ಶ್ರೀನಿವಾಸಪುರ ನಂಬಿಹಳ್ಳಿ : ವಿಚ್ಛೇದಿತ ಪತ್ನಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ

ಶ್ರೀನಿವಾಸಪುರ: ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ರಾಧಾ ಹಾಗೂ ಅವರ ತಂದೆ ಮುನಿಯಪ್ಪ ಕೊಲೆಯಾದವರು. ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ್ ಕೊಲೆ ಆರೋಪಿ.
ನಾಗೇಶ ತನ್ನ ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ. ಮಂಗಳವಾರ ನಂಬಿಹಳ್ಳಿಗೆ ಬಂದ ನಾಗೇಶ, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವಿಚ್ಛೇದಿತ ಪತ್ನಿ ರಾಧಾ ಮತ್ತು ಮಾವನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುನಿಯಪ್ಪ ಶ್ರೀನಿವಾಸಪುರದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಕೃತ್ಯ ತಡೆಯಲು ಬಂದ ರಾಧಾ ಅವರ ಸಹೋದರಿ ಹಾಗೂ ಮಾವ ಸಹ ಗಾಯಗೊಂಡಿದ್ದಾರೆ.
ಗ್ರಾಮಸ್ಥರು ಆರೋಪಿಯನ್ನು ಹಿಡಿಯಲು ದೊಣ್ಣೆಗಳೊಂದಿಗೆ ಧಾವಿಸಿದಾಗ, ಮನೆಯೊಂದರಲ್ಲಿ ಸೇರಿಕೊಂಡ ಕೊಲೆ ಆರೋಪಿ, ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬೆಂಕಿ ಪೆಟ್ಟಿಗೆ ಕೈಯಲ್ಲಿ ಹಿಡಿದು, ಯಾರಾದರೂ ಮುಂದೆ ಬಂದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿ ಕಾಲಿಗೆ ಗುಂಡು: ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು, ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ ಆರೋಪಿ ನಾಗೇಶ ಪೊಲೀಸರ ಮೇಲೆ ಮಾರಕಾಯುಧದಿಂದ ದಾಳಿ ಮಾಡಲು ಯತ್ನಿಸಿದಾಗ, ಎಂ.ನಾರಾಯಣ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಡಿವೈಎಸ್‍ಪಿ ನಂದಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಆರ್.ದಯಾನಂದ, ಲೋಕೇಶ್, ವೆಂಕಟೇಶ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಈಶ್ವರ್, ರಾಮ ಮತ್ತು ಸಿಬ್ಬಂದಿ ಇದ್ದರು.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆ- ಶೇ.20 ಡಿವಿಡೆಂಡ್ ಘೋಷಣೆ


