ಕುಂದಾಪುರಾಂತ್ ವಾರಾಡ್ಯಾ ಮಟ್ಟಾರ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್


ಕುಂದಾಪುರ್, ಅ.28: ಕುಂದಾಪುರ್ ರೊಜಾರ್ ಮಾಯೆಚಾ ಫಿರ್ಗಜೆಂತ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್ ಭಕ್ತಿನ್ ಆನಿ ಗದ್ದಾಳಾಯೆನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಘಟಕಾನ್ ಆಚರಣ್ ಕೆಲೆಂ. ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ ಭೋ|ಮಾ|ಮಾ|ಬಾಪ್ ಸ್ಟ್ಯಾನಿ ತಾವ್ರೊ ಹಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಮೇಳಾಚೊ ಅತ್ಮಿಕ್ ನಿರ್ದೆಶಕ್ ಮಾ|ಬಾ|ಜೊಕೀಮ್ ಡಿಸೋಜಾ ಹಾಣಿ ದೆವಾಚೆ ಉತರ್ ಮೊಡ್ನ್ “ಸಾಂತ್ ಫ್ರಾನ್ಸಿಸ್ ಅಸಿಸ್ಸಿ, ಝುಜಾರಿ ತಾಕಾ ದೆವಾನ್ ಆಪ್ಲ್ಯಾ ಮಿಸಾವಾಂಕ್ ಆಪಯ್ಲೊ. ತೊ ಸಂಗೀತ್‍ಗಾರ್ ಜಾವ್ನಾಸೊನ್, ಲೊಕಾಮೊಗಾಳ್ ಜಾವ್ನಾಸ್ಲೊ, ತೊ ವರ್ತೊ ಭಿರ್ಮೊತಿಚೊ ಮನಿಸ್, ಚೊರಾಂಕ್ ಲುಟ್ಕಾರಾಂಚೆರ್‍ಯಿ ಭಿರ್ಮೊತ್ ಪಾವ್ಲೊ ಮನಿಸ್, ಮನ್ಶ್ಯಾಂಕ್ ಮಾತ್ರ್ ನ್ಹಯ್ ಮನ್ಜಾತ್, ಸುಕ್ಣಿ ಸೌವ್ಜಾಂಚೆರ್‍ಯಿ ಭಿರ್ಮೊತ್ ಪಾಂವ್ಚೊ ಅಪ್ರೂಪ್ ಸಾಂತ್, ಶಾಂತಿಚ್ಯಾ ದೂತಾ ಬರಿ’ ಮ್ಹಣ್ತಾಂ. “ಸಾಂತ್ ಫ್ರಾನ್ಸಿಸ್ ಅಸಿಸ್ಸಿ ವಿಶ್ಯಾಂತ್ ವಿವರ್ ತಾಣಿ ದಿವ್ನ್ ಸಂದೇಶ್ ದಿಲೊ.ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿ ಆರಾನ್ನಾ ಹಾಣಿ ಸಹಬಲಿದಾನ್ ಭೆಟಯ್ಲೆ.
ಬಲಿದಾನ ವೇಳಾರ್ ನವ್ಯಾ ಸಾಂದ್ಯಾಕ್ ಮೆಳಾಂತ್ ಸಮರ್ಪಣ್ ಕರ್ನ್ ತಾಂಕಾ ಫಿಂತ್, ಪವಿತ್ರ್ ಪುಸ್ತಕ್ ಜಳ್ಚಿ ವಾತ್ ದಿಂವ್ನ್ ಸಂಸ್ಕಾರ್ಣಿ ಕೆಲಿ.
ಸಭಾ ಕಾರ್ಯಕ್ರಮಾಂತ್ ಬಂಧೆಂತ್ ಆಸ್ಲೊ ಪಾರ್ವೊ ಉಬಾವ್ನ್ ಸೈರ್ಯಾನಿ ಸಭಾ ಕಾರ್ಯಕ್ರಮ್ ಉದ್ಘಾಟನ್ ಕೆಲೆಂ. ಕುಂದಾಪುರ್ ಫಿರ್ಗಜ್ ಘಟಕಾಚಿ ಅಧ್ಯಕ್ಷಿಣ್ ಡಾ|ಸೋನಿ ಡಿಕೋಸ್ತಾನ್ ಸ್ವಾಗತ್ ಮಾಗ್ಲೊ. ವಾರಾಡ್ಯಾಚೊ ಅಧ್ಯಕ್ಷ್ ಬಾಸಿಲ್ ಡಿಸೋಜಾನ್ ಫುಲಾಂ ದೀಂವ್ ಸಾಂಗಾತ್ ದಿಲೊ. ಅತ್ಮಿಕ್ ನಿರ್ದೇಶಕ್ ಮಾ|ಬಾ|ಜೊಕೀಮ್ ಡಿಸೋಜಾ, ಕುಂದಾಪುರ್ ಕೊವೆಂತಾಚಿ ವ್ಹಡಿಲ್ನ್ ಭಯ್ಣ್ ಸುಪ್ರಿಯಾ, ಕುಂದಾಪುರ್ ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ ಹಾಣಿ ಸಂದೇಶ್ ದಿಲೊ. ಕುಂದಾಪುರ್ ವಾರಾಡ್ಯಾಚಾ 11 ಫಿರ್ಗಜ್ ಘಟಕಾನಿ ಹಾಂತುನ್ ವಾಂಟೊ ಘೆತ್ಲೊ.
ಕಾರ್ಯಕ್ರಮಾಚೊ ಅಧ್ಯಕ್ಷ್ ಕುಂದಾಪುರ್ ಫಿರ್ಗಜೆಚೊ ವಿಗಾರ್, ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ “ಮ್ಹಾಕಾ ಭೋವ್ ಚಡ್ ಮೊಗಾಚ್ಯಾ ಸಾಂತಾ ಮಧ್ಲೊ ಏಕ್ಲೊ ಸಾಂತ್ ಸಾಂ. ಫ್ರಾನ್ಸಿಸ್ ಅಸಿಸ್ಸಿ, ಮೊಜಿ ಆವಯ್ ಸಾಂ. ಫ್ರಾನ್ಸಿಸ್ ಅಸಿಸ್ಸಿಚ್ಯಾ ಮೆಳಾಂತ್ ಸೆವಾ ದಿತೆಲಿ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಪøಕ್ರತಿಚಾ ಮೊಗಾರ್ ಪಡ್ಲೊ ಸಾಂತ್, ಕುಂದಾಪುರ್ ಫಿರ್ಗಜೆಂ ಹೊ ಮೇಳ್ ಆರಂಭ್ ಜಾವ್ನ್ 95 ವರ್ಸಾಂ ಸಂಪ್ತಾತ್, ತುಮ್ಚೊ ಶತಮಾನೋತ್ಸವ್ ಬರ್ಯಾನ್ ಜಾಂವ್’ ಮ್ಹಣುನ್ ಉಲ್ಲಾಸ್ ಪಾಟಾಯೈಲೆ.
ಮನೋರಂಜನ್ ಜಾವ್ನ್ ಪ್ರಹಸನ್, ಗೀತ್ ಗಾಯಾನಾ ಫಿರ್ಗಜ್ವಾರ್ ಘಟಕಾನಿಂ ಪರ್ದರ್ಶನ್ ಕೆಲೆಂ. ಕುಂದಾಪುರ್ ಘಟಕಾಚಿ ಕಾರ್ಯದರ್ಶಿ ಮರಿಯಾ ಬಾರೆಟ್ಟೊನ್ ವರದಿ ವಾಚನ್ ಕೆಲಿ. ವಾರಾಡೊ ಕಾರ್ಯದರ್ಶಿ ಪ್ರಮೀಳಾ ಡೆಸಾನ್ ಧನ್ಯವಾದ್ ಪಾಟಯ್ಲೆ. ಡಯಾನಾ ಡಿಆಲ್ಮೇಡಾನ್ ಕಾರ್ಯೆ ಚಲವ್ನ್ ವೆಲೆಂ. ಜೆವ್ಣಾ ಸವೆಂ ಕಾರ್ಯೆ ಸಂಪ್ಲೆ.

