ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ 7 ವಾಹನಗಳ ಸರಣಿ ಅಪಘಾತ

ಮಂಗಳೂರು, ಅ.17: ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಲಾರಿ, ಕಾರು, ಆಟೊ ರಿಕ್ಷಾ ಸಹಿತ ಏಳು ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಕುರಿತು ಸಂಚಾರ ದಕ್ಷಿಣ ಠಾಣೆಯ ಪೊಲೀಸರ ಮಾಹಿತಿ ಲಭಿಸಿದೆ.

ನಗರದ ಪಂಪ್‌ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ತೆರಳುವ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಡೀಸೆಲ್ ಖಾಲಿಯಾಗಿ ಲಾರಿಯೊಂದು ನಿಂತಿತ್ತು. ಸೋಮವಾರ ಸಂಜೆಯ ವೇಳೆ ನಗರದಲ್ಲಿ ಭಾರೀ ಮಳೆಯಾಗಿದ್ದು, ಈ ಸಂದರ್ಭ ನಿಂತಿದ್ದ ಲಾರಿಯನ್ನು ಗಮನಿಸದ ಸ್ವಿಪ್ಟ್ ಕಾರು ಲಾರಿಗೆ ಢಿಕ್ಕಿ ಹೊಡೆದಿದೆ. ಇದರ ಹಿಂದಿನಿಂದ ಬರುತ್ತಿದ್ದ ಕೇರಳ ನೋಂದಣಿಯ 3 ಕಾರು ಒಂದಕ್ಕೊಂದು ಢಿಕ್ಕಿಯಾಗಿದೆ. ಅಲ್ಲದೆ ಪಿಕಪ್, ಬಸ್ ಕೂಡಾ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮಳೆ ಸುರಿಯುತ್ತಿದ್ದ ಕಾರಣ ಒಂದರ ಹಿಂದೆ ಒಂದರಂತೆ ವಾಹನಗಳು ಸಾಲಾಗಿ ಚಲಿಸುತ್ತಿದ್ದವು. ಹಾಗೇ ಒಂದಕ್ಕೊಂದು ಢಿಕ್ಕಿಯಾಗಿದ್ದು, 7 ವಾಹನಗಳಿಗೆ ಹಾನಿಯಾಗಿವೆ. ಇದರಲ್ಲಿ 3 ಕಾರು, ಬಸ್‌ಗೆ ಭಾರೀ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಇಬ್ಬನಿಯ ದೆಸೆಯಿಂದ ಈ ರೀತಿ ಅಪಘಾತವಾಗುವುದು ಗಲ್ಫ್ ರಾಷ್ಟ್ರ್ರಗಳಲ್ಲಿ ನಎಡೆಯುವುದು ಸಾಮಾನ್ಯ ಆದರೆ ಮಂಗಳೂರಿನಲ್ಲಿ ಮಳೆಯ ಮೊಬ್ಬಿನಿಂದ ನಡೆದಿದೆ ಎಂದು ಅಂದಾಜು.

ಕಲ್ಯಾಣಪುರದಲ್ಲಿ ಭಾರೀ ಬೆಂಕಿ ಅನಾಹುತ : ವಾರಾಹಿ ಯೋಜನೆಯ ಪೈಪ್‌ ಶೇಖರಣದ ಪೈಪ್‌ ಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ

ಉಡುಪಿ : ಕಲ್ಯಾಣಪುರದ ವೀರಭದ್ರ ದೇವಸ್ಥಾನದ   ಹಿಂಭಾಗದಲ್ಲಿ ಇರುವ ವಾರಾಹಿ ನೀರಾವರಿ ಯೋಜನೆಯ ಪೈಪ್‌ ಶೇಖರಣಾ ಸ್ಥಳದಲ್ಲಿ ಭಾರೀ ಬೆಂಕಿ ಅನಾಹುತ ಘಟನೆ ಇಂದು ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಶೇಖರಣಾ ಕೇಂದ್ರದಲ್ಲಿ ದಾಸ್ತಾನು ಇರಿಸಿದ್ದ ಪೈಪ್‌ ರಾಶಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಜನರು ಮತ್ತು ಪೊಲೀಸರು ಈ ಕಾರ್ಯದಲ್ಲಿ ಆಗ್ನಿ ಶಾಮಕ ಸಿಬಂದಿಗೆ ಸಹಾಯ ಮಾಡಿದರು.. ಪೈಪ್‌ಗಳು ಸುಟ್ಟು ಹೋಗಿರುವುದರಿಂದ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿ ಕೊಂಡಿದೆ. ಬೆಂಕಿ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ಮನೆಗಳಲ್ಲಿ ಕಳ್ಳತನಕ್ಕೆ ಪೊಲೀಸಪ್ಪನೆ ಸಹಕಾರ ನೀಡುತಿದ್ದ ಇದೀಗ ಸಿಕ್ಕಿ ಬಿದ್ದು ಅಮಾನತು

