ಟಮೋಟೋಗೆ ಬೆಲೆ ಇದೆಯಾದರೂ ಅದಕ್ಕೆ ತಕ್ಕಂತೆ ಫಸಲು ಇಲ್ಲ: ರೈತರ ನಷ್ಟದ ಟಮೋಟೋ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲನೆ

ಶ್ರೀನಿವಾಸಪುರ 1 : ಟಮೋಟೋಗೆ ಬೆಲೆ ಇದೆ, ಆದರೆ ಅದಕ್ಕೆ ತಕ್ಕಂತೆ ಫಸಲು ಇಲ್ಲದೆ ರೈತ ನಷ್ಟವನ್ನು ಅನುಭವಿಸುತ್ತಿದ್ದು, ತಾಲೂಕಿನ ಸುಮಾರು 700 ಹೆಕ್ಟೇರ್ ನಷ್ಟು ಟಮೋಟೋ ಬೆಳೆದಿದ್ದಾರೆ. ರಾಯಲ್ಪಾಡು ಬಳಿಯ ಯಂಡಗುಟ್ಟಪಲ್ಲಿಯ ಸುಬ್ಬರಾಮು ತೋಟಕ್ಕೆ , ತಾಡಿಗೋಳ್‍ನ ತಿಪ್ಪನ್ನ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದರು.
ಬಹುತೇಕ ಟಮೋಟೋ ಬೆಳೆಯು ನುಸಿ ರೋಗ ಪೀಡಿತವಾಗಿದ್ದು, ರೋಗ ನಿರ್ಮೂಲನೆಗಾಗಿ ರೈತರು ಅನುಭವಿ ರೈತರ ಹಾಗೂ ಔಷಧಿ ಅಂಗಡಿಗಳ ಸಲಹೆ ಪಡೆದು ಔಷಧಿಗಳಿಗಾಗಿ ಸಾವಿರಾರು ರೂಗಳನ್ನು ವ್ಯಯ ಮಾಡಿ ಸಹ ಗಿಡಗಳಿಗೆ ರೋಗವು ನಿರ್ಮೂಲನೆಯಾಗದೆ ರೈತರು ತಮ್ಮ ಜೇಬು ಖಾಲಿ ಮಾಡಿಕೊಳ್ಳುವುದರ ಮಾಸಿಕವಾಗಿ ಚಿಂತನೆಗೆ ಒಳಪಟ್ಟಿದ್ದಾರೆ.
ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಮಾತನಾಡಿ ಈ ಭಾಗದ ಬಹುತೇಕ ರೈತರು ಟಮೋಟೋ ಬೆಳೆಗಳನ್ನು ಹಾಕಿದ್ದು, ಈ ಭಾಗದಲ್ಲಿ ಬಿಸಿಲಿನ ತಾಪಮಾನವು ಜಾಸ್ತಿಯಾಗಿದ್ದು, ಸರಿಯಾದ ಸಮಯಕ್ಕೆ ಮಳೆಯಾಗದೆ, ವಾತವರಣದಿಂದ ಏರುಪೇರಿನಿಂದಾಗಿ ಈ ರೀತಿಯಾದ ಘಟನೆ ನಡೆದಿದೆ. ಅಲ್ಲದೆ ಸೀಡ್ಸ್ ಮಾರುವವರು ಹಣದ ಅಮೀಷಕ್ಕಾಗಿ ಸೀಡ್ಸ್ ಕಂಪನಿಯಿಂದಲೂ ಇದಕ್ಕೊಂದು ಕಾರಣ, ಅಲ್ಲದೆ ನರ್ಸರಿ ಮಾಲೀಕರು ಬೀಜೋಪಚಾರ ಮಾಡಿ ಗಿಡಬೆಳಸುವಾಗ ವ್ಯಸ್ಥಿತವಾಗಿ ಮಾಡದೇ ಇರುವುದು ಇದಕ್ಕೊಂದು ಕಾರಣ . ಟಮೋಟೋ ಗಿಡಗಳಲ್ಲಿ ಬಿಳೆನೊಣ ಕಾಟವು ನುಶಿ ರೋಗಕ್ಕೆ ಒಂದು ರೀತಿಯಾದ ಕಾರಣವಾಗಿದೆ.
ಆಯ್ದ ತೋಟಗಳಿಗೆ ಬೇಟಿ ನೀಡಲಾಗಿ ತೋಟಗಳ ಬೆಳೆಗಳನ್ನು ಹಾಗು ಫಸಲನ್ನು ಪರೀಶಿಲಿಸಲಾಗಿದ್ದು, ರೋಗಕ್ಕೆ ಕಾರಣವನ್ನು ಸಂಶೋಧನೆ ನಡೆಸಿ ಅತಿಶೀಘ್ರವಾಗಿ ಪರಿಹಾರ ನೀಡುವುದಾಗಿ ತಿಳಿಸಿದರು.
ಕೃಷಿ ಕಲ್ಯಾಣ ಇಲಾಖೆ ತಂಡವು ನೆರೆಯ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕೆಲ ತೋಟಗಳಿಗೆ ಬೇಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಕಲ್ಯಾಣ ಇಲಾಖೆ ಸದಸ್ಯ ಡಾ||ಕೌಲ್, ಬೆಂಗಳೂರಿನ ತರಕಾರಿ ವಿಭಾಗದ ಜಂಟಿ ನಿರ್ದೇಶಕ ಡಾ||ಧನ್‍ರಾಜ್, ಬೆಂಗಳೂರಿನ ವಿಭಾಗದ ತೋಟಕಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ|| ವಿಶ್ವನಾಥ್, ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ . ಕೋಲಾರ, ಉಪನಿರ್ದೇಶಕ ತೋಟಕಾರಿಕೆ ಇಲಾಖೆ ಚಿಕ್ಕಬಳ್ಳಾಪುರ ಗಾಯತ್ರಿ, ತೋಟಗಾರಿಕೆ ಸಂಸೋಧನ ಕೇಂದ್ರ ಹೆಸರುಘಟ್ಟ ವಿಜ್ಞಾನಿ ಡಾ|| ಪ್ರಸನ್ನ, ಬಾಗಲಕೋಟೆ ವಿಶ್ವವಿದ್ಯಾನಿಲಯದ ತೋಟಗಾರಿಕೆ ಸಹಸಂಶೋಧನಾ ನಿರ್ದೇಶಕ ಡಾ|| ಎಸ್.ಎಲ್.ಜಗದೀಶ್, ಕೋಲಾರ ಕೃಷಿ ಕೇಂದ್ರ ಮುಖ್ಯಸ್ಥ ಶಿವಾನಂದ ಹೊಂಗಲ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಆಂಜನೇಯರೆಡ್ಡಿ, ಜಗದೀಶ್ ಕೆವಿಕೆ ಕೃಷಿ ಕೇಂದ್ರದ ವಿಜ್ಞಾನಿ ಸದಾನಂದ ಮುಶ್ರಿಫ್, ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ , ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ನಿರ್ದೇಶಕ ಬೈರೆಡ್ಡಿ, ಸಿಬ್ಬಂದಿ ಹರೀಶ್,ರಾಜೇಶ್ ಹಾಗೂ ಕೋಲಾರ ಮತ್ತು ಚಿಂತಾಮಣಿಯ ಕೃಷಿ ಸಂಶೋದನ ಕೇಂದ್ರದ ವಿಜ್ಞಾನಿಗಳು ಇದ್ದರು
20 : ತಾಡಿಗೋಳ್ ಗ್ರಾಮದ ರೈತ ತಿಪ್ಪನ್ನ ತೋಟವನ್ನು ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಪರೀಶಿಲಿಸುತ್ತಿರುವುದು, ಹಾಗೂ ಟಮೋಟೋಗಳನ್ನು ಪರಿಶೀಲಿಸುತ್ತಿರುವುದು