ಶ್ರೀನಿವಾಸಪುರ-ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು : ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ:ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಸರಾಮಾಯಣ ಮಹಾಕಾವ್ಯ ರಚಿಸುವುದರ ಮೂಲಕ ಮಾನವ ಕುಲಕ್ಕೆ ಆದರ್ಶ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜತೆಗೆ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ತಾಲ್ಲೂಕಿನಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲಾತೀತವಾಗಿ ಸಮಾಜಕ್ಕೆ ದಾರಿದೀಪವಾಗಿದೆ. ಸಮಾಜ ಮಹಾಕಾವ್ಯದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು. ರಾಮಾಯಣ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಮಹರ್ಷಿ ವಾಲ್ಮೀಕಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾವ್ಯದೊಂದಿಗೆ, ರಚಿಸಿದ ಕವಿಯೂ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಶಿಕ್ಷಕ ಚನ್ನರಾಯಪ್ಪ ವಾಲ್ಮೀಕಿ ಜೀವನ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಇಒ ಭಾಗ್ಯಲಕ್ಷ್ಮಿ, ಎಸ್.ರಾಜೇಶ್, ಜಯಾನಂದ್, ಮುಖಂಡರಾದ ರಾಮ್‍ಮೋಹನ್, ಕೊರ್ನಹಳ್ಳಿ ಆಂಜನಪ್ಪ, ನರಸಿಂಹಮೂರ್ತಿ, ಡಾ.ರಮಾನಂದ್, ಆರ್.ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿಸ್ವಾಮಿ ನಾಯಕ್, ನಿತಿನ್ ಕುಮಾರ್, ಹರೀಶ್ ನಾಯಕ್, ರಾಮಚಂದ್ರ, ವೆಂಕಟರವಣಪ್ಪ, ರಾಮಸುಬ್ಬು, ಆಂಜಪ್ಪ, ಬಾಬು ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕುದುರೆ ಸಾರೋಟು ಗಮನ ಸೆಳೆಯಿತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಲ್ಮೀಕಿ ಭಾವ ಚಿತ್ರದೊಂದಿಗೆ ಬಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಭಂಡಾರ್ಕಾರ್ಸ್: ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ


ಕುಂದಾಪುರ: ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20ಶೇಕಡಾ ಮಾತ್ರ ನನಗಾಗಿ ಉಳಿದ 80ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ. ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಜಾದೂಗಾರ ಹಾಗೂ ಸಾಹಿತಿಗಳಾದ ಶ್ರೀ ಓಂ ಗಣೇಶ್ ಅವರು ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರ ಇದರಬಿಡುಗಡೆಗೊಳಿಸಿ ರೇಡಿಯೋ ಒಂದು ಪ್ರಗತಿ ದತ್ತವಾದ ವಿಶಿಷ್ಟವಾದ ವರ ರೇಡಿಯೋ ಹೊರೆತು ಪ್ರಪಂಚ ಇಷ್ಟು ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕ. ಸ. ಪ ಉಡುಪಿ ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ.ಎ.ಎಸ್.ಎನ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಂದಾಪುರ ಕನ್ನಡಕ್ಕೆ ಅದರದೇ ಅದ ವೈಶಿಷ್ಟ್ಯವಿದೆ ಎಂದು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ .ಶಾಂತರಾಮ್ ಪ್ರಭು ರೇಡಿಯೋ ಕುಂದಾಪುರದ ಉಪಯೋಗವನ್ನು ವಿದ್ಯಾರ್ಥಿಗಳು ಸಂಘ ಸಂಸ್ಥೆ ಸಾರ್ವಜನಿಕರೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕುಂದಾಪುರದ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವುದು ಹಾಗೂ ಕುಂದಾಪುರ ಕನ್ನಡ ಎಷ್ಟು ಪ್ರಸಿದ್ಧಿಯನ್ನು ಹೊಂದಿದೆ ಅಷ್ಟೇ ಪ್ರಸಿದ್ಧಿ ನಮ್ಮೂರಿನ ಜನತೆ ಹೊಂದಬೇಕು ಎಂದು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರೇಡಿಯೋ ಕುಂದಾಪುರ. 89.6 ಈಒ ಇದರ ರಾಗ ಸಂಯೋಜನೆ ಮಾಡಿದ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಲಾಂಛನ ವಿನ್ಯಾಸ ಸ್ಪರ್ಧೆಯ ವಿಜೇತರಾದ ಕೇಶವ ಸಸಿಹಿತ್ಲು ಮತ್ತು ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ ಪ್ರಜ್ಞೇಶ್ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ , ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರದ ಡಾ. ಜಿ.ಎಂ ಗೊಂಡ, ಗಣ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ ಗೊಂಡ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ನಾಯ್ಕ್ ಅತಿಥಿಗಳ ಪರಿಚಯಿದರು, ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.

