ಕೋಲಾರ ಜಿಲ್ಲೆಯ ಅಭಿವೃದ್ದಿಗೆ 74 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ – ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್

ಕೋಲಾರ,ಆ.05: ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸಚಿವರ ಅನುದಾನದಲ್ಲಿ 74 ಕೋಟಿ ರೂ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ 26 ಕೋಟಿ ರೂ, ಕೆ.ಜಿ.ಎಫ್ ನಗರಕ್ಕೆ 15 ಕೋಟಿ ರೂ, ಬಂಗಾರಪೇಟೆಗೆ 10 ಕೋಟಿ ರೂ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 74 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಅಗಿರುವ ಎತ್ತಿನ ಹೊಳೆಯ ಯೋಜನೆಯೂ ತುಮಕೂರಿನ ಬೈರಗೊಂಡ್ಲಹಳ್ಳಿ ಬಳಿಯ ಜಮೀನಿಗೆ ಸಂಬಂಧಿಸಿದಂತೆ ಅಡೆತಡೆಗಳಿರುವುದನ್ನು ಬಗೆಹರಿಸುವ ಪ್ರಯತ್ನ ಮಂದುವರೆದಿದೆ. ಕೋಲಾರ ಜಿಲ್ಲೆಗೆ 5 ಟಿ.ಎಂ.ಸಿ. ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 138 ಕೆರೆಗಳಿಗೆ ಅರ್ಧ ಭಾಗ ತುಂಬಿಸುವ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಕೆ.ಸಿ.ವ್ಯಾಲಿಯ ಮೂರನೇ ಹಂತದ ಶುದೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಅನುದಾನದಲ್ಲಿ ಜಿಲ್ಲೆಯ ರಸ್ತೆಗಳನ್ನು ಉನ್ನತೀಕರಣ ಮುಖ್ಯ ಮಾಡಲಾಗುವುದು, ರಿಂಗ್ ರಸ್ತೆಗೆ ಈಗಾಗಲೇ ಡಿ.ಪಿ.ಅರ್. ಸಿದ್ದಪಡಿಸಲಾಗುತ್ತಿದೆ. ಯರ್‍ಗೋಳ್ ಯೋಜನೆಯು 375 ಎಕರೆ ಪ್ರದೇಶವನ್ನು ಹೊಂದಿದೆ. ಇದರಲ್ಲಿ ಸರ್ಕಾರಕ್ಕೆ ಸೇರಿರುವುದು 95 ಎಕರೆ ಅಗಿದೆ. ಅರಣ್ಯ ಇಲಾಖೆಗೆ 150 ಎಕರೆ ಸ್ವಾಧೀನಕ್ಕೆ ಪಡೆದುಕೊಳ್ಳಲು ವಿಳಂಭವಾಯಿತು ಎಂದರು.
ಯರಗೋಳ್ ಯೋಜನೆಯಲ್ಲಿ 45 ಗ್ರಾಮಗಳಿಗೆ, 4 ಪಟ್ಟಣಗಳಿಗೆ, 4 ಲಕ್ಷ ಜನಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಈಗಾಗಲೇ ಶೇ 87 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. 4 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ ನೀರು ಶೇಖರಣೆ ಮಾಡಲಾಗುವುದು. ಈಗಾಗಲೇ ಎರಡು ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಂಡಿರುವುದರಿಂದ 4 ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಳ್ಳುವವರೆಗೂ ಕಾಯುವುದು ಬೇಡಾ, ಎರಡು ಓವರ್ ಹೆಡ್ ಟ್ಯಾಂಕ್ ಪೂರ್ಣಗೊಂಡಿರುವುದಕ್ಕೆ ಚಾಲನೆ ನೀಡಲು ಸೂಚಿಸಿದೆ. ಈ ನೀರಾವರಿ ಯೋಜನೆಗಳು ಸಿದ್ದರಾಮಯ್ಯ ಅವರಿಂದಲೇ ಪ್ರಾರಂಭವಾಗಿದ್ದು, ಇದು ಪೂರ್ಣಗೊಳ್ಳುವುದು ಸಹ ಸಿದ್ದರಾಮಯ್ಯ ಅವರಿಂದಲೇ ಅಗುತ್ತದೆ ಎಂದು ಖಚಿತ ಪಡಿಸಿದರು.
ಪ್ರಶ್ನೆಯೊಂದಕ್ಕೆ ಕೆ.ಸಿ. ವ್ಯಾಲಿ ನೀರು ಯರಗೋಳ್ ನೀರಿಗೆ ಸೇರ್ಪಡೆಯಾಗುತ್ತಿಲ್ಲ. ಸೇರ್ಪಡೆಯಾಗಲು ಬಿಡುವುದಿಲ್ಲ ಯರಗೋಳ ಕುಡಿಯುವ ನೀರು, ಕೆ.ಸಿ.ವ್ಯಾಲಿ ನೀರು ಬಳಕೆ ಹಾಗೂ ಕೃಷಿಯ ಅಂತರ್ಜಲ ಅಭಿವೃದ್ದಿಗೆ ಬಳಿಸುವ ನೀರು ಅಗಿದೆ. ಈ ಬಗ್ಗೆ ಈಗಾಗಲೇ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿಯನ್ನು ಪಡೆಯಲಾಗಿದೆ. ಈ ಕುರಿತು ಯಾವೂದೇ ಸಂಶಯ ಬೇಡ, ಇದರಿಂದ ಯಾವೂದೇ ಬೆಳೆಗೂ ಹಾನಿಯಾಗುತ್ತಿಲ್ಲ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಕೆ.ಸಿ.ವ್ಯಾಲಿ ನೀರಿಗೂ ಸಂಬಂಧವಿಲ್ಲ ಎಂದು ಪ್ರತಿ ಪಾದಿಸಿದರು.