ನಲಗುಂದ ನವಿಲಗುಂದ 43ನೇ ವರ್ಷದ ರೈತ ಹುತಾತ್ಮ ದಿನಾಚರಣೆ

ವಡ್ಡಹಳ್ಳಿ, ಜು.21: ನಲಗುಂದ ನವಿಲಗುಂದ 43ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಪ್ರಗತಿಪರ ರೈತ ದರ್ಮರವರ ತೋಟದಲ್ಲಿ ಗೋ ಪೂಜೆ ಮಾಡುವ ಮುಕಾಂತರ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ ಪ್ರಗತಿ ಪರ ಹಿರಿಯ ರೈತರಿಗೆ ಗಿಡ ನೀಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕೃಷಿ ಎಂಬ ಪೇಪರ್‍ನಲ್ಲಿ ಇಂಕು ಎಂಬ ಬಿತ್ತನೆ ಬೀಜ ರಸಗೊಬ್ಬರ ಚಲ್ಲಿ ಬಿಸಲು ಗಾಳಿ ಮಳೆಗೆ ಮೈಯನ್ನು ಬಗ್ಗಿಸಿ ದುಡಿಯುವ ರೈತನ ಬೆವರ ಹನಿಗೆ ತಕ್ಕ ಬೆಲೆ ಇಲ್ಲದಂತಾಗಿದೆ. ತಿಂಗಳ ಸಂಬಳ ಬರದೆ ಇದ್ದರೆ, ಆಕಾಶವೇ ಕಳಚಿ ಬೀಳುವಂತೆ ಒದ್ದಾಡುವ ಅಧಿಕಾರಿಗಳಿಗೆ 365 ದಿನ ಕಾಯುವ ರೈತನ ಪರಿಸ್ತಿತಿ ಊಹೆ ಮಾಡಿಕೊಂಡರೆ ರೈತ ಕೃಷಿ ಕ್ಷೇತ್ರವನ್ನು ಕೈ ಬಿಟ್ಟರೆ ದೇಶದ ಭವಿಷ್ಯದ ಬಗ್ಗೆ ಒಂದು ಸಾರಿ ಯೋಚನೆ ಮಾಡಬೇಕಾದ ಪ್ರಜ್ಞಾವಂತ ಪ್ರಜೆಗಳು ರೈತರನ್ನು ಗೌರವಿಸದಂತಾಗಬೇಕೆಂದು ಕಾರ್ಯಕ್ರಮದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳಿಗೆ ಸಲಹೆ ನೀಡಿದರು.
ಸರ್ಕಾರ ರೈತ ವಿರೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಿ 100 ಕೋಟಿ ಅನುದಾನ ಬಿಡುಗಡೆ ಮಾಡುವ ಜೊತೆಗೆ ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರ ಒದಗಿಸುವ ಜೊತೆಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಜೊತೆಗೆ ಬಲವಂತ ಸಾಲ ವಸೂಲಿ ಮಾಡದಂತೆ ಬ್ಯಾಂಕ್‍ಗಳಿಗೆ ಸೂಚಿಸುವ ಜೊತೆಗೆ ರೈತರ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಕಾರ್ಯಕ್ರಮದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಶೇಕಡ 70 ರಷ್ಟು ಉದ್ಯೋಗ ಸೃಷ್ಟಿ ಮಾಡಿ ಕೃಷಿ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಮುಂದಾದರೆ ದೇಶದಲ್ಲಿ ಆಹಾರ ಅಭದ್ರತೆ ಸೃಷ್ಟಿಯಾಗಿ ತುತ್ತು ಅನ್ನಕ್ಕಾಗಿ ಮೂರನೇ ಮಹಾಯುದ್ದ ರೈತರಿಂದಲೇ ಪ್ರಾರಂಭವಾಗುವ ಕಾಲ ದೂರವಿಲ್ಲವೆಂದು ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡುವ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲುಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಕೃಷಿ ಕ್ಷೆತ್ರ ರೈತರ ಪಾಲಿಗೆ ಮುಳ್ಳಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಮಾರುಕಟ್ಟೆ ವ್ಯವಸ್ಥೆಗೆ ಕಾನೂನುಗಳನ್ನು ಅಳವಡಿಸಿ ರಕ್ತ ಹೀರುತ್ತಿದೆ. ಕಳಪೆ ಬೀಜಗಳು ದುಬಾರಿ ಗೊಬ್ಬರಿದಿಂದ ರೈತ ತೊಂದರೆ ಅನುಮಭವಿಸುತ್ತಿದ್ದಾನೆ. ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೆಮೆಟೋ ಕ್ಯಾಪ್ಸಿಕಂ ವಾಣಿಜ್ಯ ಬೆಳೆಗಳಿಗೆ ಅತಿವೃಷ್ಟಿ ಅನಾವೃಷ್ಟಿ ಜೊತೆಗೆ ಭೀಕರ ರೋಗಗಳಿಂದ ರೈತರು ಹೈರಾಣಾಗಿದ್ದಾರೆ. ಮತ್ತೊಂದಡೆ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳದೆ ವ್ಯವಸಾಯವೇ ಬೇಡ ಎಂಬ ನಿರ್ಧಾರಕ್ಕೆ ಬಂದು ನಿಂತಿದ್ದಾರೆ. ಸರ್ಕಾರ ಕೂಡಲೇ ಸರ್ಕಾರಿ ಕೃಷಿ ಕ್ಷೇತ್ರದ ಕಡೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ನರಗುಂದ ನವಿಲಗುಂದ ಬಂಡಾಯ ರೈತರನ್ನು ಅಂದಿನ ಗುಂಡೂರಾವ್ ಸರ್ಕಾರ 149 ರೈತರನ್ನು ಗುಂಡಿಕ್ಕಿ ಕೊಲೆ ಮಾಡಿದರೆ ಇಂದು ಸರ್ಕಾರಗಳು ಗುಂಡು ಹಾರಿಸದೆ 10 ಲಕ್ಷ ರೈತರನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ 40 ಸಾವಿರಕ್ಕೂ ಹೆಚ್ಚು ಅಧಿಕ ರೈತರು ತಮ್ಮ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳ ನಡೆಯುವು ಕೃಷಿ ಕ್ಷೇತ್ರವನ್ನು ನಂಬಿರುವ ರೈತರ ರಕ್ಷಣೆಗೆ ನಿಲ್ಲದೆ ಕಾರ್ಪರೇಟ್ ಕಂಪನಿಗಳ ಬೂಟು ನಕ್ಕುವ ಗುಲಾಮ ಸರ್ಕಾರಗಳಾಗಿವೆ ಎಂದು ಆರೋಪ ಮಾಡಿದರು.
ಜಿಲ್ಲಾದ್ಯಂತ ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡುವ ಜೊತೆಗೆ ಬಿಂಗಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆ ಟೊಮೋಟೊಗೆ 5 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ರವಿರವರು ಮಾತನಾಡಿ ದೇಶ ಕಾಯುವ ಸೈನಿಕ ಅನ್ನ ನೀಡುವ ರೈತ ಎರಡು ಕಣ್ಣುಗಳಿದ್ದಂತೆ ಇವರನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಜಿಲ್ಲಾ ಕಾರ್ಯಾದ್ಯಕ್ಷ ಹೆಬ್ಬಣಿ ಆನಂದ್‍ರೆಡ್ಡಿ, ಬಂಗಾರಿ ಮಂಜು, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಸುನಿಲ್‍ಕುಮಾರ್, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ಗುರುಮೂರ್ತಿ, ದೇವರಾಜ್, ಶ್ರೀನಿವಾಸ್, ಜುಬೇರ್‍ಪಾಷ, ರಾಜಾಹುಲಿ, ನವೀನ್, ಕೇಶವ, ಮಂಗಸಂದ್ರ ತಿಮ್ಮಣ್ಣ, ವಿಶ್ವನಾಥ್,ರಾಮಮೂರ್ತಿ, ರಾಮಸಾಗರ ವೇಣು, ಸುರೇಶ್ ಬಾಬು, ಮಾಲೂರು ತಾ.ಅ ಯಲ್ಲಪ್ಪ,ಹರೀಶ್, ಆಂಜಿನಪ್ಪ ಮುಂತಾದವರು ಇದ್ದರು.

ನಾಗರಿಕ ಪ್ರಜಾಪ್ರಭುತ್ವದ ದೇಶದಲ್ಲಿ ಅನಾಗರಿಕ ರೀತಿಯಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮರವಣಿಗೆ ಮಾಡಿದಕ್ಕೆ ಮಣಿಪುರದಲ್ಲಿ ಬೃಹತ್ ಪ್ರತಿಭಟನೆ

ಇಂಫಾಲ: ಮಣಿಪುರ ರಾಜ್ಯದ ಕಾ೦ಗ್‌ಪೋಷಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಅನಾಗರಿಕ ರೀತಿಯಲ್ಲಿ ಮರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಸಾವಿರಾರು ಆದಿವಾಸಿ ಮಹಿಳೆಯರು ಮತ್ತು ಪುರುಷರು ಭಾರಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಸುದ್ದಿ ಪ್ರಸಾರ ಆಗಿದೆ.

      ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆಯೋಜಿಸಿದ್ದ ಬೃಹತ್‌ ರೇಲಿಯಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ಯುವಕರು ಭಾಗವಹಿಸಿ ಬ್ಯಾನರ್‌ ಮತ್ತು ಫಲಕಗಳನ್ನು ಹಿಡಿದು, ಕಪ್ಪು ಉಡುಪು ಧರಿಸಿ ಪ್ರತಿಭಟಿಸಿದರು. ಪ್ರತ್ಯೇಕ ಆಡಳಿತಕ್ಕಾಗಿ ಘೋಷಣೆಗಳನ್ನು ಕೂಗುತ್ತಾ ರೇಲಿಯು ಲಮ್ಮಾ ಸಾರ್ವಜನಿಕ ಮೈದಾನದಿಂದ ಮೆರವಣಿಗೆ ಪ್ರಾರಂಭವಾಯಿತು.

ಭಾರೀ ಮಳೆಯ ನಡುವೆಯೂ ಪ್ರತಿಭಟನಾಕಾರರು ಶಾಂತಿ ಮೈದಾನದತ್ತ ಸಾಗಿದರು. ಅಲ್ಲದೆ ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

    ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳನ್ನು ತಡೆಯಲು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಐಚಿಎಲ್‌ಎಫ್‌ ಮುಖಂಡರು ಒತ್ತಾಯಿಸಿದರು. ಸ್ಥಳೀಯ ಕಲಾವಿದರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ನಂತರ ಐಟಿಎಲ್‌ಎಫ್‌ ನಾಯಕರ ಚುರಚ೦ದಪುರ ಜಿಲ್ಲೆಯ ಡೆಪ್ಯೂಟಿ ಕಮಿಷನರ್‌ ಮೂಲಕ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿದರು.

ಅಂಪಾರು : ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ

ಅಂಪಾರು: ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ. ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ ಜರುಗಿತು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕಿನ ಅಧ್ಯಕ್ಷರಾದ, ಶ್ರೀ ಜಯಕರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರೆಡ್ ಕ್ರಾಸ್ ನ ಉಗಮ, ಮಹತ್ವದ ಕುರಿತು ತಿಳಿಸಿದರು.ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಸಂವೇದನಾಶೀಲ ಗುಣಗಳ ಮೌಲ್ಯ ವರ್ಧನೆ ಚಿಕ್ಕವರಿರುವಾಗಲೇ ಮೈ ಗೂಡಿಸಿಕೊಳ್ಳಿ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಜೊತೆಗೆ ಸೇವಾ ಮನೋಭಾವ ಹೊಂದಿರಿ ಎಂದು ಕರೆ ನೀಡಿದರು. ಪ್ರತಿಜ್ಞಾವಿಧಿಯನ್ನು ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಶ್ರೀ.ದಿನಕರ್.ಆರ್.ಶೆಟ್ಟಿಯವರು ಬೋಧಿಸಿದರು.ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಕೋಶಾಧಿಕಾರಿ ಶ್ರೀ.ಶಿವರಾಮ ಶೆಟ್ಟಿ, ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ಸಿ.ಎ.ಬ್ಯಾಂಕಿನ ಉಪಾಧ್ಯಕ್ಷರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಶ್ರೀ ಅಶೋಕ್ ನಾಯ್ಕ್ ವಹಿಸಿದ್ದರು.ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ.ಉದಯಕುಮಾರ್.ಬಿ.ಸ್ವಾಗತಿಸಿದರು.ಶ್ರೀ.ಗೋವಿಂದ ಲಮಾಣಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ರಮಿತ ವಂದಿಸಿದರು.

ಮುಳಬಾಗಿಲು ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಕಮೀಷನ್ ಹಾವಳಿ

ಮುಳಬಾಗಿಲು, ಜು-20, ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಹಾವಳಿ ಹಾಗೂ ಬಾಕ್ಸ್ ಗಾತ್ರ ಹೆಚ್ಚಳ ಮಾಡಿರುವ ಮಂಡಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಕೊಳತ ಟೆಮೋಟೋ ಸಮೇತ ಹೋರಾಟ ಮಾಡಿ ಕಾರ್ಯದರ್ಶಿಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಟೆಮೊಟೋಗೆ ಬಂಗಾರದ ಬೆಲೆ ಬಂದಿದೆ ಆದರೆ ರೈತರ ಬೆಳೆದ ಟೆಮೋಟೋಗೆ ಬಾದಿಸುತ್ತಿರುವ ರೋಗ ನಿಯಂತ್ರಣ ವಿಲ್ಲದೆ ಕೇವಲ ಶೇಕಡ 5 ರಷ್ಟು ರೈತರಿಗೆ ಮಾತ್ರ ಬೆಲೆ ಸಿಗುತ್ತಿದೆ. ಇನ್ನು 95 ಜನ ರೈತರು ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ. ಆದರೆ ಮಂಡಿ ಮಾಲೀಕರು ಮಾತ್ರ ಪ್ರತಿ ವರ್ಷ ಶ್ರೀಮಂತರಾಗುತ್ತಿದ್ದಾರೆ. ರೈತರು ಮಾತ್ರ ಸಾಲಗಾರರಾಗಿ ಮಕ್ಕಳ ವಿದ್ಯಾಬ್ಯಾಸ ಹಿರಿಯರ ಆರೋಗ್ಯ ಕಾಪಾಡಿಕೊಳ್ಳದೆ ಬೀದಿಗೆ ಬೀಳುತ್ತಿದ್ದಾರೆ ಇಷ್ಟೆಲ್ಲ ಅವ್ಯವಸ್ತೆ ಇದ್ದರು ರೈತರನ್ನು ವಂಚನೆ ಮಾಡುವ ಮಂಡಿ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಲು ಕಾರಣವೇನು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಪ್ರಶ್ನೆ ಮಾಡಿದರು.