ಪುಸ್ತಕದೊಳಗೆ ಮನೆಯೊಳಗೆ ನವಿಲು ಗರಿ ಇಡುವುದು ಕೂಡ ಶಿಕ್ಷಾರ್ಹಾ ಅಪರಾಧ

ಬೆಂಗಳೂರು; ಹುಲಿ ಉಗುರಿನ ಲಾಕೆಟ್‌ ಧರಿಸಿದ್ದು ಅಪರಾಧ ಎನ್ನುವ ಸುದ್ದಿಯ ಬೆನ್ನಲ್ಲೇ ಇದೀಗ ಹಲವರಿಗೆ ಕಂಟಕ ಶುರುವಾಗಿದೆ. ಪ್ರಕರಣದ ಬೆನ್ನಲ್ಲೇ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು ಕೂಡ ಜನರಿಗೆ ಅರಣ್ಯ ಕಾಯಿದೆ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು.
ಹೇಳಿದ್ದಾರೆ. ಈ ನಡುವೆ ಹುಲಿ ಉಗುರು ಅಲ್ಲದೆ ಮನೆಯಲ್ಲಿ ನವಿಲು ಗರಿ ಇಟ್ಟುಕೊಳ್ಳುವುದು ಕೂಡ ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.

ಹಾಗೆಯೇ ವನ್ಯಜೀವಿ ನವಿಲು ಸಾಕುವುದೂ ಅಪರಾಧ. ನವಿಲಿನ ಗರಿಯನ್ನೂ ಇಟ್ಟುಕೊಳ್ಳುವುದು ಕೂಡ ಅಪರಾಧ, ಅರಣ್ಯದಂಚಿನ ಗ್ರಾಮದಲ್ಲಿದ್ದು, ನವಿಲು ಜನರ ಮನೆಯ ಆವರಣಕ್ಕೆ ಸ್ವ ಇಚ್ಛೆಯಿಂದ ಬಂದರೆ ಅಡ್ಡಿಯಿಲ್ಲ. ಆದರೆ, ಅದನ್ನು ಜನ ಸಾಕುವಂತಿಲ್ಲ . 1972ರ ವನ್ಯಜೀವಿ ಕಾಯ್ದೆ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ಇದನ್ನು ನಿಷೇಧಿಸಿತು. ಬಳಿಕ, 2006, 2012 ಹಾಗೂ 2022ರ ವನ್ಯಜೀವಿ ಕಾಯ್ದೆ ಇನ್ನಷ್ಟು ಬಲಿಷ್ಠವಾಗಿವೆ.

ಇದೀಗ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣವಾಗಿ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ. ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಥ. ಹಾವಿನ ವಿಷವನ್ನೂ ಕೂಡ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ. ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ. ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ವಿದ್ಯಾರ್ಥಿನಿಯ ಮೇಲೆ ಆಸಿಡ್ ಎರಚಿದ ಆರೋಪವಿದ್ದ ಮುಖ್ಯ ಶಿಕ್ಷಕನ ಅಮಾನತು

ಚಿತ್ರದುರ್ಗ: ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದ ರಂಗಸ್ವಾಮಿ ವಿರುದ್ದ ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ಬಾಲಕಿ ಮೇಲೆ ಎರಚಿದ ಆರೋಪ ಕೇಳಿಬಂದಿತ್ತು.

ದಸರಾ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಶೌಚಾಲಯ ತೊಳೆಯಲು ಸೂಚಿಸಿದ್ದರಂತೆ. ಅದೇ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿ ಸಿಂಚನಾ(8) ನೋಡಲೆಂದು ಅಲ್ಲಿಗೆ ತೆರಳಿದ್ದಾಳೆ. ಆಗ ಕೋಪಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಇರಿಸಿದ್ದ ಆ್ಯಸಿಡ್ ತೆಗೆದುಕೊಂಡು ಎರಚಿದ್ದರು. ಈ ಪರಿಣಾಮ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಬಾಲಕಿಯ ತಾಯಿ ಪವಿತ್ರಾ ಆಗ್ರಹಿಸಿದ್ದರು

ಇನ್ನು ಗಾಯಾಳು ಸಿಂಚನಾಳನ್ನು ಮುಖ್ಯ ಶಿಕ್ಷಕ ರಂಗಸ್ವಾಮಿಯೇ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಪಾಕೆಟ್ ಕಟ್ ಮಾಡಿದ ಪುಡಿ ಸಿಂಚನಾಳ ಮೇಲೆ ಬಿದ್ದಿತು. ಯಾವುದೇ ದುರುದ್ದೇಶದಿಂದ ಎರಚಿಲ್ಲ ತಿಳಿಸಿದ್ದರು.ಇದೀಗ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಆ್ಯಸಿಡ್ ದಾಳಿ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಂಗಸ್ವಾಮಿ ಅಮಾನತುಗೊಳಿಸಿ DDPI ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಅಮಾನತುಗೊಳಿಸಲಾಗಿದೆ. 

