ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು-ಚಲಪತಿ

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಉದ್ಘಾಟಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಜತೆಗೆ ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಲೆಗೆ ಎರಡು ಬಾರಿ ಪರಿಸರ ಶಾಲೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರಿ ಶಾಲಾ ಶಿಕ್ಷಕ ಎಸ್.ಆರ್.ಧರ್ಮೇಶ್ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳೂ ರೂ.10 ಸಾವಿರ ಮೀಸಲಿಟ್ಟಿದ್ದಾರೆ. ಅಂಥ ನಿಸ್ವಾರ್ಥ ದಾನಿಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
ರಂಗಕರ್ಮಿ ಪಿ.ನಾಗರಾಜ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಮುಖ ಪಾತ್ರ ವಹಿಸಿದೆ. ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಒದಗಿಸುತ್ತಿದೆ. ಗ್ರಾಮಸ್ಥರೂ ಸಹ ಶಾಲೆ ವಿಷಯದಲ್ಲಿ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಆದ್ದರಿಂದಲೆ ಶಾಲೆ ಪ್ರಗತಿ ಪಥದಲ್ಲಿ ಸಾಗಿದೆ ಎಂದು ಹೇಳಿದರು.
ಶೀಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಮಾತನಾಡಿ, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಮಕ್ಕಳ ಸೇವೆಯನ್ನು ದೇವರ ಸೇವೆಯೆಂದು ತಿಳಿದು ಮಾಡುತ್ತಿದ್ದೇನೆ. ಮಕ್ಕಳೇ ಸಮಾಜದ ನಿಜವಾದ ಆಸ್ತಿ. ಅವರು ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೊಡುವುದರಲ್ಲಿ ಇರುವ ತೃಪ್ತಿಯೇ ಬೇರೆ. ಅದನ್ನು ಕೊಟ್ಟು ಅನುಭವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಬಣ್ಣದ ಬಟ್ಟೆ ವಿತರಿಸಲಾಯಿತು. ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಶಿವಣ್ಣಾಚಾರ್, ಸಿಆರ್‍ಪಿ ರೂಪ, ಎಸ್.ಆರ್.ಧರ್ಮೇಶ್, ಮುನೇಗೌಡ, ನಂಜಪ್ಪ, ನಾಗೇಶ್, ಗೋಪಾಲಪ್ಪ, ಅಶ್ವತ್ಥಪ್ಪ, ಹರೀಶ್, ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀನಿವಾಸ್, ಕೆ.ಸಿ.ಕೃಷ್ಣ, ಕೆ.ಸಿ.ಶ್ರೀನಿವಾಸ್, ಸಂತೋಷ್, ಶಿವು, ಸುಶೀಲಮ್ಮ, ವಿ.ಮಂಗಳ ಇದ್ದರು.

