ಸಿರಿವಂತಾಚ್ಯಾ ಸಾಹಿತ್ಯಾಚೆರ್ ಅಧ್ಯಯನಾಚೆಂ ಕಥಾಪಾಠ್ ಶಿಂಕಳಿಚೆಂ ಉಗ್ತಾವಣ್

1 ಜುಲಾಯ್ 2023: ಆಶಾವಾದಿ ಪ್ರಕಾಸನ್ ಆನಿ ಧೆಂಪೆ ಕೊಲೆಜ್ ಗೊಂಯ್ ಹಾಂಚ್ಯಾ ಜೋಡ್ ಪಾಲಂವಾಖಾಲ್, ನಾಮ್ನೆಚೊ ಕೊಂಕಣಿ ಕಥಾಕಾರ್, ವಾವ್ರಾಡಿ ಸಿರಿವಂತ್ (ಜೆರೊಮ್ ಸಿರಿಲ್ ವೇಗಸ್) ಹಾಚ್ಯಾ ಸಾಹಿತ್ಯಾಚೆರ್ ಅಧ್ಯಯನ್ ಚಲಂವ್ಚ್ಯಾ ಇರಾದ್ಯಾನ್ ಚಲುಂಕ್ ಆಸ್ಚ್ಯಾ ರಾಶ್ಟ್ರೀಯ್ ಮಟ್ಟಾಚ್ಯಾ ವೆಬಿನಾರಾಂಚೆಂ ’ಕಥಾಪಾಠ್ ಚೊವ್ತಿ ಶಿಂಕಳೆಚೆಂ’ ಉಗ್ತಾವಣ್ ಸನ್ವಾರಾ (1 ಜುಲಾಯ್ 2023) ಸಾಂಜೆರ್ 4:30 ವೊರಾರ್ ಜಾಲೆಂ. ಧೆಂಪೆ ಕೊಲೆಜಿಂತ್ ’ಭಾರತೀಯ್ ಭಾಸಾಂಚಿ ಮುಖೇಸ್ತ್’ ಜಾವ್ನಾಸ್ಚಾ ಪ್ರೊಫೆಸರ್ ಅಂಜು ಸಾಖರ್‌ದಾಂಡೆನ್ ಒಳೊಕ್ ಕರುನ್ ಯೆವ್ಕಾರಾಚೆಂ ಉಲವ್ಪ್ ಕರ್ತಚ್ ಧೆಂಪೆ ಕೊಲೆಜಿಚಿ ಪ್ರಿನ್ಸಿಪಾಲ್, ಪ್ರೊಫೆಸರ್ ದೊ|ವೃಂದಾ ಪಿ. ಬೋರ್ಕರಾನ್ ಅಪ್ಲ್ಯಾ ಉಗ್ತಾವಣ್ ಉಲಪ್ವಾಂತ್ ’ಕೊಂಕಣಿ ಭಾಸ್, ಕೊಂಕಣಿ ಸಾಹಿತ್ಯ್ ಜೆಂ ಹೆರ್ ಲಿಪಿ-ಬೊಲಿಂನಿ ಆಸಾ, ತಾಚೊ ಅಭ್ಯಾಸ್ ಕರ್ಚಿ ಗರ್ಜ್ ಆಸಾ ಆನಿ ಶೈಕ್ಷಣಿಕ್ ರಿತಿಚ್ಯಾ ಹ್ಯಾ ಕಾಮಾಸಾಳಾಂನಿ ಭಾಗ್ ಘೆವ್ನ್ ಫಾಯ್ದೊ ಜೊಡ್ಚ್ಯಾ ವಿಧ್ಯಾರ್ಥಿಂಚಿ ತಶೆಂಚ್ ಅಸಲಿಂ ಉಪಕ್ರಮಾಂ ಮಾಂಡುನ್ ಹಾಡುಂಕ್ ಸಹಭಾಗಿತ್ವ್ ಘೆತ್ಲೆಲ್ಯಾ ಸಮೇಸ್ತಾಂಚಿ ಥೊಕ್ಣಾಯ್ ಕೆಲಿ.

ಕಥಾಪಾಠಾಚ್ಯಾ ತೀನ್ ಶಿಂಕಳೆಂಚೊ ತಶೆಂಚ್ ಕಥಾಪಾಠ್ ಅಧ್ಯಯನ್ ವೆಬಿನಾರಾಂತ್ಲ್ಯಾ ಪ್ರಬಂಧಾಂಚ್ಯಾ ಪುಸ್ತಕಾಂಚೊ ಮೊಟ್ವೊ ವಿವರ್ ದಿವುನ್ ವಲ್ಲಿ ಕ್ವಾಡ್ರಸಾನ್ ಸಿರಿವಂತಾಚಿ ಸವಿಸ್ತಾರ್ ಒಳೊಕ್ ತಶೆಂಚ್ ’ಮಮಶಕ್ತಿ ಕಮಲನಾಥ’ (ದೇವ್‌ಚ್ ಮ್ಹಜಿ ಸಕತ್) ಧ್ಯೇಯಾಖಾಲ್ 1966 ಇಸ್ವೆಂತ್ ಸಿರಿವಂತಾನ್ ಸುರು ಕೆಲ್ಲ್ಯಾ ಸಾಳಕ್ ಪ್ರಕಾಶನಾಚ್ಯಾ 88 ಪುಸ್ತಕಾಂಚಿ ಒಳೊಕ್ ಕರುನ್ ಹೆಚ್ ಮಯ್ನ್ಯಾಂತ್ ಚಲುಂಕ್ ಆಸ್ಚ್ಯಾ ವೆಬಿನಾರಾಂಚೊ ವಿವರ್ ದಿಲೊ.

