ಕುಂದಾಪುರ್ – ರೊಜಾರ್ ಸಾಯ್ಬಿಣಿಚ್ಯಾ ಫೆಸ್ತಾಕ್ ಫಾ|ಪಿಯೂಸ್ ಥಾವ್ನ್ ಭೋವ್ ಅರ್ಥಾಭರಿತ್ ರೆತಿರ್


ಕುಂದಾಪುರ್, ಅ.6: 453 ವರ್ಸಾಂ ಚರಿತ್ರಾ ಆಸ್ಚ್ಯಾ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಕುಂದಾಪುರ್ ಫಿರ್ಗಜ್ ತಾರೀಕೆ ಫೆಸ್ತಾ ಖಾತಿರ್ ಆಸಾ ಕೆಲ್ಲಿ ರೆತಿರ್ ಅ.4 ವೇರ್ ಆರಂಭ್ ಜಾಲ್ಲಿ ರೆತಿರ್ ಭೋವ್ ಅರ್ಥಭರಿತ್ ಆಸೊನ್ 6 ವೇರ್ ಸಂಪ್ಪನ್ ಜಾಲಿ.
ಹೊಸನಗರ ಫಿರ್ಗಜೆಚೊ ವಿಗಾರ್, ಶಿವಮೊಗ್ಗ ದಿಯೆಸಿಜಿಚೊ ಯುವಜಣಾಂಚೊ ನಿರ್ದೇಶಕ್ ಮಾ|ಬಾ|ಪಿಯುಸ್ ಡಿಸೋಜಾ ಹಾಣಿ ಚಲವ್ನ್ ವೆಲಿ. ರೆತಿರ್ ಭೋವ್ ಅರ್ಥಾಭರಿತ್ ಜಾವ್ನಾಸೊನ್ ಎಕ್ ವಿನೂತನ್ ಶಿಕವ್ಣ್ ಜಾವ್ನಾಸ್ಲಿ.
‘ಆಮ್ಚೊ ಅತ್ಮೊ ದುದಾಚ್ಯಾ ಆಯ್ದಾಣಾ ಬರಿ ನಿತಳ್ ಕರಿಜೆ, ನಾ ತರ್ ದೂದ್ ಪುಟಲ್ಯಾ ಬರಿ, ಜಾವ್ನ್ ದೆವಾಚೆ ಉತರ್ ಆಮ್ಚೆ ಭಿತರ್ ರಿಗನಾ, ಭೊಗ್ಸಾಣೆಚೆ ಮಹತ್ವ್ ಕಳವ್ನ್ ರೆತಿರೆಕ್ ಆಯ್ಲ್ಯಾ ಥಾವ್ನ್ ಹರ್ಯೇಕ್ಲ್ಯಾಕ್ ಏಕಾಮೆಕಾ ಭೊಗ್ಸಾಣೆ ಮಾಗಾಸೆಂ ಕೆಲ್ಲೆಂ ಭೋವ್ ಅಪ್ರೂಪ್. ತಿಸ್ರ್ಯಾ ದಿಸಾ ಕುಟ್ಮಾಚ್ಯಾ ಮಹತ್ವಾ ವಿಶಿಂ ಅರ್ಥಾಭರಿತ್ ಶಿಕವ್ಣ್ ದಿಲಿ. ಲ್ಹಾನಾಂ ಭುಗ್ರ್ಯಾ ಪಾಸೊತ್, ಯವ ಜಣಾ ಪಾಸೊತ್, ಪೀಡೆಸ್ತ್ ಆನಿ ಮಲ್ಗಾಡ್ಯಾ ಪಾಸೊತ್ ಪ್ರಾರ್ಥನಾಂ ಅಶೆಂ ರೆತಿರ್ ಅನೇಕ್ ವಿಶ್ಯಾಂತ್ ಅತ್ಮಿಕ್ ಗರ್ಜೆ ಖಾತಿರ್ ಅರ್ಥಾಭರಿತ್ ಜಾವ್ನಾಸ್ಲಿ. ಹ್ಯಾ ರೆತಿರೆ ವೆಳಾರ್ ವಿಲ್ಸಟನ್ ಗೊನ್ಸಾಲ್ವಿಸ್ (ಮೈಸೂರ್) ಆನಿ ಫಿರ್ಗಜ್ ಗಾಯನ್ ಮಂಡಳೆನ್ ಗಾಯಾನಾಕ್ ಸಹಕಾರ್ ದಿಲೊ.
ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ರೆತಿರೆ ವೆಳಾರ್ ಸದಾಂಯಿ ಬಲಿದಾನಾಂತ್ ಭಾಗ್ ಘೆತ್ಲೊ ಮಾತ್ರ್ ನ್ಹಯ್ ಸಂಪುರ್ಣ್ ರೆತಿರೆಂತ್ ಭಾಗ್ ಘೆಂವ್ನ್ ಸರ್ವಾಂಚ್ಯಾ ಸಹಕಾರಾಕ್ ಧನ್ಯವಾದ್ ಪಾಟಯ್ಲೆ.