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಪೌರಕಾರ್ಮಿಕರು ನಿಜವಾದ ಕ್ಷೇಮ ಪಾಲಕರು. ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆ ಮೂಲಕ ನಾಗರಿಕರ ಪ್ರೀತಿ ಹಾಗೂ ಗೌರಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಪಟ್ಟಣದ ನಾಗರಿಕರಿಗೆ ನೀರು ಹಂಚಿಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದರದ ಮೂಲಕ ನಾಗರಿಕರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರ ಬಗ್ಗೆ ಲಘುವಾಗಿ ಮಾತನಾಡಬಾರದು. ಅವರು ನಿರ್ವಹಿಸುವ ಕೆಲಸ ಯಾವುದೇ ದೊಡ್ಡ ಕಾರ್ಯಕ್ಕಿಂತ ಕಡಿಮೆಯದಲ್ಲ. ಅವರು ವೈಯಕ್ತಿಕ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ರೂ.25 ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುವುದು. ಪಟ್ಟಣದ ಹೊರವಲಯದಲ್ಲಿನ ಅಮಾನಿ ಕೆರೆ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕೆ ಪೂರಕವಾಗಿ ಬೇರೆ ಕೆರೆಗಳಿಂದ ಅಮಾನಿ ಕೆರೆಗೆ ಮಳೆ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಚರಂಡಿ ಸ್ವಚ್ಛತೆಗೆ ಪುರಸಭೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪೌರಕಾರ್ಮಿಕರು ಕಾರ್ಯನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಕ್ರಮ ಅನುಸರಿಸಬೇಕು. ಪುರಸಭೆ ವತಿಯಿಂದ ನೀಡಲಾಗಿರುವ ಸುರಕ್ಷತಾ ಸಾಧನ ಧರಿಸಿ ಕಾರ್ಯನಿರ್ವಹಿಸಬೇಕು. ನಿಯಮಾನುಸಾರ ಪುರಸಭೆ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧಿಸಲಾಗಿದೆ. ಪುರಸಭೆ ಸಿಬ್ಬಂದಿ ಕೈಗೊಂಡ ಕಾರ್ಯಾಚರಣೆಯಿಂದಾಗಿ ಶೇ.60 ರಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಬಟ್ಟೆ ಬ್ಯಾಗ್ ಬಳಸಬೇಕು. ಅನಾರೋಗ್ಯಕರ ಪರಿಸರ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ತ್ಯಾಜ್ಯ ವಸ್ತು ನಿರ್ವಹಣೆಗೆ ಸಹಕರಿಸಬೇಕು ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ಮಾತನಾಡಿ, ಪೌರಕಾರ್ಮಿಕರು ವೈದ್ಯರಿಗೆ ಸಮಾನವಾಗಿ ನಾಗರಿಕರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಪಟ್ಟಣದ 35 ಸಾವಿರ ನಾಗರಿಕರ ಆರೋಗ್ಯದ ಹೊಣೆ ಹೊತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಅಭಿನಂದಿಸವ ಉದ್ದೇಶದಿಂದ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಪೌರಕಾರ್ಮಿಕರ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ. ಪುರಸಭೆ ಮಾಜಿ ಉಪಾಧ್ಯಕ್ಷೆ ಆಯಿಷಾ ನಯಾಜ್, ಪುರಸಭೆ ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ನಿರೀಕ್ಷಕ ಎಂ.ಶಂಕರ್, ಎಂಜಿನಿಯರ್ ಶ್ರೀನಿವಾಸ್, ವೇದಾಂತ್ ಶಾಸ್ತ್ರಿ, ಸೀತಾರಾಮರೆಡ್ಡಿ, ಸುರೇಶ್, ಸಂತೋಷ್, ಶಿವಪ್ರಸಾದ್, ಗೌತಮ್, ಶ್ರೀನಾಥ್, ವಿ.ಶ್ರೀನಿವಾಸ್, ಚೆಂದು. ಶಾರದ, ರೂಪ, ಭಾಗ್ಯಮ್ಮ, ಶಾಂತಮ್ಮ, ನೇತ್ರಾ, ಬಾಲಕೃಷ್ಣ ಇದ್ದರು.

ಎಂಐಟಿ ಕುಂದಾಪುರ – ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ-ಫಿಟ್‌ನೆಸ್ ಅನ್‌ಪ್ಲಗ್ಡ್ ಕುರಿತು ಸಂವಾದ

ಕುಂದಾಪುರ: ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24 ರ ಅಂಗವಾಗಿ, ಮಾಹೆ ಮಣಿಪಾಲದ ದೈಹಿಕ ಶಿಕ್ಷಣದ ಉಪನಿರ್ದೇಶಕ ಡಾ.ದೀಪಕ್ ರಾಮ್ ಬೈರಿ ಅವರಿಂದ ಫಿಟ್‌ನೆಸ್ ಅನ್‌ಪ್ಲಗ್ಡ್ ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ದೈಹಿಕ ಸಾಮರ್ಥ್ಯದ ಮಹತ್ವ ಮತ್ತು ನಿರಂತರ ದೈಹಿಕ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿವಿಧ ವಿಧಾನಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ನಿಯಮಿತ ವಾಕಿಂಗ್ ಅಭ್ಯಾಸದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೆಲವು ಶಾಲೆಗಳಲ್ಲಿ ಪಿಟಿ ಅವಧಿಯನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹರ್ಷಿತಾ ಸ್ವಾಗತಿಸಿ, ಡಾ.ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರೊ.ಸೂಕ್ಷ್ಮ ಅಡಿಗ ಕಾರ್ಯಕ್ರಮ ಸಂಯೋಜಿಸಿದರು. MIT ಕುಂದಾಪುರದ BSH ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಗುರು ವಂದನೆ ಕಾರ್ಯಕ್ರಮ