8 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚಿ ಸಾಹಿತ್ಯಿಕ್ ಒಳೊಕ್ ಆನಿ ಸಾಳಕ್ ಪ್ರಕಾಶನ್ (ಚಲಯ್ತಾ: ವಲ್ಲಿ ಕ್ವಾಡ್ರಸ್)
15 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚ್ಯಾ ಕಥೆಂನಿ ಅಸ್ತುರಿಚೊ ಪಾತ್ರ್ (ಚಲಯ್ತಾ: ಫೆಲ್ಸಿ ಲೋಬೊ ದೆರೆಬೈಲ್)
22 ಜುಲಾಯ್ (ಸಾಂಜೆರ್  4:30   ವೊರಾಂಕ್): ಸಿರಿವಂತಾಚಿಂ (ಜೆರಿ ಲುವಿಸ್) ಹಾಸ್ಯ್ ಬರ್ಪಾಂ (ಚಲಯ್ತಾ: ಫ್ಲಾವಿಯಾ ಆಲ್ಭುಕರ್ಕ್)
29 ಜುಲಾಯ್ (ಸಾಂಜೆರ್ 4:30 ವೊರಾಂಕ್): ಕಥಾಪಾಠ್ ಚೊವ್ತ್ಯಾ ಶಿಂಕಳೆಚೆಂ ಸಂಪ್ಣೆಚೆಂ ವೆಬಿನಾರ್

ಪ್ರಮುಖ್ ಉಲವ್ಪಿ ಮಾನೆಸ್ತ್ ಸ್ಟೀಫನ್ ಹೆರಾಲ್ಡ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅಪ್ಲ್ಯಾ ಉಲವ್ಪಾಂತ್  ಸಿರಿವಂತಾ ಚಿ, ತಾಚ್ಯಾ ವೆಕ್ತಿತ್ವಾಚಿ ಖೊಲಾಯೆನ್ ಒಳೊಕ್ ಕರುನ್ ದಿವುನ್ “ಸಿರಿವಂತ್ ಏಕ್ ವೆಕ್ತಿ ನ್ಹಯ್, ಬಗಾರ್ ಏಕ್ ಸಂಸ್ಥೊ ಜಾವ್ನಾಸ್ಲೊ ಆನಿ ಕೊಂಕಣಿ ವಾವ್ರ್ ಕರ್ತೆಲ್ಯಾಂಕ್ ಏಕ್ ದೇಕ್ ಜಾವ್ನ್ ಅಪ್ಲೆಂ ಜಿವಿತ್‌ಚ್ ಕೊಂಕಣಿಕ್ ಸಮರ್ಪಿತ್ ಕೆಲ್ಲೊ ಮಹಾನ್ ಸಾಹಿತಿ/ವಾವ್ರಾಡಿ” ಮ್ಹಣಾಲೊ. ಅನ್ಯೇಕ್ ಉಲವ್ಪಿ ಮಾ|ಪ್ರತಾಪ್ ನಾಯ್ಕಾನ್ ಸಿರಿವಂತಾಸವೆಂ ಅಪ್ಣಾಕ್ ಆಸ್‌ಲ್ಲ್ಯಾ ಖಾಸ್ ಇಸ್ಟಾಗತೆವಿಶಿಂ ಉಲವ್ನ್, “ಸಿರಿವಂತ್ ತಸಲೊ ವಾವ್ರಾಡಿ ಕೊಂಕಣಿಂತ್ ಉದೆವ್ನ್ ಆಯಿಲ್ಲೆವರ್ವಿಂ ಕೊಂಕಣಿ ಭಾಸೆಚ್ಯಾ ಸಮಗ್ರ್ ಗಿರೇಸ್ತ್‌ಕಾಯ್ ಜೊಡುಂಕ್ ಸಕ್ಲ್ಯಾಂವ್” ಮ್ಹಣಾಲೊ. ಸಯ್ರಿಂ ಜಾವ್ನ್ ಹಾಜರ್ ಆಸ್ಲೆಲ್ಯಾ ದೊ|ಆಸ್ಟಿನ್ ಪ್ರಭು, ಕಾಣಿಕ್ ಪತ್ರಾಚೊ ಸಂಪಾದಕ್ ಮಾನೆಸ್ತ್ ಅವಿಲ್ ರಾಸ್ಕಿನ್ಹಾ ಆನಿ ಮಾನೆಸ್ತ್ ಜೆರಾಲ್ಡ್ ವಿ. ಕಾರ್ಲೊ ಹಾಣಿಂ ಸಿರಿವಂತಾವಿಶಿಂ ಅಪ್ಲಿಂ ಭಗ್ಣಾಂ ಆನಿ ವಿಚಾರ್ ಉಚಾರ್ಲೆ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಠಯ್ಲೆ.

“ಜ್ಞಾನದ ಕಡಲಿನ ಶ್ರೇಷ್ಠ ಮುತ್ತು ಡಿವಿಜಿ ರವರ ಮಂಕುತಿಮ್ಮನ ಕಗ್ಗ” – ಬಿ.ಆರ್. ರವೀಂದ್ರ

ರಚನೆ:- ಬಿ.ಆರ್. ರವೀಂದ್ರ,  ವಕೀಲರು ಮತ್ತು ಸಾಹಿತಿಗಳು ಕೋಲಾರ.