ಬೆಂಗಳೂರು: ಖಾಲಿ ಇರುವ ಮನೆಗಳಲ್ಲಿ ಕಳ್ಳತನಕ್ಕಾಗಿ ಮನೆಗಳ ವಿವರ ನೀಡಿ ಸಹಕಾರ ನೀಡಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲನ್ನು ಅಮಾನತುಗೊಳಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ  ನಡೆದಿದೆ. ಇದು ಬೇಲಿಯೆ ಹೋಲ ಮೆಯ್ದಂತೆ ಆಗಿದೆ.

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಯಲ್ಲಪ್ಪ ಎಂಬ ಕಾನ್ಸ್ಟೇಬಲ್ ಕಳ್ಳರ ಗ್ಯಾಂಗ್ ಜೊತೆ ಸೇರಿ ಕಳ್ಳತನಕ್ಕೆ ಸಾಥ್ ನೀಡುತಿದ್ದರು. ಕೆಲದಿನಗಳ ಹಿಂದೆ ಮನೆ ಕಳ್ಳತನ ಮಾಡಿದ ಪ್ರಕರಣವೊಂದರಲ್ಲಿ ಬನಶಂಕರಿ ಪೊಲೀಸರು ಕಳ್ಳರನ್ನು ಸೆರೆಹಿಡಿದು ವಿಚಾರಣೆ ನಡೆಸಿದಾಗ. ಈ ವೇಳೆ ಕಳ್ಳತನದಲ್ಲಿ ಅದೇ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಯಲ್ಲಪ್ಪನವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ಕಳ್ಳತನ ಮಾಡುವುದು ಹೇಗೆ? ತಪ್ಪಿಸಿಕೊಳ್ಳುವುದು ಹೇಗೆ? ಎಲ್ಲಿ ಕಳ್ಳತನ ಮಾಡಬೇಕು ಖಾಲಿ ಇರುವ ಮನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಯಲ್ಲಪ್ಪ, ಕಳ್ಳತನ ಮಾಡಿದ ಹಣದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು. ಈ ಆಧಾರದ ಮೇಲೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಯಲ್ಲಪ್ಪನವರನ್ನು ವಿಚಾರಣೆ ನಡೆಸಿ ಅಮಾನತುಗೊಳಿಸಿದ್ದಾರೆ

ಬೆಂಗಳೂರಿಗೆ ವಸತಿ ಬೆಲೆ ಏರಿಕೆಯ ಜಾಗತಿಕ ಸೂಚ್ಯಂಕದಲ್ಲಿ 22 ನೇ ಸ್ಥಾನ, ಮುಂಬೈ 19 ನೇ ಸ್ಥಾನಕ್ಕೆ ನೆಗೆತ

ನವದೆಹಲಿ: ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ವಾಸದ ಮನೆಗಳಿಗೆ ಭಾರಿ ಬೇಡಿಕೆ ಇದ್ದು. ಈ ಕ್ಯಾಲೆಂಡರ್‌ ವರ್ಷದ ಎರಡನೇ ತ್ರೈಮಾಸಿದ ಏಪ್ರಿಲ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ (ಪ್ರಪಂಚದ) ಸೂಚ್ಯಂಕದಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22 ನೇ ಸ್ಥಾನಕ್ಕೆ ನೆಗೆದಿವೆ