ಕೋಲಾರ : ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ, ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕು-ರೈತ ಸಂಘದಿಂದ ಒತ್ತಾಯ

ಕೋಲಾರ ಆ,27, ನಗರಾದ್ಯಂತ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಮಕ್ಕಳು ಹಾಗೂ ಹಿರಿಯರ ಜೀವವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ನಗರಸಭೆ ಆಯುಕ್ತರಾದ ಶಿವಾನಂದ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

                ಕೋಲಾರ ನಗರದಲ್ಲಿ ಕತ್ತಲಾದರೆ ನಾಯಿಗಳೇ ಹುಲಿಗಳಂತೆ ಮಕ್ಕಳು ಹಾಗೂ ವೃದ್ದರ ಮೇಲೆ ದಾಳಿ ಮಾಡುವ ಭಯದ ವಾತಾವರಣ ನಿರ್ಮಾಣವಾಗಿದ್ದರೂ ನಾಯಿಗಳ ಆಕ್ರಮಗಣಕ್ಕೆ ಕಡಿವಾಣ ಹಾಕದ ನಗರಸಭೆ ಅಧಿಕಾರಿಗಳ ವಿರುದ್ದ ರೈತ ಸಂಘದ  ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು.

                ಜಿಲ್ಲಾ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ದಾಳಿ ಪ್ರಕರಣಗಳಿಗೆ ಲೆಕ್ಕವೇ ಇಲ್ಲ ಪ್ರತಿ ವಾರ್ಡ್‍ನಲ್ಲೂ ವರ್ಷದಿಂದ ವರ್ಷಕ್ಕೆ ನಿರೀಕ್ಷೆಗೂ ಮೀರಿ ಬೀದಿ ನಾಯಿಗಳು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು ಅಟ್ಟಹಾಸ ಮರೆಯುತ್ತಿದ್ದರು, ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ನಾಪತ್ತೆಯಾಗಿದ್ದರೆಂದು ಕಿಡಿಕಾಡಿದರು.

                ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕೆಟ್, ಬ್ರೆಂಡ್, ಹಿಡಿಯಂಗಿಲ್ಲ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಮನೆಗೆ ಬರುವಾಗ ಒಬ್ಬಂಟಿಯಾಗಿ ಹೋಗುವಂತಿಲ್ಲ, ಮಹಿಳೆಯರು, ವೃದ್ದರ ಕೈಯಲ್ಲಿ ಕೈ ಚೀಲವಿದ್ದರೆ ಸದಾ ಎಚ್ಚರವಾಗಿರಬೇಕು. ಸ್ವಲ್ಪ ಯಾಮಾರಿದರೆ ಬೀದಿ ನಾಯಿಗಳ ಅಟ್ಯಾಕ್ ಮಾಡುವುದು ಗ್ಯಾರೆಂಟಿ ಇದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ  ಚುನಾಯಿತ ಜನ ಪ್ರತಿನಿಧಿಗಳು ಗ್ಯಾರೆಂಟಿ ಭಾಗ್ಯವಾಗಿದೆ ಎಂದು ವ್ಯಂಗ್ಯವಾಡಿದರು.

                ನಗರಾಧ್ಯಂತ ಜನ ಸಂದಣಿ ಇರುವ ಪ್ರಮುಖ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಎ.ಪಿ.ಎಂ.ಸಿ. ಜಿಲ್ಲಾ ಆಸ್ಪತ್ರೆ, ಬಸ್‍ನಿಲ್ದಾಣ, ಹೋಟೆಲ್, ಮತ್ತಿತರ ಕಡೆಗಳಲ್ಲಿ ಕಸದ ರಾಶಿ ಇರುವ ಬಳಿ ನಾಯಿಗಳ ಹಿಂಡು ಆಹಾರಕ್ಕಾಗಿ ಬಂದು ಅಲ್ಲಿಗೆ ಬರುವ ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ ಏಕೆ ಎಂದು ಪ್ರಶ್ನೆ ಮಾಡಿದರು.

                ಮಂಗಸಂದ್ರ ತಿಮ್ಮಣ್ಣ ಮಾತನಾಡಿ ಬೀತಿಯಲ್ಲಿ ಜನ ಬೀದಿನಾಯಿಗಳ ಹೆಚ್ಚಿನ ಹಾವಳಿಗೆ ಇತ್ತೀಚೆಗೆ ಬೆಳಿಗ್ಗೆ ಸಮಯದಲ್ಲಿ ಹೂ ಹಣ್ಣು, ತರಕಾರಿ, ಖರೀದಿಸಲು ಮಾರುಕಟ್ಟೆಗೆ ಹೋಗಲು ಜನ ಹಿಂದೇಟು ಹಾಕುತ್ತಾರೆ. ಜೊತೆಗೆ ಮನೆ ಮನೆಗೆ ಹಾಲು, ದಿನ ಪತ್ರಿಕೆ, ಹಾಕುವ ಹುಡುಗರ ಮೇಲೆಯೂ ಬೀದಿ ನಾಯಿಗಳ ಅಟ್ಯಾಕ್ ಮಾಡುತ್ತಿವೆ. ಭಿಕ್ಷಕರು, ಹೊಸಬರು, ಅಥವಾ ತಮ್ಮ ವ್ಯಾಪ್ತಿಯೊಳಗೆ ಬೇರೆ ಪ್ರದೇಶದ ನಾಯಿಗಳು ಬಂದರೆ ಅವುಗಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ನಾಯಿಗಳು ಎಲ್ಲಿ ಮಕ್ಕಳ ಮೇಲೆ, ವೃದ್ದರ ಮೇಲೆ ಎರಗುತ್ತವೋ ಎಂಬ ಭೀತಿ ಕಾಡುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.

                ರಾತ್ರಿವೇಳೆ ಚಿಕ್ಕಾಪಟ್ಟೆ ಕಿರಿ ಕಿರಿ ಇನ್ನು ರಾತ್ರಿವೇಳೆ ಹಿಂಡುಹಿಂಡಾಗಿ ಸೇರುವ ನಾಯಿಗಳ ಕೂಗಾಟ ಬೌ ಬೌ ಸದ್ದಿಗೆ ಗಾಡ ನಿದ್ರೆಯಲ್ಲಿರುವ ಎಚ್ಚರಗೊಂಡು ಮನೆಯಲ್ಲಿರುವ ಚಿಕ್ಕ ಮಕ್ಕಳು ಜೋರಾಗಿ ಕಿರಿಚಾಟ ಪ್ರಾರಂಭ ಮಾಡುವ ಮಟ್ಟಕ್ಕೆ ನಾಯಿಗಳು ಭಯ ಹುಟ್ಟಿಸುತ್ತಿವೆ ಎಂದರು.