ಹದಗೆಟ್ಟಿರುವ ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಗೆ ಬಾದಿಸುತ್ತಿರುವ ಬೀಕರ ರೋಗಗಳ ನಿಯಂತ್ರಣಬಾರದೆ ಹಾಕಿದ ಬಂಡವಾಳ ಕೈಗೆ ಸಿಗದೆ ರೈತ ಮೂರು ತಿಂಗಳು ಬಿಸಲು ಗಾಳಿ ಮಳೆ ಎನ್ನದೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಮಾರುಕಟ್ಟೆಯಲ್ಲಿ ಮಂಡಿ ಮಾಲೀಕರು ಹರಾಜಿನಲ್ಲಿ ಮೋಸದ ಜೊತೆಗೆ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಮೀಟರ್ ಬಡ್ಡಿಯಂತೆ ರೈತರಿಂದ ಸುಲಿಗೆ ಮಾಡುತ್ತಿದ್ದರು, ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪದಲ್ಲಿ ಮಂಡಿ ಮಾಲೀಕರಿಗೆ ರಕ್ಷಣೆಯಾಗಿ ನಿಲ್ಲುತ್ತಿರುವುದು ನ್ಯಾಯವೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಭೂಮಿ ಉಳುಮೆ ಮಾಡಿಲ್ಲ. ಬೆನ್ನಿಗೆ ಪಂಪ್ ಹಾಕಿಕೊಂಡು ಔಷಧಿ ಸಿಂಪಡಣೆ ಮಾಡಿಲ್ಲ ಒಟ್ಟಾರೆಯಾಗಿ ಕೃಷಿ ಮಾಡಲು ಬೆವರು ಸುರಿಸದೆ ಮಂಡಿ ಮಾಲೀಕರು 10 ನಿಮಿಷ್ಯ ಹರಾಜು ಹಾಕಲು ರೈತರಿಂದ ಬಾಕ್ಸ್ ಬಾಡಿಗೆ ಕೂಲಿ ಕಮೀಷನ್ ಪಡೆಯುತ್ತಿರುವುದು ನ್ಯಾಯವೇ, ಸರ್ಕಾರದ ಆದೇಶದಂತೆ ರೈತರಿಂದ ಯಾವುದೇ ಕಮೀಷನ್ ಪಡೆಯುವಂತಿಲ್ಲ. ಜೊತೆಗೆ ಪ್ರತಿದಿನ ಎ.ಪಿ.ಎಂ.ಸಿ. ಅಧಿಕಾರಿಗಳು ಮಂಡಿ ಮಾಲೀಕರು ರೈತರಿಗೆ ನೀಡುವ ಬಿಲ್‍ನಿಂದ ಹಿಡಿದು ಮಂಡಿಗೆ ಬಂದಿರುವ ಅವಕದ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು. ಆದರೆ ಯಾವುದೇ ರೀತಿಯ ತಪಾಸಣೆಯು ಇಲ್ಲ, ಕ್ರಮವು ಇಲ್ಲ. ಮಂಡಿ ಮಾಲೀಕರು ನೀಡಿದ ಲೆಕ್ಕವೇ ಅಧಿಕಾರಿಗಳಿಗೆ ಶ್ರೀರಕ್ಷೆಯಾಗಿದ್ದಾರೆಂದು ಆರೋಪ ಮಾಡಿದರು. 

ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಮಾರುಕಟ್ಟೆಯಲ್ಲಿ ಸಿ.ಸಿ ಕ್ಯಾಮರಗಳಿಲ್ಲ, ಗುಣಮಟ್ಟದ ಶೌಚಾಲಯಗಳಿಲ್ಲ,  ಊಟವಿಲ್ಲ, ಕುಡಿಯುವ ನೀರನ್ನು ಕೇಳುವಂತಿಲ್ಲ. ಜೊತೆಗೆ ಮಾರುಕಟ್ಟೆಯ ಸ್ವಚ್ಚತೆ ಎಂಬುದು ಮರುಚಿಕೆಯಾಗಿ ಮಂಡಿ ಮಾಲೀಕರಿಗೆ ವ್ಯಾಪಾರಸ್ಥರಿಗೆ ಕೂಲಿಕಾರ್ಮಿಕರಿಗೆ ರೈತರಿಗೆ ಉಚಿತವಾಗಿ ಅನಾರೋಗ್ಯವನ್ನು ಕೊಡುವ ಮಾರುಕಟ್ಟೆಯಾಗಿ ಮಾರ್ಪಟ್ಟಿರುವುದು ದುರಾದೃಷ್ಟಕರ. ಸರಿಪಡಿಸಬೇಕಾದ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.

ಕೋಲಾರ ಸೇರಿದಂತೆ ಎಲ್ಲಾ ಮಾರುಕಟ್ಟೆಗಳಲ್ಲಿ ಬಾಕ್ಸ್ ಗಾತ್ರ 15 ಕೆ.ಜಿ ಆದರೆ ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ಕೆಲವು ಮಂಡಿ ಮಾಲೀಕರು ಕಾನೂನು ಬಾಹಿರವಾಗಿ ಬಾಕ್ಸ್‍ಗಾತ್ರವನ್ನು 18 ಕೆ.ಜಿ.ಗೆ ಏರಿಕೆ ಮಾಡಿ ರೈತರಿಗೆ ಅದೇ ಹರಾಜಿನಲ್ಲಿ ಹಣ ನೀಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ. ದೂರು ನೀಡಿದರೆ ನೆಪ ಮಾತ್ರಕ್ಕೆ ತಪಾಸಣೆ ಮಾಡಿ ಯಾವುದೇ ಬಾಕ್ಸ್ ಗಾತ್ರ ಇಲ್ಲವೆಂದು ವರದಿ ನೀಡುವ ಅಧಿಕಾರಿಗಳು ಮಂಡಿ ಮಾಲೀಕರ ಪರವಾಗಿ ನಿಂತು ರೈತರನ್ನು ಶೋಷಣೆ ಮಾಡುತ್ತಿದ್ದಾರೆಯೇ, ರೈತರು ಪ್ರಶ್ನೆ ಮಾಡಿದರೆ ಹರಾಜು ನಿಲ್ಲಿಸುತ್ತೇವೆಂಬ ಬೆದರಿಕೆ ಹಾಕುವ ಮೂಲಕ ಅಮಾಯಕ ರೈತರ ದ್ವನಿಯನ್ನು ಮುಚ್ಚುತ್ತಿರುವುದು ಯಾವ ನ್ಯಾಯ ಎಂದು ಕಿರಿಕಾರಿದರು. 