ನೈಟ್‌ ಫ್ರಾಂಕ್‌ ಎಂಬ ರಿಯಲ್‌ ಎಸ್ಟೇಟ್‌ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸುವ ಗ್ಲೋಬಲ್‌ ರೆಸಿಡೆನ್ಷಿಯಲ್‌ ಸಿಟೀಸ್‌ ಇಂಡೆಕ್ಸ್‌ ನ ಕಳೆದ ಬಾರಿಯ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿತ್ತು ಇದೀಗ ಬೆಂಗಳೂರು 22ನೇ ಸ್ಥಾನಕ್ಕೆ ಏರಿದೆ. ಮುಂಬೈ 95ನೇ ಸ್ಥಾನದಿಂದ 19ನೇ ಸ್ಥಾನಕ್ಕೆಜಿಗಿತ ಕಂಡಿದೆ. ಕೆಲವೇ ಕೆಲವು ವರ್ಷಗಳಲ್ಲಿ ಮುಂಬಯ್ ಕಿಂತಲೂ ಬೆಂಗಳೂರು ಹೆಚ್ಚು ಜಿಗಿತವಾಗುವ ಸಾಧ್ಯತೆಗಳು ಕಂಡು ಬರುತ್ತವೆ.

ಬೆಂಗಳೂರಿನಲ್ಲಿ ಕಳೆದ ಪರ್ಷದ ಏಪ್ರಿಲ್ ನಿಂದ ಜೂನ್ ವರೆಗಿನ್ ಕ್ವಾರ್ಟರ್ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಪಸತಿ ಬೆಲೆಗಳಲ್ಲಿ ಶೇ. 5.3ರಷ್ಟು ಏರಿಕೆ ಆಗಿದೆ. ಇನ್ನೂ ನವದೆಹಲಿಯಲ್ಲಿ ನಿವೇಶನಕ್ಕೆ ಶೇ. 4.5 ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದೆ. ಚೆನ್ನೈನಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು, ಜಾಗತಿಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದೆ. ಕೋಲ್ಕತಾದಲ್ಲಿ ಶೇ. 2.5ರಷ್ಟು ಬೆಲೆ ಏರಿಕೆಯಾಗಿದ್ದು ಜಾಗತಿಕ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದೆ.

ಚಂಡಮಾರುತ ಸ್ರಷ್ಟಿ ಭೀತಿ: ಕರಾವಳಿ ತೀರದಲ್ಲಿ ಮಳೆಯಾಗುವ ಸಾಧ್ಯತೆ

ಉಡುಪಿ : ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದ್ದು ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಿಂಚು,ಗುಡುಗು ಸಹಿತ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಭಾರೀ ಮಳೆಯಾಗುತಿದ್ದು, ಕರ್ನಾಟಕದ ಕರಾವಳಿಗೆ ಎಲ್ಲೋ ಅಲರ್ಟ್ ನೀಡಲಾಗಿದ್ದು, ಮಂಗಳವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು. ಬಳಕೆದಾರರು, ಸ್ಟೇಕ್ ಹೋಲ್ಡರ್‌ ಗಳು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಬಂದರಿನಿಂದ ತೆರಳುವ ಹಡಗುಗಳ ಚಂಡಮಾರುತ ಸಮೀಪಿಸುವ ಮುನ್ನವೇ ಮುನ್ನೆಚ್ಚರಿಕೆಯೊಂದಿಗೆ ತೆರಳ ಬೇಕು ಎಂದು ಬಂದರು ಆಡಳಿತ ಸೂಚನೆ ನೀಡಿದೆ. ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮಂಗಳವಾರ ಚಂಡಮಾರುತ ಸಾಧ್ಯತೆ ಹಿನ್ನಲೆಯಲ್ಲಿ ನವ ಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು ಬಳಕೆದಾರರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಹಾಗೂ ನವಮಂಗಳೂರು ಬಂದರಿನಲ್ಲಿ ಎಲ್ಲಾ ರೀತಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುವುದು ಬಂದರಿನಿಂದ ತೆರಳುವ ಹಡಗುಗಳ ಚಂಡಮಾರುತ ಸಮೀಪಿಸುವ ಮುನ್ನವೇ ಮುನ್ನೆಚ್ಚರಿಕೆಯೊಂದಿಗೆ ತೆರಳಬೇಕು ಎಂದು ಬಂದರು ಆಡಳಿತ ಸೂಚನೆ ನೀಡಿದೆ.

