ಕುಂದಾಪುರ : ಹಿಂದೂಗಳ ನವರಾತ್ರಿ ಮೆರವಣಿಗೆ ಮುಸ್ಲ್ಮಿಮರ ದರ್ಗಾದ ಉರೂಸ್ ಕಾರ್ಯಕ್ರಮದಲ್ಲಿ ಭಾವೈಕ್ಯತೆ, ಸೌಹಾರ್ಧತೆಯ ಸಂಗಮವಾಯ್ತು

ಕುಂದಾಪುರ: ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ನಡೆದ ಮೂರು ಕಡೆಯ ನವರಾತ್ರಿ ಶಾರದೆ ವಿಸರ್ಜನಾ ಮೆರವಣಿಗೆ ಹಾಗೂ ದರ್ಗಾದ ಉರೂಸ್ ಕಾರ್ಯಕ್ರಮದ ವೇಳೆ ಹಿಂದೂ ಮುಸ್ಲೀಂ ಭಾವೈಕ್ಯತೆ, ಸೌಹಾರ್ಧತೆ, ಪರಸ್ಪರ ಸಹಕಾರ ಕಂಡುಬಂತು.

ಕುಂದಾಪುರದ ಶ್ರೀರಾಮ‌ಮಂದಿರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ರಕ್ತೇಶ್ವರಿ ದೇವಸ್ಥಾನದ ನವರಾತ್ರಿಯ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ಮತ್ತು ಕುಂದಾಪುರದ ಜೆ.ಎಮ್ ರಸ್ತೆಯ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಕುಂದಾಪುರ ಉರೂಸ್ ಮುಬಾರಕ್ ಕಾರ್ಯಕ್ರಮ ಸೋಮವಾರ ಸಂಜೆ ಏಕಕಾಲದಲ್ಲಿ ಜರುಗಬೇಕಿತ್ತು. ಪೊಲೀಸರು ಮೊದಲೇ ಎರಡು ಧರ್ಮದ ಮುಖಂಡರ ಬಳಿ ಸಮನ್ವಯತೆ ಸಾಧಿಸಿ ಮೂರು ಮೆರವಣಿಗೆ ಹಾಗೂ ಉರೂಸ್ ಕಾರ್ಯಕ್ರಮ ಸಂಭ್ರಮದಿಂದ ಜರುಗುವ ಸಲುವಾಗಿ ಸಮಯ ನಿಗದಿ ಮಾಡಿದ್ದರು. ಅದರಂತೆಯೇ ರಾಮ ಮಂದಿರ ಮತ್ತು ವೆಂಕಟರಮಣ ದೇವಸ್ಥಾನದ ಮೆರವಣಿಗೆ ಒಂದೂವರೆ ಗಂಟೆಗಳ ಅಂತರದಲ್ಲಿ ನಡೆದಿದ್ದು ಇದರ ನಡುವಿನ ಸಮಯದಲ್ಲಿ ಉರೂಸ್ ಮೆರವಣಿಗೆ ಸಾಗಿತು.

ಉರೂಸ್ ಹಿನ್ನೆಲೆ ದರ್ಗಾ ಸಮೀಪದಿಂದ ಫೆರ್ರಿ ರಸ್ತೆ ಪಾರ್ಕ್ ತನಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾಮಮಂದಿರ, ವೆಂಕಟರಮಣ ದೇವಸ್ಥಾನದಲ್ಲಿನ ಶಾರದಾ ಮೂರ್ತಿ ಮೆರವಣಿಗೆ ಸಾಗುವಾಗ ಎತ್ತರದ ವಿದ್ಯುತ್ ದೀಪಾಲಂಕಾರ ಹಾಗೂ ಆರಂಭದಲ್ಲಿ ಹಾಕಿದ ಸ್ವಾಗತ ಕಮಾನು ತಡೆಯಾಗುವ ಹಂತದಲ್ಲಿದ್ದು ಕಮಾನಿನ ಮೇಲ್ಭಾಗವನ್ನು ಮುಸ್ಲೀಂ ಬಾಂಧವರು ತೆರವು ಮಾಡಿದರು. ವಿದ್ಯುತ್ ದೀಪಾಲಂಕಾರಕ್ಕೆ ತಗುಲದಂತೆ ಅಗತ್ಯಕ್ರಮಗಳನ್ನು ಮಾಡಿಕೊಟ್ಟು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಮೆರವಣಿಗೆಯಲ್ಲೂ ಕೂಡ ಆ ಭಾಗದಲ್ಲಿ ತೆರಳುವಾಗ ಜಾಗಟೆ, ಚಂಡೆ ಬಾರಿಸುವುದನ್ನು ನಿಲ್ಲಿಸಿ ಮುಸ್ಲೀಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿದರು. ಮೆರವಣಿಗೆ ಸಾಗುವಾಗ ದರ್ಗಾ ಬಳಿ ಜಮಾಯಿಸಿದ್ದ ಮುಸ್ಲೀಂ ಬಾಂಧವರು ಪರಸ್ಪರ ಹಬ್ಬಕ್ಕೆ ಶುಭಕೋರಿದರು.

ಮುಸ್ಲೀಂ ಸಮುದಾಯದ ಮುಖಂಡರಾದ ಅಬು ಮೊಹಮ್ಮದ್ ಕುಂದಾಪುರ, ರಫೀಕ್ ಅಹಮದ್ ಗಂಗೊಳ್ಳಿ, ಶ್ರೀ ರಾಮಮಂದಿರ ದೇವಸ್ಥಾನದ ದೇವಕಿ ಸಣ್ಣಯ್ಯ, ವೆಂಕಟರಮಣ ದೇವಸ್ಥಾನದ ತ್ರಿವಿಕ್ರಮ ಪೈ, ಕೇಶವ ಭಟ್, ರಕ್ತೇಶ್ವರಿ ದೇವಸ್ಥಾನದ ವಿಶ್ವನಾಥ ಶೆಟ್ಟಿ, ಶ್ರೀಧರ್ ಪೂಜಾರಿ ಮೊದಲಾದವರು ಇದ್ದರು.

ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕುಂದಾಪುರ ಪೊಲೀಸ್ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆ ಉಪನಿರೀಕ್ಷಕರು, ಸಿಬ್ಬಂದಿಗಳು ಬಂದೋಬಸ್ತ್ ನೆರವೇರಿಸಿದರು. ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಮಂಗಳೂರಿನ ಬಿಷಪ್ ದಸರಾ ಆಚರಣೆಯ ಸಂದರ್ಭದಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ / Bishop of Mangalore visits Kudroli temple during Dussehra Celebrations.

ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ 23-10-2023 ಸೋಮವಾರದಂದು ದಸರಾ ಹಬ್ಬದ ನಿಮಿತ್ತ ಮಂಗಳೂರಿನ ಬಿಷಪ್ ಮೋಸ್ಟ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸೌಹಾರ್ದ ಭೇಟಿ ನೀಡಿದರು.

ಕುದ್ರೋಳಿಗೋಕರ್ಣಂತೇಶ್ವರಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರ ಆಹ್ವಾನದ ಮೇರೆಗೆ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಷಪ್ ತಮ್ಮ ಸಂದೇಶದಲ್ಲಿ ಸಮಾಜದಲ್ಲಿ ಸಾಮರಸ್ಯದ ಅಗತ್ಯವನ್ನು ಎತ್ತಿ ತೋರಿಸಿದರು ಮತ್ತು ಕುದ್ರೋಳಿ ದೇವಸ್ಥಾನದ ಸಂಸ್ಥಾಪಕರಾದ ಶ್ರೀ ನಾರಾಯಣ ಗುರುಗಳ ಉಪದೇಶಗಳನ್ನು ಶ್ಲಾಘಿಸಿದರು.

ಮಂಗಳೂರು ದಸರಾ ಎಂದೂ ಕರೆಯಲ್ಪಡುವ ಕುದ್ರೋಳಿ ಹಬ್ಬವು ಈಗ ವಿಶ್ವಪ್ರಸಿದ್ಧವಾಗಿದೆ ಮತ್ತು ಹೆಸರಾಂತ ಮೈಸೂರು ದಸರಾ ನಂತರ ಎರಡನೆಯನಾಗಿದೆ.

ಮಂಗಳೂರು ದಸರಾ ಈಗ ಎಲ್ಲಾ ಧರ್ಮ ಮತ್ತು ಧರ್ಮದ ಜನರ ಹಬ್ಬವಾಗಿದೆ ಎಂದು ಬಿಷಪ್ ಒಪ್ಪಿಕೊಂಡರು. ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎಂದು ನಂಬಿದ ಮಹಾನ್ ಋಷಿಗಳ ಬೋಧನೆಗಳ ಪ್ರಕಾರ, ದೇವಾಲಯವು ಈಗ ಏಕತೆ ಮತ್ತು ಕೋಮು ಸೌಹಾರ್ದತೆಯ ತಾಣವಾಗಿದೆ.
ಬಿಷಪ್ ರವರೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ತಲಿನೋ ವಂ|ಧರ್ಮಗುರು ರೂಪೇಶ್ ಮಾಡ್ತಾ, ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜ, ಮಿಥುನ್ ಸಿಕ್ವೇರಾ, ಸುನೀಲ್ ಕುಮಾರ್ ಬಜಾಲ್, ಸ್ಟಾನ್ಲಿ ಡಿ’ಕುನ್ಹಾ ಬಂಟ್ವಾಳ್ ಮೊದಲಾದವರು ಉಪಸ್ಥಿತರಿದ್ದರು.

ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಮತ್ತು ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಅವರನ್ನು ದೇವಳದ ಅಧ್ಯಕ್ಷರಾದ ಶ್ರೀ ಸಾಯಿರಾಮ್ ಅವರು ಸ್ವಾಗತಿಸಿ ವಂದಿಸಿದರು. ಶ್ರೀಮಾಧವಸುವರ್ಣ, ಕಾರ್ಯದರ್ಶಿ; ಶ್ರೀಹರಿ ಕೃಷ್ಣ, ಬಂಟ್ವಾಳ; ಶ್ರೀಸೂರ್ಯಕಾಂತ್ ಜಯ ಸುವರ್ಣ ಮತ್ತು ಶ್ರೀಸಂತೋಷಪೂಜಾರಿ, ಟ್ರಸ್ಟಿಗಳು ಗೋಕರಣಂತೇಶ್ವರ ಕ್ಷೇತ್ರ ಉಪಸ್ಥಿತರಿದ್ದರು.

Bishop of Mangalore visits Kudroli temple during Dussehra Celebrations.

The Bishop of Mangalore Most Rev Dr Peter Paul Saldanha, made a cordial visit toKudroli temple, Mangalore, on the occasion of Dasara festival on Monday, 23-10-2023.

The visit was organised as a mark of gesture of religious harmony on a invite by PadmarajR , Treasurer, Kudroli Gokarnantheshwara kshetra.

In his message the Bishop highlighted the need of harmony in the society and appreciated the preachings of Shri Narayana Guru, the founder of Kudroli temple.

The Kudroli festival also known as the Mangaluru Dusshera is now world famous and is second only to the renowned Mysore Dusshera.