ಉಡುಪಿ: 26ನೇ ವಾರ್ಷಿಕ ಮಹಾಸಭೆ- ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ನಿಂದ ಶೇ.20 ಡಿವಿಡೆಂಡ್ ಘೋಷಣೆ
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆಯು ದಿನಾಂಕ 10/09-2023ನೇ ಆದಿತ್ಯವಾರದಂದು ಉಡುಪಿ ಶೋಕಮಾತಾ ಇಗರ್ಜಿಯ “ಆವೆ ಮರಿಯಾ” ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಡಿ’ಅಲ್ಮೇಡಾ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಅಧ್ಯಕ್ಷರು ಎಲ್ಲರನ್ನೂ ಸಭೆಗೆ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್
ಫೆರ್ನಾಂಡೀಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಶೇ.20 ಡಿವಿಡೆಂಡ್ ಘೋಷಣೆ : ಸಂಘವು 2022-23 ನೇ ವರದಿ ಸಾಲಿನಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ದ್ವಿ-ಗುಣ ರೂ. 83.81 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಅಧ್ಯಕ್ಷರು ಪಾಲುದಾರರಿಗೆ ಶೇ 20 ಡಿವಿಡೆಂಡ್‍ನ್ನು ಘೋಷಿಸಿದರು.
“ಸಾಧನಾ ಪ್ರಶಸ್ತಿ” ಹಸ್ತಾಂತರ : ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ ರವರು ಸಂಘವು 2022-23ನೇ ಸಾಲಿನಲ್ಲಿ ತೋರ್ಪಡಿಸಿದ ಸಾಧನೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್,ಮಂಗಳೂರು ಇವರಿಂದ ಪಡೆದ “ಸಾಧನಾ ಪ್ರಶಸ್ತಿ”ಯನ್ನು ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸುತ್ತಾ ಸಂಘದ ಅಭಿವೃಧ್ದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಸಂಘದ ವತಿಯಿಂದ ಸನ್ಮಾನ : ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಡಾ// ನೇರಿ ಕರ್ನೇಲಿಯೋ ರವರು ಲಯನ್ಸ್ ಕ್ಲಬ್ ಇದರ ಜಿಲ್ಲಾ ಗವರ್ನರ್ 317 ಸಿ ಹುದ್ದೆಯನ್ನು ಅಲಂಕರಿಸಿದ ಕಾರಣ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ : ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಂಘದ “ಅ” ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಹಾಗೂ ಮಾನಸ ನಿರ್ಮಿತಿ ಮತ್ತು ಪುನರ್ವಸತಿ ಕೇಂದ್ರ,ಪಾಂಬೂರು ಇವರಿಗೆ ಸಹಾಯಧನವನ್ನು ವಿತರಿಸಲಾಯಿತು.
ಮುಂದಿನ ಯೋಜನೆಗಳು : ಉಪಾಧ್ಯಕ್ಷರಾದ ಶ್ರೀ ಲೂವಿಸ್ ಲೋಬೋರವರು ಸಂಘದ ಮುಂದಿನ ಯೋಜನೆಗಳಾದ ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ಏರಿಸುವುದು ಮತ್ತು ಹೊಸ ಶಾಖೆಗಳನ್ನು ಸ್ವಂತ ಕಟ್ಟಡಗಳಲ್ಲಿ ತೆರೆಯುವ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಸಂಘದ ಏಳಿಗೆ ಹಾಗೂ ಶ್ರೇಯಾಭಿವೃದ್ಧಿ ಕುರಿತು ಸದಸ್ಯದ ಮನವಿ,ಅನಿಸಿಕೆಗಳನ್ನು ಸ್ವೀಕರಿಸಲಾಯಿತು. ನಂತರ ಉಪಾಧ್ಯಕ್ಷರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ ಡಿಸೋಜ, ಜೇಮ್ಸ್ ಡಿ’ಸೋಜ, ಆರ್ಚಿಬಾಲ್ಡ್ ಎಸ್ ಡಿ’ಸೋಜ, ಫ್ರೆಕ್ಲೀನ್ ಮಿನೇಜಸ್, ಜೆಸಿಂತಾ ಡಿ’ಸೋಜ, ಗಿಲ್ಬರ್ಟ್ ಫೆರ್ನಾಂಡೀಸ್ ಮತ್ತು ಲೋಯ್ಸೆಟ್ ಜೆ ಕರ್ನೇಲಿಯೊ, ಶಾಖಾ ವ್ಯವಸ್ಥಾಪಕರಾದ ನೈನಾ ಮಿನೇಜಸ್, ಸುನಿಲ್ ಡಿ’ಸೋಜ, ಜೆನೆಟ್ ಡಿ’ಸೋಜ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿರ್ವ ಶಾಖಾ ವ್ಯವಸ್ಥಾಪಕಿ ಶೀತಲ್ ಮರಿಯಾ ಡಿ’ಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.

USA ಯ MKCA ಸಂಘಕ್ಕೆ 2024-2026 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಪ್ರಗತಿ ಪಿಂಟೊ/New officers for the 2024-2026 year for MKCA USA – Pragati Pinto as elected president

USA ಯ MKCA ಸಂಘಕ್ಕೆ 2024-2026 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ (ಮಂಗಳೂರಿ ಕೊಂಕಣ್ ಕ್ರೀಸ್ತಾಂವ್ ಸಂಘ್, ಅಮೇರಿಕಾ)

(L to R) ಸವಿಯೋ ಪೈಸ್, ಲಿಯೊನಾರ್ಡ್ ಲೋಬೋ ಶೆಣೈ, ಪ್ರಗತಿ ಪಿಂಟೋ, ಜೇಮ್ಸ್ ಸಲ್ಡಾನ್ಹಾ, ನುಲಾ ಡಿ’ಅಬ್ರೆಯೋ ಮತ್ತು ಅತಿಥಿ ಧರ್ಮಗುರು ಫಾ. ಹೆನ್ರಿ ಸಿಕ್ವೇರಾ, ಟಕೋಡ್.