      ನಮ್ಮ ಕರಾವಳಿಯಲ್ಲಿ ಕೆಲವಡೆ ನಿನ್ನೆ ರಾತ್ರಿ ಗುಡುಗು ಮಿಂಚು ಬಡಿದು ಹಲವಡೆ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳದ ಪಾಜಿನಾಡ್ಕದ ವಾಲೇರಿಯನ್ ಮಚಾದೊ ಅವರ ಮನೆ ಮತ್ತು ಪೆರ್ಡೂರು ಪಾಡಿಗಾರಿನ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.

    ಕುಂದಾಪುರ ಭಾಗದ ಸಿದ್ದಾಪುರದಲ್ಲೂ ಸಿಡಿಲು ಸಹಿತ ಮಳೆಯಾಗಿದೆ. ಕುಂದಾಪುರ ನಗರದಲ್ಲಿ ದಟ್ಟ ಮೋಡದ ವಾತವರಣ ಇದ್ದರೂ, ಸಣ್ಣ ಮಳೆಯಾಗಿದೆ.

ಹವಾಮಾನ ಇಲಾಖೆ ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಬೆಳ್ಳಿಹಬ್ಬ- ಭವ್ಯವಾದ ಉದ್ಘಾಟನಾ ಮತ್ತು ವಿಧ್ಯುಕ್ತ ಸಮಾರಂಭ / Father Muller Medical College Silver Jubilee- Grand Opening and Ceremonial Ceremony

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ 16 ಅಕ್ಟೋಬರ್ 2023 ರಂದು ಭವ್ಯವಾದ ಉದ್ಘಾಟನಾ ಮತ್ತು ವಿಧ್ಯುಕ್ತ ಸಮಾರಂಭದಲ್ಲಿ ಬೆಳ್ಳಿ ಮಹೋತ್ಸವದ ಗಂಟೆಗಳನ್ನು ಬಾರಿಸಿತು. ಈ ಮೂಲಕ ವೈದ್ಯಕೀಯ ಕಾಲೇಜಿನ ಪದವಿ ಪೂರ್ವ ಕಾರ್ಯಕ್ರಮ ಆರಂಭವಾಗಿ 25 ವರ್ಷ ಕಳೆದಿರುವುದು ಬೆಳಕಿಗೆ ಬಂದಿದೆ. ಅಪರೂಪದಲ್ಲಿ ಫಾದರ್ ಮುಲ್ಲರ್‌ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮದ ನಂತರ ಯುಜಿ ಕಾರ್ಯಕ್ರಮವು ಪ್ರಾರಂಭವಾಯಿತು. ಈ ದಿನ ಎಂಬಿಬಿಎಸ್ ವಿದ್ಯಾರ್ಥಿಗಳ ಬೆಳ್ಳಿಹಬ್ಬದ ಬ್ಯಾಚ್ ಮುಲೇರಿಯನ್ ಫೋಲ್ಡ್‌ಗೆ ದೀಕ್ಷೆ ನೀಡಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕಾಲೇಜಿನವರು ದಿಟ್ಟ ಮತ್ತು ಸ್ಪೂರ್ತಿದಾಯಕ ಸ್ವಾಗತವನ್ನು ವ್ಯಕ್ತಪಡಿಸಿದರು. ಅವರು MBBS ಕಾರ್ಯಕ್ರಮದ ಮುಖ್ಯಾಂಶಗಳು ಮತ್ತು ಹೋರಾಟಗಳ ಕುರಿತು ವಿವರಿಸಿದರು, ಸಮಾಜದಲ್ಲಿ ಗುರುತಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅಪೇಕ್ಷಣೀಯ ಶೈಕ್ಷಣಿಕ ಹೂಡಿಕೆಯಾಗಿದೆ.