ಕುಂದಾಪುರ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು ಶಿಕ್ಷಕರು ನೀಡುವ ಶಿಕ್ಷಣ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿ, ಬದುಕನ್ನು ನಿರೂಪಿಸುವ ಪವಿತ್ರ ವೃತ್ತಿಯಾಗಿದೆ’ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಚಾಲಕ ಅತೀ ವಂ.ಫಾ.ಸ್ಟ್ಯಾನಿ ತಾವ್ರೋ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮ ಪ್ರಯುಕ್ತ ನಡೆದ
ಪೋಷಕ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಗುರುತಿಸುವ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯದ ಮಾತುಗಳನ್ನಾಡಿದರು.ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಅಚ್ಲಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ “ಆದರ್ಶ ಶಿಕ್ಷಕ ಪ್ರಶಸ್ತಿ” ಪುರಸ್ಕ್ರತ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೊರತಿ ಸುವಾರಿಸ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕಿ ಸುಶೀಲಾ ಖಾರ್ವಿ ಸ್ವಾಗತಿಸಿದರು.ಶಿಕ್ಷಕಿ ಸ್ಮಿತಾ ಡಿ.ಸೋಜಾ ವಂದಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಇರಾಕ್‌ನಲ್ಲಿ ಮದುವೆ ಹಾಲ್‌ನಲ್ಲಿ ಭಯಾನಕ ಬೆಂಕಿ ದುರಂತ – ಕನಿಷ್ಠ ಸುಮಾರು 114 ಸಾವು, 150 ಮಂದಿ ಗಾಯಗೊಂಡಿದ್ದಾರೆ


ಇರಾಕ್‌ ದೇಶದ ನಿನೆವೆ ಪ್ರಾಂತ್ಯದಲ್ಲಿ ಅದರ ಹಮ್ದನಿಯಾ ಪ್ರದೇಶದಲ್ಲಿ ಭಯಾನಕ ಬೆಂಕಿ ದುರಂತ ಸಂಭವಿಸಿದ್ದು. ಕನಿಷ್ಠ 100 ಜನರು ದಾರುಣವಾಗಿ ಸತ್ತು ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ರಾಜಧಾನಿ ಬಾಗ್ದಾದ್‌ ನಗರದ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್‌ಗಳಷ್ಟು ಉತ್ತರದ ಇರಾಕಿನ ಇನ್ನೊಂದು ನಗರ ಮೊಸುಲ್‌ ಹೊರ ಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ತಿಳಿಸುತ್ತವೆ.


ಇರಾಕಿನಲ್ಲಿ ಸಾಕಷ್ಟು ಕ್ರಿಶ್ಚಿಯನ
ರು ಇದ್ದು, ಉತ್ತರ ಇರಾಕ್‌ನಲ್ಲಿ ಕ್ರಿಶ್ಚಿಯನ್ ವಿವಾಹವನ್ನು ಆಯೋಜಿಸುದ ಸಭಾಂಗಣದಲ್ಲಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.


ಇರಾಕ್‌ನ ನಿನೆವೆ ಪ್ರಾಂತ್ಯದಲ್ಲಿ ಅದರ ಹಮ್ದಾನಿಯ ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅವರು ಹೇಳಿದರು. ಅದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಟೆಲಿವಿಷನ್ ದೃಶ್ಯಾವಳಿಗಳು ಬೆಂಕಿ ಹೊತ್ತಿಕೊಂಡಾಗ ಮದುವೆಯ ಸಭಾಂಗಣದ ಮೇಲೆ ಜ್ವಾಲೆಗಳು ಹರಡುವುದನ್ನು ತೋರಿಸಿದೆ. ಬೆಂಕಿಯ ನಂತರ, ಬೆಂಕಿಯ ಮೂಲಕ ಜನರು ನಡೆದುಕೊಂಡು ಹೋಗುವಾಗ ಸುಟ್ಟ ಲೋಹ ಮತ್ತು ಅವಶೇಷಗಳು ಮಾತ್ರ ಗೋಚರಿಸಿದವು,


ಬದುಕುಳಿದವರು ಸ್ಥಳೀಯ ಆಸ್ಪತ್ರೆಗಳಿಗೆ ದಾವಿಸಿದರು, ಆಮ್ಲಜನಕ ನೀಡಿ ಚಿಕಿತ್ಸೆ ನೀಡಲಾಯಿತು, ಅವರ ಕುಟುಂಬಗಳು ಹಜಾರಗಳ ಮೂಲಕ ಮತ್ತು ಹೊರಗೆ ಕಾರ್ಮಿಕರು ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳನ್ನು ಸಂಘಟಿಸಿದ್ದರಿಂದ.ನಿನೆವೆಹ್ ಪ್ರಾಂತ್ಯದ ಆರೋಗ್ಯ ಇಲಾಖೆಯು ಸಾವಿನ ಸಂಖ್ಯೆಯನ್ನು 114 ಕ್ಕೆ ಏರಿಸಿದೆ. ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬದರ್ ಈ ಹಿಂದೆ ಸರ್ಕಾರಿ ಇರಾಕಿ ನ್ಯೂಸ್ ಏಜೆನ್ಸಿಯ ಮೂಲಕ ಗಾಯಗೊಂಡವರ ಸಂಖ್ಯೆಯನ್ನು 150 ಎಂದು ಹೇಳಿದ್ದಾರೆ.