ಡಿವಿಜಿ ಎಂಬ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅವರ “ಮಂಕುತಿಮ್ಮನ ಕಗ್ಗ” ಆ ಗ್ರಂಥಕ್ಕೆ ಈ ಹೆಸರು ಇಡುವಲ್ಲಿ ಅವರ ಜಾಣ್ಮೆಯನ್ನು ನಾವು ಕಾಣಬಹುದು. ಡಿವಿಜಿ ರವರು ಅದ್ಭುತ ವಿಚಾರವಂತರು, ಜ್ಞಾನಿಗಳು, ಅವರು ಸಾಹಿತ್ಯದಲ್ಲಿ ಕೈಯಾಡಿಸದೆ ಬಿಟ್ಟ ಪ್ರಕಾರವಿಲ್ಲ. ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸಹ ಕನ್ನಡ ಭಾಷೆಯ ಜೊತೆಗೆ ಅವರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅದ್ಭುತ ಪಾಂಡಿತ್ಯವನ್ನು ಪಡೆದಿದ್ದವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಈ ಕಾರಣದಿಂದಲೇ ಶಿವರಾಮ ಕಾರಂತರನ್ನು ಕನ್ನಡದ ಅತ್ಯುತ್ತಮ ಕವಿ ಯಾರು ಎಂದು ಕೇಳಿದಾಗ ಅವರು “ಡಿವಿಜಿ” ಎಂದು ತಟ್ಟನೆ ಹೇಳಿದ್ದಾರೆ. 

ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂಬ ಗೌರವಕ್ಕೆ ಪಾತ್ರರಾದವರು ಡಿವಿಜಿ ರವರು. ಅವರು ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರದ ಭಾರತವನ್ನು ಕಂಡವರು, ಅವರ ಜೀವಿತ ಕಾಲದಲ್ಲಿ ರಾಜಪ್ರಭುತ್ವವನ್ನು ಹಾಗೂ ಪ್ರಜಾಪ್ರಭುತ್ವವನ್ನು ಅಂದರೆ ಎರಡೂ ಸನ್ನಿವೇಶಗಳಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ಕಂಡವರು. ಹಾಗೆಯೇ ಜನರ ಕಷ್ಟ ನಷ್ಟವನ್ನು ಬಿಂಬಿಸುವ, ಸಮಾಜವನ್ನು ಬಹಳ ಹತ್ತಿರದಿಂದ ಕಾಣುವ ಪತ್ರಿಕೋದ್ಯಮದಲ್ಲಿ ದುಡಿದು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು‌. ಅವರು ಕನ್ನಡ ಭಾಷೆಯ ಪತ್ರಿಕೆಗಳನ್ನಷ್ಟೇ ಅಲ್ಲದೆ “ಹಿಂದೂ” ಮತ್ತು”ಇಂಡಿಯನ್ ಪೇಟ್ರಿಯಟ್” ಮುಂತಾದ ಹಲವು ಇಂಗ್ಲಿಷ್ ಭಾಷೆಯ ಪ್ರಸಿದ್ಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವುದಲ್ಲದೆ ಹಲವು ಪತ್ರಿಕೆಗಳನ್ನು ಮುನ್ನಡೆಸಿದ ಕೀರ್ತಿ ಸಹ ಡಿವಿಜಿ ರವರಿಗೆ ಸಲ್ಲುತ್ತದೆ. ಇಂತಹ ಅದ್ಭುತವಾದ ಜೀವನಾನುಭವ ಪಡೆದ ಡಿವಿಜಿಯವರು ತಮ್ಮ ಜೀವನಾನುಭವವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ “ಜೀವನ ಧರ್ಮ ಯೋಗ” ಎಂಬ ಕೃತಿಯಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಲ್ಲದೆ, ನಾಟಕಗಳನ್ನು ಬರೆದಿದ್ದಾರೆ, ಇಂಗ್ಲೀಷ್ ನ ಶೇಕ್ಸ್ ಪಿಯರ್ ನಾಟಕಗಳನ್ನು ಅನುವಾದ ಮಾಡುವುದರ ಜೊತೆಗೆ ಅನುವಾದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ಶಿಶು ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ರಾಜ್ಯಶಾಸ್ತ್ರದ ಬಗ್ಗೆ ಬರೆದಿದ್ದಾರೆ, ಹಲವಾರು ವಿಷಯಗಳ ಕುರಿತಾಗಿ ಪ್ರೌಢ ಲೇಖನಗಳನ್ನು ಬರೆದಿದ್ದಾರೆ, ಕಾವ್ಯದಲ್ಲಿ ಕೈಯಾಡಿಸಿದ್ದಾರೆ, ತಾತ್ವಿಕ ಚಿಂತನೆಯ ತತ್ವಶಾಸ್ತ್ರದಿಂದ ಹಿಡಿದು ಜೀವನ ಧರ್ಮಯೋಗದ ಬಗ್ಗೆ ವಿಚಾರ ಧಾರೆಯನ್ನು ಹರಿಸಿದ್ದಾರೆ, ಹಲವಾರು ವ್ಯಕ್ತಿಗಳ ಕುರಿತು ಬೆಳಕು ಚೆಲ್ಲುವ ನೆನಪಿನ ಚಿತ್ರಗಳ ಬಗ್ಗೆ ಬರೆದಿದ್ದಾರೆ, ಅವರ ಸಾಹಿತ್ಯದಲ್ಲಿ ಮುಖುಟಪ್ರಾಯವಾಗಿ ನಿಲ್ಲುವ, ಎಲ್ಲರ ಮನೆ ಮಾತಾಗಿರುವ “ಮಂಕುತಿಮ್ಮನ ಕಗ್ಗ” ಎಂಬ ಛಂದೋಬದ್ಧ ಶ್ರೇಷ್ಠ ಕೃತಿಯನ್ನು ಸಹ ರಚನೆ ಮಾಡಿದ್ದು ಆ ಕೃತಿಗೆ ಹೆಸರು ಸೂಚಿಸುವಾಗ ತಾವು ಎಷ್ಟೇ ಜ್ಞಾನಿಗಳಾಗಿದ್ದರೂ ಸಹ ತಮ್ಮನ್ನು ತಾವು ಮಂಕುತಿಮ್ಮ ಎಂದು ಸಂಬೋಧಿಸುತ್ತಾ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ವೈಚಾರಿಕ ವಿಚಾರಗಳ ಅದ್ಭುತ ಜೀವನ ಸಂದೇಶ ಸಾರುವ ಸಾಹಿತ್ಯವನ್ನು ಡಿವಿಜಿ ರವರು ರಚನೆ ಮಾಡಿದ್ದಾರೆ. 