ರೋಗಗಳು ಬರುತ್ತಿರುವುದು ಕಳಪೆ ಭಿತ್ತನೆಯಿಂದಾಗಿ, ಕಳಪೆ ಮಟ್ಟದ ನರ್ಸರಿಗಳ ಸಸಿಗಳಿಂದಾಗಿ ಬೆಳೆಗಳು ಹಲವಾರು ರೋಗಗಳಿಗೆ ಗುರಿಯಾಗುತ್ತಿದೆ. ಕೆಲವರು ಇದನ್ನು ತಿರುಚುವ ಮೂಲಕ ಕೆ.ಸಿ.ವ್ಯಾಲಿ ನೀರಿನ ಮೇಲೆ ಆರೋಪಿಸಲಾಗುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನರ್ಸರಿಗಳು ತೋಟಗಾರಿಕೆ ಅನುಮತಿ ಪಡೆಯದೆ ಸಸಿಗಳನ್ನು ಮಾರಾಟ ಮಾಡುವಂತಿಲ್ಲ ಎಂದರು.
ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದು ನಿಜ. ಶೇ 60 ರಷ್ಟು ಮಾತ್ರ ಭರ್ತಿ ಇದೆ. ಉಳಿದಂತೆ ಭರ್ತಿ ಮಾಡಲು ಪ್ರಸ್ತಾವನೆ ಸರ್ಕಾರದ ಮುಂದಿದೆ ಗುತ್ತಿಗೆ, ಹೊರಗುತ್ತಿಗೆ ಅಧಾರದ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರ ಸ್ವಷ್ಟನೆಗೆ ಧ್ವನಿಗೊಡಿಸಿದ ಶಾಸಕ ಕೊತ್ತೂರು ಮಂಜುನಾಥ್ ಅವರು ಕೋಲಾರ ನಗರಸಭೆಯಲ್ಲಿ ಈಗಾ 15 ಮಂದಿ ಸಿಬ್ಬಂದಿಗಳ ನೇಮಕ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರಸಭೆ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲು ಆಯುಕ್ತರಿಗೆ ಹಾಗೂ ಮುಖ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ಪಾವತಿಸದ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಅದೇಶಿಸಲಾಗಿದೆ. ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ ತೋರುವಂತ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ಈಗಾಗಲೇ ನಗರದ ಶ್ರೀ ದೇವರಾಜ್ ವೈದ್ಯಕೀಯ ಕಾಲೇಜು ಹಾಗೂ ಆರ್.ಎಲ್ ಜಾಲಪ್ಪ ಆಸ್ಪತ್ರೆಯು ಸುಮಾರು 11 ಕೋಟಿ ರೂ ತೆರಿಗೆಯನ್ನು ನಗರಸಭೆಗೆ ಬಾಕಿ ಇರಿಸಿಕೊಂಡಿದೆ. ಇದರ ಜೂತೆಗೆ ನಗರ ಹೊರವಲಯದ ಕಲ್ಯಾಣ ಮಂದಿರಗಳು, ರೆಸಾರ್ಟ್‍ಸ್ಸ್‍ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಬಳಕೆಯ ಕಟ್ಟಡಗಳು ನಗರಸಭೆಗೆ ತೆರಿಗೆಯನ್ನು ಪಾವತಿ ಮಾಡದೆ ಇರುವುದು ಗಮನಕ್ಕೆ ಬಂದಿದ್ದು, ಇವುಗಳ ವಿರುದ್ದ ನೋಟಿಸ್ ಜಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರರನ್ನೆ ವಾರ್ಡನ್ ಹುದ್ದೆಯನ್ನು ನಿರ್ವಹಿಸಲು ನೀಡಿರುವ ಹಿನ್ನಲೆಯಲ್ಲಿ ಬಹಳಷ್ಟು ವ್ಯಾತ್ಯಾಸಗಳು ಆಗುತ್ತಿದೆ ಎಂಬ ದೂರುಗಳು ಬಂದಿದೆ. ಈ ಸಂಬಂಧವಾಗಿ ಯಾವೂದೇ ಕಾರಣಕ್ಕೂ ಡಿ ಗ್ರೂಪ್ ಸಿಬ್ಬಂದಿಗೆ ವಾರ್ಡನ್ ಹುದ್ದೆ ನೀಡಬಾರದು. ವಿದ್ಯಾರ್ಥಿ ನಿಲಯಗಳು ಯಾವೂದೇ ಕಾರಣಕ್ಕೂ ಮೂಲ ಭೂತ ಸೌಲಭ್ಯಗಳಿಮದ ವಂಚಿತವಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆಲವು ಜಮೀನುಗಳನ್ನು ಅನುಮತಿ ಇಲ್ಲದೆ ಲೇಔಟ್‍ಗಳಾಗಿ ಪರಿವರ್ತಿಸಲಾಗಿದೆ, ಭೂ ಪರಿವರ್ತನೆ ಅಗಿದ್ದರೆ ಬಿ ಖಾತೆ ನೀಡಬಹುದಾಗಿದೆ. ಲೇಔಟ್‍ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರೆ ಮಾತ್ರ ಅನುಮತಿ, ಪರವನಾಗಿಗಳನ್ನು ನೀಡಬೇಕು ಎಂದ ಅವರು ಕಟ್ಟಡಗಳಿಗೆ ಖಾತೆ ಇಲ್ಲದ ಮಾತ್ರಕ್ಕೆ ತೆರಿಗೆ ಪಾವತಿಸಬಾರದು ಎಂದು ಕಾನೂನಿನಲ್ಲಿ ಇಲ್ಲ. ತೆರಿಗೆಯನ್ನು ಮುಲಾಜಿಲ್ಲದೆ ವಸೂಲಾತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ತೆರಿಗೆಗೆ ಸಂಬಂಧಿಸಿದಂತೆ ಆನ್‍ಲೈನ್ ವ್ಯವಸ್ಥೆ ಬಳಿಸಿಕೊಳ್ಳುವ ಜೂತೆಗೆ ಸ್ಯಾಟ್ ಲೈಟ್ ಬಳಕೆಯಿಂದಲೂ ತೆರಿಗೆ ವಂಚಿತರನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಸ್ವಷ್ಟಪಡಿಸಿದರು.