ಈ ದುರದೃಷ್ಟಕರ ಅಪಘಾತದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಲ್-ಬದ್ರ್ ಹೇಳಿದರು. ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಬೆಂಕಿಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಪರಿಹಾರವನ್ನು ಒದಗಿಸಲು ದೇಶದ ಆಂತರಿಕ ಮತ್ತು ಆರೋಗ್ಯ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಅವರ ಕಚೇರಿ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡವರಲ್ಲಿ ಕೆಲವರನ್ನು ಪ್ರಾದೇಶಿಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ನಿನೆವೆ ಪ್ರಾಂತೀಯ ಗವರ್ನರ್ ನಜೀಮ್ ಅಲ್-ಜುಬೌರಿ ಹೇಳಿದ್ದಾರೆ. ಬೆಂಕಿ ಅವಘಡದಿಂದ ಇನ್ನೂ ಯಾವುದೇ ಅಂತಿಮ ಸಾವು ನೋವು ಸಂಭವಿಸಿಲ್ಲ ಎಂದು ಅವರು ಎಚ್ಚರಿಸಿದ್ದಾರೆ, ಇದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸೂಚಿಸುತ್ತದೆ.

ಈ ದುರಂತಕ್ಕೆ ಪಟಾಕಿ ಸಿಡಿಸಿದ್ದೆ ಕಾರಣವೆಂದು ಮಾಧ್ಯಮಗಳು ಹೇಳುತ್ತಿವೆ. ಗಲ್ಫ್ ನಲ್ಲಿ ಕಟ್ಟಡ ಮತ್ತು ಸಭಾಂಗಣಗಳ ನಿರ್ಮಾಣದ ಸಮಯದಲ್ಲಿ ಸುರಕ್ಷೆತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ, ಬೆಂಕಿ ಅವಘಡನೆಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ದ್ವಾರಗಳನ್ನು ನಿಮಿಸಲಾಗುತ್ತದೆ. ಆದರೆ ಇಲ್ಲಿ ಇದಕ್ಕಾಗಿ ಹೆಚ್ಚು ಆದ್ಯತೆ ನೀಡುಉದಿಲ್ಲ ಎಂದು ಹೇಳಲಾಗುತ್ತೆ.

ಅಕ್ಟೋಬರ್ 2 ರಂದು ಕುಂದಾಪುರದಲ್ಲಿ “ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ” ಬೃಹತ್ ಅಭಿಯಾನ