ಅಧ್ಯಕ್ಷೆ ಪ್ರಗತಿ ಪಿಂಟೋ
ಲಿಯೊನಾರ್ಡ್ ಲೋಬೋ ಶೆಣೈ, ಉಪಾಧ್ಯಕ್ಷ
ಸವಿಯೋ ಪೈಸ್, ಕಾರ್ಯದರ್ಶಿ
ಲೂನಾ ಡಿ’ಅಬ್ರೆಯೊ, ಜಂಟಿ ಕಾರ್ಯದರ್ಶಿ
ಜೇಮ್ಸ್ ಸಲ್ಡಾನ್ಹಾ, ಖಜಾಂಚಿ
ಇವರ ಸೇವಾ ಅವಧಿಯು 2 ವರ್ಷಗಳವರೆಗೆ ಇರುತ್ತದೆ
.

The following officers were elected for MKCA, USA for the Year 2024-2026: (Mangalore Konkan Christian association)

(L to R) Savio Pais, Leonard Lobo Shenoy, Pragati Pinto, James Saldanha, Nula D’Abreo and Guest Chaplain Fr. Henry Sequeira, Taccode

Pragati Pinto, President

Leonard Lobo Shenoy, Vice President

Savio Pais, Secretary

Luna D’Abreo, Joint Secretary

James Saldanha, Treasurer

Their term of service will be for 2 years.

ಶಂಕರ ಸೇವಾ ಸಮಿತಿಯಿಂದ ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳ ಕೃಷ್ಣ ವೇಷ ಸ್ಪರ್ಧೆ: ಕೃಷ್ಣ ಲೀಲೆ ಎಲ್ಲರಿಗೂ ಪ್ರಿಯ-ಡಿ.ಸತ್ಯಮೂರ್ತಿ

ಶ್ರೀನಿವಾಸಪುರ: ಮಕ್ಕಳು ಪುಟ್ಟ ಕೃಷ್ಣನನ್ನು ತಮ್ಮ ಗೆಳೆಯನೆಂದು ಬಗೆದು ಖುಷಿ ಪಡುತ್ತಾರೆ ಎಂದು ತಾಲ್ಲೂಕು ಸನ್ಮಾರ್ಗ ಬಳಗದ ಅಧ್ಯಕ್ಷ ಡಿ.ಸತ್ಯಮೂರ್ತಿ ಹೇಳಿದರು.
ಪಟ್ಟಣದ ಭಾರತಿ ತೀರ್ಥರ ಸಭಾ ಭವನದಲ್ಲಿ ಶಂಕರ ಸೇವಾ ಸಮಿತಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣನದು ಮಹಾ ಭಾರತದ ಮಹಾಪಾತ್ರಗಳಲ್ಲಿ ಅತ್ಯಂತ ಮಹತ್ವದ ಪಾತ್ರ ಎಂದು ಹೇಳಿದರು.
ಮಹಾ ಕಾವ್ಯಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಸನ್ಮಾರ್ಗ ತೋರಿಸುವ ಸಾಧನ. ಆದ್ದರಿಂದ ಪ್ರತಿಯೊಬ್ಬರೂ ರಾಮಾಯಣ, ಮಹಾಭಾರತ ಓದಬೇಕು. ಹಿರಿಯರು ಮಕ್ಕಳಿಗೆ ಮಹಾ ಕಾವ್ಯದ ಕತೆಗಳನ್ನು ಒದಲು ತಿಳಿಸಬೇಕು. ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಸನ್ಮಾರ್ಗ ಬಳಗದ ನಿರ್ದೇಶಕಿ ಮಂಗಳಾ ಸತ್ಯಮೂರ್ತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷ ಹಾಕಿ ತಂದಿದ್ದಾರೆ. ಸ್ಪರ್ಧೆ ಎಂಬುದನ್ನು ಮರೆಯಬೇಕು. ಮಕ್ಕಳಲ್ಲಿ ಮುದು ಕೃಷ್ಣನನ್ನು, ಪುಟ್ಟ ರಾಧೆಯನ್ನು ಕಂಡು ಸಂತೋಷಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣನನ್ನು ಕುರಿತ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಎಂ.ಆರ್.ಸುಜಾತ, ಎಂ.ಆರ್.ಆನಂದಬಾಬು, ದೀಪಾ ಆರ್.ಕುಲಕರ್ಣಿ, ಅರುಣ, ಅಮರನಾಥ್, ವೆಂಕಟರವಣಪ್ಪ ಇದ್ದರು.