Bishop also acknowledged that Mangaluru Dusshera is now a festival of people of all faiths and religions True to the teachings of the great sage who believed in one caste one religion one God, the temple has now become a place of unity and communal harmony.
The Bishop was accompanied by Rev Fr. Rupesh Madtha, Roy Castelino PRO, Diocese of Mangalore, Alwyn Dsouza the President of Catholic Sabha, Mithun Sequeira, Sunil Kumar Bajal, Stanley D’Cunha Bantwal and others.

Bishop Peter Paul Saldanha, Shri U T Khader, Speaker, karnataka Legislative Assembly were welcomed and greeted by Shri Sairam, President; Shri Madhava Suvarna, Secretary; Shri Hari Krishna, Bantwal; Shri Suryakant Jaya Suvarna and Shri Santosh Poojary, Trustees Gokaranantheswara Kshetra, were present.

ಬಂಗಾಳ ಕೊಲ್ಲಿಯಲ್ಲಿ ಹಮೂನ್‌ ಚಂಡಮಾರುತ : ತೀವ್ರ ಸ್ವರೂಪ ತಾಳಿದೆ:ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ

ಕೋಲ್ಕತ್ತ: ದೇಶದ ಪೂರ್ವ ಸಾಗರ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್‌ ಚಂಡಮಾರುತ ತೀವ್ರ ಸ್ವರೂಪ ತಾಳಿದ್ದು, ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಭಾರತೀಯ ಕರಾವಳಿ ಪ್ರದೇಶದಲ್ಲಿ ಪರಿಣಾಮ ಬೀರುವ ಸಾಧ್ಯತೆ ವಿರಳವಾಗಿದ್ದು, ಗಂಟೆಗೆ 21 ಕಿ.ಮೀ. ವೇಗ ಪಡೆದಿರುವ ಹಮೂನ್‌ ಚಂಡಮಾರುತ ಬಂಗಾಳಕೊಲ್ಲಿಯ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಈಶಾನ್ಯದತ್ತ ಚಲಿಸುವಾಗ ಕ್ರಮೇಣ ದುರ್ಬಗೊಳ್ಳಲಿದೆ. ಈ ವೇಳೆ ಗಂಟೆಗೆ 65ರಿಂದ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಐಎಂಡಿ ಹೇಳಿದೆ. ಚಂಡಮಾರುತವು ಅಕ್ಟೋಬರ್‌ 25ರ ಸಂಜೆಯ ವೇಳೆಗೆ ಬಾಂಗ್ಲಾದೇಶದ ಕರಾವಳಿ ಖೇಪುಷಾರಾ ಪತ್ತು ಚಿತ್ತಗಾಂಗ್‌ ಪ್ರದೇಶವ ಪಡೆಯಲಿದೆಯೆಂದು ತಿಳಿದು ಬಂದಿದೆ. ಈ ಚಂಡಮಾರುತದ ದೆಸೆಯಿಂದ ಇದು ಭಾರಿ ಮಳೆ, ಗಾಳಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ. ಇರಾನ್‌ ದೇಶವು ಈ ಚಂಡಮಾರುತಕ್ಕೆ ಹಮೂನ್‌ ಎಂದು ಹೆಸರಿಟ್ಟಿದ್ದು ಇರಾನ್‌ ದೇಶ.

ಕುಂದಾಪುರ : 22 ರ ಯುವಕ ಹೊಳೆಯಲ್ಲಿ ಮುಳುಗಿ ಮೃತ್ಯು

ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಸಂಜೆಯ ವೇಳೆ ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಪ್ರಶಾಂತ ಆಚಾರ್ಯ (22) ಮೃತಪಟ್ಟ ಯುವಕನಾಗಿದ್ದಾನೆ.

  ಸ್ಥಳೀಯನಾದ ಪ್ರಶಾಂತ ಆಚಾರ್ಯ ಸ್ನೇಹಿತರೊಂದಿಗೆ ತೋಟದ ಸಸಿ ಬುಡ ಹದ ಮಾಡುವ ಕೆಲಸಕ್ಕಾಗಿ ತೆರಳಿದ್ದು, ಕೆಲಸ ಮುಗಿಸಿ ಸಂಜೆ 5:45ರ ಸುಮಾರಿಗೆ ಕೈಕಾಲು ತೊಳೆಯಲು ಕೊಮೆ ಹೊಳೆ ಆರ್ ಬೆಟ್ಟು ಗುಂಡಿ ಎಂಬಲ್ಲಿ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ದಿನ ದಸರಾ ಮಹೋತ್ಸವಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮೈಸೂರು,ಅ.೨೪: ನಿನ್ನೆಯಿಂದ ಮೂರು ದಿನಗಳ ಕಾಲ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿಯಾಗಲು ಸಿಎಂ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ

ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಪ್ರಯಾಣ ಆರಂಭಿಸಿ ಮೈಸೂರಿಗೆ ತಲುಪಲಿದ್ದಾರೆ. ಮಹಾರಾಣಿ ವಿಜ್ಞಾನ ಕಾಲೇಜಿನ ಹಾಸ್ಟೆಲಿಗೆ ಭೇಟಿ ನೀಡಲಿದ್ದಾರೆ. ನಂತರ ಇಂದು ಸಂಜೆ 4 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲಿದ್ದಾರೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಸುತ್ತೂರು ಶಾಖಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿಬೆಟ್ಟಕ್ಕೆ ತೆರಳಲಿದ್ದಾರೆ. ಇಂದು ಅ.24 ಮಧ್ಯಾಹ್ನ 1.46ಕ್ಕೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಸಂಜೆ 4.40ಕ್ಕೆ ವಿಜಯದಶಮಿ ಮೆರವಣಿಗೆ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 7.30ಕ್ಕೆ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಅ.25ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅ.25ರಂದು ಸಂಜೆ ಮೈಸೂರಿನಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಅಕ್ಟೋಬರ್ 27ರಂದು ಕುಂದಾಪುರ ಭಂಡಾರ್ಕರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜಿನಲ್ಲಿ “ರೇಡಿಯೋ ಕುಂದಾಪುರ 89.6 ಎಫ್ ಎಂ” ಲೋಗೋ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ

ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ರೇಡಿಯೋ ಕುಂದಾಪುರ 89.6 ಎಫ್ ಎಂ ನ ಲಾಂಛನ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ ಅಕ್ಟೋಬರ್ 27ರಂದು   ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.ಪ್ರಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಬಸ್ರೂರು  ಲಾಂಛನ ಬಿಡುಗಡೆ ಮಾಡಲಿದ್ದಾರೆ. ಜಾದುಗಾರ & ಸಾಹಿತಿ ಓಂ ಗಣೇಶ ಇವರು ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ವಿಶ್ವಸ್ತ ಮಂಡಳಿಯ ಹಿರಿಯ ಸದಸ್ಯರು ಕೆ.ಶಾಂತರಾಮ್ ಪ್ರಭು ಅವರು ಮಾಡಲಿದ್ದಾರೆ.ಸಮಾರಂಭದ  ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿರುವ ಎ ಎಸ್ ಎನ್ ಹೆಬ್ಬಾರ್ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ  ಸಾರ್ವಜನಿಕರಿಗೆ ಮತ್ತು ಕಲಾಸಕ್ತರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು  ಆಮಂತ್ರಣವನ್ನು ನೀಡಿದ್ದಾರೆ.

ಭಂಡಾರ್ಕರ್ಸ್ ಕಾಲೇಜಿನ ಮಹತ್ವದ ಸಮುದಾಯ ಯೋಜನೆ “ರೇಡಿಯೋ ಕುಂದಾಪುರ 89.6 ಎಫ್ ಎಮ್ “ಸಿದ್ಧಗೊಳ್ಳುತ್ತಿದ್ದು ತಾಂತ್ರಿಕ ಕಾರ್ಯ ಪೂರ್ಣಗೊಳ್ಳುತ್ತಿದೆ.ಈ ಬಾನುಲಿ ಕೇಂದ್ರ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಬಹುದಾಗಿದ್ದು, ಧ್ವನಿ ಪರೀಕ್ಷೆ ಯಶಸ್ವಿಯಾಗಿದೆ.ಕುಂದಾಪುರ ತಾಲೂಕಿನ ಜನರು ದೇಶ ವಿದೇಶದಲ್ಲಿದ್ದರು ರೇಡಿಯೋ ಕುಂದಾಪುರ ಕೇಳುವಂತೆ ಮಾಡುವ ಆಪ್ ರೂಪಿಸಲಾಗುತ್ತಿದ್ದು ದೆಹಲಿಯ ತಂತ್ರಜ್ಞರು ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಉದ್ದೇಶ :


ಜನರ ನಾಡಿ ಮಿಡಿತದ ಮಾಧ್ಯಮವಾಗಿ ಎಲ್ಲಾ ಸಮುದಾಯದ ಆಚಾರ ವಿಚಾರಗಳ ಸಾಂಸ್ಥಿಕವಾಗಿ ವಿಚಾರ ವಿನಿಮಯ ಮಾಡುವುದು. ಎಲ್ಲಾ ಸಮುದಾಯದ ಸುಸ್ಥಿರ ಸಬಲೀಕರಣಕ್ಕೆ ಸೃಜನಶೀಲ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಶಿಕ್ಷಣ ಸಂಸ್ಕೃತಿ, ಪರಿಸರ ,ಕೃಷಿ,ಮೀನುಗಾರಿಕೆ,ಆರೋಗ್ಯ,ಪ್ರವಾಸೋದ್ಯಮ, ಸ್ವ ಉದ್ಯಮ ಮತ್ತು ಉದ್ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಸಮುದಾಯದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಲು ರೇಡಿಯೋ ಕುಂದಾಪುರ ಸಮುದಾಯ ರೇಡಿಯೋ ಕೇಂದ್ರ ಧ್ವನಿ ಯಾಗುವುದು. ಎಲ್ಲಾ ಸಮುದಾಯಗಳ ಸಾಂಸ್ಥಿಕ ಬದುಕಿನ ಪ್ರತಿಬಿಂಬವಾಗಿ ರೇಡಿಯೋ ಕುಂದಾಪುರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಸಮುದಾಯದ ಒಳಗೊಳ್ಳುವಿಕೆಯೊಂದಿಗೆ ನಿತ್ಯ ಜೀವನಕ್ಕೆ ಅಗತ್ಯವಾದ ಅರಿವು ತಿಳಿವಿನ ವಿಚಾರ ವಿನಿಮಯವನ್ನು ಬಾನುಲಿ ಮುಖಾಂತರ ಮಾಡುವುದು.

ಪಡುಕೋಣೆಯ ಶಿಕ್ಷಕಿ ಭಗಿನಿ ಶಾಂತಿ ಪ್ರಿಯಾ ಲೂಯಿಸ್ ಇವರಿಗೆ ಆಂದ್ರದ ನೆಲ್ಲೂರಿನಲ್ಲಿ ಅತ್ಯುತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿ / Sister Shanhti Priya Lewis, a teacher from Padukone, was awarded the Best Headmistress Award in Nellore, Andhra Pradesh.