ಡೀನ್ ಎಫ್‌ಎಂಎಂಸಿ ಡಾ ಆಂಟೋನಿ ಸಿಲ್ವನ್ ಡಿಸೋಜಾ ಅವರು ವೈದ್ಯಕೀಯ ಕಾಲೇಜಿನ ಭವಿಷ್ಯದ ಪ್ರಯತ್ನಗಳು ಮತ್ತು ಮುಂದಿನ ಶತಮಾನಕ್ಕೆ ಐಕಾನ್ ಆಗಿರುವ ದೊಡ್ಡ, ಜೆನ್ ಆಲ್ಫಾ ಶಿಕ್ಷಣ ಮತ್ತು ಆಡಳಿತಾತ್ಮಕ ಬ್ಲಾಕ್‌ಗಾಗಿ ಮ್ಯಾನೇಜ್‌ಮೆಂಟ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ತಂದರು.

ಮುಖ್ಯ ಅತಿಥಿಗಳಾದ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಘನಾ ಪಿ ಕುಮಾರ್ ಅವರು ವೈದ್ಯರಿಗೆ ಮತ್ತು ಪೊಲೀಸರಿಗೆ ದಾಖಲೆಗಳ ಪ್ರಾಮುಖ್ಯತೆಯೊಂದಿಗೆ ತಮ್ಮ ನಿದರ್ಶನಗಳನ್ನು ವಿವರಿಸಿದರು. ಪ್ರಿಸ್ಕ್ರಿಪ್ಷನ್‌ಗಳು ಸ್ಫುಟವಾಗಿರಬೇಕು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಒಬ್ಬ ಸಾಮಾನ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ವೈದ್ಯರಿಗೆ ಸ್ವಾಭಾವಿಕವಾಗಿರಬೇಕು. ಔಷಧ ಮತ್ತು ಅದರ ಪ್ರಗತಿಗೆ ನಿರಂತರ ಅಪ್‌ಡೇಟ್ ಮತ್ತು ಅಪ್‌ಗ್ರೇಡ್ ಅಗತ್ಯವಿದೆ. ಫಾದರ್ ಮುಲ್ಲರ್ ಅವರ ಹಳೆಯ ವಿದ್ಯಾರ್ಥಿಯಾಗಿ ಅವರು ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ನಂತರ ಅವರು ನಾಗರಿಕ ಸೇವೆಗಳಿಗೆ ಸೇರಿದರು. ಹೀಗಾಗಿ ಹೊಸ ಯುಗ್ ವಿದ್ಯಾರ್ಥಿಗಳನ್ನು ದೊಡ್ಡ ಕನಸು ಕಾಣುವಂತೆ ಪ್ರೋತ್ಸಾಹಿಸಿದರು. ನಿಮ್ಮ ಹೆತ್ತವರ ಸಹಾಯದಿಂದ ದೊಡ್ಡ ಕನಸುಗಳನ್ನು ಕಾಣಿರಿ, ಅವರ ಕನಸುಗಳು ನಿಮ್ಮಲ್ಲಿ ನಿಜವಾಗುತ್ತವೆ.

ಡಾಕ್ಟರ್ ನಾಗೇಶ್ ಕೆಆರ್ (ಫೊರೆನ್ಸಿಕ್ ಮೆಡಿಸಿನ್) ಅವರು ವೈದ್ಯರಿಗೆ ಗೌರವ ಮತ್ತು ಗೌರವವನ್ನು ವಿದ್ಯಾರ್ಥಿಗಳ ಮೇಲೆ ಸ್ಥಾಪಿಸಿದರು. ವೈಟ್ ಕೋಟ್ ಸಮಾರಂಭವು ಔಷಧದ ಸ್ಟ್ರೀಮ್‌ಗೆ ಹೊಸದಾಗಿ ಸೇರ್ಪಡೆಗೊಂಡವರು ತಮ್ಮ ಸುತ್ತಲಿನ ಹೊದಿಕೆಯನ್ನು ಗೌರವಿಸುವ ಒಂದು ಭಾಗವಾಗಿದೆ, ಇದು ಶುದ್ಧತೆ ಮತ್ತು ಸ್ಪಷ್ಟತೆಯನ್ನು ಸಂಕೇತಿಸುತ್ತದೆ.