ಕಥೋಲಿಕ್ ಸಭಾ ಬಸ್ರೂರು ಘಟಕದಿಂದ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ

ಬಸ್ರೂರು ಪಂಚಾಯತ್ ಪರಿಸರದಲ್ಲಿ ಕಥೋಲಿಕ್ ಸಭಾ ಬಸ್ರೂರು ಘಟಕದಿಂದ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ನೆಡಸಾಲಾಯಿತು. ಗ್ರಾಮ‌ ಪಂಚಾಯತ್ ಅಧ್ಯಕ್ಷರು ಬೇಳೂರು ದಿನಕರ ಶೆಟ್ಟಿ ಊರನ್ನು ಸ್ವಚ್ಚವನ್ನಾಗಿ ಇಡುವುದು ನಮ್ಮೆಲ್ಲರ ಹಕ್ಕು , ಇದಕ್ಕೆ ಜಾತಿ ಧರ್ಮ ಇಲ್ಲ. ದೇಶದ ಪ್ರಧಾನಿ ಸಹ ದೇಶದ ಜನತೆಯೊಂದಿಗೆ ಕೈ ಜೋಡಿಸಿ ಸ್ವಚತೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು

ಕಥೋಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷ ವಿಕ್ರಮ್ ಡಿ’ ಸೋಜ ಭಾಗಿಯಾದವರಿಗೆ ಹ್ಯಾಂಡ್ ಗ್ಲೌಸ್ ಕೊಟ್ಟು ಚಾಲನೆ ನೀಡಿದರು. ಕಥೊಲಿಕ್ ಬಸ್ರೂರು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಸೇರಿ ಸ್ವಚತ ಕಾರ್ಯದಲ್ಲಿ ಭಾಗಿಯಾದರು. ಕಾರ್ಯಕ್ರಮವನ್ನು ಮೇಬಲ್ ಡಿ’ ಸೋಜ ನಿರೂಪಿಸಿದರು.

ಅಖಿಲ ಭಾರತ ಕೊಂಕಣಿ ರಜತ ಸಮ್ಮೇಳನದ ಲಾಂಛನ ಬಿಡುಗಡೆ

ಮಂಗಳೂರು “ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಸಂಭ್ರಮಿಸುವ ಹಬ್ಬಗಳಾಗಿದ್ದು, 1939 ರಲ್ಲಿ ಕುಮಟಾದ ವಕೀಲ ಮಾಧವ ಮಂಜುನಾಥ ಶಾನುಭಾಗರ ದೂರದೃಷ್ಟಿಯ ಫಲಶೃತಿ ಅಖಿಲ ಭಾರತ ಕೊಂಕಣಿ ಪರಿಷತ್ ಈ ವರೆಗೆ ದೇಶದ ನಾನಾ ಭಾಗಗಳಲ್ಲಿ 24 ರಾಷ್ಟ್ರ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದು, 2023 ನವೆಂಬರ್ 4 – 5 ಎರಡು ದಿನ, ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿನಾಯತಿ ನೀಡಲಾಗಿದೆ. ಪ್ರತಿನಿಧಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದ್ದು ಒನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ. ” ಎಂದು 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಂಕಣಿ ಕವಿ, ಚಿಂತಕ, ರಾಹುಲ್ ಎಡ್ವಟೈಸರ್ಸ್ ಮಾಲಕ ಟೈಟಸ್ ನೊರೊನ್ಹಾ ಮಾಹಿತಿ ನೀಡಿದರು. 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಸಂಚಾಲಕ ಖ್ಯಾತ ಕಲಾವಿದ ಪಿಂಟೊ ವಾಮಂಜೂರ್ ಸಮ್ಮೇಳನದ ಲಾಂಛನವನ್ನು ತಯಾರಿಸಿದ್ದಾರೆ.

ಹಿರಿಯ ಪತ್ರಕರ್ತ, 1974 ರಲ್ಲಿ ಕರ್ನಾಟಕದಲ್ಲಿ ಕೊಂಕಣಿ ಭಾಷಾ ಮಂಡಳದ ಸ್ಥಾಪನೆಗಾಗಿ ಶ್ರಮಿಸಿದ, ಶ್ರೀಮತಿ ವಿಮಲಾ ವಿ. ಪೈ ಜೀವನ ಸಿದ್ದಿ ಪ್ರಶಸ್ತಿ ಪುರಸ್ಕೃತ, ರಾಕ್ಣೊ ಪತ್ರಿಕೆಯ ವಿಶ್ರಾಂತ ಸಂಪಾದಕ ಫಾ| ಮಾರ್ಕ್ ವಾಲ್ಡರ್ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗೋಕುಲದಾಸ ಪ್ರಭು ನೋಂದಣಿ ಪುಸ್ತಕ ಬಿಡುಗಡೆ ಮಾಡಿದರು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ನೊ) ಅಧ್ಯಕ್ಷ ಆಲ್ವಿನ್ ಡಿ’ಸೊಜಾ, ಪಾನೀರ್ ಕ್ಯೂ ಆರ್ ಕೋಡ್ ಮೂಲಕ ಒನ್‌ಲೈನ್ ನೋಂದಣಿಗೆ ವಿಧ್ಯುಕ್ತ ಚಾಲನೆ ನೀಡಿದರು. ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ್ ಉಭಯ್‌ಕರ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪತ್ರಕರ್ತ ಎಚ್. ಎಂ. ಪೆರ್ನಾಲ್ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್ ವಂದಿಸಿದರು.

ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಕ್ರೀಡಾಕೂಟ 2023

ಮಂಗಳೂರು ಉತ್ತರ ವಲಯ, ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್3, ಮತ್ತು 4, 2023 ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.  ದ. ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಬೊಂದೇಲ್ ಇವರ ಸಹಯೋಗದಲ್ಲಿ ಕ್ರೀಡಾಕೂಟವನ್ನು ಸಂಭ್ರಮದಿಂದ ಉದ್ಘಾಟಿಸಲಾಯಿತು. 

ಉದ್ಘಾಟನಾ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾ. ಆಂಟನಿ ಸೇರಾ, ಅಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ವಲಯ ಶ್ರೀ ಜೇಮ್ಸ್ ಕುಟಿನ್ಹಾ, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ರವರು ಧ್ವಜಾರೋಹಣ ನೆರವೇರಿಸಿದರು. 

ಕ್ರೀಡಾಕೂಟವನ್ನು ಸಂಘಟಿಸಿದ ಸೈಂಟ್ ಲಾರೆನ್ಸ್ ಶಾಲೆಯ  ವಿದ್ಯಾರ್ಥಿಗಳಿಂದ ಸುಂದರವಾದ ನೃತ್ಯ, ಲೇಡಿ ಹಿಲ್ ಶಾಲೆಯ ಮಕ್ಕಳಿಂದ ಬ್ಯಾಂಡ್ ನಾದ. ಕ್ರೀಡಾಪಟುಗಳಿಂದ ಪಥ ಸಂಚಲನ ಪ್ರದರ್ಶಿಸಲಾಯಿತು. 

ವೇದಿಕೆಯಲ್ಲಿ  ಶ್ರೀ ಜಿ ಉಸ್ಮಾನ್  ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ.

ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ವಂದನೀಯ ಫಾ ಪೀಟರ್ ಗೊನ್ಸಾಲ್ವಿಸ್  ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ಇದರ ಮುಖ್ಯ ಶಿಕ್ಷಕರು, ಶ್ರೀ ಜಾನ್ ಡಿಸಿಲ್ವಾ  ಸೇಂಟ್ ಲಾರೆನ್ಸ್  ಚರ್ಚಿನ ಉಪಾಧ್ಯಕ್ಷರು, ಶ್ರೀ ವಿನೋದ್ ಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಸೇಂಟ್ ಲಾರೆನ್ಸ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಮ್ಯಾ ಶೆಟ್ಟಿ , ಶ್ರೀಮತಿ ಆಶಾ ನಾಯಕ್ ಜಿಲ್ಲಾ ಉಪಾಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಹರೀಶ್ ರೈಬಿ ಜಿಲ್ಲಾ ಕಾರ್ಯದರ್ಶಿ ದಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ರಾಘವೇಂದ್ರ ಅಧ್ಯಕ್ಷರು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಉತ್ತರ ವಲಯ, ಶ್ರೀಮತಿ ಚೆಲುವಮ್ಮ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಜೈರಾಮ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶ್ರೀ ಉಮೇಶ್ ಅಧ್ಯಕ್ಷರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ, ಶ್ರೀ ಹರಿಪ್ರಸಾದ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ,  ಶ್ರೀಮತಿ ಪ್ರೇಮಲತಾ ಸಿ ಆರ್ ಪಿ ಕಾವೂರು ಕ್ಲಸ್ಟರ್,  ಹಾಗೂ ಇತರ ಸಿ ಆರ್ ಪಿ ಹಾಗೂ ಬಿ ಆರ್ ಪಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತದನಂತರ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಜೊತೆಗೂಡಿ ವಿವಿಧ ಅಥ್ಲೆಟಿಕ್ಸ್ ಕ್ರೀಡೆಗಳನ್ನು ತಾಲೂಕಿನ ಪ್ರತಿಭಾನ್ವಿತ ಕ್ರೀಡಾಳುಗಳಿಗೆ ನಡೆಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

ಅಕ್ಟೋಬರ್ 4 ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶ್ರೀ ಜಿ ಉಸ್ಮಾನ್  ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ ಇವರು ಭಾಗವಹಿಸಿದ ಹಾಗು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ಕ್ರೀಡೆಯನ್ನು ಸಂಘಟಿಸಿದ ಸ್ವಂತ ಲಾರೆನ್ಸ್  ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. 

ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಇಲಾಖೆಯ ಈ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಿ ಕೊಟ್ಟಂತಹ ಎಲ್ಲರಿಗೆ ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸಂಚಾಲಕರು ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ವೈಯುಕ್ತಿಕ ಚಾಂಪಿಯನ್ ಹಾಗೂ ಗ್ರೂಪ್ ಚಾಂಪಿಯನ್ಶಿಪ್ ಟ್ರೋಪಿಗಳನ್ನು ನೀಡಿ ಗೌರವಿಸಿದರು.