                ಕಬಾಬ್ ಹಾಗೂ ಮಾಂಸದ ಅಂಗಡಿಗಳ ಹತ್ತಿರ ಶ್ವಾನಗಳ ಹಾವಳಿ, ನಗರಾದ್ಯಂತ ಕೋಳಿ, ಕುರಿ ಮಾಂಸದ ಜೊತೆಗೆ ಮೀನು ಮಾರಾಟ ಮಾಡುವ ರಸ್ತೆಗಳಲ್ಲಿಯೇ ಹೆಚ್ಚಾಗಿ ನಾಯಿಗಳು ಕಂಡು ಬರುವ ಜೊತೆಗೆ ನಾಗರೀಕರ ಸಂಚಾರಕ್ಕೆ ಸಂಚಾಕರವಾಗಿ ಮಾರ್ಪಟ್ಟಿದೆ. ಜೊತೆಗೆ ಒಂದು ಸಾರಿ ಮಾಂಸದ ರುಚಿ ನೋಡಿದ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಅಪಾಯದ ಜೊತೆಗೆ ರಸ್ತೆ ಬದಿ ಕಬಾಬ್, ಚಿಕ್ಕನ್ ಅಂಗಡಿ, ಮಾಂಸಹಾರಿ ಹೋಟೆಲ್‍ಗಳ ಬಳಿ ಉಳಿದ ಮೂಳೆ ಚೂರುಗಳನ್ನು ರಸ್ತೆಯಲ್ಲೇ ಹಾಕುವುದರಿಂದ ನಾಯಿ ಹಾವಳಿಗಳ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಅಂಗಡಿಗಳ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

                ಮನವಿ ನೀಡಿ ಮಾತನಾಡಿದ ಶಿವಾನಂದ ಮಾತನಾಡಿ ಬೀದಿ ನಾಯಿಗಳ ಕಡಿವಾಣಕ್ಕೆ ಈಗಾಗಲೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಷ್ಟೂ ಶೀಘ್ರವಾಗಿ ಕಡಿವಾಣ ಹಾಕಲಾಗುವುದು.

                ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ನಳಿನಿಗೌಡ.ಎ, ಶಿವಾರೆಡ್ಡಿ, ಮಂಗಸಂದ್ರ ನರಸಿಂಹಯ್ಯ, ನಳಿನಿ.ವಿ, ಮೂರಾಂಡಹಳ್ಳಿ ಶಿವಾರೆಡ್ಡಿ ಮುಂತಾದವರಿದ್ದರು.




ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯಲ್ಲಿ “ರೋಸಾರಿಯನ್ ” ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ


ಕುಂದಾಪುರ, ಅ.27: ಸ್ಥಳೀಯ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳಿಂದ “ರೋಸಾರಿಯನ್ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ” ಏರ್ಪಡಿಸಲಾಗಿತ್ತು.
ಅ.27 ರಂದು ಇದರ ಉದ್ಘಾಟನೆಯನ್ನು ಶಾಲೆಯ ಜಂಟಿಕಾರ್ಯದರ್ಶಿಯಾಗಿರುವ ಅ.ವಂ. ಧರ್ಮಗುರು ಸ್ಟ್ಯಾನಿ ತಾವ್ರೊ ಕರಕುಶಲತೆಯಿಂದ ತಯಾರಿಸಲ್ಪಟ್ಟ ಚಿಟ್ಟೆಯ, ರೆಕ್ಕೆಗಳನ್ನು ತೆರೆದು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಲೆಯ ಹಳೆ ವಿದ್ಯಾರ್ಥಿ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಜತೆ ನೀಡಿದರು.
“ನಾನು ಇಂದು ವಸ್ತುಪ್ರದರ್ಶನ ಸಭಾ ಭವನದಲ್ಲಿ ಪ್ರವೇಶಗೊಂಡಾಗ,ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಗಳಿಂದ ನಿರ್ಮಿಸಲ್ಪಟ್ಟ ವಸ್ತು ಪ್ರದರ್ಶವನ್ನು ನೋಡಿ ನಾನು ಹಬ್ಬದ ಸಂತೆಯಲ್ಲಿ ಪ್ರವೇಶಿಸಿದ್ದೇನೊ ಅಂತಾ ಭಾಸವಾಯಿತು,ಪೋಷಕರೆ ಇಂದು ನಿರ್ಮಿಸಲ್ಪಟ್ಟ ವೈವಿಧ್ಯಮಯ ವಸ್ತುಪ್ರದರ್ಶನ ನಿಮ್ಮ ಮಕ್ಕಳೇ ನಿರ್ಮಾಣ ಮಾಡಿದ್ದು, ಇದನ್ನು ಕಣ್ತುಂಬ ನೋಡಿ ಖುಶಿ ಪಡಬೇಕು, ನಮ್ಮ ಮಕ್ಕಳು ತುಂಬ ಬುದಿವಂತರಿದ್ದಾರೆ, ಅವರಿಗೆ ನೀವು ಪೆÇ್ರೀತ್ಸಾಹಿಸಬೇಕು” ಎಂದು ಸಂತಸವನ್ನು ಹಂಚಿಕೊಂಡರು.
ಮುಖ್ಯ ಅತಿಥಿ ಶ್ರೀದೇವಿ ಇನ್ಸುಟ್ಯುಟ್ ಆಫ್ ಟೆಕ್ನೋಜಿ ಮಂಗಳೂರು ಇದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ “ನಾನು ಇಲ್ಲಿ ಕಲಿಯುವಾಗ ನಮ್ಮ ಶಿಕ್ಷಕರು ನನಗೆ ಬಹಳ ವಿಧದಲ್ಲಿ ಪ್ರೇರಣೆ ನಿಡ್ಡಿದ್ದರು, ನನ್ನನ್ನು ಹಂತ ಹಂತದಿಂದ ಮಾರ್ಗದರ್ಶನ ನೀಡಿ ಉತ್ತೇಜನ ನೀಡಿದ್ದು, ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿ ನನ್ನಲ್ಲಿನ ಪ್ರತಿಭೆಯನ್ನು ಬೆಳಗಿಸಿದರು, ಹಾಗೇ ಇಂದು ನಾನು ಪಿಎಚ್‍ಡಿ ಪಡೆದುಕೊಂಡಿದ್ದೇನೆ, ನನ್ನ ಹಾಗೇ ನೀವೂ ಕೂಡ ಈ ಶಾಲೆಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳ ಬೇಕು’ ಎನ್ನುತ್ತಾ ಇಂದಿನ ನಿಮ್ಮ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಭಗಿನಿ ಇವ್ಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ವೇದಿಕೆಯಲ್ಲಿ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಸ್ತುಪ್ರದರ್ಶನಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ, ಮಹಿಮಾ, ಪ್ರಶಾಂತ್ ರೇಬೆರೊ, ರತ್ನಾಕರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಶಿಕ್ಷಕಿ ನೀತಾ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ಪ್ರೀತಿ ಬ್ರಗಾಂಜಾ ನಿರೂಪಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ವಂದಿಸಿದರು
.