ಮಂಕುತಿಮ್ಮನ ಕಗ್ಗ ಒಂದೇ ವಿಚಾರದ ಬಗ್ಗೆ ಬರೆದ ಪದ್ಯಗಳಲ್ಲ, ಒಂದೇ ವಿಷಯವನ್ನು ಹೊಂದಿದ ರಚನೆಯಲ್ಲ, ಬದಲಾಗಿ ಜೀವನದ ವಿವಿಧ ಸ್ತರಗಳಲ್ಲಿ ನಾವು ಎದುರಿಸುವ ಹಲವಾರು ಸಮಸ್ಯೆಗಳಿಗೆ ಹಣತೆಯೋಪಾದಿಯಲ್ಲಿ ಬೆಳಕು ಚೆಲ್ಲುವ ಒಂದೊಂದು ಪದ್ಯ ಒಂದೊಂದು ಅಣಿಮುತ್ತು. ಈ ಅಣಿಮುತ್ತುಗಳ ಬಗ್ಗೆ ಹಲವಾರು ಉಪನ್ಯಾಸಗಳು, ವ್ಯಾಖ್ಯಾನಗಳು, ಕಂಠಪಾಠಗಳು ನಡೆದಿರುವುದಲ್ಲದೆ ಗಮಕ ಹಾಗೂ ಸುಗಮ ಸಂಗೀತದ ಹಾಡುಗಾರಿಕೆಗಳ ಮೂಲಕ ಮತ್ತಷ್ಟು ಜನಪ್ರಿಯತೆ ಕಂಡಿವೆ. ಪ್ರತಿದಿನ ಓದುವ ಸುಭಾಷಿತಗಳಾಗಿ ಇಂದಿನ ಸಾಮಾಜಿಕ ಮಾಧ್ಯಮದಲ್ಲಿ ಡಿವಿಜಿ ರವರ ಮಂಕುತಿಮ್ಮನ ಕಗ್ಗದ ಪದ್ಯಗಳು ಹರಿದಾಡುವುದನ್ನು ನಾವು ಕಾಣಬಹುದು. ಈ ಕೃತಿ, ಹಿಂದಿ, ಇಂಗ್ಲಿಷ್, ಪ್ರೆಂಚ್ ಭಾಷೆಗಳಿಗಲ್ಲದೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವುದು ಈ ಕೃತಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.  

ಡಿವಿಜಿಯವರ ಮಂಕುತಿಮ್ಮನ ಕಗ್ಗ ಮಾತ್ರಾಗಣ ಆಧಾರದ ಮೇಲೆ ರಚನೆಯಾಗಿರುವ ದ್ವಿತೀಯಾಕ್ಷರ

ಪ್ರಾಸವನ್ನು ಹೊಂದಿರುವ ನಾಲ್ಕು ಸಾಲಿನ ಕಾವ್ಯನಾಮ ಹೊಂದಿರುವ ಅದ್ಭುತ ಕಾವ್ಯಾಲಂಕಾರವನ್ನು ಹೊಂದಿರುವ ಕೃತಿ. ಹೀಗಾಗಿಯೇ ಕುವೆಂಪುರವರು ಮಂಕುತಿಮ್ಮನ ಕಗ್ಗದ ಬಗ್ಗೆ ಈ ಕೆಳಕಂಡಂತೆ ನಾಲ್ಕು ಸಾಲಿನ ಕವನದ ಮೂಲಕ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.  

ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ

ಮಸ್ತಕಕ್ಕಿಟ್ಟು ಗಂಭೀರನಾದೆ ।

ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ 

ಪುಸ್ತಕಕ್ಕೆ ಕೈಮುಗಿದೆ ಮಂಕುತಿಮ್ಮ ।।

ಪ್ರತಿ ದಿನ ಬಾಯಿಯಿಂದ ಬಾಯಿಗೆ ಹರಿದಾಡುವ ಕೆಲವೇ ಕೆಲವು ಜನಪ್ರಿಯ ಮುಕ್ತಕಗಳು ಅಥವಾ ಪದ್ಯಗಳನ್ನು ಹೊರತುಪಡಿಸಿ ಜೀವನ ಎಂದರೆ ಹೇಗಿರಬೇಕು, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಹ ಹೇಗೆ ನಾವು ಆತ್ಮವಿಶ್ವಾಸದಿಂದ ಜೀವನ ಮಾಡಬೇಕು ಎಂಬ ಬಗ್ಗೆ ಡಿವಿಜಿ ರವರು ಗಾಢವಾದ ಜೀವನಾನುಭವ ಹೊಂದಿರುವ ಹಲವಾರು ಪದ್ಯಗಳನ್ನು ಬರೆದಿದ್ದು ಆ ಪದ್ಯಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕೆಲವೊಂದು ಪದ್ಯ ಮತ್ತು ಅವುಗಳ ಅರ್ಥ ಹೀಗಿದೆ.

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು

ಸಂದಿಹುದು ಚಿರನವತೆಯಶ್ವತ್ಥಮರಕೆ||

ಎಂದೆಂದುಮಂತಿರುವುದೀ ವಿಶ್ವವೃಕ್ಷವದು

ರೊಂದು ರೆಂಬೆಯೊ ನೀನು- ಮಂಕುತಿಮ್ಮ||  

ಜೀವನವನ್ನು ಜೀವನದ ಪಾತ್ರಗಳನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುವ ಡಿವಿಜಿ ರವರು. ಇಲ್ಲಿ ಯಾರೂ ಯಾರಿಗೂ ಶಾಶ್ವತವಲ್ಲ, ನಮ್ಮ ಜೀವನದಲ್ಲಿ ಕೆಲವು ಪಾತ್ರಗಳು ಬರುತ್ತವೆ, ಕೆಲವು ಪಾತ್ರಗಳು ಹೊರಡುತ್ತವೆ, ಹೇಗೆ ಅಶ್ವತ್ಥ ವೃಕ್ಷದ ಒಂದು ಕೊಂಬೆ ಬಾಡಿದರೆ ಮತ್ತೊಂದು ರೆಂಬೆ ಚಿಗುರಿ ನಳನಳಿಸುವುದೋ ಹಾಗೆಯೇ ಯಾವುದೇ ಮೋಹಕ್ಕೆ ಒಳಗಾಗದೆ ನಿರ್ಲಿಪ್ತ ಭಾವದಿಂದ ಬರುವ ಒಂದೊಂದು ಪಾತ್ರಗಳನ್ನು ಸ್ವೀಕರಿಸುತ್ತಾ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಹೇಳಿದ್ದಾರೆ.  

ಪುರುಷಯೋಚನೆಯೆಲ್ಲ ಮುರಿದು ಮಣ್ಣಹದೆಂದು

ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು||

ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? 

ಪರವೆಯೇನಿಲ್ಲವೆಲೋ – ಮಂಕುತಿಮ್ಮ|| 

ಬಹಳಷ್ಟು ಕನಸುಗಳನ್ನು ಕಾಣುತ್ತೇವೆ, ಬಹಳಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ನಮ್ಮ ಯೋಚನೆ, ಆಲೋಚನೆ, ಕನಸುಗಳು ಫಲಿಸದೆ ಹೋಗಬಹುದು, ಹಾಗೆಂದು ಧೃತಿಗೆಡುವ ಅಗತ್ಯವಿಲ್ಲ ಮರಳಿ ಯತ್ನವ ಮಾಡಬೇಕು ಹೊಸ ಕನಸು ಕಾಣಬೇಕು, ಯಾವ ರೀತಿಯಲ್ಲಿ ಕಡಲಿನಲ್ಲಿ ಒಂದು ಮೀನು ಹುಟ್ಟಿದರೂ, ಒಂದು ಮೀನು ಸತ್ತರೂ, ಕಡಲಿನಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲವೋ ಹಾಗೆ ನಮ್ಮ ಗುರಿ, ಕನಸು ನನಸಾಗದಿದ್ದಾಗ ಹತಾಶರಾಗದೆ ಮರಳಿ ಯತ್ನವ ಮಾಡಬೇಕು ಎಂದು ಹಿತಬೋಧನೆ ಮಾಡಿದ್ದಾರೆ. 

ಮಹಾಭಾರತದಲ್ಲಿ ಒಂದು ಉಲ್ಲೇಖವಿದೆ

ಅತಿಕ್ರಾನ್ತಂ ಹಿ ಯತ್ಕಾರ್ಯಂ ಪಶ್ಚಾಚ್ಚಿನ್ತತೇ ನರ: |

ತಚ್ಚಾಸ್ಯ ನ ಭವೇತ್ಕಾರ್ಯಂ ಚಿನ್ತಯಾ ಚ ವಿನಶ್ಯತಿ|| 

ಅಂದರೆ ಮನುಷ್ಯ ಕಳೆದುಹೋದ ಘಟನೆಯ ಬಗ್ಗೆ ಬಹಳ ಚಿಂತಿಸುತ್ತಾನೆ, ಹೀಗೆ ಕಳೆದುಹೋದ ವಿಷಯಗಳ ಕುರಿತು ಚಿಂತಿಸಿ ಚಿಂತಿಸಿ ತನ್ನ ಸುಂದರವಾದ ಭವಿಷ್ಯವನ್ನು ಮರೆತು ವಿನಾಶವನ್ನು ಹೊಂದುತ್ತಾನೆ ಎಂದು ಅದರ ಅರ್ಥ. ಹೀಗೆಯೇ ಡಿವಿಜಿಯವರು ಸಹ ಮನುಷ್ಯ ಹತಾಶರಾಗದೆ ಧೈರ್ಯದಿಂದ ಹೋರಾಡಲು ಹೇಳುತ್ತಾರೆ. 