ನೆಲ್ಲೂರು: ತಮ್ಮ ತವರೂರು ಕುಂದಾಪುರ ಪಡುಕೋಣೆಯಲ್ಲಿ ಕಲಿತು MA, Bed ಪದವಿ ಪಡೆದು, ದೈವಿಕ ಗುರುವಿನ ಧರ್ಮನಿಷ್ಠ ಶಿಷ್ಯರ ಸಭೆಯಿಂದ (Pious Disciples of the Divine Master) ಭಗಿನಿಯ ದೀಕ್ಷೆ ಪಡೆದು, ಆಂದ್ರದ ನೆಲ್ಲೂರಿನಲ್ಲಿ ಸೇಂಟ್ ಜಾನ್ಸ್ ಆಂಗ್ಲ (Play School to High school) ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತೀರುವ ಶಿಕ್ಷಕಿ ಭಗಿನಿ ಶಾಂತಿ ಪ್ರಿಯಾ ಲೂಯಿಸ್ ಇವರು ಅನುದಾನ ರಹಿತ ಶಾಲಾ ನಿರ್ವಹಣ ಸಂಘದಿಂದ (APPUSMA) (Andhra Pradesh Private Unaided School Management Association) ಅತ್ಯುತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

   ಭಗಿನಿ ಶಾಂತಿ ಪ್ರಿಯಾ ಲೂಯಿಸ್ ಇವರು ಮೂಲತಹ ಕುಂದಾಪುರ ಸಮೀಪದ ತ್ರಾಸಿಯ ದೇವಳ್ಳಿಯವರಾಗಿದ್ದು, ಇವರು ಪಡುಕೋಣೆ ಸಂತ ಅಂತೋನಿ ಚರ್ಚಿನವರಾಗಿದ್ದಾರೆ, ಇವರು ತಮ್ಮ ಶಿಕ್ಷಣವನ್ನು ಮೋವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಕುಂದಾಪುರ ಸಂತ  ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಕಲಿತು, ಮುಂದೆ, ಕುಂದಾಪುರ ಸರಕಾರಿ ಜೂನಿಯರ್ ಕಾಲೇಜು ಪಿಯುಸಿ ನ್ನು ಓದಿದರು. ನಂತರ ಮುಂಬಯಿಯ ಸೇಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ಪದವಿ ಪಡೆದು, ನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ಬಿ ಎಡ್ ತರಬೇತಿಯನ್ನು ಪಡೆದರು.

   ತಮ್ಮ ಶಿಕ್ಷಣ ಜೀವನ ಮತ್ತು ಧಾರ್ಮಿಕ ಜೀವನವನ್ನು ಆಂದ್ರದ ನೆಲ್ಲೂರಿನಲ್ಲಿ ಆರಂಭಿಸಿದರು. 20 ವರ್ಷದ ಶಿಕ್ಷಕ – ಭಗಿನಿಯ ಜೀವನ ಸಾರಿದ ಇವರು ನೆಲ್ಲೂರಿನ ಅನುದಾನ ರಹಿತ 170 ಶಾಲೆಗಳ ಮಧ್ಯೆ ಇವರಿಗೆ ನೆಲ್ಲೂರಿನ ಅನುದಾನ ರಹಿತ ಶಾಲಾ ನಿರ್ವಹಣ ಸಂಘದಿಂದ ಅತ್ಯುತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿಗೆ ಆಯ್ಕೆಯಾಗಿ ಸೆಪ್ಟೆಂಬರ್ 5, 2023 ರಂದು ನೆಲ್ಲೂರು ಶಾಸಕ ಡಾ.ಅನಿಲ್ ಕುಮಾರ್ ಯಾದವ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

   ಇವರನ್ನು ಇವರ ಸಭೆಯ (PDDM) ಪ್ರಾಂತೀಯ ಸುಪೀರಿಯರ್,  ಮದರ್ ಜನರಲ್, ಸಭೆಯ ಸಹೋದರಿಯರು, ಪೋಷಕರು ಅಭಿನಂದಿಸಿದ್ದಾರೆ. “ನನ್ನ ಸಾಧನೆಗೆ ಪ್ರಾಂತೀಯ ಸುಪೀರಿಯರ್,  ಮದರ್ ಜನರಲ್, ನನ್ನ ಸಭೆಯ ಸಹೋದರಿಯರು, ಪೋಷಕರ ಬೆಂಬಲಕ್ಕೆ, ಭಗಿನಿ ಶಾಂತಿ ಪ್ರಿಯಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Sister Shanhti Priya Lewis, a teacher from Padukone, was awarded the Best Headmistress Award in Nellore, Andhra Pradesh.


Nellore: Sister Shanti Priya Lewis, who studied in her hometown Kundapura Padukone and obtained her MA, Bed degree, received her ordination as a nun from the Pious Disciples of the Divine Master, and serves as the headmistress of St. John’s English Medium High School (Play School to High school) in Nellore, Andhra, is a teacher who runs a non-grant school. Awarded the Best Headmaster Award by APPUSMA (Andhra Pradesh Private Unaided School Management Association).
Sister Shanti Priya Louise, originally from Thrasi Devalli near Kundapur, belongs to Saint Anthony’s Church, Padukone, completed her education at Movadi Government Primary School, studied at Saint Joseph’s Girls’ High School, Kundapur and further, Kundapur Government Junior College, PUC. He then graduated from St. Andrew’s College, Mumbai and received his B.Ed training from Narayana Institute of Education.
He started his educational life and religious life in Nellore, Andhra Pradesh. A 20-year-old teacher – who has lived a life of a sister-in-law, was selected for the best headmaster award by the Nellore Non-Granted School Management Association among 170 non-grant schools in Nellore and received this award in the presence of Nellore MLA Dr. Anil Kumar Yadav on September 5, 2023.
She was felicitated by the Provincial Superior of her Congregation (PDDM), Mother General, Sisters of the Congregation, Parents. “The Provincial Superior, Mother General, Sisters of my Congregation, Parents for their support, Sister Shanti Priya thanked for my achievement.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇವರಿಂದ ಕ್ರೈಸ್ತ ಸಮುದಾಯದ ಪತ್ರಿಕೆ, ಟಿ.ವಿ. ಇತರ ಮಾದ್ಯಮ ಸಂಸ್ಥಾಪಕ, ಸಂಪಾದಕ ಮತ್ತು ವರದಿಗಾರರಿಗೆ ಸನ್ಮಾನ / Catholic Sabha Mangalore Pradesh(R) by Christian community magazine, T.V. Other media founders, editors and reporters are honored