ಒಂದು ವಾರದೊಳಗೆ ಕಾನೂನುಬಾಹಿರ ಕಮೀಷನ್ ಹಾವಳಿ ಬಾಕ್ಸ್ ಗಾತ್ರ ಹಾಗೂ ಮಾರುಕಟ್ಟೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ದಾಖಲೆಗಳ ಸಮೇತ ಮಾನ್ಯ ಮುಖ್ಯ ಮಂತ್ರಿಗಳ ಮನೆ ಮುಂದೆ ಹೋರಾಟ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆಂದು ಮನವಿ ನೀಡಿ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿಗಳು ಮಾರುಕಟ್ಟೆಯಲ್ಲಿ ಕಾನೂನುಬಾಹಿರ ಕಮೀಷನ್ ಹಾವಳಿ ಇದೆ ಜೊತೆಗೆ ಬಾಕ್ಸ್ ಗಾತ್ರದ ಬಗ್ಗೆ ದೂರು ಬಂದಿದೆ ಪರಿಶೀಲನೆ ಮಾಡುತ್ತೇವೆಂದು ಬರವಸೆ ನೀಡಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ನಮ್ಮ ನಡೆ ಕೃಷಿಯ ಕಡೆ – ಸಂಘದ ಸದಸ್ಯರಿಂದ ಗದ್ದೆ ನಾಟಿ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್ಣು ಮತ್ತು ಯುವ ಜೇಸಿ ವಿಭಾದ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಸಂಘದ ಸದಸ್ಯರಿಂದ ಗದ್ದೆ ನಾಟಿ ನಡೆಸಲಾಯಿತು.
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರು, ಯುವ ಕೃಷಿಕರಾದ ರಾಜೇಶ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡಿ, ಯುವಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಸಂಘದ ಸದಸ್ಯರು ಜತೆಗೂಡಿ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. 
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿ ಕೃಷಿಯಿಂದ ವಿಮುಖರಾಗುತ್ತಿರುವ ಯುವಜನತೆಗೆ ಹಾಗೂ ಸಾಗುವಳಿ ಮಾಡಲು ಅನಾನುಕೂಲದಿಂದ ಗದ್ದೆಗಳನ್ನು ಹಡೀಲು ಬಿಟ್ಟವರಿಗೆ ಅಬ್ಬನಡ್ಕ ಸಂಘದ ಕೆಲಸವು ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಯ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಉದಯ ಅಂಚನ್, ಸದಸ್ಯರಾದ ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ವೀಣಾ ಪೂಜಾರಿ, ಆರತಿ ಕುಮಾರಿ, ಹರೀಶ್ ಪೂಜಾರಿ, ಪುಷ್ಪ ಕುಲಾಲ್, ಸಂಧ್ಯಾ ಶೆಟ್ಟಿ, ಸುಲೋಚನಾ ಕೋಟ್ಯಾನ್, ಶಾಂತರಾಮ್ ಕುಲಾಲ್ ಮೊದಲಾದವರಿದ್ದರು.

‘Eureka’ – talent show by students of St Agnes PU College

Mangalore : Cultural activities that enhance quest for knowledge and understanding play a crucial role in enriching students’ lives, such activities foster personal growth and promote deeper insight to the happening around us.

St Agnes PU College known for its value based education organized ‘EUREKA’– A torrent of talents for students of II PUC on 18 July, 2023. The students showcased their innate talents through the following competitions.

Science drama: SC  – Enact – Dramatic performance- to ignite the spark within the budding scientists

Sale-add: Pitch Perfect – Effective and persuasive advertisements- to promote products

Street plays – Alleyway theatre – awareness on social issues- to convey message on promoting social transformation.

The students enjoyed all the activities as talent combined the art of theatre with wonders of science, digital marketing and social issues, allowing performers to entertain and educate in a unique and engaging way.

‘EUREKA’ – 2K23 was inaugurated by Sr Norine DSouza the Principal, Sr Janet Sequeira the Vice- Principal and Mrs Joanne Sheethal the Convenor. Inauguration idea was indeed innovative and colourful. The programme began with a prayer song and welcome dance. Students participated enthusiastically in the games conducted by the Lecturers.

Sr Norine DSouza the Principal in her address urged students to believe in themselves and to make use of every EUREKA moment of their life to emerge as winners.

II BEBA/BSBA Batch emerged as Champions of ‘EUREKA’– 2k23, and II PCMB ‘A’ and PCMB ‘B’ Batches were the Runners-up.

The amalgamation of the Science, Commerce and Arts streams was successful in celebrating the diverse talents of the students and fostered meaningful connections. The programme was compered by Ms Alisha Thimmaiah & Ms Ayesha Amani proposed the vote of thanks. It was indeed a EUREKA moment to all the future Scientists and Entrepreneurs of SAPUC. 