ಹೋರಾಡು ಬೀಳ್ವನ್ನವೊಬ್ಬಂಟಿಯಾದೊಡಂ

ಧೀರಪಥವನೆ ಬೆದಕು ಸಕಲಸಮಯದೊಳಂ||

ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ?

ಹೋರಿ ಸತ್ವವ ಮೆರೆಸು – ಮಂಕುತಿಮ್ಮ||   

ಕೆಲವೊಮ್ಮೆ ನಾವು ಒಂಟಿ, ಏಕಾಂಗಿ ನಮ್ಮಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ನಿರುತ್ಸಾಹ ಮೂಡುತ್ತದೆ, ಆದರೆ ಯಾವತ್ತೂ ನಾವು ಏಕಾಂಗಿ ಎಂಬ ಭಾವನೆ ತೊರೆದು ಧೈರ್ಯದಿಂದ ಇರುವಷ್ಟು ದಿನ ಹೋರಾಡಬೇಕು, ಸೆಣಸುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳದೆ ಎಲ್ಲಾ ಸಮಯದಲ್ಲೂ ಧೀರನಾಗಿ ಹೋರಾಡಬೇಕು. ತಾನು ಏಕಾಂಗಿ, ತಾನು ಅಬಲ ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಗೊಣಗುತ್ತಾ ಕುಳಿತರೆ ಅಂತಹ ಬದುಕಿಗೆ ಅರ್ಥವೇನು ಎಂದು ಡಿವಿಜಿಯವರು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬಿದ್ದಾರೆ.

ಕುವೆಂಪು ರವರು ತಮ್ಮ ಪಾಂಚಜನ್ಯದಲ್ಲಿ 

ನಡೆ ಮುಂದೆ, ನಡೆ ಮುಂದೆ,

ನುಗ್ಗಿ ನಡೆ ಮುಂದೆ!

ಜಗ್ಗದೆಯೆ, ಕುಗ್ಗದೆಯೆ,

ಹಿಗ್ಗಿ ನಡೆ ಮುಂದೆ!

ಎಂದು ಹೇಳಿದಂತೆ ಡಿವಿಜಿ ರವರು ಸಹ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಈ ಹೋರಾಟದ ಬದುಕಿನಲ್ಲಿ ಒಂದೊಂದು ಹೆಜ್ಜೆಯನ್ನು ಧೈರ್ಯದಿಂದ ಇಡಬೇಕೆಂದು ಹೇಳುತ್ತಾರೆ. 

ಸತ್ತನೆಂದನಬೇಡ: ಸೋತೆನೆಂದೆನಬೇಡ

ಬತ್ತಿತೆನ್ನೊಳು ಸತ್ತವದೂಟೆಯೆನಬೇಡ||

ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು

ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ||

ಜೀವನದಲ್ಲಿ ಸಂಪೂರ್ಣವಾಗಿ ಹತಾಶೆ ಹೊಂದಿ ತಾನು ಸೋತೆ, ತಾನು ಸತ್ತೆ ಎಂಬ ಋಣಾತ್ಮಕ ಭಾವನೆಯನ್ನು ಎಂದೂ ಹೊಂದಬೇಡ, ಸೋಲುಗೆಲುವುಗಳು ಸಾಗರದ ಅಲೆಗಳಂತೆ ಒಮ್ಮೆ ಮೇಲೆ ಎದ್ದರೆ ಮತ್ತೆ ಕೆಳಗೆ ಬೀಳುತ್ತವೆ ಹಾಗೆ ಜೀವನದಲ್ಲಿ ಸಹ ಸುಖ ಮತ್ತು ದುಃಖಗಳು ಸಾಗರದ ಅಲೆಗಳಿದ್ದಂತೆ, ಆ ಮೃತ್ಯುವಿನ ಅಲೆಗಳಿಗೆ ಎದೆಯೊಡ್ಡಿ ನಾಳೆಯ ಬಗ್ಗೆ ನಾವು ದೃಢ ಸಂಕಲ್ಪ ಹೊಂದಬೇಕು ಎಂದು ಡಿವಿಜಿಯವರು ಹೇಳಿದ್ದಾರೆ. ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಮಂಕುತಿಮ್ಮನ ಕಗ್ಗ ಅವರ ಜೀವಿತ ಕಾಲದಲ್ಲಿ ಹೆಚ್ಚು ಪ್ರಚಾರ, ಪ್ರಶಸ್ತಿಗಳನ್ನು ಗಳಿಸದಿದ್ದರೂ ಸಹ ಕನ್ನಡಿಗರ ಪಾಲಿಗೆ “ಕನ್ನಡದ ಭಗವದ್ಗೀತೆ” ಎಂಬ ಜನಪ್ರಿಯತೆಯನ್ನು ತಂದುಕೊಟ್ಟಿದೆ.