ನಾಸ್ಕಾಮ್ ಫ್ಯೂಚರ್ಸ್ ಸ್ಕಿಲ್ಸ್ ಮತ್ತು ಎಂಐಟಿಕೆ ಒಡಂಬಡಿಕೆ / Nasscom Futures Skills and MITK Agreement

ನಾಸ್ಕಾಮ್, ಭಾರತದಲ್ಲಿನ ತಾಂತ್ರಿಕ ಉದ್ಯಮದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಯಾಗಿದ್ದು ಭಾರತ ಮತ್ತು ವಿದೇಶ ಸೇರಿ 3000ಕ್ಕೂ ಅಧಿಕ ಕಂಪನಿಗಳು ಒಳಗೊಂಡಿದೆ

ನಾಸ್ಕಂ ಫ್ಯೂಚರ್ಸ್ ಸ್ಕಿಲ್ಸ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಭಾರತದ ವೇಗ ಹೆಚ್ಚಿಸಲು ಮತ್ತು ಉದಯೋನ್ಮುಖ ಹೊಸ ತಂತ್ರಜ್ಞಾನದಲ್ಲಿ ಪ್ರತಿಭಟಗಳಿಗೆ ಜಾಗತಿಕ ಕೇಂದ್ರವಾಗಲು ಉದ್ಯಮ ಚಾಲಿತ ಪರಿಸರ ಕಲಿಕಾ ವ್ಯವಸ್ಥೆ. ಈ ಸಂಸ್ಥೆಯೊಂದಿಗೆ ಎಂಐಟಿ ಕುಂದಾಪುರ ಒಡಂಬಡಿಕೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಅಭಿವೃದ್ದಿ ಹೊಂದಲು ಒಂದು ಸದಾವಕಾಶವಾಗಿದೆ. ಹಲವಾರು ಉದ್ಯೋಗಗಳಿಗೆ ಹಲವು ತಂತ್ರಜ್ಞಾನ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಭವಿಷ್ಯದ ತಾಂತ್ರಿಕತೆಗೆ ತಯಾರು ಮಾಡುವಲ್ಲಿ ಈ ಒಡಂಬಡಿಕೆ ಮುಖ್ಯ ಪಾತ್ರ ವಹಿಸಿದೆ

Nasscom Futures Skills and MITK Agreement

NASSCOM is a leading trade and commerce organization of the Technology Industry covering more than 3000 companies in India and abroad.

NASSCOM Futures Skills is an industry-driven learning ecosystem to accelerate India’s skills development and to become a global hub for talent in emerging new Technologies. MIT Kundapura tie-up with this institution is a great opportunity for students to thrive.This alliance will play a key role in preparing students for the technological future with many technology skills for many job roles.

ಖ್ಯಾತ ಕೊಂಕಣಿ ಲೇಖಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಡ್ವಿನ್ ಜೆ ಎಫ್ ಡಿಸೋಜಾ ಧೈವಾಧಿನಾದರು

 

ಮಂಗಳೂರು, ಅಕ್ಟೋಬರ್ 26: ಖ್ಯಾತ ಕೊಂಕಣಿ ಲೇಖಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಡ್ವಿನ್ ಜೆ ಎಫ್ ಡಿಸೋಜಾ ಎಂದೇ ಖ್ಯಾತರಾಗಿದ್ದ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜಾ (75) ಅವರು ಅಕ್ಟೋಬರ್ 26 ರಂದು ಗುರುವಾರ ನಗರದಲ್ಲಿ ನಿಧನರಾದರು.

ಜೂನ್ 14, 1948 ರಂದು ಮಂಗಳೂರಿನ ವೆಲೆನ್ಸಿಯಾದಲ್ಲಿ ಜನಿಸಿದ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜಾ ಅವರು ಮಂಗಳೂರಿನ ಸೇಂಟ್ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಹಳೆಯ ವಿದ್ಯಾರ್ಥಿ. ಅವರು ವಾಣಿಜ್ಯದಲ್ಲಿ ಪದವಿ ಮತ್ತು ಕೊಂಕಣಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಹೊಂದಿದ್ದರು, ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಬೈಬಲ್ ಸ್ಕೂಲ್‌ನಿಂದ ಐದು ಆನ್‌ಲೈನ್ ಡಿಪ್ಲೊಮಾಗಳನ್ನು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಪರಿಣತಿ ಪಡೆದರು.

