ ಡಾ. ರಜತ್ ಚಟ್ಟೋಪಾದ್ಯಾಯರು ಸಾಕ್ಷ್ಯ ಆಧಾರಿತ ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಲಿರುವರು. ಹೋಮಿಯೋಪಥಿ ಅಧ್ಯಾಪಕರು ಮತ್ತು ವೈದ್ಯರಿಗೆ ತಮ್ಮ ಸಂಶೋಧನಾ ಆಧಾರಿತ ವೈದ್ಯಕೀಯ ಚಿಕಿತ್ಸೆಯನ್ನು ಪ್ರಸ್ತುತ ಪಡಿಸಲು ಈ ಸಮ್ಮೇಳನದಲ್ಲಿ ಮುಕ್ತ ವೇದಿಕೆಯನ್ನು ಕಲ್ಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಜಿûನ್ ಬಿಡುಗಡೆ ಮಾಡಿ ಕವರ್ ಡಿಸೈನ್ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಗುವುದು ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಸ್ಯೂಟಿಕಲ್ ವಿಭಾಗದಲ್ಲಿ ತಯಾರಾದ ಹೊಸ ಹೋಮಿಯೋಪಥಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಪೆÇ್ರಫೆಸರ್ ಡಾ. ಶ್ರೀನಾಥ್ ರಾವ್ ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪ ಕಾರ್ಯಕ್ರಮವು ನವಂಬರ್ 5ರಂದು ಸಂಜೆ 4 ಗಂಟೆಗೆ ನಡೆಯಲಿದ್ದು ಶಾಸ್ತ್ರೀಯ ಕರ್ನಾಟಕ ಸಂಗೀತಗಾರ ಮತ್ತು ಹಿನ್ನೆಲೆ ಗಾಯಕರಾಗಿರುವ ಪ್ರತಿಷ್ಟಿತ ಹಳೆಯ ವಿದ್ಯಾರ್ಥಿ ಡಾ. ನಾರಾಯಣನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮ್ಮೇಳನದ ಸ್ಮರಣಿಕೆ ಬಿಡುಗಡೆ ಮಾಡಲಿರುವರು. ಇದೇ ಸಂದರ್ಭದಲ್ಲಿ ‘ಹೋಮಿಯೋ ಫೆಸ್ಟ್’ ಹಾಗೂ ಪೆÇೀಸ್ಟರ್ ಪ್ರೆಸೆಂಟೇಶನ್‍ನ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸದಸ್ಯರು :

ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ.
ವಂದನೀಯ ರೋಶನ್ ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
ವಂದನೀಯ ಅಶ್ವಿನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
ಡಾ. ಇ.ಎಸ್.ಜೆ. ಪ್ರಭು ಕಿರಣ್, ಪ್ರಾಂಶುಪಾಲರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ವಿಲ್ಮಾ ಮೀರಾ ಡಿ’ಸೋಜ, ಉಪಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ಗಿರೀಶ್ ನಾವಡ ಯು. ಕೆ., ವೈದ್ಯಕೀಯ ಅಧೀಕ್ಷಕರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ.
ಡಾ. ಅಮಿತಾ ಬಾಳಿಗ, ಸಂಘಟನಾ ಕಾರ್ಯದರ್ಶಿ, ಹೋಮಿಯೋಪಥಿ ಸಮ್ಮೇಳನ – 2023
ಡಾ. ರಖಾಲ್ ಪಿ. ಸಂಯೋಜಕರು, ‘ಪ್ರೇರಣಾ 2023’
ಡಾ. ಅನುಷ ಜಿ. ಎಸ್. ಸಂಯೋಜಕರು, ಮಾದ್ಯಮ ಸಮಿತಿ, ‘ಪ್ರೇರಣಾ’, ‘ಹೋಮಿಯೋಪಥಿ ಸಮ್ಮೇಳನ 2023’

Father Muller Homoeopathic Medical College to host Prerana-23 & 26th Annual National Homoeopathic Conference

Deralkatte: PRERANA-23, the South Indian Homoeo Fest & 26th Annual National Homoeopathic Conference will be held on the 04th and 5th of November 2023 at Father Muller Auditorium, Deralakatte. The inauguration will be held on 04.11.2023 at 9.00am.  Dr Saddam Navas, IAS, Additional District Magistrate, South 24 Parganas, West Bengal will be gracing the occasion as the Chief Guest, and the event will be presided over by Rev, Fr Richard Aloysius Coelho, Director of FMCI,

Prerana- 23, South Indian Homoeo Fest, will be held on 4th November 2023, comprising of total 10 on-stage and offstage events, with a total of 525 participants from over 16 Homoeopathic Medical Colleges from the Southern Part of India and the winners will be rewarded with a cash prizes worth ONE LAKH RUPEES. The Homoeo Fest will be a platform for portraying the curricular and extracurricular talents amongst the Undergraduates from various Homoeopathic Medical Colleges and will be a day to showcase the Cultural strengths of the Homoeopathic fraternity.