ರಚನೆ:- ಬಿ.ಆರ್. ರವೀಂದ್ರ,  ವಕೀಲರು ಮತ್ತು ಸಾಹಿತಿಗಳು ಕೋಲಾರ.

ಜೆ.ಸಿ.ಐ ಕುಂದಾಪುರ ವತಿಯಿಂದ ಶಿವಪುರ ಕ್ಲಿನಿಕಿನ ಡಾ.ಎಸ್.ಪಿ.ಆಚಾರ್ಯ ಇವರಿಗೆ ಸನ್ಮಾನ

ಜೆ ಸಿ ಐ ಕುಂದಾಪುರದ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಜೆಸಿ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಧಾಕರ್ ಕಾಂಚನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೆಸಿಐ ಪೂರ್ವ ವಲಯ ಅಧಿಕಾರಿ ಜೆಸಿ ರತ್ನಾಕರ್ ಕುಂದಾಪುರ ಅತಿಥಿಯಾಗಿ ಮಾತನಾಡಿ ಕೋಟೇಶ್ವರದ ಹೆಸರಾಂತ ವೈದ್ಯರಾಗಿರುವ ಆರು ದಶಕಗಳಿಂದ ವೈದ್ಯ ಸೇವೆಯೊಂದಿಗೆ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡುತ್ತಿರುವ ಡಾ.ಎಸ್.ಪಿ. ಆಚಾರ್ಯ ವೈದ್ಯರು ತಮ್ಮ ಪತ್ನಿ ಯೊಂದಿಗೆ ಅವಿರತವಾಗಿ ಯಾವುದೇ ದೊಡ್ಡ ಪ್ರತಿಫಲ ಅಪೇಕ್ಷೆ ಇಲ್ಲದೆ ಗ್ರಾಮೀಣ ಭಾಗವಾಗಿರುವ ಕೋಟೇಶ್ವರ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಮನೆ ಮಾತಾಗಿರುವ ಅವರ ಸೇವೆ ಇಂದಿನ ಯುವ ಜನಾಂಗಕ್ಕೆ ಮಾದರಿ,ವೈದ್ಯರ ದಿನಾಚರಣೆ ಅರ್ಥಪೂರ್ಣ ವಾಗಿ ಮೂಡಿ ಬಂದಿದೆ ಎಂದರು . ನಂತರ ವೈದ್ಯ ದಂಪತಿಗಳನ್ನ ಗೌರವಿಸಲಾಯಿತು ಈ ಸಂದರ್ಭದಲ್ಲಿ ಜೆಸಿ ಪುಷ್ಪಲತಾ ರತ್ನಾಕರ್ ಜೆಸಿ ಉದಯಕುಮಾರ್ ಕೆ ವಿ, ಜೆ ಸಿ ರವಿಚಂದ್ರ ಹಾಗೂ ಜೂನಿಯರ್ ಜೆಸಿ ರತ್ವಿಕ್ ಆರ್ ಕುಂದಾಪುರ ಜೇಸಿ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಜೆಸಿ ರಾಕೇಶ್ ಶೆಟ್ಟಿ ವಂದಿಸಿದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ರಕ್ಷಕ- ಶಿಕ್ಷಕ ಸಭೆ


ಕುಂದಾಪುರ :ಜು.1: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಆಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊರವರು ವಹಿಸಿ ಶಾಲಾ ಗುಣಮಟ್ಟದ ಬಗ್ಗೆ ಪೋಷಕರಿಂದ ಮಾಹಿತಿಯನ್ನು ಕಲೆಹಾಕಿ ಹಣಕ್ಕಿಂತ ಮಿಗಿಲಾದ ಗುಣವಂತರಾದರೆ ಎಲ್ಲರೂ ನಮ್ಮವರೆ ಆಗುತ್ತಾರೆ. ಮಕ್ಕಳು ಹಣವಂತರಾಗುವುದಕ್ಕಿಂತ ಗುಣವಂತರಾಗಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಬಿಷಪ್ ಹೌಸಿನ ಕುಟುಂಬ ಆಯೋಗದ ನಿರ್ದೇಶಕರು ಆಗಿರುವ ಲೆಸ್ಲಿ ಆರೋಜಾ ’ಸಾಧನೆಯಲ್ಲಿ ಮಕ್ಕಳು, ಶಿಕ್ಷಕರು, ಪೋಷಕರ ಪಾತ್ರ ಬಹುಮುಖ್ಯ ಆಗಿರುತ್ತೆ. ಮಕ್ಕಳನ್ನು ಯಾರೊಂದಿಗೂ ಹೋಲಿಸದೆ ಅವರನ್ನು ಪ್ರೋತ್ಸಾಹಿಸಿ ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು, ಅವರಿಗೆ ಮೌಲ್ಯಯುತ ವಿಚಾರಗಳು ಮನೆಯಲ್ಲಿಯೆ ಸಿಗಬೇಕು, ಮಕ್ಕಳಿಗೆ ಪೋಷಕರು ತಮ್ಮ ಸಮಯವನ್ನು ನೀಡಬೇಕು” ಎಂದು ಹೇಳಿ ಹೆಣ್ಣು ಮಕ್ಕಳ ಸಮಸ್ಯೆಯ ಸಮಯದಲ್ಲಿ ಮಕ್ಕಳೊಂದಿಗೆ ತಾಯಂದಿರು ಹೇಗೆ ಇರಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ಶಾಲಾ ಹಿಂದಿನ ವರ್ಷದ ಸಭೆಯ ವರದಿಯನ್ನು ಶಿಕ್ಷಕಿ ಅಂಕಿತಾ, ಹಿಂದಿನ ವರ್ಷದ ಶೈಕ್ಷಣಿಕ ವರದಿಯನ್ನು ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ವಾಚಿಸಿದರು. ಶ್ರೀಮತಿ ನಿಮಿಷಾರವರು ಅಯವ್ಯಯ ವಾಚಿಸಿದರು. ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ಸ್ವಾಗತಿಸಿದರು. ಶಿಕ್ಷಕಿ ಮಮತಾ ವಂದಿಸಿದರು. ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

