“ಐಕ್ಯಂ”ನ ಅಂಗವಾಗಿ ಮೂಡ್ಲಕಟ್ಟೆ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್& ಕಾಮರ್ಸ್ ಕಾಲೇಜಿನ ಕ್ರೀಡೋತ್ಸವ ಗಾಂಧಿ ಮೈದಾನದಲ್ಲಿ ಜರುಗಿತು

ಕುಂದಾಪುರ: ಅ:06: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್&ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ “ಐಕ್ಯಂ”ನ ಅಂಗವಾಗಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು.

ಟಾರ್ಪಿಡೋಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಗೌತಮ್ ಶೆಟ್ಟಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡೆಯಲ್ಲಿಯೂ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮನ್ನು ನಾವು ಮೊದಲು ಪ್ರೀತಿಸಿದರೆ ಜೀವನದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದು.“ಎಲ್ಲವೂ ಸಾಧ್ಯ ಆದರೆ ಸುಲಭವಲ್ಲ”. ಮೊದಲು ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ನಮ್ಮಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಾವು ನಿತ್ಯವೂ ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ತೃಪ್ತಿ ಇರಬೇಕು.ಮುಂದೊಂದುದಿನ ನಾನು ಇನ್ನೂ ಉತ್ತಮವಾಗಿ ಆಡಬಹುದಿತ್ತು ಎನ್ನುವ ಆಲೋಚನೆ ನಮ್ಮಲ್ಲಿ ಬರಬಾರದು. ಸೋಲು ಗೆಲುವು ನಮ್ಮ ಬದುಕಿನ ಒಂದು ಭಾಗ, ಮರಳಿ ಪ್ರಯತ್ನವನ್ನು ನಾವು ಮಾಡಲೇಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್ ಇವರು“ಕ್ರೀಡೆ ನಮ್ಮಲ್ಲಿನ ದೌರ್ಬಲ್ಯವನ್ನು ತೊರೆಯುವಂತೆ ಮಾಡಿ ಜೀವನದ ಮೌಲ್ಯಗಳನ್ನು ನಮಗೆ ಕಲಿಸುತ್ತದೆ”ಎಂದುತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪ್ರೊ|ಜೆನಿಫರ್ಡ್ ಮಿನೇಜಸ್ ಹಾಗೂ ಐಎಂಜೆಐ ಎಸ್ಸಿಯ ಉಪ ಪ್ರಾಂಶುಪಾಲರಾದ ಪ್ರೊ|ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿ,ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿಸಿಎ ವಿಭಾಗದ ವಿದ್ಯಾರ್ಥಿನಿಯರಾದ ಕು| ಸಿಂಚನ ಸ್ವಾಗತಿಸಿ,ವಂದಿಸಿದರು.ಕು|ಪ್ರತಿಭಾ ಗಣ್ಯರ ಕಿರು ಪರಿಚಯವನ್ನು ಮಾಡಿದರು. ಕು| ಭಾನುಮತಿ ಪ್ರಾರ್ಥಿಸಿದರು.ಕು|ರಶಿತಾ ನಿರ್ವಹಿಸಿದರು.

ದ್ವಿತೀಯ ಬಿ ಸಿ ಎ ವಿಭಾಗದ ವಿದ್ಯಾರ್ಥಿಗಳಾದ ಕು| ನಿರೋಷ ಮತ್ತು ಕು|ನಿತಿನ್ ರವರು ಚಾಂಪಿಯನ್ ಶಿಪ್ ಪಡೆದುಕೊಂಡರು. ಹಾಗೆಯೇ ಓವರಾಲ್ ಚಾಂಪಿಯನ್ಶಿಪ್ ಅನ್ನು ರೆಡ್ ಈಗಲ್ಸ್ ತಂಡಪಡೆದುಕೊಂಡಿತು.

ಇಸ್ರೇಲ್-ಪ್ಯಾಲೆಸ್ಟೈನ್ 3 ನೇ ದಿನದ ಸಂಘರ್ಷ ಇತ್ತೀನ ಸುದ್ದಿ ; ಹಮಾಸ್‌ನೊಂದಿಗಿನ ಯುದ್ಧದಲ್ಲಿ ಸಾವಿನ ಸಂಖ್ಯೆ 1,100 ಕ್ಕಿಂತ ಎರಿತು

ಹಮಾಸ್ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ಗಳ ಸುರಿಮಳೆಗೈದ ಒಂದು ದಿನದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು “ದೀರ್ಘ ಮತ್ತು ಕಷ್ಟಕರ” ಸ್ಥಿತಿಯಾಗಿದೆ, ಎಂದು ತಿಳಿಸಿ ಯುದ್ದಕ್ಕೆ ಪ್ರೇರಣೆಯನ್ನು ನೀಡಿದ್ದಾರೆ

ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಹಮಾಸ್ ಗುಂಪು ಗಾಜಾದಿಂದ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ ಸಂಘರ್ಷದ ಸಾವಿನ ಸಂಖ್ಯೆ 1,100 ಕ್ಕಿಂತ ಹೆಚ್ಚಾದ ಕಾರಣ ಇಸ್ರೇಲ್, ತನ್ನ ಭೂಪ್ರದೇಶದ ಮೇಲೆ ಮಾರಣಾಂತಿಕ ದಾಳಿಯಿಂದ ತತ್ತರಿಸಿದ್ದು, ಹಮಾಸ್ ಭಾನುವಾರದ ಮೇಲೆ ಯುದ್ಧ ಘೋಷಿಸಿತು.

ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ಸುರಿಮಳೆಗೈದ ಮತ್ತು ನಾಗರಿಕರನ್ನು ಹೊಡೆದುರುಳಿಸಿದ ಮತ್ತು ಕನಿಷ್ಠ 100 ಒತ್ತೆಯಾಳುಗಳನ್ನು ತೆಗೆದುಕೊಂಡ ಹೋರಾಟಗಾರರ ಅಲೆಯನ್ನು ಕಳುಹಿಸಿದ ಒಂದು ದಿನದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು “ದೀರ್ಘ ಮತ್ತು ಕಷ್ಟಕರ” ಯುದ್ಧಕ್ಕೆ ಪ್ರೇರಣೆಯನ್ನು ನೀಡಿದ್ದಾರೆ

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ಅಕ್ಟೋಬರ್ 8 ರ ಇತ್ತೀಚಿನ ಸುದ್ದಿಗಳು

ಸೋಮವಾರದಂದು ಇಸ್ರೇಲ್ ರಕ್ಷಣಾ ಪಡೆಗಳ (IDF) ಇತ್ತೀಚಿನ ಟೋಲ್ ಪ್ರಕಾರ ಹಮಾಸ್ ತನ್ನ ದೊಡ್ಡ-ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದಾಗಿನಿಂದ 700 ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ — 1973 ರ ಅರಬ್-ಇಸ್ರೇಲಿ ಯುದ್ಧದ ನಂತರ ದೇಶಕ್ಕೆ ಅತ್ಯಂತ ಕೆಟ್ಟದಾದ  ನಷ್ಟ ಇದಾಗಿದೆ

ಗಾಜಾದ ಅಧಿಕಾರಿಗಳು 2.3 ಮಿಲಿಯನ್ ಜನರ ಬಡ ಮತ್ತು ನಿರ್ಬಂಧಿತ ಎನ್‌ಕ್ಲೇವ್‌ನಲ್ಲಿ ಕನಿಷ್ಠ 413 ಸಾವುಗಳನ್ನು ವರದಿ ಮಾಡಿದ್ದಾರೆ. ಇದು 800 ಜನರ ಗುರಿಗಳ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಿಂದ ಸುತ್ತಿಗೆಗೆ ಒಳಗಾದ ನೆಲದ ಆಕ್ರಮಣ ಎಂದು ಅನೇಕರು ಭಯಪಡುತಿದ್ದಾರೆ. ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಸ್ರೇಲ್ ‌ನಲ್ಲಿನ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಹೆಲ್ಪ್ ಲೈನ್ ಆರಂಭ/Helpline launched by state government for Kannadigas in Israel

ಬೆಂಗಳೂರು: ಇಸ್ರೇಲ್ ಮೇಲೆ ಪ್ಯಾಲೇಸ್ತೀನಿನ ಹಮಾಸ್ ಉಗ್ರರು ಭೀಕರ ರಾಕೆಟ್ ದಾಳಿ ನಡೆಸಿದ್ದರಿಂದ ಇಸ್ರೇಲ್ ಯುದ್ಧ ಘೋಷಿಸಿದೆ. ಇದರಿಂದ ಇಸ್ರೇಲ್‌ ನಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಕಷ್ಟದಲ್ಲಿದ್ದಾರೆ. ಅದರಲ್ಲಿಯೂ ನಮ್ಮ ರಾಜ್ಯದ ದ.ಕನ್ನಡ ಉಡುಪಿ ಮತ್ತು ಉ.ಕನ್ನಡದವರು ಅನೇಕರಿದ್ದಾರೆ ಹೀಗಾಗಿ ಅಲ್ಲಿನ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ತೆರೆದಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಕೇಂದ್ರದ ಸಹಾಯವಾಣಿ 080 22340676 ಹಾಗೂ 080 22253707 ಸಂಪರ್ಕಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Helpline launched by state government for Kannadigars in Israel

Bengaluru: Israel has declared war because Palestinian Hamas terrorists launched a terrible rocket attack on Israel. Due to this, thousands of Indians including Kannadigas living in Israel are suffering. There are many people from our state Kannada Udupi and U. Kannada, so the state government has opened a helpline for the help of Kannadigas there.