ಕುಂದಾಪುರ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಉಪ್ಪುಂದ ದ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ

ಕುಂದಾಪುರ: ‘ವೃತ್ತಿಪರ ವಿದ್ಯೆಯಲ್ಲಿ ಪರಿಣತಿಯನ್ನು ಪಡೆದು ತನ್ನ ಬೆಳವಣಿಗೆಯ ಮೂಲಕ ಇತರರ ಯಶಸ್ಸಿಗೂ ಸಹಕಾರಿಯಾಗಬೇಕು‌. ಈ ರೀತಿಯಲ್ಲಿ ವಿದ್ಯಾರ್ಥಿಗಳು ಎಳೆ ಪ್ರಾಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ‘ ಎಂದು ಜೆ.ಸಿ. ಐ ಉಪ್ಪುಂದ ಇದರ ವತಿಯಿಂದ ಕುಂದಾಪುರದ ಆರ್‌. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆ.ಸಿ ವಲಯ XV ರ ತರಬೇತುದಾರರಾದ ಡಾ. ಜಗದೀಶ್ ಜೋಗಿ ಇವರು ಕರೆ ನೀಡಿದರು. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಯುವ ವಿದ್ಯಾರ್ಥಿಗಳಲ್ಲಿ ವೈಚಾರಿಕ ಬೆಳವಣಿಗೆಯನ್ನು ತರುವ ಸದುದ್ದೇಶ ಹೊಂದಿರುವ ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ತಿಳಿಸಿದರು. ಜೆ.ಜೆ.ಸಿ ಘಟಕದ ಅಧ್ಯಕ್ಷೆಯಾದ ನಿಶಾ ಸಂತೋಷ್ ಶೆಟ್ಟಿ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೆ.ಸಿ.ಐ ಉಪ್ಪುಂದ ಘಟಕದ ಅಧ್ಯಕ್ಷರಾದ ಜೆಎಫ್ ಪಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಜೆ.ಸಿ.ಐ ಉಪ್ಪುಂದ ಇದರ ಪೂರ್ವಾಧ್ಯಕ್ಷರಾದ ಶ್ರೀ ಮಂಗೇಶ್ ಶಾನುಭಾಗ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಾಗರಾಜ ಪೂಜಾರಿ‌ ಹಾಗೂ ಕುಂದಾಪುರ ಜೆ.ಸಿ ಯ ಕಾರ್ಯದರ್ಶಿ ಶ್ರಿ ರಾಕೇಶ್ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಜ್ಯೂನಿಯರ್ ಜೆ.ಸಿ ಸದಸ್ಯೆ ಅಸ್ಮಿತಾ ಇವರು ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಜ್ಯೂನಿಯರ್ ಜೆ.ಸಿ ಸದಸ್ಯ ಸುಮಿತ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. 

ಜಿಲ್ಲಾಧಿಕಾರಿ ಅಕ್ರಂಪಾಷಾ ಅಧ್ಯಕ್ಷತೆಯಲ್ಲಿ ಕೋಲಾರ ಜಿಲ್ಲಾ ಕೌಶಲ್ಯ ಸಮಿತಿ ಸಭೆಕೌಶಲ್ಯ ತರಬೇತಿ;ಮಾನವ ಸಂಪನ್ಮೂಲ ಅಭಿವೃದ್ದಿಗೆ ಶ್ರಮಿಸುವಂತೆ ಕರೆ

ಕೋಲಾರ:- ಜಿಲ್ಲೆಯ ಕೌಶಲ್ಯ ಅಭಿವೃಧ್ಧಿ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಕೌಶಲ್ಯ ಚಟುವಟಿಕೆಗಳ ಸಮನ್ವಯತೆ ಅಗತ್ಯವಾಗಿದ್ದು, ಹೆಚ್ಚಿನ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ಅವಕಾಶ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ತರಬೇತಿ ಕೇಂದ್ರದವರು ಜಿಲ್ಲೆಗೆ ಅಗತ್ಯವಾದ ಗುಣಮಟ್ಟದ ತರಬೇತಿ ಆಯೋಜಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವತಿಯಿಂದ ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ತರಬೇತಿ ಆಯೋಜಿಸುವಂತೆ ಸೂಚಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಆರ್‍ಸೆಟಿ ನಿರ್ದೇಶಕರಿಗೆ ಹೊನ್ನೇನಹಳ್ಳಿ ತರಬೇತಿ ಕೇಂದ್ರದ ಸಾಮಥ್ರ್ಯ ಹೆಚ್ಚಿಸುವಂತೆ ಸೂಚಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆ ಕುರಿತು ಎಲ್ಲಾ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಶೇ. 100 ರ ಸಾಧನೆ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.ಎರಡು ಗಂಟೆಗಳಿಗೂ ಹೆಚ್ಚಿನ ಸುಧೀರ್ಘ ಕಾಲವಧಿಯ ಸಭೆಯಲ್ಲಿ ಜಿಲ್ಲೆಯ ಸಮಗ್ರ ಕೌಶಲ್ಯ ಅಭಿವೃದ್ಧಿಗೆ ಭಾಗವಹಿಸಿದ ಎಲ್ಲಾ ಅಧಿಕಾರಿಗಳ ಸಲಹೆಯನ್ನು ಪಡೆದುಕೊಂಡರು.