ಕೋಲಾರಮ್ಮ ಕೆರೆಯನ್ನು ಅಭಿವೃದ್ದಿಪಡಿಸಿ ಪ್ರವಾಸಿತಾಣವಾಗಿ ಪರಿವರ್ತಿಸಲು 20 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದರ ಜೂತೆಗೆ ಉದ್ಯಾನವನಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳು ಕಳಪೆ ಇದ್ದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗಿರುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಇಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರದ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೆಂದಟ್ಟಿ ಬಳಿ 15 ಎಕರೆ ಜಮೀನು ಗುರುತಿಸಲಾಗಿದೆ. ಈ ಹಿಂದೆ ಹಲವಾರು ಅಡೆತಡೆಗಳಿದ್ದ ಕಾರಣಕ್ಕೆ ತ್ಯಾಜ್ಯ ಘಟಕ ಸ್ಥಾಪನೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲಿ ಅದಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳುವುದು ಎಂದು ಸಚಿವರು ನುಡಿದರು.
ನಗರ ಹೊರವಲಯದ 500 ಎಕರೆ ಜಾಗದಲ್ಲಿ ಕೆ.ಯು.ಡಿ.ಎ. ಲೇಔಟ್ ಅಭಿವೃದ್ದಿಪಡಿಸಿ ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡಲು ಚಿಂತಿಸಲಾಗಿದೆ. ಇದರಲ್ಲಿ ಜಮೀನು ನೀಡುವಂತ ರೈತರಿಗೆ ಶೇ 50 ನಿವೇಶಗಳನ್ನು ನೀಡಲಾಗುವುದು, ಉಳಿದ ಶೇ 50 ನಿವೇಶಗಳು ಕೆ.ಯು.ಡಿ.ಎ. ಸ್ವಾಧೀನಕ್ಕೆ ಪಡೆಯುವಂತ ಯೋಜನೆ ರೂಪಿಸಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಲ್ಲು ಮತ್ತು ಮರಳು, ಮಣ್ಣು ಗಣಿಗಾರಿಕೆಗಳಿಂದ ಕೆರೆಗಳು, ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳು ನಾಶವಾಗುತ್ತಿದೆ. ಒಂದು ಕಡೆ ಅನುಮತಿ ಪಡೆದು ಹತ್ತು ಕಡೆ ಗಣಿಗಾರಿಕೆ ನಡೆಸುತ್ತಿದ್ದಾರೆ, ಕ್ರಷರ್‍ಗಳ ಹಾವಳಿ ತೀವ್ರವಾಗಿದೆ. ಇದರ ಜೂತೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ತುಂಬಿ ಸಂಚರಿಸುವುದರಿಂದ ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳಲ್ಲಿ ಬಂಡೆಗಳನ್ನು ಸಿಡಿಸುವ ಸಂದರ್ಭದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡರು ಸಹ ಗಮನಕ್ಕೆ ಬಾರದಂತೆ ಮರೆಮಾಚಲಾಗುತ್ತಿದೆ ಇದರ ವಿರುದ್ದ ಹಲವಾರು ಹೋರಾಟಗಳು, ದೂರುಗಳು ನೀಡಿದ್ದರೂ ಯಾವೂದೇ ಕ್ರಮ ಇಲ್ಲ ಎಂಬ ಆರೋಪಗಳು ಹಿಂದಿನ ಸರ್ಕಾರದಲ್ಲಿತ್ತು. ಅದರೆ ಕಾಂಗ್ರೇಸ್ ಸರ್ಕಾರ ಬಂದ ನಂತರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವೂದಾದರೂ ಖಚಿತವಾದ ಪ್ರಕರಣಗಳು ದಾಖಲೆ ಸಮೇತ ನೀಡಿದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಜಿಲ್ಲೆಯ ಸಮಸ್ಯೆಗಳು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಚಟುವಟಿಕೆಗಳ ಕುರಿತು ಸಚಿವರಿಗೆ ಪರಿಚಯಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಹಾಗೂ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಜಿಲ್ಲೆಯ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಸಂವಾದದಲ್ಲಿ ಅನೇಕ ಪತರಕರ್ತರು ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಆಹಮದ್, ಶಾಸಕರಾದ ಶ್ರಿಮತಿ ರೂಪಕಲಾ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಅಂಜನಪ್ಪ ಉಪಸ್ಥಿತರಿದ್ದರು.