We are in close touch with the Union Ministry of External Affairs. Chief Minister Siddaramaiah said that the center’s helpline number 080 22340676 and 080 22253707 can be contacted.

ಶ್ರೀ ವೀರಾಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಪೂರ್ವಭಾವಿ ಸಭೆ

ಶ್ರೀ ವೀರಾಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಾಂತಾವರ ಹಾಗೂ ಜೀರ್ಣೋದ್ಧಾರ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 08-10-2023ರಂದು ನಡೆದ ಊರ ಗ್ರಾಮಸ್ಥರ ಹಾಗೂ ಸಾರ್ವಜನಿಕರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಬಗ್ಗೆ ಸಮಾಲೋಚನೆಯ ಪೂರ್ವಭಾವಿ ಸಭೆಯು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಸ್. ರತ್ನಾಕರ್ ಶೇರೆಗಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಕಂದಾವರ ಗ್ರಾಮ ಪಂಚಾಯತ್ ಸದಸ್ಯರು, ಬಸ್ರೂರು ವ್ಯವಸಾಯ ಸೇವಾ ಸಂಘದ ನಿರ್ದೇಶಕರು ಹಾಗೂ ಶ್ರೀ ವೀರಾಂಜನೇಯ ಮಿತ್ರ ವೃಂದ್ರ (ರಿ.) ಅಧ್ಯಕ್ಷರಾದ ಎಸ್. ಶೀನ ಪೂಜಾರಿ ಇವರು ದೇವಸ್ಥಾನದ ಈ ಹಿಂದೆ ನಡೆದು ಬಂದ ಬಗ್ಗೆ ಸವಿಸ್ತಾರವಾಗಿ ಹೇಳಿದರು.
ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪೂಜಾರಿಯವರು ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯದ ಬಗ್ಗೆ ಭಕ್ತಾದಿಗಳಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕಾರ ನೀಡಬೇಕಾಗಿ ಕೇಳಿಕೊಂಡರು. ಧಾರ್ಮಿಕ ಮುಖಂಡ ಕೃಷ್ಣದೇವ ಕಾರಂತರು ಹೇಗೆ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು. ಪುರೋಹಿತರಾದ ಶ್ರೀಪತಿ ಕಂಬಿಕಲ್ಲಿ ಕಕ್ಕುಂಜಿ ಇವರು ದೇವಸ್ಥಾನ 800 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ವೀರಾಂಜನೇಯ ದೇವಸ್ಥಾನವಾಗಿರುತ್ತದೆ. ಧಾರ್ಮಿಕ ವಿಧಿ ವಿಧಾನ ದೇವಸ್ಥಾನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ವಕೀಲರಾದ ರತ್ನಾಕರ ಶೆಟ್ಟಿ ಸಟ್ವಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಜೀರ್ಣೋದ್ಧಾರದ ಕಾರ್ಯದಲ್ಲಿ ಸಹಕಾರ ನೀಡವುದಾಗಿ ಭರವಸೆಯನ್ನು ನೀಡಿರುತ್ತಾರೆ. ವೇದಿಕೆಯಲ್ಲಿ ಕಂದಾವರ ಗ್ರಾಮ ಪಂಚಾಯತಿನ ಅಧ್ಯಕ್ಷಾರಾ ಅನುಪಮ ಶೆಟ್ಟಿ, ಮಾಜಿ ಉಪಾಧ್ಯಕ್ಷ ಶೋಭಾ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಸಂಜೀವ ಮೇಸ್ತ, ಉದ್ಯಮಿ ದಿನಕರ ಶೆಟ್ಟಿ, ಗ್ರಾಮ ಪಂಚಾಯತಿನ ಸದಸ್ಯರಾದ ಅಭಿಜಿತ್ ಕೊಠಾರಿ, ಊರಿನ ಹಿರಿಯರಾದ ಗೋಪಾಲ ಎನ್. ಉಗ್ರಾಣಿ, ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು. ಸ್ವಾಗತವನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ವೀರಾಂಜನೇಯ ಮಿತ್ರ ವೃಂದ (ರಿ.) ಇದರ ಕಾರ್ಯದರ್ಶಿಯಾದ ಸುರೇಶ್ ಕೋಟೆಗಾರ್, ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಎನ್. ಉಗ್ರಾಣಿ ನಿರೂಪಿಸಿದರು. ಸತ್ಯನಾರಾಯಣ ಜಿ. ಧನ್ಯವಾದ ಅರ್ಪಿಸಿದರು.