ಕೌಶಲ್ಯ ಕೊರತೆಯ ನೀಗಿಸಲು ಕ್ರಮ

ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್, ಜಿಲ್ಲೆ ಕೌಶಲ್ಯ ಸಮಿತಿಯ ಪ್ರಮುಖ ಕಾರ್ಯಗಳು, ಸಿಎಂಕೆಕೆವೈ ಹಾಗೂ ಪಿಎಂಕೆವಿವೈ ಯೋಜನೆಗಳ ಪ್ರಗತಿ, ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕೌಶಲ್ಯ ಕೊರತೆ ನಿವಾರಿಸಲು ಆಯೋಜಿಸಬಹುದಾದ ತರಬೇತಿಗಳು, ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಟಿಟಿಸಿ ತರಬೇತಿ ಸಂಸ್ಥೆಯ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಜಿಲ್ಲೆಯ ಕೌಶಲ್ಯ ಇಲಾಖೆ ಮೂಲಕ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿರುವವರಿಗೆ ಹಾಗೂ ಮ್ಯಾನುಯಲ್ ಸ್ಕಾವೇಂಜರ್‍ಗಲವರಿಗೆ ಆಯೋಜಿಸಲಾಗುವ ತರಬೇತಿ ಕುರಿತು ಹಾಗೂ ಕಲಿಕೆ ಜೊತೆ ಕೌಶಲ್ಯ ಯೋಜನೆಯ ಕುರಿತು ಸಭೆಗೆ ವಿವರಿಸಿದರು.
ನಂತರ ಜಿಲ್ಲಾ ಕೌಶಲ್ಯ ಉಪಸಮಿತಿಗಳಾದ ಅಭ್ಯರ್ಥಿಗಳ ಕ್ರೂಢೀಕರಣ ಮತ್ತು ಸಮಾಲೋಚನೆ ಉಪಸಮಿತಿ, ತರಬೇತಿ ಗುಣಮಟ್ಟ ಉಪಸಮಿತಿ, ಕೈಗಾರಿಕೆಗಳ ಇಂಟರ್‍ಫೇಸ್ ಉಪಸಮಿತಿ, ಸ್ವಯಂ ಉದ್ಯೋಗ ಉಪಸಮಿತಿ, ಗ್ರಾಮ ಪಂಚಾಯಿತಿ ಸಮನ್ವಯ ಉಪಸಮಿತಿ, ಕೃಷಿ ಉಪಸಮಿತಿ, ಸಾಮಥ್ಯ ಅಭಿವೃದ್ಧಿ ಉಪಸಮಿತಿ, ಎಂಐಎಸ್ ಮೇಲ್ವಿಚಾರಣೆ ಉಪಸಮಿತಿ, ವರದಿಗಳನ್ನು ಮಂಡಿಸಲಾಯಿತು. ಇಲಾಖೆಯ ನೂತನ ಯೋಜನೆಗಳಾದ ಅಂತರಾಷ್ಟ್ರೀಯ ವಲಸೆ ಕೇಂದ್ರ, ಕರ್ನಾಟಕ , ಸ್ಕಿಲ್ ಕನೆಕ್ಟ್ ಪೋರ್ಟ್‍ಲ್ ಹಾಗೂ ಇಂಡಸ್ಟ್ರೀ ಲಿಂಕೇಜ್ ಸೆಲ್ ಬಗ್ಗೆ ಕೌಶಲ್ಯ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆಯ ಕುರಿತು ಅಭಿಯಾನ ವ್ಯವಸ್ಥಾಪಕ ಗೋವಿಂದ ಮೂರ್ತಿ ಸಭೆಗೆ ವಿವರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರಪ್ಪರವರು ಮುಂದಿನ ದಿನಗಳಲ್ಲಿ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಹಾಗೂ ಸಮಾಲೋಚನೆ ಶಿಬಿರ ಏರ್ಪಡಿಸುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಭವ್ಯ ರಾಣಿರವರು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗುವ ತರಬೇತಿಗಳನ್ನು ವಿವರಿಸಿದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶಬಾನ ರವರು ಅಪ್ರೆಂಟ್‍ಶಿಪ್ ತರಬೇತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್‍ರವರು ಜವಳಿ ಇಲಾಖೆಯಲ್ಲಿ ಕೈಗೊಳ್ಳಲಾಗುವ ತರಬೇತಿಗಳ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್‍ನ ಯೋಜನಾಧಿಕಾರಿ ಗೋವಿಂದ ಗೌಡ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸುವ ಕೌಶಲ್ಯ ತರಬೇತಿ ಯೋಜನೆಗಳು ಹಾಗೂ ಪ್ರಚಾರ ಕಾರ್ಯಗಳ ಬಗ್ಗೆ ವಿವರಿಸಿದರು. ಉದ್ಯೋಗ ಇಲಾಖೆ ಅಧಿಕಾರಿಯವರಿಗೆ ಉದ್ಯೋಗ ಮೇಳ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಸೋನಿಯಾ ವೆಣೇಕರ್‍ರವರಿಗೆ ಹಾಸ್ಟಲ್ ವಿದ್ಯಾರ್ಥಿಗಳಿಗೆ ನೀಡಲಾಗುವ ತರಬೇತಿ ಕಾರ್ಯಕ್ರಮದ ಮುಂದಾಳತ್ವ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಪಾಲ್ಗೋಂಡಿದ್ದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ದೀನ್ ದಯಾಳ್ ಅಂತ್ಯೋದಯ ಯೋಜನೆಯ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಪಿಯು ಡಿಡಿ ರಾಮಚಂದ್ರಪ್ಪ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಮಹದೇವ್, ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ಅಧಿಕಾರಿಗಳಾದ ಆರ್.ರವಿಚಂದ್ರ, ಹೆಚ್.ಶ್ರೀನಿವಾಸ್, ಡಿಐಸಿ ಡಿಸಿ ವಿ.ಶ್ರೀನಿವಾಸರೆಡ್ಡಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಬಂಗಾರಪೇಟೆ ಸಿಎಂಸಿ ಉಮಾ, ಆಹಾರ ಇಲಾಕೆಯ ಪ್ರಕಾಶ್, ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ, ಐಟಿಐನ ಆರ್ಮುಗಂ, ಹೆಚ್‍ಆರ್‍ಡಿಸಿ ನಾರಾಯಣಸ್ವಾಮಿ ಮತ್ತಿತರರಿದ್ದರು.