ಮಂಗ್ಳೂರು: ಅ.23: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇವರು ಕಥೊಲಿಕ ಕೈಸ್ತ ಪತ್ರಕರ್ತರನ್ನು ಗುರುತಿಸುವ ಸಲುವಾಗಿ ಕಥೊಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯವನ್ನು ತಾರೀಖು 22-10-2023 ರಂದು ರವಿವಾರ ಸಾಯಂಕಾಲ ಮಂಗಳೂರಿನ ಜೆಪ್ಪು ಸಂತ ಅಂತೋಣಿಯವರ ಆಶ್ರಮದ ‘ಸಂಭ್ರಮ’ ಮಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾರವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ|ಜೆ.ಬಿ.ಸಲ್ಡಾನ್ಹಾ ಮತ್ತು ಜೆಪ್ಪು ಸಂತ ಆಂತೋಣಿಯವರ ಆಶ್ರಮದ ನಿರ್ದೇಶಕರಾದ ವಂದನೀಯ ಫಾ|ಜೆ.ಬಿ.ಕ್ರಾಸ್ತರವರು ವೇದಿಕೆಯಲ್ಲಿ ಭಾಗವಹಿಸಿದ್ದರು. ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ.ಲಿ.ಇದರ ಸಂಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ, ಕರ್ನಾಟಕ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಶ್ರೀ ರೋನ್ಸ್ ಬಂಟ್ವಾಳ್, ಕರಾವಳಿ ಸುದ್ದಿ ವಾರ್ತಾ ಪತ್ರ ಇದರ ಸಂಪಾದಕ ಮತ್ತು ಪ್ರಕಾಶಕರಾದ ಶ್ರೀ ರೋಷನ್ ಬೊನಿಫಾಸ್ ಮಾರ್ಟಿಸ್ , ಕಥೊಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪಾವ್ಲ್ ರೋಲ್ಫಿ ಡಿಕೋಸ್ತಾ ಇವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾರವರು “ಬರೆದದ್ದು ಶಾಸ್ವತ, ಕೇಳಿದ್ದು ಗಾಳಿಯಲ್ಲಿ ತೇಲಿ ಹೋಗುತ್ತೆ, ಸಮಾಜದಲ್ಲಿ ಮಾಧ್ಯಮದವರ ಸೇವೆ ಅಮೂಲ್ಯವಾಗಿದೆ. ನಮ್ಮ ಸಮುದಾಯದ ಮಾಧ್ಯಮ ಮಿತ್ರರಿಗೆ ನಾವು ಅವರ ಸಮಸ್ಯೆಗೆ ಸ್ಪಂದಿಸುತ್ತೇವೆ’ ಎಂದು ಸನ್ಮಾಕ್ಕೆ ಕಾರಣರಾದವರಿಗೆ ಮತ್ತು ಸನ್ಮಾನಿತರಾದವರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದವರಾಗಿ ಪತ್ರಿಕಾ, ಟಿ.ವಿ. ಇತರ ಮಾದ್ಯಮದ ಸಂಸ್ಥಾಪಕರಿಗೆ, ಸಂಪಾದಕರಿಗೆ ಮತ್ತು ವರದಿಗಾರರನ್ನು ಶಾಲು ಹೊದಿಸಿ, ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆ ಹಂಚಿಕೊಂಡ ಅತಿಥಿಗಳು ತಮ್ಮ ಸಂದೇಶವನ್ನು ನೀಡಿ ಮಾಧ್ಯಮ ಮಿತ್ರರನ್ನು ಹುರಿದುಂಬಿಸಿ “ಮಾಧ್ಯಮದವರು ಸಮಾಜದ ಬೆಳಕಾಗಿದ್ದಾರೆ” ಎಂಬ ಅರ್ಥದಲ್ಲಿ ಮಾಧ್ಯದವರಿಗೆ ಅವರ ಸೇವೆ ಕೈಗೊಳ್ಳಲು ಎಲ್ಲರ ಸಹಕಾರ ಅಗತ್ಯವಿದೆಯೆಂಬ, ನಿಲುವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂಚಾಲಕರಾದ. ರೋಲ್ಫಿ ಡಿಕೋಸ್ತಾರವರು ಪ್ರಸ್ತಾವಿಸಿ ಸ್ವಾಗತಗೈದು ಈ ಕಾರ್ಯಕ್ರಮ ಹಲವಾರು ವರ್ಷಗಳ ಕನಸು. ಮಾಧ್ಯಮದವರನ್ನು ಗೌರವಿಸಲು ಅತ್ಯಂತ ಸಂತೋಷವಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾರವರು “ಮಾಧ್ಯಮ ಮಿತ್ರರೊಂದಿಗೆ ತಾವು ಕಥೊಲಿಕ್ ಸಭಾ ಸದಾ ಇರಲು ಸಿದ್ಧರಿದ್ದೇವೆ, ಹಾಗೇ ಎಲ್ಲರೂ ಕೂಡ ಮಾಧ್ಯಮದವರ ಅಗತ್ಯೆಯನ್ನು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು. ಶ್ರೀ ನೋರ್ಬರ್ಟ್ ಮಿಸ್ಕಿತ್ ಮತ್ತು ಶ್ರೀಮತಿ ಲವೀನಾ ಗ್ರೆಟ್ಟಾ ಡಿಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಂತಿಮವಾಗಿ ಎಲ್ಲರೂ ಸೇರಿ ಸಹ ಭೊಜನವನ್ನು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಗಣ್ಯರಾದ ಕೆಪಿಎಸ್‍ಸಿ ಇದರ ಸಮಿತಿ ಸದಸ್ಯರಾದ ಫೆರ್ನಾಂಡಿಸ್, ಕಾರ್ಯದರ್ಶಿ ಶ್ರೀಮತಿ ವಿಲ್ಮಾ ಮೊಂತೇರೊ ವಂದಿಸಿದರು. ಶ್ರೀ ನೋರ್ಬರ್ಟ್ ಮಿಸ್ಕಿತ್ ಮತ್ತು ಶ್ರೀಮತಿ ಲವೀನಾ ಗ್ರೆಟ್ಟಾ ಡಿಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಂತಿಮವಾಗಿ ಎಲ್ಲರೂ ಸೇರಿ ಸಹ ಭೊಜನವನ್ನು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಗಣ್ಯರಾದ ಕೆ.ಪಿಎಸ್.ಸಿ. ಸಮಿತಿ ಸದಸ್ಯರಾದ ರೊನಾಲ್ಡ್ ಫೆನಾರ್ಂಡಿಸ್,ಮಂಗಳೂರು ಧರ್ಮಪ್ರಾಂತ್ಯದ ಪಾಲನ ಮಂಡಳಿ ಕಾರ್ಯದರ್ಶಿ ಶ್ರೀ ಜೋನ್ ಡಿಸಿಲ್ವಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ)ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಕರ್ನೆಲಿಯೊ, ಎಮ್.ಸಿ.ಸಿ ಬ್ಯಾಂಕಿನ ಅಧ್ಯಕ್ಷಾರಾದ ಶ್ರೀ ಅನಿಲ್ ಲೋಬೊ, ರಾಕ್ಣೊ ಕೊಂಕಣಿ ಪತ್ರಿಕೆಯ ಸಂಪಾದಕರಾದ ವಂದನೀಯ ಫಾ|ರೂಪೇಶ್ ಮಾಡ್ತಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Catholic Sabha Mangalore Pradesh(R) by Christian community magazine, T.V. Other media founders, editors and reporters are honored