1964 ರಲ್ಲಿ, ಅವರು ತಮ್ಮ ಮೊದಲ ಸಣ್ಣ ಕಥೆಯನ್ನು ಕೊಂಕಣಿಯಲ್ಲಿ ಪ್ರಕಟಿಸಿದರು ಮತ್ತು ಅಲ್ಲಿಂದ ಅವರು 33 ಕಾದಂಬರಿಗಳು, ನೂರಕ್ಕೂ ಹೆಚ್ಚು ಸಣ್ಣ ಕಥೆಗಳು, ಅಂಕಣಗಳು, ವಿಡಂಬನೆಗಳು ಮತ್ತು ಹೆಚ್ಚಿನದನ್ನು ಬರೆದರು. ಅವರ ಅನೇಕ ಸಣ್ಣ ಕಥೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಎಡ್ವಿನ್ ಅವರ ಸಾಹಿತ್ಯಿಕ ಕೊಡುಗೆಗಳಿಗಾಗಿ ದುಬೈನಿಂದ ಸೇರಿದಂತೆ ಹದಿಮೂರು ರಾಜ್ಯ, ಅಂತರ-ರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ಅವರ ಪ್ರಸಿದ್ಧ ಸಣ್ಣ ಕಥೆ, “ಎ ಕಪ್ ಆಫ್ ಹಾಟ್ ಕಾಫಿ”, ಜೈಕೋ ಬುಕ್ಸ್ ಪ್ರಕಟಿಸಿದ “ನಮ್ಮ ಮೆಚ್ಚಿನ ಭಾರತೀಯ ಸಣ್ಣ ಕಥೆಗಳು” ಸಂಕಲನದಲ್ಲಿ ಕಾಣಿಸಿಕೊಂಡಿದೆ ಮತ್ತು ದಿವಂಗತ ಖುಷ್ವಂತ್ ಸಿಂಗ್ ಅವರಿಂದ ಸಂಗ್ರಹಿಸಲ್ಪಟ್ಟಿದೆ. ಅವರ ಹೃದಯಸ್ಪರ್ಶಿ ಸಣ್ಣ ಕಥೆ “ಚಾಕೊಲೇಟ್‌ಗಳು” ರೀಡರ್ಸ್ ಡೈಜೆಸ್ಟ್ ಗೈಡ್ ಟು ಫುಡ್, ವಿಶೇಷ ಕಲೆಕ್ಟರ್ಸ್ ಎಡಿಶನ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡಿತು.

ಸಾಹಿತ್ಯ ಅಕಾಡೆಮಿ, ನವದೆಹಲಿ, ಅವರ ಹಲವಾರು ಸಣ್ಣ ಕಥೆಗಳನ್ನು ತನ್ನ ಪ್ರಕಟಣೆಗಳಾದ “ಪ್ರತೀಚಿ” ಮತ್ತು “ಭಾರತೀಯ ಸಾಹಿತ್ಯ” ಗಳಲ್ಲಿ ಪ್ರಕಟಿಸಿತು.

ಭಾಷಾಂತರ ಕ್ಷೇತ್ರದಲ್ಲಿ, ಎಡ್ವಿನ್ ಅವರು ಇಂಗ್ಲಿಷ್‌ನಿಂದ ಕೊಂಕಣಿಗೆ (ನಾಗರಿ/ಕನ್ನಡ ಲಿಪಿಯಲ್ಲಿ) ಮತ್ತು ಪ್ರತಿಯಾಗಿ ಭಾಷಾಂತರಿಸುವ ಕೆಲಸಕ್ಕಾಗಿ ಗುರುತಿಸಲ್ಪಟ್ಟರು. ಕೆಲವು ಗಮನಾರ್ಹ ಭಾಷಾಂತರಗಳಲ್ಲಿ ಅವರದೇ ಆದ ಹದಿಮೂರು ಕೊಂಕಣಿ ಸಣ್ಣ ಕಥೆಗಳು ಇಂಗ್ಲಿಷ್‌ಗೆ ಸೇರಿವೆ, ಚೆನ್ನೈನ ಇಂಗ್ಲಿಷ್ ಟೈಟಲ್ಸ್ ಪಬ್ಲಿಕೇಷನ್ಸ್‌ನಿಂದ “ಚಾಕೊಲೇಟ್‌ಗಳು” ಎಂಬ ಸಂಕಲನದಲ್ಲಿ ಸಂಕಲಿಸಲಾಗಿದೆ. ಅವರು ಎ ಜೆ ಕ್ರೋನಿನ್ ಅವರ “ಶಾನನ್ಸ್ ವೇ” ಮತ್ತು ರಾಬರ್ಟ್ ಗ್ರೀನ್‌ಶಾ ಅವರ “ಹೆವೆನ್ ನೋಸ್ ಮಿಸ್ಟರ್ ಆಲಿಸನ್” ಗಳನ್ನು ಅಳವಡಿಸಿ ಅನುವಾದಿಸಿದ್ದಾರೆ. ಇದಲ್ಲದೆ, ಗೈ ಡಿ ಮೌಪಾಸಾಂಟ್, ಜೇಮ್ಸ್ ಜಾಯ್ಸ್, ಸರ್ ಆರ್ಥರ್ ಕಾನನ್ ಡಾಯ್ಲ್, ಅಗಾಥಾ ಕ್ರಿಸ್ಟಿ ಮತ್ತು ಚೆಕೊವ್ ಅವರ ಆಯ್ದ ಸಣ್ಣ ಕಥೆಗಳ ಅನುವಾದಗಳು ಕೊಂಕಣಿ ನಿಯತಕಾಲಿಕೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡವು. ಅವರು ಸಾಹಿತ್ಯ ಅಕಾಡೆಮಿ, ಚೆನ್ನೈ ಅಧ್ಯಾಯದಿಂದ ಅನುವಾದಕರಾಗಿ ಮಾನ್ಯತೆ ಪಡೆದರು.

ಪ್ರಸಿದ್ಧ ಕವಿ ಮತ್ತು ನಾಟಕಕಾರ, ದಿವಂಗತ ಸಿ ಎಫ್ ಡಿ’ಕೋಸ್ತಾ ಅವರ ಕೊಂಕಣಿ ಜೀವನ ಚರಿತ್ರೆಯನ್ನು ಅನುವಾದಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿ ಅವರಿಗೆ ವಹಿಸಿದೆ. ಹೆಚ್ಚುವರಿಯಾಗಿ, ದಿವಂಗತ ವಿ ಜೆ ಪಿ ಸಲ್ಡಾನ್ಹಾ ಅವರ ಜೀವನ ಚರಿತ್ರೆಯನ್ನು ಇಂಗ್ಲಿಷ್‌ನಲ್ಲಿ ಬರೆಯುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು.