ಕುಂದಾಪುರ ಭಂಡಾರ್‍ಕಾರ್ಸ್‍ ಕಾಲೇಜು, ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಕಾರದಿಂದ ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನ ಅಕ್ಟೋಬರ್ 2 ರಂದು, ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮ“ಸ್ವಚ್ಛಕುಂದಾಪುರ-ನಮ್ಮಕುಂದಾಪುರ”ಅಭಿಯಾನ ನಡೆಸಲು ನಿರ್ಧರಿಸಿದೆ. ಕಾಲೇಜಿನವಿದ್ಯಾರ್ಥಿಗಳು, ಬೋಧಕಮತ್ತುಬೋಧಕೇತರವರ್ಗದವರು ಬೃಹತ್“ಸ್ವಚ್ಛಕುಂದಾಪುರ-ನಮ್ಮಕುಂದಾಪುರ” ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಸ್ಥಳೀಯ ಕುಂದಾಪುರದ 23 ವಾರ್ಡ್‍ಗಳಲ್ಲಿ ಹಮ್ಮಿಕೊಂಡಿದ್ದಾರೆ. ಜನರಲ್ಲಿ ಸ್ವಚ್ಛತೆಕುರಿತುಅರಿವು ಮೂಡಿಸುವಜನಜಾಗೃತಿಕಾರ್ಯಕ್ರಮಇದಾಗಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15000 ಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಮಾಡುವುದು ಮತ್ತುಅವರಲ್ಲಿ ಮತ್ತುಜನರಲ್ಲಿ ಪರಿಸರದ ಸ್ವಚ್ಛತೆಯಕುರಿತುಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯಉದ್ದೇಶವಾಗಿದೆ.
ಈ ಜಾಗೃತಿಅಭಿಯಾನದ ಮುಖ್ಯಉದ್ದೇಶಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿಉತ್ತಮಆರೋಗ್ಯಕ್ಕಾಗಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಲೇವಾರಿ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ಮತ್ತು ಜಲಸಂರಕ್ಷಣೆಯಾಗಿದೆ.
ಸುಸ್ಥಿರ ಬದುಕಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅತ್ಯಗತ್ಯವಾಗಿರುವಉತ್ತಮ ಪರಿಸರವನ್ನು ಉಳಿಸುವ ಕುರಿತುಜನಜಾಗೃತಿ ಹಾಗೂ ಪರಿಸರ ಮಾಲಿನ್ಯವನ್ನುತಡೆಯುವುದರಕುರಿತು ವಿದ್ಯಾರ್ಥಿಗಳು ವಿವರಿಸಲಿದ್ದಾರೆ.
ಕುಂದಾಪುರದ ಸಹಾಯಕಆಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಪುರಸಭಾ ಸದಸ್ಯರು ಈ “ಸ್ವಚ್ಛಕುಂದಾಪುರ-ನಮ್ಮಕುಂದಾಪುರ”ಅಭಿಯಾನಕ್ಕೆಉತ್ತಮಬೆಂಬಲನೀಡುವಭರವಸೆನೀಡಿದ್ದಾರೆ.
ಈಗಾಗಲೇ ಕುಂದಾಪುರ ಪುರಸಭೆ ಪುರ ಸ್ವಚ್ಛತೆಕುರಿತುಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರ ಸ್ವಚ್ಛತೆಕುರಿತುಅರಿವು ಮೂಡಿಸುವುದು ಹಾಗೂ ಕುಂದಾಪುರವನ್ನು ಮಾದರಿ ನಗರವಾಗಿ ಬೆಳೆಸುವುದು ಭಂಡಾರ್‍ಕಾರ್ಸ್‍ಕಾಲೇಜಿನ ಈ ಅಭಿಯಾನದಉದ್ದೇಶವಾಗಿದೆ.