The 26th Annual National Homoeopathic Conference will be held on 5th November 2023, with an expected 720 delegates from different parts of the country.  Dr Sreekar Manu, Chairman, Managing Director & Founder of Dr Manu’s Homoeopathy will be presenting on the topic “Demonstrating Hering’s Law of Cure” and Dr Rajat Chattopadhyay, Principal & Administrator, The Calcutta Homoeopathic Medical College & Hospital on the topic “Evidence-based clinical cures”. The session will comprise Open Forum for faculty and Homoeopathic Practitioners.

On this occasion the Annual College Magazine ‘PIONEER 2023’ will be released and winners of the cover design competition will be felicitated. There will be a launch of New Homoeopathic products manufactured in the Father Muller Homoeopathic Pharmaceutical Division and Dr Srinath Rao, Professor will be felicitated for his 35 years of dedicated service for the institution. 

The Valedictory programme will be held on 05.11.2023 at 4.00pm. Distinguished Alumnus, Classical Carnatic Musician & Playback Singer Dr Narayanan will be the  Chief Guest. On this occasion, the prizes for the winners of South Indian Homoeo Fest and Poster presentation will be distributed along with the release of Souvenir 2023. 

Members present during the Press Meet:

  • Rev Fr Richard Aloysius Coelho, Director, FMCI
  • Rev Fr Roshan Crasta, Administrator, FMHMCH & HPD
  • Rev Fr Ashwin Crasta, Asst. Administrator, FMHMCH & HPD
  • Dr ESJ Prabhu Kiran, Principal, FMHMC
  • Dr Vilma Meera D’souza, Vice Principal, FMHMC
  • Dr Girish Navada U K, Medical Superintendent, FMHMCH
  • Dr Amitha P Baliga, Organizing Secretary, 26th Annual National Homoeopathic Conference
  • Dr Rakhal P, Coordinator, Prerana-23
  • Dr Anusha G , Media Committee incharge.

ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ ವಿಚಾರ ವಿರೋಧ ಪಕ್ಷಗಳ ಸೃಷ್ಟಿ:ಸಚಿವ ಡಾ. ಎಂ.ಸಿ.ಸುಧಾಕರ್

ಶ್ರೀನಿವಾಸಪುರ: ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ ವಿಚಾರ ವಿರೋಧ ಪಕ್ಷಗಳ ಸೃಷ್ಟಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಕೊಲೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷಗಳ ಮುಖಂಡರು ಮುಖ್ಯ ಮಂತ್ರಿ ಬದಲಾವಣೆ ಕುರಿತು ಅನಗತ್ಯ ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಮಾರ್ಗದರ್ಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲಾಗುವುದು. ಈ ಕ್ಷೇತ್ರದಲ್ಲಿ ಸೋಲು ಗೆಲುವು ಸಾಮಾನ್ಯ. ರಮೇಶ್ ಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರೂ ಚುನಾವಣೆಯಲ್ಲಿ ಹಿನ್ನಡ ಉಂಟಾಯಿತು. ಆದರೂ ಪಕ್ಷ ಅವರ ಸೇವೆ ಬಳಸಿಕೊಳ್ಳಲಿದೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಒಳ್ಳೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಗೆಲುವು ಸಾಧಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಕೊಲೆ ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳಲಾಗದು. ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ. ಶ್ರೀನಿವಾಸನ್ ಕೊಲೆ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಶ್ರೀನಿವಾಸನ್ ಗೃಹ ಸಚಿವರಿಗೂ ಆಪ್ತರಾಗಿದ್ದರು. ಆರೋಪಿಗಳ ವಿರುದ್ಧ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಮುಖಂಡರಾದ ಸಂಜಯ್ ರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಪುರಸಭಾ ಸದಸ್ಯರಾದ ಭಾಸ್ಕರ್, ನಾಗರಾಜ್, ಹರೀಶ್ ಯಾದವ್ ಇದ್ದರು.