Mangaluru: A. 23: Catholic Sabha Mangaluru Pradesh (RI) organized a meeting and honor function of Catholic Christian Journalists in order to recognize the journalists of Catholic Church on the date 22-10-2023 on Sunday evening at ‘Sambhrama’ Mangaluru Hall of Jeppu Sant Antoni’s Ashram, Mangaluru.


The program was inaugurated by Most Venerable Bishop of Manglore Dr Peter Paul Saldanha along with other dignitaries by lighting the lamp. Mr. Alvin D Souza, President of Catholic Sabha Mangalore Pradesh(ri) presided over the programme. Venerable Dr. J.B. Saldanha, Spiritual Director of Catholic Sabha Mangalore Pradesh(ri) and Venerable Fr.J.B. Crasta, Director of Jeppu Sant Antoni’s Ashram participated in the forum as chief guests. Daijiworld Media Pvt. Ltd. Founder Mr. Walter Nandalike, President of Karnataka Journalists Association, Maharashtra Mr. Rones Bantwal, Editor and Publisher of karavali suddi Mr. Roshan Boniface Martis, Central Secretary of Catholic Sabha Ms. Vilma Monteiro, Program Organizer Mr. Paul Rolfi DCosta He was the guest of honor for the program.


Rev. Bishop, Dr. Peter Paul Saldanha, the Dean of the diocese who inaugurated the program said, “What is written is eternal, What is heard floats in the air,, the service of the media is invaluable in the society. We will respond to the media friends of our community and congratulated those who were responsible for the award and those who received the award.


Press, TV as members of the Christian community in the program. Other media founders, editors and reporters were felicitated with shawls, flowers and souvenirs.
The guests who shared the stage gave their message and cheered up the media friends and expressed the stand that “media is the light of society” meaning that media needs everyone’s cooperation to do their service.


Organizers of the program, Proposed and welcomed by Rolfe DCosta, this program has been a dream of many years. He said that he is very happy to honor the media. Chairman of the program, Mr. Alvin D Souza, President of Catholic Sabha Mangalore Pradesh(R) said, “Catholic Sabha is always ready to be with media friends, and everyone should know the need of media”.

Mr. Norbert Miskith and Mrs. Lavina Gretta D’Souza graced the program.
Finally everyone joined together and received the meal. Honorable KPSC Committee Member Fernandes, Secretary Mrs. Vilma Montero thanked for this program. Mr. Norbert Miskith and Mrs. Lavina Gretta D’Souza graced the program.
Finally everyone joined together and received the meal. Eminent KPSC for this program. Committee members Ronald Fenarndis, Mangaluru Diocese Board of Trustees Secretary Mr. Jhon D’Silva, Catholic Sabha Udupi Pradesh (R) President Mr. Santhosh Cornelio, MCC Bank Chairman Mr. Anil Lobo, Raknno Konkani Magazine Editor Rev. Fr. Rupesh Madta and other dignitaries. were present.