60 ಸಂವತ್ಸರವನ್ನು ಪೂರೈಸಿ 61ನೇ ವರ್ಷದಲ್ಲಿ ಮುನ್ನಡೆಯುತ್ತಿರುವಕುಂದಾಪುರದ ಭಂಡಾರ್‍ಕಾರ್ಸ್‍ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಅನುವು ಮಾಡಿಕೊಡುತ್ತಿದೆ. ಕಾಲೇಜು ಈ ಹಿಂದೆಯೂಇಂತಹ ಸಮಾಜಮುಖಿಕಾರ್ಯಕ್ರಮವನ್ನು ಮಾಡಿಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಅಲ್ಲದೇಇಂತಹಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಈ ಅಭಿಯಾನದಲ್ಲಿಎಲ್ಲಾ ಪುರಸಭೆಯ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಭಂಡಾರ್‍ಕಾರ್ಸ್‍ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿನಂತಿಸಿದ್ದಾರೆ.

ಆಶ್ರಯದಲ್ಲಿ ಉಚಿತ ಆರೋಗ್ಯ ಮಾಹಿತಿ, ಆಯುಷ್ಮಾನ್ ಭವ ಕಾರ್ಡ್ ಮಾಹಿತಿ ಹಾಗೂ ಬೃಹತ್ ನೇತ್ರ ತಪಾಸಣಾ ಶಿಬಿರ


ಕುಂದಾಪುರ; ತಾಲೂಕು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ. ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರ ಒಡೆಯರ್ ಹೋಬಳಿ.ಜೆ ಸಿಐ ಕುಂದಾಪುರ,ವಿಘ್ನೇಶ್ವರ ಯುವಕ ಮಂಡಲ ಒಡೆಯರ್ ಹೋಬಳಿ, ಪ್ರಸಾದ್ ನೇತ್ರಾಲಯ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರದ ಆಶೀರ್ವಾದ ಹಾಲ್ ನಲ್ಲಿ (26/9/23) ಉಚಿತ ಆರೋಗ್ಯ ಮಾಹಿತಿ, ಆಯುಷ್ಮಾನ್ ಭವ ಕಾರ್ಡ್ ಮಾಹಿತಿ ಹಾಗೂ ಬೃಹತ್ ನೇತ್ರ ತಪಾಸಣಾ ಶಿಬಿರ ನೆರವೇರಿಸಲಾಯಿತು ಈ ಶಿಬಿರದಲ್ಲಿ ನೇತೃ ತಪಾಷಣೆ ಹಾಗೂ ಬಿಪಿ,ಶುಗರ್ ತಪಾಸಣೆ ನಡೆಸಲಾಯಿತು.200 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.ಸುಮಾರು 18 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ದಿನಾಂಕ ನಿಗದಿಪಡಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಧಾಕರ್ ಕಾಂಚನ್ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಶೇಖರ್ ಪೂಜಾರಿ ,ರತ್ನಾಕರ್ ಕುಂದಾಪುರ, ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷ ಗೋಪಾಲ್ ಪೂಜಾರಿ ಹಾಗೂ ಆಶೀರ್ವಾದ ಹಾಲ್ ಮಾಲಕರಾದ ವಾಲ್ಟಾರ್ ಡಿಸೋಜ,ಎಸ್ಡಿಎಂಸಿ ಸದಸ್ಯರಾದ ಕೃಷ್ಣಾನಂದ್ ಶಾನಭಾಗ್, ಆರೋಗ್ಯ ಇಲಾಖೆ ವೈದ್ಯರು ,ಪ್ರಸಾದ್ ನೇತ್ರಾಲಯದ ವೈದ್ಯರು, ಸಿಬ್ಬಂದಿಗಳು,ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ,ಆಶಾ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯ ವೀಣಾ ಸ್ವಾಗತಿಸಿ, ಗುರು ದತ್ ಕಾರ್ಯಕ್ರಮ ನಿರ್ವಹಿಸಿ, ಮೇದಿನಿ ಧನ್ಯವಾದ ನೀಡಿದರು.