ಮಹಾರಾಷ್ಟ್ರ: ಬುಲ್ಧಾನಾ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಭೀಕರ ಅಪಘಾತ 25 ಮಂದಿ ದಾರುಣ ಸಾವು

 

ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ ಹೈವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ.

ಅಪಘಾತಕ್ಕೀಡಾದ ಬಸ್ಸು ಯಾವತ್‌ಮಾಲ್‌ನಿಂದ ಪುಣೆಗ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್‌ನಿಂದ 25 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಸ್‌ನಲ್ಲಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು. 6-8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬುಲ್ಧಾನ ಪೊಲೀಸ್ ಉಪ ಎಸ್ಪಿ ಬಾಬುರಾವ್ ಮಹಾಮುನಿ ತಿಳಿಸಿದ್ದಾರೆ.

    ಘಟನೆಯಲ್ಲಿ ಬದುಕುಳಿದಿರುವ ಬಸ್‌ನ ಚಾಲಕನ ಪ್ರಕಾರ, ಬಸ್ಸಿನ ಟೈರ್ ಸ್ಫೋಟಗೊಂಡ ಕಾರಣದಿಂದಾಗಿ ಬಸ್ ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ತೀಳಿಯಲಾಗಿದೆ.

ಪ್ರಚೋದನಕಾರಿ ಭಾಷಣ ಹಿನ್ನೆಲೆ; ರಘು ಸಕಲೇಶಪುರ ಬಂಧನಕ್ಕೆ ಪೋಲಿಸರಿಂದ ವ್ಯಾಪಕ ಬಲೆ

ಸಕಲೇಶಪುರ: ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಪೋಲಿಸರು ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಸಕಲೇಶಪುರರವರ ಮನೆಗೆ ನುಗ್ಗಿ‌ ಪೋಲಿಸರು ರಘುರವರನ್ನು ಬಂಧಿಸಲು ಮುಂದಾಗಿದ್ದಾರೆ‌‌ ಆದರೆ ಸ್ಥಳದಿಂದ ರಘುರವರು ಪರಾರಿಯಾಗಿದ್ದು ಪೋಲಿಸರು ರಘು ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ. 

ಘಟನೆ ವಿವರ: ತಾಲೂಕಿನ ಕ್ಯಾಮನಹಳ್ಳಿ ಸೇರಿದಂತೆ ಸುತ್ತಮುತ್ತಲು ವ್ಯಾಪಕ ಗೋಹತ್ಯೆ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರೆಂಬ ಆರೋಪದ ಮೇಲೆ ರಘು ಸಕಲೇಶಪುರ ಸೇರಿದಂತೆ ಸಂಘಟನೆಯ ಕೆಲವು ಮುಖಂಡರನ್ನು ಪೋಲಿಸರು ಬಂಧಿಸಲು ಮುಂದಾಗಿದ್ದಾರೆ.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.

St Agnes College : Student Cabinet Inaugural 2023-24


Mangalore : The Apostolic Carmel Educational Society runs several educational institutions and St Agnes PU College is one among them. Historically, it is the first Catholic Women’s College established in South India and the second in the country. The college has students from all communities and denominations. The college is a pioneer in the education of young women and has been at the forefront of a cultural and social renaissance with regard to the rights and roles of women. This has its source and origin in the philosophy and teaching of its founder Mother Aloysia who started St Agnes College in 1920.
“The greatest leader is not necessarily the one who does the greatest things but gets the people to do the greatest things”.
The Student Cabinet of St Agnes PU College for the academic year 2023-24 was formally inaugurated in the college Auditorium on Friday, 30th June 2023 at 2.30 pm. The ceremony began with a prayer song followed by a welcome dance. Sr Dr Maria Roopa AC, Superior and Joint Secretary of St Agnes Institutions was the chief guest on the occasion. During her address, sister congratulated the newly elected members. She advised them to be responsible in their duties and strive to reach greater heights with their leadership and decision making skills, communication and team work.
The oath of the office for the Student Council, the class representatives and their assistants was administered by SrNorine D’Souza AC, the Principal of the college. This solemn ceremony was witnessed by the members of the PTA and the parents of the cabinet members. The Vice principal Sr JanetSequeira AC and all the staff members were also present for the occasion.
The newly elected cabinet members are
PrivalDSouza – Student President
KadeejaNoha – Student Vice President
IevaAysha – Science Secretary
SusanNeeliyara – Commerce secretary
HanaaMariyam – Arts secretary
Gowthami – Cultural Secretary
AnanyaAshokan – Sports Secretary
ZuhaMariyam – Student Editor
The programme was compered by SweetinaMariya.Sampoorna welcomed the gathering and Sharon Rego proposed the vote of thanks.