ತಲ್ಲೂರು:ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಬಾಲಕ ಕುಸಿದು ಬಿದ್ದು ಮೃತ್ಯು- ಕಳೆದ ವರ್ಷ ಅಕ್ಕ ಕೂಡ ಕುಸಿದು ಬಿದ್ದು ಮೃತ ಪಟ್ಟಿದ್ದಳು

ಕುಂದಾಪುರ/ತಲ್ಲೂರು: ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ  7ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ಪಟ್ಟ ದಾರುಣ ಘಟನೆ ಕುಂದಾಪುರದ ತಲ್ಲೂರಿನಲ್ಲಿ ನಡೆದಿದೆ.  ದುರ್ದೈವಿ ಪೃಥ್ವಿರಾಜ್ ಶೆಟ್ಟಿಯ ಅಕ್ಕ ಕೂಡ ಕಳೆದ ವರ್ಷ ಪೃಥ್ವಿರಾಜ್​ ಅವರ ಅಕ್ಕ ಅನುಶ್ರೀ ಕೂಡ ಮನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಳು. ಅಕ್ಕನ ಸಾವಿನ ನೋವು ಮಾಸುವ ಮೊದಲೇ ಪೋಷಕರಿಗೆ ಮಗನ ಸಾವು ಮತ್ತಷ್ಟು ಆಘಾತ ಜೊತೆ ಬಹಳ ಸಂಗತಿಯಾಗಿದೆ.

ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ ಅರುಣ್​ಕುಮಾರ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢ ಶಾಲಾ ಶಿಕ್ಷಕಿ ಭಾರತಿ ದಂಪತಿ ಪುತ್ರ ಪೃಥ್ವಿರಾಜ್ ಶನಿವಾರ ಬೆಳಗ್ಗೆ ಮನೆಯ ಬಳಿ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಪೃಥ್ವಿರಾಜ್​ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸಲಿಲ್ಲ. ಪೃಥ್ವಿರಾಜ್ ಹಟ್ಟಿಯಂಗಡಿ ಸಿದ್ದಿವಿನಾಯಕ ವಸತಿ ಶಾಲೆಯ ೭ ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಚುರುಕಾಗಿದ್ದ.

ಮಾನವನ ಜೀವಿತದಲ್ಲಿ ಕೆಲವೊಂದು ಸಲ ಅಸಮಾನ್ಯ ಮಾನವನಿಗೆ ನುಲುಕದ ಘಟನೆಗಳು ಸಂಭವಿಸುತ್ತವೆ:ಕಳೆದ ವರ್ಷ ಮಗಳನ್ನು ಕಳೆದುಕೊಂಡ ದಂಪತಿ

ಅರುಣ್​ಕುಮಾರ ಶೆಟ್ಟಿ ಹಾಗೂ ಭಾರತಿ ಶೆಟ್ಟಿ ದಂಪತಿಗೆ ಓರ್ವ ಪುತ್ರಿ ಹಾಗೂ ಪುತ್ರ ಇದ್ದು ಮಗಳು ಕಳೆದ ವರ್ಷ,ಕುಸಿದು ಬಿದ್ದು ಮೃತ ಪಟ್ಟಾಗ ಎನೋ ತಿಂದಿದ್ದರಿಂದ ಎಂದು ಸುದ್ದಿ ಹಬ್ಬಿತ್ತು. ನಂತರ ಹ್ರದಯದ ತೊಂದರೆಯಿಂದ  ಹೃದಯಾಘಾತದಿಂದ ಮೃತಪಟ್ಟಿದ್ದು ಎಂದು ತಿಳಿದು ಬಂದಿತ್ತು. ಈಗ ಇವರ ಮನೆಯಲ್ಲಿ ಸಂಭವಿಸಿದ ಎರಡನೇ ದುರಂತ ಇದಾಗಿದೆ. ಪೃಥ್ವಿರಾಜ್ ನ ಸಾವು ಹೇಗಾಗಿದೆಯೆಂದು ಇನ್ನು ವೈಧ್ಯಕೀಯ ವರದಿಯಿಂದ ತಿಳಿಯಬೇಕಿದೆ.

ಅ.20 ಪೃಥ್ವಿರಾಜ್ ಶೆಟ್ಟಿ ತನ್ನ ಸಾವಿನ ಹಿಂದಿನ ದಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಳೆದ ವರ್ಷ ತಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಅಕ್ಕ ಅನುಶ್ರೀ ತಮ್ಮನ ಹುಟ್ಟುಹಬ್ಬದ ಸಂಭ್ರಮ ಮುಗಿದ ಒಂದು ವಾರದ ಒಳಗೆ ಇಹಲೋಕ ತ್ಯಜಿಸಿದ್ದರು. ಅಕ್ಕನ ನೆನಪಿನಲ್ಲೇ ದುಖಃದಿಂದ ಹುಟ್ಟುಹಬ್ಬ ಆಚರಿಸಿದ್ದ ಪ್ರಥ್ವಿರಾಜ್, ಮನುಷ್ಯನ ಉಹೆಗೂ ನಿಲುಕದಂತೆ ಸಾವಿಗೆ ಓ ಕೊಟ್ಟಿದ್ದು ವಿಸ್ಮಿತವೇ ಸರಿ. ಈಗ ಪ್ರಥ್ವಿರಾಜ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ತಂದೆ ತಾಯಿ ಸಂಬಂಧಿಕರಿಗೆ ತೀವ್ರವಾದ ಅಘಾತ ಮತ್ತು ದುಖವನ್ನುಂಟು ಮಾಡಿದೆ.