ಕಥಾಪಾಠಾಂತ್ ಸಿರಿವಂತಾಚ್ಯಾ ಸಾಹಿತ್ಯಾಚೆರ್ ರಾಶ್ಟ್ರೀಯ್ ಮಟ್ಟಾಚೆಂ ಅಧ್ಯಯನ್ 

ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜ್ ಗೊಂಯ್ ಹಾಣಿಂ ಮಾಂಡುನ್ ಹಾಡ್ಲೆಲೆಂ, ರಾಶ್ತ್ರೀಯ್ ಮಟ್ಟಾಚ್ಯಾ ವೆಬಿನಾರಾಂಚಿ ಕಥಾಪಾಠ್ ಚೊವ್ತಿ ಶಿಂಕಳ್ ಜುಲಾಯ್ ಮಯ್ನ್ಯಾಚ್ಯಾ ಶನಿವಾರ್ ಸಾಂಜೆ ಸಾಡೆ ಚ್ಯಾರ್ ಥಾವ್ನ್ ಸ ವೊರಾಂ ಪರ್ಯಾಂತ್ ಚಲ್ಲಿ. ಕಾರ್ಮೆಲ್ ಕೊಲೆಜ್, ಶ್ರೀ ಮಲ್ಲಿಕಾರ್ಜುನ ಕೊಲೆಜ್, ಫಾ|ಆಗ್ನೆಲ್ ಕೊಲೆಜ್ ಪಿಲಾರ್ ತಶೆಂಚ್ ಸೈಂಟ್ ರೋಸರೀ ಕೊಲೆಜ್ ಹಾಂಚ್ಯಾ ಸಹಭಾಗಿತ್ವಾಂತ್ ಜುಲಾಯ್ 1 ತಾರಿಕೆರ್ ಧೆಂಪೆ ಕೊಲೆಜಿಚ್ಯಾ ಪ್ರಿನ್ಸಿಪಾಲಾನ್ ಡೊ|ವೃಂದಾ ಬೋರ್ಕರಾನ್ ಉಗ್ತಾವಣ್ ಕೆಲ್ಲ್ಯಾ ಹ್ಯಾ ವೆಬಿನಾರಾಂತ್ ದಾಯ್ಜಿವರ್ಲ್ಡ್ ಹಫ್ತ್ಯಾಳ್ಯಾಚ್ಯಾ ಸಂಪಾದಕ್ ಮಾನೆಸ್ತ್ ಹೇಮಾಚಾರ್ಯ, ಕಾಣಿಕ್ ನೇಮಾಳ್ಯಾಚೊ ಆಧ್ಲೊ ಸಂಪಾದಕ್ ಜಾವ್ನಾಸ್ಲ್ಯಾ ಅವಿಲ್ ರಾಸ್ಕಿನ್ಹಾನ್, ವೀಜ್ ಇ-ಪತ್ರಾಚ್ಯಾ ಸಂಪಾದಕ್ ಡೊ|ಆಸ್ಟಿನ್ ಪ್ರಭುನ್ ತಶೆಂಚ್ ಸಿರಿವಂತಾಚೊ ಖಾಸ್ ಮಿತ್ರ್ ಜಾವ್ನಾಸ್ಲ್ಯಾ ಮಾ|ಪ್ರತಾಪ್ ನಾಯ್ಕ್ ಹಾಣಿಂ ಸಿರಿವಂತಾಚಿ ಸವಿಸ್ತಾರ್ ಒಳೊಕ್ ಕರುನ್ ದಿಲಿ. 

ಜುಲಾಯ್ 8 ತಾರಿಕೆರ್ ಸಿರಿವಂತಾಚ್ಯಾ 52 ಮೊಟ್ವ್ಯಾ ಕಥೆಂಚೆರ್ ತಶೆಂಚ್ ಸಾಳಕ್ ಪ್ರಕಾಶನಾಚ್ಯಾ 88 ಪುಸ್ತ್ಕಾಂಚಿ ಸವಿಸ್ತಾರ್ ಒಳೊಕ್ ತಶೆಂಚ್ ಸಿರಿವಂತಾಚ್ಯಾ ಮೊಟ್ವ್ಯಾ ಕಥೆಂಚೆರ್ ಖೊಲಾಯೆನ್ ಕೆಲ್ಲೆಂ ಕೆಲ್ಲೆಂ ಅಧ್ಯಯನ್ ವಲ್ಲಿ ಕ್ವಾಡ್ರಸಾನ್ ಸಾದರ್ ಕೆಲೆಂ.

ಜುಲಾಯ್ 15 ತಾರಿಕೆರ್ ಸಿರಿವಂತಾಚ್ಯಾ ಮೊಟ್ವ್ಯಾ ಕಾಣಿಯಾಂನಿ ಅಸ್ತುರಿಚೊ ಪಾತ್ರ್ ವಿಶ್ಯಾಚೆರ್ ಖೊಲಾಯೆನ್ ಅಧ್ಯಯನ್ ಕೆಲ್ಲೊ ಪ್ರಭಂಧ್ ಫೆಲ್ಸಿ ಲೋಬೊ ದೆರೆಬೈಲ್ ಹಿಣೆಂ ಸಾದರ್ ಕೆಲೊ.

ಜುಲಾಯ್ 22 ತಾರಿಕೆರ್ ಸಿರಿವಂತಾಚ್ಯಾ ’ಜೆರಿ ಲುವಿಸ್’ ಲಿಖ್ಣೆನಾಂವಾಖಾಲ್ ರಾಕ್ಣೊ ಪತ್ರಾಂತ್ ಚಲಯಿಲ್ಲ್ಯಾ ’ಜಿವಿತಾಂತ್ಲೊ ತಮಾಸೊ’ ಅಂಕಣಾಂತ್ಲ್ಯಾ ಹಾಸ್ಯ್ ಬರ್ಪಾಂಚೆರ್ ಪ್ರಭಂಧ್ ಸಾದರ್ ಕೆಲೊ.

ಜುಲಾಯ್ 29 ತಾರಿಕೆರ್ ಧೆಂಪೆ ಕೊಲೆಜಿಚ್ಯಾ ಪ್ರಿನ್ಸಿಪಾಲ್ ಪ್ರೊ|ವೃಂದಾ ಬೋರ್ಕರಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್‌ಲ್ಲ್ಯಾ ನಿಮಾಣ್ಯಾ ವೆಬಿನಾರಾಂತ್ ’ಸಾಳಕಾಚ್ಯಾ ಸಿರಿವಂತಾಚ್ಯೊ ಕಥಾ’ ನಾಗರಿ ಲಿಪಿಯೆಚ್ಯಾ ಇ-ಪುಸ್ತಕಾಚೆಂ ವಿಮೋಚನ್ ಡೊ|ಚಂದ್ರಲೇಖ ಡಿಸೋಜ್ ಹಿಣೆಂ ಕರುನ್ ವೆಗ್-ವೆಗಳ್ಯಾ ಲಿಪಿಂನಿ ಆಸ್ಚ್ಯಾ ಅಮೊಲಿಕ್ ಕೊಂಕಣಿ ಸಾಹಿತ್ಯಾಕ್ ಲಿಪಿಯಂತರ್ ಕರುನ್ ಆಶಾವಾದಿ ಪ್ರಕಾಶನಾನ್ ಕೊಂಕಣಿಕ್ ಖೂಪ್ ಯೋಗ್‌ದಾನ್ ದಿಲಾಂ, ತಶೆಂಚ್ ಕಥಾಪಾಠ್ ಮ್ಹಳ್ಳ್ಯಾ ಅಧ್ಯಯನ್ ಮಾಧ್ಯಮಾಂತ್ ಕೊಂಕಣಿ ಸಾಹಿತ್ಯಾಚೆಂ ಅಧ್ಯಯನ್ ಕರುಂಕ್ ಏಕ್ ಬರಿಚ್ ವೇದಿ ತಯಾರ್ ಕೆಲ್ಯಾ ಮ್ಹಣಾಲಿ. ’ಸಾಳಕಾಚ್ಯಾ ಸಿರಿವಂತಾಚ್ಯೊ ಕಥಾ’ ಕನ್ನಡ ಲಿಪಿಯೆಚ್ಯಾ ಇ-ಪುಸ್ತಕಾಚೆಂ ವಿಮೋಚನ್ ಮಾ|ಬಾ|ರಿಚಾರ್ಡ್ ರೇಗೊನ್ ಕರುನ್, ಅಪ್ಣಾಕ್ ಸಿರಿವಂತಾಸವೆಂ ಆಸ್ಲೆಲ್ಯಾ ಭಾಂದಾವಿಶಿಂ ಉಲವ್ನ್, ಕೊಂಕಣಿ ಸಾಹಿತ್ಯಾಕ್ ಶೈಕ್ಷಣಿಕ್ ಪಾಂವ್ಡಾರ್ ವರುನ್ ತಾಚೊ ಪೋಸ್ ಕರ್ಚ್ಯಾ ಆಶಾವಾದಿ ಪ್ರಕಾಶನಾಚಿ ಥೊಕ್ಣಾಯ್ ಕೆಲಿ.