ಅವರ ಟ್ರೈಲಾಜಿ, 1008 ಪುಟಗಳನ್ನು ವ್ಯಾಪಿಸಿರುವ ಏಕ-ಸಂಪುಟದ ಕೃತಿಯನ್ನು 2015 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಇದು ಕೊಂಕಣಿ ಸಾಹಿತ್ಯದಲ್ಲಿ ಗಮನಾರ್ಹ ಸಾಧನೆ ಎಂದು ಪರಿಗಣಿಸಲಾಗಿದೆ. 2014 ರಲ್ಲಿ, ಕೊಂಕಣಿಯಲ್ಲಿ (ದೇವನಾಗರಿ) ಅವರ ಮೊದಲ ಸಂಕಲನ “ಪಾಯಿನ್” (ದಿ ಜರ್ನಿ) ಎಂಬ ಶೀರ್ಷಿಕೆಯಡಿಯಲ್ಲಿ ಬಿಂಬ್ ಪಬ್ಲಿಕೇಶನ್ಸ್ ಮತ್ತು ಗೋವಾ ಕೊಂಕಣಿ ಅಕಾಡೆಮಿ ಜಂಟಿಯಾಗಿ ಪ್ರಕಟಿಸಲಾಯಿತು, ಬೆಳಗಾವಿಯ 29 ನೇ ಅಖಿಲ ಭಾರತ ಕೊಂಕಣಿ ಪರಿಷತ್ತಿನಲ್ಲಿ ಬಿಡುಗಡೆಯಾಯಿತು. ಫೆಬ್ರವರಿ 28, 2014.

ಅವರು 1995 ರಲ್ಲಿ ಕೊಂಕಣಿ ಚಲನಚಿತ್ರ “ಬಾಕ್ಸ್‌ಸೇನ್” ಗೆ ಸಂಭಾಷಣೆಗಳನ್ನು ಸಹ ನೀಡಿದ್ದಾರೆ.

ಮಾರ್ಚ್ 2012 ರಲ್ಲಿ, ಅವರು ಅಲ್ಪಸಂಖ್ಯಾತ ಭಾಷೆಗೆ ತಮ್ಮ ಜೀವಮಾನದ ಸಮರ್ಪಣೆಗಾಗಿ ಚೆನ್ನೈನಿಂದ ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಪ್ರಶಸ್ತಿ (BAPASI) ಪಡೆದರು.

ಗೋವಾ ಕೊಂಕಣಿ ಅಕಾಡೆಮಿಯು ಅವರ 450 ಪುಟಗಳ ಕಾದಂಬರಿ “ಕಲ್ಲೆಂ ಭಂಗಾರ್” ಅನ್ನು ನಾಗರಿ ಲಿಪಿಯಲ್ಲಿ ಪ್ರಕಟಿಸಿತು. ಈ ಕಾದಂಬರಿಯು ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2013 ರ ವರ್ಷದ ಅತ್ಯುತ್ತಮ ಪುಸ್ತಕ ಮತ್ತು ವಿಮಲಾ ವಿ ಪೈ ವಿಶ್ವ ಕೊಂಕಣಿ ಪ್ರಶಸ್ತಿಯಿಂದ 2013 ರ ವರ್ಷದ ಅತ್ಯುತ್ತಮ ಪುಸ್ತಕ ಪ್ರಶಸ್ತಿಯನ್ನು ತಂದುಕೊಟ್ಟಿತು. ಹೊಸದಿಲ್ಲಿಯ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.

2015 ರಲ್ಲಿ, ಫೆಡರೇಶನ್ ಆಫ್ ಕೊಂಕಣಿ ಕ್ಯಾಥೋಲಿಕ್ ಅಸೋಸಿಯೇಷನ್ ಅವರನ್ನು ಗೌರವಿಸಿತು ಮತ್ತು ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ, ಮಾಜಿ ಮಂಗಳೂರು ಬಿಷಪ್ ಡಾ ಬರ್ನಾಡ್ ಮೊರಾಸ್ ಮತ್ತು ಇತರರಿಂದ ಮನ್ನಣೆ ಪಡೆದರು. “ಕೊಂಕಣಿ ಕುಟಮ್, ಬಹ್ರೇನ್” ಅವರಿಗೆ 2015 ರಲ್ಲಿ ಕೊಂಕಣಿ ಸಾಹಿತ್ಯ ಜೀವಮಾನ ಪ್ರಶಸ್ತಿಯನ್ನು ನೀಡಿತು.

ಅವರು ನವದೆಹಲಿಯ ಸಾಹಿತ್ಯ ಅಕಾಡೆಮಿಯ (2008-2012) ಜನರಲ್ ಕೌನ್ಸಿಲ್‌ನ ಸದಸ್ಯರಾಗಿದ್ದರು ಮತ್ತು ಸಂಶೋಧನೆಗಾಗಿ ಫೆಲೋಶಿಪ್ ಪ್ರಶಸ್ತಿಗಳನ್ನು ನಿರ್ಧರಿಸುವ ನವದೆಹಲಿಯ ಸಂಸ್ಕೃತಿ ಸಚಿವಾಲಯದ ತಜ್ಞರ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಡ್ವಿನ್ ಡಿಸೋಜಾ ಅವರು ಗೋವಾ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಮಂಡಳಿಯಲ್ಲಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸಿದರು.

ಎಡ್ವಿನ್ ಡಿಸೋಜಾ ಅವರು ಫೆಬ್ರವರಿ 1992 ರಲ್ಲಿ ಕಾರವಾರದಲ್ಲಿ ನಡೆದ 11 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಎಡ್ವಿನ್ ಡಿಸೋಜಾ ಅವರು ತಮ್ಮ ಪತ್ನಿ ಮಾರ್ಸೆಲಿನ್ ಜೇನ್ ಡಿಸೋಜಾ, ಮಗಳು ರುತ್ ಎಸ್ತರ್ ಡಿಸೋಜಾ, ಅಳಿಯ ಸುಧಾಕರ ಪ್ರಭು ಮತ್ತು ಮೊಮ್ಮಗ ಅನೌಷ್ಕಾ ಪ್ರಭು ಅವರನ್ನು ಅಗಲಿದ್ದಾರೆ.