ಎಂಬಿಬಿಎಸ್ ಕಾರ್ಯಕ್ರಮದ 25 ವರ್ಷಗಳನ್ನು ಗುರುತಿಸಲು ಹಳೆಯ ವಿದ್ಯಾರ್ಥಿಗಳ ಬ್ಯಾಚ್ ಪ್ರತಿನಿಧಿಗಳು 25 ಮೇಣದಬತ್ತಿಗಳೊಂದಿಗೆ ಮರವನ್ನು ಬೆಳಗಿಸಿದರು, ಅಲ್ಲಿ ಎಲ್ಲಾ 25 ಬ್ಯಾಚ್ ಪ್ರತಿನಿಧಿಗಳು ತಮ್ಮ ಅಲ್ಮಾ ಮೇಟರ್‌ನಿಂದ ಕರೆಗೆ ಬಂದರು.
ಕಾಲೇಜಿನ ಏಕತೆ ಮತ್ತು ವೈವಿಧ್ಯತೆಯನ್ನು ಸಾರುವ 25 ವರ್ಷಗಳ ಎಂಬಿಬಿಎಸ್ ಥೀಮ್ ಸಾಂಗ್ ಅನ್ನು ಸಹ ಬಿಡುಗಡೆ ಮಾಡಲಾಯಿತು.

ಮಂಗಳೂರಿನ ಬಿಷಪ್ ಮತ್ತು ಎಫ್‌ಎಂಸಿಐ ಅಧ್ಯಕ್ಷ ಮೋಸ್ಟ್ ರೆ.ಡಾ.ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ಇಡೀ ಫಾದರ್ ಮುಲ್ಲರ್ ದೈವಿಕ ಒಳ್ಳೆಯತನ ಮತ್ತು ನಮ್ರತೆಯನ್ನು ಪ್ರತಿಧ್ವನಿಸಿದರು, ಪ್ರವೇಶದ ಹಾದಿಯು ದೈವಿಕ ನೆಲೆಯಾದ ಪ್ರಾರ್ಥನಾ ಮಂದಿರಕ್ಕೆ ಕಾರಣವಾಗುತ್ತದೆ.
ಇಲ್ಲಿ ಕೆಲಸ ಮಾಡುವ ಎಲ್ಲಾ ಜನರ ಮೇಲೆ ದೈವಿಕ ಬೆಳಕಿನ ಉಪಸ್ಥಿತಿಯು ಹೊಳೆಯುತ್ತದೆ. ಅಧ್ಯಾಪಕರು, ಸಿಬ್ಬಂದಿ ಮತ್ತು ರೋಗಿಗಳು ಖಂಡಿತವಾಗಿಯೂ ಶಾಶ್ವತವಾದ ಪ್ರಭಾವವನ್ನು ರಚಿಸುತ್ತಾರೆ ಆದರೆ ಇಲ್ಲಿ ಶಾಶ್ವತವಾದ ಪ್ರಭಾವವನ್ನು ಬಿಡುವುದು ನಿಮ್ಮ ಜವಾಬ್ದಾರಿಯಾಗಿದೆ. 1880 ರಲ್ಲಿ ಪ್ರಾರಂಭವಾದ ಈ ಆಸ್ಪತ್ರೆಯು ಕಂಕನಾಡಿಗೆ ಸಮಾನಾರ್ಥಕವಾಗಿದೆ, ಇದು ಈ ಸಂಸ್ಥೆಗಳಿಂದಾಗಿ ಎತ್ತರಕ್ಕೆ ಏರಿತು. ಎಫ್‌ಎಂಸಿಐ ಬ್ಯಾನರ್‌ಗಳ ಅಡಿಯಲ್ಲಿ ಯಾವುದೇ ಕಾಲೇಜು ಯಾವುದಕ್ಕೂ ಕೊರತೆಯಿಲ್ಲ, ಹೆಚ್ಚಿನ ನೈತಿಕ ಮತ್ತು ನೈತಿಕ ಮಾನದಂಡಗಳನ್ನು ಹೊಂದಿಸಲಾಗಿದೆ.

ವೇದಿಕೆಯಲ್ಲಿ ಫಾದರ್ ಅಜಿತ್ ಬಿ ಮೆನೆಜಸ್ ಅವರು ಅತಿಥಿಗಳು ಮತ್ತು ಸದಸ್ಯರಿಗೆ 25 ವರ್ಷಗಳ ಸ್ಮರಣಿಕೆಯನ್ನು ನೀಡಿದರು ಮತ್ತು ಎಫ್‌ಎಂಎಂಸಿಯ ಯುಜಿ ಕಾರ್ಯಕ್ರಮದ ರಜತ ಮಹೋತ್ಸವದ ಆಚರಣೆಯ 25 ವರ್ಷಗಳ ಲೋಗೋವನ್ನು ನೆರವೇರಿಸಿದರು.