ಕನ್ನಡ ಭಾಷೆ ಹಾಗೂ ಕನ್ನಡಿಗರ ಬದುಕು ಭದ್ರವಾಗಲು ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಕನ್ನಡ ಭಾಷೆ ಹಾಗೂ ಕನ್ನಡಿಗರ ಬದುಕು ಭದ್ರವಾಗಲು ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿರುವ ಗಡಿ ಭಾಗದಲ್ಲಿನ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸಬೇಕು ಎಂದು ಹೇಳಿದರು.
ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಹಾಗೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಗಡಿ ಕನ್ನಡಿಗರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ನಾಡು ನುಡಿ ನಮ್ಮ ಹೆಮ್ಮೆ. ಕನ್ನಡ ರಾಜ್ಯೋತ್ಸವ ಕನ್ನಡ ಪ್ರೇಮದ ಸಂಭ್ರಮ ಸಂಕೇತ. ಮನೆ, ಮನಗಳಲ್ಲಿ ಕನ್ನಡ ನೆಲೆಗೊಳ್ಳಬೇಕು. ಏಕೀಕರಣದ ಉದ್ದೇಶ ಸಾಕಾರಗೊಳ್ಳಬೇಕು. ಗಡಿಯಾಚೆಗೂ ಕನ್ನಡ ಪಸರಿಸಬೇಕು. ಗಡಿ ಭಾಗದ ಜನರು ಕನ್ನಡ ಮಾತನಾಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಶಿಕ್ಷಕ ರಾಮಾಂಜನಪ್ಪ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಐದು ಕನ್ನಡ ಗೀತೆಗಳನ್ನು ಹಾಡಿದರು.
ಉಪ ತಹಶೀಲ್ದಾರ್ ಕೆ.ಸಿ.ಜಯರಾಂ, ಶಿರಸ್ತೆದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಿಇಒ ಭಾಗ್ಯಲಕ್ಷ್ಮಿ, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರೆಡ್ಡಿ, ಡಾ. ಮಂಜುನಾಥರೆಡ್ಡಿ, ಆರ್.ರವಿಕುಮಾರ್, ಜಯರಾಜ್, ಕೆ.ವಿ.ನಾಗರಾಜ್, ಡಾ. ವಿಶ್ವನಾಥ್, ವೆಂಕಟಸ್ವಾಮಿ, ಸುಬ್ರಮಣಿ, ಶ್ರೀಧರ್, ನರಸಿಂಹಮೂರ್ತಿ, ಶ್ರೀನಿವಾಸ್ ಇದ್ದರು.
ವಿವಿಧೆಡೆ ರಾಜ್ಯೋತ್ಸವ: ಪಟ್ಟಣದ ಭುವನೇಶ್ವರಿ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಕನ್ನಡಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದ ವಿದ್ಯಾರ್ಥಿಗಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಲಾಯಿತು.

ಕುಂದಾಪುರ : ಶ್ರೀ.ಡಿ.ದೇವರಾಜ ಅರಸು ಮೆಟ್ರಿಕ್‌ ಸ೦ತರದ ಬಾಲಕಿಯರ ನಿಲಯದಲ್ಲಿ ರಾಜ್ಯೋತ್ಸವ

ಕುಂದಾಪುರ : ನ.೩; ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯಲ್ಲಿರುವ ಶ್ರೀ.ಡಿ. ದೇವರಾಜ ಅರಸು ಮೆಟ್ರಿಕ್‌ ಸ೦ತರದ ಬಾಲಕಿಯರ ನಿಲಯದಲ್ಲಿ ರಾಜ್ಯೋತ್ಸವ ೬೮ ನೇ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿಆಚರಿಸಲಾಯಿತು.

    ‘ಕಾರ್ಯಕ್ತಮವನ್ನು ಕುಂದಾಮರ ಪುರಸಭೆಯ ಈಸ್ಟ್ ಬ್ಲಾಕ್‌ ವಾರ್ಡನ. ಸದಸ್ಯೆಯಾದ ಶ್ರೀಮತಿ ಪ್ರಭಾವತಿ ಶೆಟ್ಟಿ ಇವರು ದೀಪ ಬೆಳಗಿಸುವ ಮೂಲಕ ಉದ್ಭಾಟಿಸಿ ಕನ್ನಡಾಂಬೆಗ ಪುಷ್ಪ ನಮನ ಸಲ್ಲಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ಹೆಸರಾಯಿತು ಕರ್ನಾಟಕ, ಉಸಿರಾಗಲಿ  ಕನ್ನಡ” ಎಂಬ ಫೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳ ಕನ್ನಡ ನಾಡು ನುಡಿ ಸಾರುವ ಗೀತೆಗಳನ್ನು ಹಾಡಲಾಯಿತು..ಈ ಸಂದರ್ಭದಲ್ಲಿ ವಿದ್ಭಾರ್ಥಿ ನಿಲಯ ಮೇಲ್ವಿಚಾರಕರಾದ ಶ್ರೀಮತಿ ಆಶಾಲತಾ. ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.