ಕಲ್ಯಾಣ್ಪುರ ಮೌಂಟ್‍ ರೋಜರಿ ಚರ್ಚಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್‍ ಸಮಾವೇಶ ಸಂಪನ್ನ

ಉಡುಪಿ : ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್‍ ನ ಸಮಾವೇಶವು ಸಪ್ಟೆಂಬರ್ 24 ರಂದು ಕಲ್ಯಾಣ್ಪುರ ಮೌಂಟ್‍ ರೋಜರಿ ಚರ್ಚಿನ ಸಭಾಂಗಣದಲ್ಲಿ ಅಯೋಜಿಸಲಾಗಿತ್ತು. ಬೆಳಿಗ್ಗೆ 9.15 ಗಂಟೆಗೆ ಸಮಾವೇಶದ ಉದ್ಗಾಟನಾ ಸಮಾರಂಭವು ನೇರವೆರಿ ಸಂಪನ್ನಗೊಂಡಿತು.

ಉದ್ಗಾಟನಾ ಸಮಾರಂಭದ ಅಧ್ಯಕ್ಷತೆಯನ್ನುಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ವಂದನೀಯ ಫರ್ಡಿನಾಂಡ್‍ ಗೊನ್ಸಾಲ್ವೆಸ್‍ಆವರು ವಹಿಸಿದ್ದರು.ಮುಖ್ಯಆಥಿತಿಯಾಗಿ ಸಂತೆಕಟ್ಟೆ ಮೌಂಟ್‍ ರೋಜರಿಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್ ಡಿ’ಸೋಜಾ ಮತ್ತು ದಾಯ್ಜಿವಲ್ಡ್‍ ನ ಮ್ಯಾನೇಜಿಂಗ್‍ಡೈರೆಕ್ಟರ್ ಶ್ರೀ ವಾಲ್ಟರ್ ನಂದಳಿಕೆಯವರು ವಹಿಸಿದ್ದರು. ಕರ್ನಾಟಕ ಪ್ರಾಂತೀಯ ಐಸಿವೈಎಮ್‍ ಅಧ್ಯಕ್ಷ ನೇವಿನ್‍ ಆಂಟ್ಯನಿ, ವೈಸಿಎಸ್/ ವೈಎಸ್‍ಎಮ್‍ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌಂಟ್‍ ರೋಜರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರು ಶ್ರೀ ಲೂಕ್ ಡಿ’ಸೋಜಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶರಾದ ವಂದನೀಯಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ವಲಯದ ಐಸಿವೈಯಮ್ ನಿರ್ದೇಶಕರಾದ ವಂದನೀಯ ಗುರು ರೋನ್ಸನ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ಕಾರ್ಯದರ್ಶಿ ಶೈನಿ ಅಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಆಥಿತಿ ವಂದನೀಯ ಗುರು ರೋಕ್ ಡಿ’ಸೋಜಾರವರು ತಮ್ಮ ಸಂದೇಶದಲ್ಲಿ ಯುವಜನರು ಆವಕಾಶ ಸಿಕ್ಕಾಗ ಆದರ ಸಧುಪಯೋಗ ಮಾಡಬೇಕೆಂದು ಹೇಳಿದರು.ನಂತರಉಡುಪಿ ಧರ್ಮಪ್ರಾಂತ್ಯದ ನೂತನ ಶ್ರೇಷ್ಟ ಗುರುಗಳಾಗಿ ಎಪ್ರಿಲ್ನಲ್ಲಿ ಹುದ್ದೆ ಸ್ವೀಕಾರಿಸಿದ ಅತೀ ವಂದನೀಯ ಫರ್ಡಿನಾಂಡ್‍ ಗೊನ್ಸಾಲ್ವೆಸ್‍ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮಅದ್ಯಕ್ಷೀಯ ಭಾಷಣದಲ್ಲಿ ಇಲ್ಲಿ ನೆರೆದಿರುವ ಎಲ್ಲಾ ಯುವಜನರು ನಮ್ಮಉಡುಪಿ ಧರ್ಮಕ್ರೇಂದ್ರದ ಮುಂದಿನ ಭವಿಷ್ಯವಾಗಿರುವರು.ನಾವು ಕಲಿಯುವಾಗ ಸಣ್ಣ ಪುಟ್ಟ ಕೆಲಸ ಮಾಡಲು ಆವಕಾಶ ಸಿಕ್ಕಾಗ ಆದರ ಸದುಪಯೋಗ ಪಡಿಸಬೇಕೆಂದರು.ಈ ಯುವ ಸಮಾವೇಶ ಮೌಂಟ್‍ ರೋಜರಿ ಚರ್ಚ್‍ ಕಲ್ಯಾಣ್ಪುದಲ್ಲಿ ಅಯೋಜಿಸಲು ಸಹಕಾರ ನಿಡಿದ ಮೌಂಟ್‍ ರೋಜರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು. ಮುಖ್ಯಆಥಿತಿ ದಾಯ್ಜಿವಲ್ಡ್‍ನ ಮ್ಯಾನೇಜಿಂಗ್‍ ಡೈರೆಕ್ಟರ್ ವಾಲ್ಟರ್ ನಂದಳಿಕೆ ಯುವಜನತೆ ಮತ್ತು ಸಂಪರ್ಕ ಮಾಧ್ಯಮಗಳ ಉಪಯೋಗ, ಆದರಿಂದಾಗುವ ಸಮಸ್ಯೆಗಳ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು.ಅವರನ್ನು ಸನ್ಮಾನಿಸಲಾಯಿತು. ವಂದನೀಯ ಗುರು ಜೋಕಿಮ್ ಡಿ’ಸೋಜರವರು ಭಾರತದಲ್ಲಿ ಭಾರತಿಯಾನಾಗಿ ಯುವಜನರ ಪಾತ್ರ ಈ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು. ಪ್ರೀತೆಶ್ ಪಿಂಟೊ ವಂದಿಸಿ, ಆಶೀಷ್ ಮಿನೇಜಸ್‍ ಕಾರ್ಯ ನಿರೂಪಣೆ ಮಾಡಿದರು.