ಡೊ|ಆಸ್ಟಿನ್ ಪ್ರಭುನ್ ದೆ|ಫ್ರೆಡ್ರಿಕ್ ಕ್ವಾಡ್ರಸ್ ಸ್ಮಾರಕ್ ಆಶಾವಾದಿ ಪ್ರಕಾಶನಾಚ್ಯಾ ಡಿಜಿಟಲ್ ಪುರಸ್ಕಾರ್ 2023 ಜಿಕ್ಪ್ಯಾಂಚಿಂ ನಾಂವಾಂಚಿ ಉಚಾರ್ಣಿ ಕೆಲಿ. ಫೆಲ್ಸಿ ಲೋಬೊ ದೆರೆಬೈಲ್ ಹಿಕಾ ಪಯ್ಲೆಂ ಇನಾಮ್ ತಶೆಂಚ್ ಫ್ಲಾವಿಯಾ ಆಲ್ಬುಕರ್ಕ್ ಹಿಕಾ ದುಸ್ರೆಂ ಇನಾಮ್ ಫಾವೊ ಜಾಲೆಂ.

ಹೆಚ್ ಸಂಧರ್ಭಾಚೆರ್ ಹೇಮಾಚಾರ್ಯ ಆನಿ ಸಹಭಾಗಿತ್ವ್ ಜೊಡ್ಪಿ ಕೊಲೆಜಿಚ್ಯಾ ಮುಖೆಸ್ತಾಂನಿ ಅಪ್ಲೆ ಸಂಧೇಶ್ ದಿಲೆ. ಮಾ|ದೊ|ವಿಲ್ಲಿ ಡಿಸಿಲ್ವಾನ್ ಸಿರಿವಂತಾವಿಶಿಂ ಉಲವ್ನ್ ಸಭಾರ್ ಗಜಾಲಿ (ಜ್ಯೊ ಚಡ್ತಾವಾಂಕ್ ಯೆದೊಳ್ ಕಳಿತ್ ನಾತ್‌ಲ್ಲ್ಯೊ) ವಾಂಟುನ್ ಘೆತ್ಲ್ಯೊ. ಧೆಂಪೆ ಕೊಲೆಜಿಂತ್ ಭಾರತೀಯ್ ಭಾಸೊ ವಿಭಾಗಾಚಿ ಮುಖೆಸ್ತ್ ಬಾಯ್ ಅಂಜು ಸಾಖರ್‌ದಾಂಡೆನ್ ಸಯ್ರ್ಯಾಂಚಿ ಒಳೊಕ್ ಕರುನ್ ದಿಲಿ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ. ದೀಪಾ ರಾಯ್ಕರ್ ಆನಿ ಗೌರಂಗ್ ಭಾಂದ್ಯೆನ್ ಹ್ಯಾ ವೆಬಿನಾರಾಚೆಂ ಸೂತ್ರ್ ಸಂಚಾಲನ್ ಕೆಲೆಂ.

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ಶ್ರೀ ವೆಂಕಟರಮಣ ದೇವರಿಗೆ 1008 ಮಂಗಳಾರತಿ ಸೇವೆ

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ದಿನಾಂಕ 13-08-2023 ರಂದು ರವಿವಾರ ಏರ್ಪಡಿಸಲಾಗಿದೆ. ಶ್ರೀ ವೆಂಕಟರಮಣ ದೇವರಿಗೆ ಒಂದು ಸಾವಿರದ ಎಂಟು ಮಂಗಳಾರತಿ ಪೂಜೆ ಸಮರ್ಪಿಸುವ ಕಾರ್ಯಕ್ರಮ ಬೆಳಿಗ್ಗೆ 8:30 ರಿಂದ ಆರಂಭಗೊಳ್ಳಲಿದೆ. “ಅಷ್ಟಾಧಿಕ ಸಹಸ್ರ ಆರತಿ” ಎಂದು ಕರೆಯಲ್ಪಡುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ
ಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’  ಕುಂದಾಪುರ ಅಭಾಕಸ್ ಸೆಂಟರ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು/International Abacus and Mental Arithmetic Competition ‘world city cup-23’ Kundapur Abacus Center students won many awards

ಐಡಿಯಲ್ ಪ್ಲೇ ಅಭಾಕಸ್ ನ   ಅಂತಾರಾಷ್ಟ್ರೀಯ ಮಟ್ಟದ   ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’  30 ನೇ ಭಾನುವಾರ    ತಮಿಳುನಾಡಿನ  ಮಹಾಬಲಿಪುರಂ ನಲ್ಲಿ ನಡೆಯಿತು .19 ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದರಲ್ಲಿ ಕರ್ನಾಟಕದ ರಾಜ್ಯದ ವತಿಯಿಂದ   ಕುಂದಾಪುರದ ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿದಿಸಿದ 10 ವಿದ್ಯಾರ್ಥಿಗಳಲ್ಲಿ  ಒಂದು ಬಂಗಾರದ ಪ್ರಶಸ್ತಿ ಮತ್ತು 9 ಬೆಳ್ಳಿ(silver medal)ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.