ಉತ್ತಮ ಸಾಧನೆಗೆ ಎಲ್‌ಐಸಿ ಪ್ರತಿನಿಧಿ ಎಸ್.ಲಕ್ಷಮಣ ಅವರಿಗೆ ಗೌರವ

ಎಲ್‌ಐಸಿ ಪಾಲಿಸಿ ಮಾಡಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಶ್ರೀನಿವಾಸಪುರದ ಪ್ರತಿನಿಧಿ ಎಸ್.ಲಕ್ಷಮಣ ಅವರಿಗೆ ಸೋಮವಾರ, ಜಿಲ್ಲಾ ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಸಿದ್ದೇಶ್ ಪಾರಿತೋಷಕ ನೀಡಿ ಗೌರವಿಸಿದರು. ಶ್ರೀಕಾಂತ್ ಇದ್ದರು.

ರೈತ ಸಂಘದ ಪದಾಧಿಕಾರಿಗಳಿಂದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ

ಶ್ರೀನಿವಾಸಪುರ ; ಶ್ರೀನಿವಾಸಪುರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಕರ್ನಾಟಕ ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರನ್ನು ಭೇಟಿಯಾಗಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದರು.

ಶ್ರೀನಿವಾಸಪುರ: ಸಾಮಾಜಿಕ ನ್ಯಾಯ ಪಡೆಯಲು ಅಕ್ಷರ ಜ್ಞಾನ ಅಗತ್ಯ – ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಸಾಮಾಜಿಕ ನ್ಯಾಯ ಪಡೆಯಲು ಅಕ್ಷರ ಜ್ಞಾನ ಅಗತ್ಯ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಕ್ಷರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಹೆಣ್ಣು ಮಕ್ಕಳು ಅಕ್ಷರ ಕಲಿಯಲೇ ಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಅರ್ಥಪೂರ್ಣವಾದುದು ಎಂದು ಹೇಳಿದರು.
ಅನಕ್ಷರತೆ ನಿವಾರಣೆಯಲ್ಲಿ ಶಾಲಾ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇಷ್ಟರ ನಡುವೆಯೂ ಅಕ್ಷರ ಕಲಿಯದೆ ಉಳಿದ ಮಂದಿಯನ್ನು ಗುರ್ತಿಸಿ, ಕಲಿಸುವ ಕಾರ್ಯದಲ್ಲಿ ಸಾಕ್ಷರತಾ ಇಲಾಖೆ ತೊಡಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷö್ಮಮ್ಮ ಮಾತನಾಡಿ, ಸಮಾಜದಲ್ಲಿ ಅನಕ್ಷರತೆ ನಿವಾರಿಸುವಲ್ಲಿ ಸಾಕ್ಷರತಾ ಇಲಾಖೆ ಮುಖ್ಯ ಪಾತ್ರ ವಹಿಸಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಹಾದಿ ಬೀದಿ ಸಂಚರಿಸಿ ಅನಕ್ಷರಸ್ಥರನ್ನು ಗುರ್ತಿಸಿ, ಅಕ್ಷರ ಕಲಿಸುವ ಕಾರ್ಯ ಮಾಡಿದೆ. ಆ ಕಾರ್ಯದಲ್ಲಿ ಸಮಾಜದ ಅಕ್ಷರಸ್ಥ ಸಮುದಾಯವನ್ನು ತೊಡಗಿಸಿಕೊಂಡು ಸಾಕ್ಷರತೆ ಉಂಟುಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಕ್ಷರತಾ ಧ್ವಜಾರೋಹಣ ಮಾಡಲಾಯಿತು. ಸಾಕ್ಷರತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಉತ್ತಮ ಬೋಧಕರನ್ನು ಸನ್ಮಾನಿಸಲಾಯಿತು.
ಅಧಿಕಾರಿಗಳಾದ ಶಿವಮ್ಮ, ಜಿ.ವಿ.ಚಂದ್ರಪ್ಪ, ಚಲಪತಿ, ಶೇಷಾದ್ರಿ ಇದ್ದರು.