ಡಾ.ಗಣೇಶ್ ಎಂ.ಕೆ (ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್) ವಂದಿಸಿದರು. ಡಾ ಜಾಯ್ಲೀನ್ ಡಿ’ಅಲ್ಮೇಡಾ (OBGYN) ಕಾರ್ಯಕ್ರಮವನ್ನು ನಿರೂಪಿಸಿದರು. ಫಾದರ್ ಮುಲ್ಲರ್ ಸೆಂಟಿನರಿ ಸೊಸೈಟಿಯ ಸದಸ್ಯರು, ಸಲಹಾ ಮಂಡಳಿ, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷ ಆಹ್ವಾನಿತರು ಎಂಬಿಬಿಎಸ್ ವಿದ್ಯಾರ್ಥಿಗಳ ರಜತ ಮಹೋತ್ಸವ ಬ್ಯಾಚ್‌ನ ಹೊಸ ಸೇರ್ಪಡೆಗೊಂಡವರ ಪೋಷಕರು.

Father Muller Medical College Silver Jubilee- Grand Opening and Ceremonial Ceremony

The Father Muller Medical College rang it’s silver Jubilee bells on 16 October 2023 in a grand inaugural and ceremonial event. This brings to light the 25 years of commencement of the under graduate programme of the medical College. Though in a rarity the UG programme commenced after the Post Graduate programme at Father Muller. The day marked the intiation of the silver Jubilee batch of MBBS students into the mullerian fold too.
A bold and inspiring welcome was voiced by the Director of the Father Muller Charitable Institutions Rev. Fr Richard Aloysius College. He briefed on highlights and struggles of the MBBS programme coming to light, making it a desirable educational investment by students wanting toake a mark in the society.

Dean FMMC Dr Antony Sylvan D’Souza brought about the future endeavours of the medical College and the aspirations of the management, faculty and students for a bigger, gen alpha education cum administrative block that will be an icon for the next century to come.

The chief guest Ms Ghana P Kumar, Deputy Superintendent of Police, Puttur Sub division related her instances with the importance of documentation both for a doctor and same for a police. Prescriptions should be legible not decipherable and making a comman man a human should natural to a doctor. Medicine and it’s advances needs constant updating and upgrading. As a alumni from Father Muller she pursued post graduation in Pathology and thereafter she joined the Civil Services . She thus encouraged the new ug students to dream big. Dream big with the help of your parents whose dreams come to reality in you.

The honours and respect to the Doctors Apron was instituted by Dr Nagesh KR (forensic medicine) upon the students. The White Coat ceremony is a part where the new joinees into the medicine stream respects the drape around them which symbolises purity and clarity.

To mark the 25 years of the MBBS programme a tree was lite by the alumni batch representatives with 25 candles marking yet another fete where all 25 batch representatives came in on call from their Alma Mater.
The 25 years of MBBS theme song was also released which brings in the unity and diversity of the college.

Most Rev. Dr Peter Paul Saldanha, Bishop of Mangalore and President of FMCI in his address said that the whole Father Muller echoed the goodness and humility of the divine, the path of entrance leads to the chapel, the home of the Divine.
The presence of the Divine Light shines on all the people who work here. A lasting impression will surely be created by the faculty, staff and patients but its your responsibility to leave a lasting impression here. This hospital which began in 1880 is synonymous with Kankanady which got elevated because of this instutions. No one college under the FMCI banners lacks anything, high moral and ethical standards are set.

Fr Ajith B Menezes presented the guests and members on the dais the 25 year memento and officiated the 25 year logo of the Silver Jubilee celebration of the UG programme of FMMC.

Dr Ganesh MK (Surgical Gastroenterologist) presented the vote of thanks. Dr Joylene D’Almeida (OBGYN) compeered the event. Members of the Father Muller Centenary Society, advisory board, faculty and staff were part of the event. Special invitees were the parents of the new joinees of the Silver Jubilee batch of MBBS students.