ಇದರಲ್ಲಿ ಅರಟೆ ಶ್ರೀಮತಿ ರೇಷ್ಮಾ ಮತ್ತು ರಾಜೇಶ್ ಅವರ ಪುತ್ರ ಲಕ್ಷ ರಾಜೇಶ್ ಬಂಗಾರದ ಪದಕ ಪಡೆದಿದ್ದಾನೆ. ಉಳಿದ ವಿದ್ಯಾರ್ಥಿಗಳಾದ ಚೈತನ್ಯ,ಆಧ್ಯಾ ಕಾಂಚನ್, ಸ್ಕಂಧನ, ಸುಹಾಸ್ ಭಟ್, ಪರ್ವಧಿ PM, ರಿಯಾ ಕುಂದರ್, ಕ್ರಿಷ್ಟನ್ ಪಿಂಟೋ,ಸ್ಟೇರ್ರೆಲ್, ಅಮೃತ E K, ಮತ್ತು ಆದಿತ್ಯ ಆರ್ ಕೋಟ ವಿವಿಧ ವಿಭಾಗದಲ್ಲಿ ಬೆಳ್ಳಿಯ ಪ್ರಶಸ್ತಿ ಪಡೆದಿದ್ದಾರೆ’ ಎಂದು ಕುಂದಾಪುರ ಅಭಾಕಾಸ್ ಸಂಸ್ಥೆಯ ವಿಭಾಗದ ಮುಖ್ಯಸ್ಥ ಅಶೋಕ ಕಾಂಚನ ತಿಳಿದ್ದಾರೆ.

International Abacus and Mental Arithmetic Competition ‘world city cup-23’ Kundapur Abacus Center students won many awards

Ideal Play Abacus International Level Abacus and Mental Arithmetic Competition ‘world city cup-23’ was held on 30th Sunday at Mahabalipuram, Tamil Nadu. Around 3000 students from 19 countries participated.

Among the 10 students represented by Abacus Center in Kundapur from the state of Karnataka, one gold medal and 9 silver medals have brought glory to state.

Laksh Rajesh, son of Arate Mrs. Reshma and Rajesh, won the gold medal. The rest of the students, Chaitanya, Adhya Kanchan, Skandhana, Suhas Bhatt, Parvadhi PM, Riya Kunder, Kristan Pinto, Sterrell, Amrita EK, and Aditya R Kota have won silver awards in various categories,” said Ashoka Kanchan, head of the Abacus Kundapur institute.

 

 

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣ – ಮೂವರ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣವಾಗಿದ್ದು ಶನಿವಾರ ಮುಂಜಾನೆ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಮೈತೆಯ್ ಸಮುದಾಯದ ಮೂವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಘಟನೆಯು ಮೈತೆಯ್ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆ ಮತ್ತು ಕುಕಿ-ಜೋಮಿ ಪ್ರಾಬಲ್ಯವಿರುವ ಚುರಾಚಂದ್‌ಪುರ ಜಿಲ್ಲೆಯ ಗಡಿಯಲ್ಲಿರುವ ಕ್ವಾಕ್ಟಾ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ಪ್ರಸ್ತುತ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ ಎನ್ನಲಾಗಿದೆ.

ಹಿಂದೆ ನೆಡದ ಹಿಂಸಾಚಾರದಲ್ಲಿ ಸಾವನಪ್ಪಿದ 35 ಕುಕಿ-ಜೋಮಿ ಜನರ ಸಾಮುಹಿಕ ಅಂತ್ಯಕ್ರಿಯೆ ನೇರವೇರಿಸಿದ ನಂತರ ಮತ್ತೆ ಹಿಂಸಾಚಾರ ಉಲ್ಭಣಗೊಂಡಿದ್ದು, ಪರಿಣಾಮ ಮೂವರು ಸಾವನಪ್ಪಿದ್ದಾರೆ. ಟೊರ್ಬಂಗ್‌ ಪ್ರದೇಶದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು. ಇದು ಸಹ ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶವಾಗಿದ್ದು, ಮೇ 03 ರಂದು ಇಲ್ಲಿಯೇ ಹಿಂಸಾಚಾರ ಆರಂಭವಾಗಿತ್ತು. ಅದೇ ಸ್ಥಳದಲ್ಲಿ ಮೃತ ಕುಕಿ ಜನರ ಅಂತ್ಯ ಕ್ರಿಯೆ ನಡೆದುದ್ದರಿಂದ ಅಲ್ಲಿನ ಜನರು ಕೋಪೋದ್ರಿಕ್ತರಾಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸರ್ಕಾರ ತೀವ್ರ ಎಚ್ಚರಿಕೆ ವಹಿಸಬೇಕಿತ್ತು ಎಂದು ಅಭಿಪ್ರಾಯ ಪಡಲಾಗಿದೆ.

ಈ ಸಾಲಿನ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ

ಕುಂದಾಪುರ: ಈ ವರ್ಷ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2022ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಇಂದ್ರ ಕುಮಾರ್ ಹೆಚ್.ಬಿ ಅವರ ” ಎತ್ತರ” ಕಾದಂಬರಿಗೆ ದೊರೆತಿದೆ. ಕಥೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇವರು ಸರಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಲೇಖಕರುಗಳಾದ ಡಿ.ಎಸ್.ಚೌಗುಲೆ, ಶ್ರೀನಿವಾಸ ಮೂರ್ತಿ, ಅನುಪಮಾ ಪ್ರಸಾದ್ ಅವರು ನಿರ್ಣಾಯಕರಾಗಿ ಸಹಕರಿಸುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗೋವಾ-ಕರ್ನಾಟಕ ಮಾನವ ಅಭಿವೃದ್ಧಿ ರಕ್ಷಣಾ ಸಂಸ್ಥೆ ಮಹಿಳಾ ಘಟಕಗಳ ಅಧ್ಯಕ್ಷೆ ಖತೀಜಾ ಖಾನ್ ಅವರಿಂದ ವನಮಹೋತ್ಸವಕ್ಕೆ ಚಾಲನೆ

ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ರಕ್ಷಣಾ ಸಂಸ್ಥೆ ಇದರ ಗೋವಾ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಘಟಕಗಳ ಅಧ್ಯಕ್ಷೆಯಾಗಿರುವ ಶ್ರೀಮತಿ ಖತೀಜಾ ಖಾನ್ ಅವರು ವನಮಹೋತ್ಸವ ಅಂಗವಾಗಿ ಕಾರವಾರ ಜಿಲ್ಲೆಯ ಮಾಜಾಳಿಯ ಅಂಗನವಾಡಿ ಶಾಲೆಯ ತೋಟದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಘಟಕದ ರಾಜ್ಯ ಸದಸ್ಯೆ ಶ್ರೀಮತಿ ದೀಕ್ಷಾ ಕುಲ್ವೇಕರ್ ಅವರು ಉಪಸ್ಥಿತರಿದ್ದರು. ಕಾರ್ಯ ಕ್ರಮದ ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹೆಚ್ಚಿನ ಹಣ ವಸೂಲಿ : ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಶರೀನ್‍ತಾಜ್ ದಾಳಿ

ಶ್ರೀನಿವಾಸಪುರ 1 : ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹೆಚ್ಚಿನ ಮೊತ್ತದ ಹಣವನ್ನು ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಶರೀನ್‍ತಾಜ್ ದಾಳಿ ನಡೆಸಿದರು.
ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿನ ಕೆಲ ಸೈಬರ್ ಕೇಂದ್ರಗಳ ಮೇಲೆ ಶುಕ್ರವಾರ ದಾಳಿ ನಡೆಸಿ ಸೈಬರ್ ಸೆಂಟರ್‍ನ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಮಾತನಾಡಿದರು.
ಸಾರ್ವಜನಿಕರು ಕೆಲ ಸೈಬರ್ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ತಾಲೂಕು ಕಛೇರಿ ಮುಂಭಾಗ ಕೆಲ ಸೈಬರ್ ಸೆಂಟರ್‍ಗಳಿ ಬೇಟಿ ಮಾಡಿ ಮಾತನಾಡುತ್ತಾ, ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂದಿಸಿದಂತೆ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಕಾರಣಕ್ಕೂ ಫಲಾನುಭವಿಗಳಿಂದ ಹಣ ವಸೂಲಿ ಮಾಡಬಾರದು’ ಎಂದು ಹೆಚ್ಚರಿಸಿ, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ನಡೆದುಕೊಂಡರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ, ಚಿಂತಾಮಣಿ ಸರ್ಕಲ್ ಬಳಿ ಇರುವ ಉರ್ದು ಶಾಲೆಯಲ್ಲಿ, ಹಾಗೂ ಆಯ್ದ ಬಡವಾಣೆಗಳಲ್ಲಿ ಪುರಸಭೆಯಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಸೈಬರ್ ಕೇಂದ್ರವನ್ನು ತೆರಯಲಾಗಿದ್ದು, ಅಲ್ಲಿ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ನಿರೀಕ್ಷಕ ಜೆ.ಸಿ.ನಾರಾಯಣಸ್ವಾಮಿ , ಆರ್‍ಐ ಮುನಿರೆಡ್ಡಿ ಜೊತೆ ಇದ್ದರು.

PTA Annual General Meeting of St Agnes PU College / ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆ

PTA Annual General Meeting of St Agnes PU College was held on 3 August 2023 at 3.15 pm in the Auditorium. The meet would enable parents and teachers to communicate clearly and this can have a positive influence on the performance of the students and enable them to work effectively.

The programme began with the screening of a prayer song to invoke the blessings of God MrsChrystle Almeida welcomed the audience and introduced the chief guest DrKavyashree K.B, HOD and Assistant Professor, Dept. of Clinical Psychology, St Agnes Centre for Post Graduate Studies and Research, Mangalore. The toppers Samruddhi D, Renisha Viola Dsouza and SamhitaPrabhu from the Science, Commerce and Arts streams respectively were honoured along with their parents. Subject lecturers of the Toppers were also felicitated on the occasion.

The chief guest DrKavyashree K.B addressed the audience and spoke on the need to bridge the chasm that has become a hallmark of parent child relationships in the contemporary world due to various reasons, use of mobile phones, work pressure, stress etc, being a few of them. “We have to raise ourselves before we raise our child”, said the chief guest. She outlined a few effective strategies that if implemented can bring about transformation in the quality of this relationship.

Inspector GopalkrishnaBhat, Mangalore East Police Station addressed the parents on the occasion and urged the parents and teachers to be collaborators working towards the welfare of their children. He cautioned the parents about the dangers arising from substance abuse, mobile phones and underage driving and counselled them to be vigilant.

Dr P V Shobha compered the programme, Mr Joslyn Lobo, PTA Member proposed the vote of thanks. The Principal SrNorine Dsouza read out the PTA report for the year 2022-23 and informed the parents about the upcoming exams and sought the cooperation of the parents for the growth and welfare of their ward. MrsVenitiaRasquinha read the statement of accounts for the year 2022-23 and Mr Mathew, Secretary, PTA read the minutes of the meeting for the year 2022-23. DrSr Maria Roopa A.C, Chairperson, St Agnes Institutions, Sr Janet Sequeira,Vice Principal,Mrs Asha Sanjivana PTA Vice-President, MrAvinashKrishnakumar, PTA Joint Secretaryand the faculty graced the occasion.

ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆಯು 3 ಆಗಸ್ಟ್ 2023 ರಂದು ಮಧ್ಯಾಹ್ನ 3.15 ಕ್ಕೆ ಸಭಾಂಗಣದಲ್ಲಿ ನಡೆಯಿತು. ಸಭೆಯು ಪೋಷಕರು ಮತ್ತು ಶಿಕ್ಷಕರಿಗೆ ಸ್ಪಷ್ಟವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ ಮತ್ತು ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಶ್ರೀಮತಿ ಕ್ರಿಸ್ಟಲ್ ಅಲ್ಮೇಡಾ ದೇವರ ಆಶೀರ್ವಾದವನ್ನು ಕೋರುವ ಪ್ರಾರ್ಥನಾ ಗೀತೆಯ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಸಭಿಕರನ್ನು ಸ್ವಾಗತಿಸಿತು ಮತ್ತು ಮುಖ್ಯ ಅತಿಥಿ ಡಾ.ಕಾವ್ಯಶ್ರೀ ಕೆ.ಬಿ, ಎಚ್ಒಡಿ ಮತ್ತು ಸಹಾಯಕ ಪ್ರಾಧ್ಯಾಪಕಿ, ವೈದ್ಯಕೀಯ ಮನೋವಿಜ್ಞಾನ ವಿಭಾಗ, ಸೇಂಟ್ ಆಗ್ನೆಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪರಿಚಯಿಸಿದರು. ಮಂಗಳೂರು. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಕ್ರಮವಾಗಿ ಅಗ್ರಸ್ಥಾನದಲ್ಲಿರುವ ಸಮೃದ್ಧಿ ಡಿ, ರೆನಿಶಾ ವಿಯೋಲಾ ಡಿಸೋಜಾ ಮತ್ತು ಸಂಹಿತಾಪ್ರಭು ಅವರನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಟಾಪರ್‌ಗಳ ವಿಷಯ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಡಾ.ಕಾವ್ಯಶ್ರೀ ಕೆ.ಬಿ ಸಭಿಕರನ್ನುದ್ದೇಶಿಸಿ ಮಾತನಾಡಿ, ಮೊಬೈಲ್ ಫೋನ್ ಬಳಕೆ, ಕೆಲಸದ ಒತ್ತಡ, ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಸಮಕಾಲೀನ ಜಗತ್ತಿನಲ್ಲಿ ಪೋಷಕ ಮಕ್ಕಳ ಸಂಬಂಧಗಳ ಕುರುಹು ಆಗಿರುವ ಕಂದಕವನ್ನು ಹೋಗಲಾಡಿಸುವ ಅಗತ್ಯವಿದೆ. ಅವರು. ನಮ್ಮ ಮಗುವನ್ನು ಬೆಳೆಸುವ ಮೊದಲು ನಾವು ನಮ್ಮನ್ನು ಬೆಳೆಸಬೇಕು ಎಂದು ಮುಖ್ಯ ಅತಿಥಿಗಳು ಹೇಳಿದರು. ಕಾರ್ಯಗತಗೊಳಿಸಿದರೆ ಈ ಸಂಬಂಧದ ಗುಣಮಟ್ಟದಲ್ಲಿ ರೂಪಾಂತರವನ್ನು ತರಬಹುದು ಎಂದು ಅವರು ಕೆಲವು ಪರಿಣಾಮಕಾರಿ ತಂತ್ರಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್, ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರು ಸಹಕರಿಸಬೇಕು. ಮಾದಕ ದ್ರವ್ಯ ಸೇವನೆ, ಮೊಬೈಲ್ ಫೋನ್ ಮತ್ತು ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿದರು ಮತ್ತು ಜಾಗರೂಕರಾಗಿರಲು ಸಲಹೆ ನೀಡಿದರು.

ಡಾ.ಪಿ.ವಿ.ಶೋಭಾ ಕಾರ್ಯಕ್ರಮ ನಿರೂಪಿಸಿದರು, ಪಿ.ಟಿ.ಎ ಸದಸ್ಯರಾದ ಶ್ರೀ ಜೋಸ್ಲಿನ್ ಲೋಬೋ ವಂದಿಸಿದರು. ಪ್ರಾಂಶುಪಾಲರಾದ ಶ್ರೀ.ನೋರಿನ್ ಡಿಸೋಜಾ ಅವರು 2022-23ನೇ ಸಾಲಿನ ಪಿಟಿಎ ವರದಿಯನ್ನು ವಾಚಿಸಿದರು ಮತ್ತು ಮುಂಬರುವ ಪರೀಕ್ಷೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು ಮತ್ತು ಅವರ ವಾರ್ಡ್‌ನ ಬೆಳವಣಿಗೆ ಮತ್ತು ಕಲ್ಯಾಣಕ್ಕಾಗಿ ಪೋಷಕರ ಸಹಕಾರವನ್ನು ಕೋರಿದರು. ಶ್ರೀಮತಿ ವೆನಿಟಿಯಾ ರಸ್ಕ್ವಿನ್ಹಾ ಅವರು 2022-23 ನೇ ಸಾಲಿನ ಖಾತೆಗಳ ಹೇಳಿಕೆಯನ್ನು ಓದಿದರು ಮತ್ತು ಪಿಟಿಎ ಕಾರ್ಯದರ್ಶಿ ಶ್ರೀ ಮ್ಯಾಥ್ಯೂ 2022-23 ನೇ ಸಾಲಿನ ಸಭೆಯ ನಡಾವಳಿಯನ್ನು ಓದಿದರು. ಸೈಂಟ್ ಆಗ್ನೆಸ್ ಸಂಸ್ಥೆಗಳ ಅಧ್ಯಕ್ಷೆ ಡಾ.ಎಸ್.ಆರ್ ಮರಿಯಾ ರೂಪ ಎ.ಸಿ, ಉಪಾಧ್ಯಕ್ಷೆ ಜಾನೆಟ್ ಸಿಕ್ವೇರಾ, ಆಶಾ ಸಂಜೀವನ ಪಿಟಿಎ ಉಪಾಧ್ಯಕ್ಷೆ ಶ್ರೀ ಅವಿನಾಶ್ ಕೃಷ್ಣಕುಮಾರ್, ಪಿಟಿಎ ಜಂಟಿ ಕಾರ್ಯದರ್ಶಿ ಮತ್ತು ಅಧ್ಯಾಪಕರು ಈ ಸಂದರ್ಭದಲ್ಲಿ ವಂದಿಸಿದರು.