ಭಂಡಾರ್ಸಾಕಾರ್ ಪ.ಪೂ.ಕಾಲೇಜು “ಜ್ಞಾನೋದಯ” ಸ್ಪರ್ಧೆ ಉದ್ಘಾಟನೆ


ಕುಂದಾಪುರ : ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡರೆ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಆತ್ಮ ವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ತಮ್ಮ ಊರು, ಪರಿಸರ, ನಿತ್ಯ ಜೀವನ ಕ್ರಮದಲ್ಲಿ ಬರುವ ವಿಷಯಗಳು, ಸಾಧಕರ ವಿಷಯಗಳು, ನಮ್ಮ ಸಂಸ್ಕೃತಿ ಹೀಗೆ ವಿವಿಧ ವಿಚಾರಗಳ ಬಗ್ಗೆ ಜ್ಞಾನ ಪಡೆಯುತ್ತಿರಬೇಕು. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿಯುತ್ತಿರಬೇಕು” ಎಂದು ಕುಂದಾಪುರದ ಖ್ಯಾತ ಸಾಮಾಜಿಕ ಧುರೀಣ ಸುಪರ್‌ಗ್ರೇಡ್ ಇಲೆಕ್ಟಿçಕಲ್ ಕಂಟ್ರಾಕ್ಟರ್ ಕೆ. ಆರ್. ನಾಯ್ಕ್ ಹೇಳಿದರು.
ಭಂಡರ‍್ಸ್ಕಾರ‍್ಸ್ ಪ.ಪೂ.ಕಾಲೇಜು ಹಾಗೂ “ಕುಂದಪ್ರಭ” ಸಂಸ್ಥೆ ಏರ್ಪಡಿಸಿದ “ಜ್ಞಾನೋದಯ ಸ್ಪರ್ಧೆ” ಉದ್ಘಾಟಿಸಿ ಅವರು ಮಾತನಾಡಿದರು.
ಬೈಂದೂರು, ಕುಂದಾಪುರ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಂಡಾರ್‌ಕರ‍್ಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ. ಗೊಂಡ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಂಡಾರ್‌ಕರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ಹಲವು ಸಾಧಕರ ಉದಾಹರಣೆಗಳನ್ನು ನೀಡಿ ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಜೀವನದಲ್ಲಿ ಆತ್ಮ ವಿಶ್ವಾಸದಿಂದ ಮುನ್ನಡೆಯಬಹುದು ಎಂದರು.
“ಕುAದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಮಾತನಾಡಿ, “ಕರ್ನಾಟಕದಲ್ಲೇ ಹಲವು ಪ್ರಮುಖ ಸಾಧನೆಗಳನ್ನು ಮಾಡಿರುವ ಕುಂದಾಪುರ ತಾಲೂಕಿನ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಿರಬೇಕು ಎನ್ನುವ ಕಾರಣದಿಂದ ಈ “ಜ್ಞಾನೋದಯ” ಕಾರ್ಯಕ್ರಮ ಏರ್ಪಡಿಸಲಾಗಿದೆ” ಎಂದರು. ಜೀವಶಾಸ್ತç ವಿಭಾಗದ ಉಪನ್ಯಾಸಕಿ ಸರೋಜ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಸೂರಜ್ ಭಟ್ ನಿರೂಪಿಸಿದರು. ಕಾಮರ್ಸ್ ವಿಭಾಗದ ವಿದ್ಯಾಧರ ವಂದಿಸಿದರು.

Regional Seminar on Quality Indicators in Health Care was organized by S.C.S College of Nursing Sciences

Regional Seminar on Quality Indicators in Health Care was organized by S.C.S College of Nursing Sciences on 6th September 2023 at KAMC Auditorium, Mangaluru.

The inauguration of the programme commenced with a prayer song by nursing students followed by lighting the lamp.

Mrs.Freeda D’Souza, Manager, Hospital Operations, Srinivas Hospital, Mukka was the Chief Guest for the ceremony and resource person for the seminar. Mr. Anil Kumar C.M, Vice Principal, welcomed the gathering. Dr. Abhinay Sorake, Secretary and presiding Officer, Mr. U K Khalid, Administrative Officer, Prof ( Mrs.) Lolita S.M D’souza, Principal, Prof. Mrs. Ambika J R, Organizing Chairperson, and Mrs. Shifali Jyoshna Bhagyan, Organizing Secretary were present on this occasion.

The college has completed 30 successful years of imparting education and training in the field of Nursing. On the occasion the college Anthem was released by the chief guest Mrs. Freeda D’souza. The students who had won in the State Level SNA cultural and sports competitions were felicitated.

Mrs. Shifali Jyoshna Bhagyan, Organsing Secretary deleivered the vote of thanks. Mr. Rekith Pinto compered the programme. Followed by this the seminar started with a pre-test. Mrs. Freeda D’souza, delivered session on the topic Quality Accreditation and Certifications, Patient Safety Environment and Overview on NABH chapters. Pot-test was conducted at the end of the session. As many as 180 delegates were present. The certificates were distributed during the valedictory programme.