ದಿವ್ಯ ಬಲಿಪೂಜೆಯನ್ನುಉಡುಪಿ ವಲಯದ ಐಸಿವೈಎಮ್ ನಿರ್ದೇಶರಾದ ವಂದನೀಯ ಗುರು ರೋನ್ಸನ್ ಡಿ’ಸೋಜಾ ನೇರವೇರಿಸಿದರು. ಮದ್ಯಾನ 2.15 ಕ್ಕೆ 5 ವಲಯಗಳ ನಡುವೆ ಪದ್ಯ, ನ್ರತ್ಯ ಹಾಗೂ ಪ್ಯಾಶನ್ ಶೊ ಸ್ಪರ್ಧೆ ನಡೆಯಿತು. ವಂ.ಗುರು ರೊಬಿನ್ ಸಾಂತುಮಾಯೊರ್, ಶ್ರೀಮತಿ ಸ್ವಪ್ನಾ ಡಿ’ಸಿಲ್ವಾ ಮತ್ತು ಶ್ರೀ ಆಶ್ವಿನ್ ಡಿ’ಕೊಸ್ಟಾರವರು ಸ್ಪರ್ಧೆಯತಿರ್ಪುದರಾರಗಿದ್ದರು.

4.30 ಗೆ ಸಮಾರೋಪ ಸಮಾರಂಭವನ್ನು ಆರಂಭಗೊಂಡು, ಇದರ ಆಧ್ಯಕ್ಷತೆಯನ್ನು ಕಲ್ಯಾಣ್ಪುರ ಮಿಲಾಗ್ರಿಸ್‍ ಕಾಥೆದ್ರಲಿನ ಧರ್ಮಗುರುಗಳಾದ ಅತೀ ವಂದನೀಯ ಗುರು ವಲೇರಿಯನ್ ಮೆಂಡೋನ್ಸಾ ವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯಅತಿಥಿ ಸ್ಥಾನವನ್ನು ಡಾ| ಶ್ವೇತಾ ರಸ್ಕಿನಾ, ವಹಿಸಿದ್ದರು. ವೆದಿಕೆಯಲ್ಲಿ ವಂ.ಗುರು ರೊಬಿನ್ ಸಾಂತುಮಾಯೊರ್, HOD department of social work, St. Aloysius College M’Lore- ಸ್ವಪ್ನಾ ಡಿ’ಸಿಲ್ವಾ, ಆಶ್ವಿನ್ ಡಿ’ಕೊಸ್ಟಾ, ಕರ್ನಾಟಕ ಪ್ರಾಂತೀಯ ಐಸಿವೈಯಮ್ ಅಧ್ಯಕ್ಷ ನೇವಿನ್‍ ಆಂಟ್ಯನಿ, ವೈಸಿಎಸ್/ ವೈಎಸ್‍ಎಮ್‍ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌಂಟ್‍ ರೋಜರಿ ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಪ್ರೀಯಾ ಪುರ್ಟಾಡೊ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ನಿರ್ದೇಶರಾದ ವಂದನೀಯಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಕಾರ್ಯದರ್ಶಿ ಶೈನಿ ಅಳ್ವಾ ಸ್ವಾಗತಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಕೇಂದ್ರದ 5 ವಲಯಗಳ ಐಸಿವೈಯಮ್ ನಿರ್ದೇಶಕರನ್ನು ಅವರ ನಿಸ್ವಾರ್ಥ ಸೇವೆಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ದಾನ-ಸಹಾಯ ನಿಡಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಒನ್‍ಲೈನ್ ಸ್ಪಧೆಗಳ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ಮ್ಹಧ್ಯಾನ ನಡೆದ ಸಾಂಸ್ಕ್ರತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕವಿತೆ ಪ್ರಶಸ್ತಿ ವಿಜೇತರು:

ಪ್ರಥಮ: ರೀಶಲ್ ಲೋಬೊ, ಬೈದೂರು. ದ್ವಿತಿಯ: ಅನ್ಸಿಟಾಡಿಸೋಜಾ, ಮೂಡುಬೆಳ್ಳೆ, ತೃತಿಯ: ಮೆಲಿಸ್ಸಾ ಕುಟಿನ್ಹಾ. ರೀಲ್ಸ್ ಸ್ಪರ್ಧೆ: ಮಿಲಾಗ್ರಿಸ್ ಐ.ಸಿ.ವೈ.ಎಮ್ ಘಟಕ, ಮಿಯಾರ್ ಐ.ಸಿ.ವೈ.ಎಮ್ ಘಟಕ, ಕಾರ್ಕಳ ಟೌನ್ ಐ.ಸಿ.ವೈ.ಎಮ್ ಘಟಕ. ಸ್ಟಾಂಡ್‍ ಅಪ್‍ ಕಾಮಿಡಿ: ಪ್ರಥಮ, ದಿವ್ಯ ಪಿಂಟೊ, ಶಿರ್ವಾ.

ನೃತ್ಯ ಸ್ವರ್ಧೆ ವಿಜೇತರು :

1. ಕಲ್ಯಾಣ್ಪುರ ವಲಯ, 2. ಉಡುಪಿ ವಲಯ, 3. ಕಾರ್ಕಳ ವಲಯ.

ಪ್ಯಾಶನ್ ಶೊ ಸ್ಪರ್ಧೆ: 1

ಕಾರ್ಕಳ ವಲಯ 2. ಉಡುಪಿ ವಲಯ 3.ಕಲ್ಯಾಣ್ಪುರ ವಲಯ.

ಸಂಗೀತ ಸ್ವರ್ಧೆ;

1.ಕಲ್ಯಾಣ್ಪುರ ವಲಯ, 2.ಉಡುಪಿ ವಲಯ, 3.ಕಾರ್ಕಳ ವಲಯ.

ಚಾಂಪಿಯನ್ ಆಗಿ ಕಲ್ಯಾಣ್ಪುರ್ ವಲಯ ಹಾಗೂ ರನ್ನರ್ ಆಪ್ ಆಗಿ ಉಡುಪಿ ವಲಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿದಿಕೊಂಡರು.

ಕಾರ್ಯಕ್ರಮದ ಯಸಸ್ಸಿಗೆ ಕಾರಣಕರ್ಥರಾದ ಎಲ್ಲರನ್ನು ಉಡುಪಿ ಧರ್ಮಕೇಂದ್ರದ ಐಸಿವೈಯಮ್ ನಿರ್ದೇಶರಾದ ವಂದನೀಯ ಗುರು ಸ್ಟೀವನ್ ಪೆರ್ನಾಂಡಿಸ್ ವಂದಿಸಿದರು. ಗೋಡ್ವಿನ್‍ ಕಾರ್ಯ ನಿರೂಪಣೆ ಮಾಡಿದರು. ಸರಿಸುಮಾರು 450 ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಂಜೆ 6.00 ಕ್ಕೆ ಕಾರ್ಯಕ್ರಮ ಸಮಾರೋಪಗೊಂಡಿತು.