ಉದ್ಯಾವರ : ಪ್ರತಿಭಾ ಪುರಸ್ಕಾರ ಮತ್ತು ಶ್ರೀಸಾಮಾನ್ಯರ ದಿನಾಚರಣೆ

ಉದ್ಯಾವರ : ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಗೆ ಒಳಪಟ್ಟ ಕಥೋಲಿಕ್ ಸಭಾ, ಉದ್ಯಾವರೈಟ್ಸ್ ದುಬೈ ಮತ್ತು ಶ್ರೀಸಾಮಾನ್ಯರ ಆಯೋಗದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಶ್ರೀಸಾಮಾನ್ಯರ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೊ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕರನ್ನು ಗುರುತಿಸಿ, ಗೌರವ ಧನದೊಂದಿಗೆ ಅಭಿನಂದಿಸಲಾಯಿತು. ಉದ್ಯಾವರೈಟ್ಸ್ ದುಬೈ ಕೊಡಮಾಡಿದ ಪ್ರತಿಭಾ ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ರಿಯಾ ಮೈರಾ, ಹರ್ಷಿತ್ ಫೆರ್ನಾಡೀಸ್, ಸೋನಿ ಪ್ರಕಾಶ್, ಶೋನ್ ಚಾಲ್ಸ್, ಶೋನ್ ರೆಕ್ಸ್, ನಿಷೇಲ್ ಮನಿಷ, ಪಿಯುಸಿ ವಿಭಾಗದಲ್ಲಿ ಶಯಾನ್ ಎಲ್ರಾಯ್, ಜೆಸ್ಸಿಕಾ ಪ್ರಿನ್ಸಿಟಾ, ಜಿಶೆಲ್ ಪ್ರಿನ್ಸಿಯ, ಆರೋನ್ ಪಿರೇರಾ, ಪವಿತ್ರ ಪ್ರೀತಿ ಮತ್ತು ಸoತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಆಶಿಶ್ ಶಣೈ ಮತ್ತು ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನಗಳಿಸಿದ ಸೋನಿ ಪ್ರಕಾಶ್ ರವರಿಗೆ ಹಸ್ತಾಂತರಿಸಲಾಯಿತು.

ಉಡುಪಿ ಧರ್ಮ ಪ್ರಾಂತ್ಯ ಜೂನ್ 25ರಂದು ಶ್ರೀಸಾಮಾನ್ಯರ ದಿನವನ್ನಾಗಿ ಘೋಷಣೆ ಮಾಡಿದ್ದು, ಉದ್ಯಾವರದಲ್ಲಿಯೂ ಶ್ರೀಸಾಮಾನ್ಯರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಹುದ್ದೆಯಲ್ಲಿ ಮತ್ತು ಸಮಾಜದಲ್ಲಿ ವಿವಿಧ ಸೇವೆಯನ್ನು ಸಲ್ಲಿಸುತ್ತಿರುವ ಹಲವು ಗಣ್ಯರನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೋ, ಉದ್ಯಾವರೈಟ್ಸ್, ದುಬೈ ಇದರ ಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಪಿರೇರಾ, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸ, ಕಾರ್ಯದರ್ಶಿ ಜೋನ್ ಎಮ್ ಡಿಸೋಜಾ, ಪ್ರಮುಖರಾದ ಅಲ್ವಿನ್ ಅಂದ್ರಾದೆ, ಮಾರ್ಗರೇಟ್ ಮೆಂಡೊನ್ಸಾ ಮತ್ತು ರೋಬರ್ಟ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷೆ ಐರಿನ್ ಪಿರೇರಾ ಸ್ವಾಗತಿಸಿದರೆ, ಕಾರ್ಯದರ್ಶಿ ರಾಬರ್ಟ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಮಾಜಿ ಅಧ್ಯಕ್ಷ ರೋನಾಲ್ಡ್ ಅಲ್ಮೆಡ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ ಸಂತ ಮೇರಿ ಪ. ಪೂರ್ವ ಕಾಲೇಜ್ :2023ರ ದ್ವಿ. ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದವರಿಗೆ ಅಭಿನಂದನೆ

ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ಮಹತ್ತರ”. ” ಮಕ್ಕಳ ಬಗ್ಗೆ ನಾವು ಬಹಳ ಕಾಳಜಿ ವಹಿಸುತ್ತೆವೆ. ಇಂದು ಮಕ್ಕಳನ್ನು ಬೆಳೆಸುವುದು ಒಂದು‌ ಸವಾಲಿನ ಕೆಲಸವಾಗಿದೆ. ನಮ್ಮ ಸಂಸ್ಥೆಯು ಉತ್ತಮ ಉಪನ್ಯಾಸಕ ವೃಂದದ ಸಹಕಾರದೊಂದಿಗೆ ವಿಧ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಿದ್ದು, ಹೆತ್ತವರ ಜೊತೆ ಸೇರಿ ಇನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ” ಎಂದು‌ ಶಿರ್ವ ಸಂತ ಮೇರಿ ಪ. ಪೂರ್ವ ಕಾಲೇಜಿನ ಸಂಚಾಲಕರಾದ ವಂದನೀಯ ಗುರು ಡಾ. ಲೆಸ್ಲಿ ಸಿ ಡಿಸೋಜರವರು ಹೇಳಿದರು. ಅವರು 2023 ರ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರ ಅಭಿನಂದನಾ ಕಾರ್ಯಕ್ರಮ ಎಕ್ಸಲೆನ್ಸ್ ಡೆ ಮತ್ತು ರಕ್ಷಕ ಶಿಕ್ಷಕ ಸಂಘದ 2023 24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ರು ಶ್ರೀ ಕುದಿ ವಸಂತ ಶೆಟ್ಟಿ ಅವರು ಸಂದೇಶ ನೀಡಿ ” ಮಕ್ಕಳಿಗೆ ಸರಿಯಾದ ಜೀವನ ಕ್ರಮ, ಕೌಟುಂಬಿಕ ಮೌಲ್ಯಗಳು ಆಹಾರ ಪದ್ಧತಿ ಮತ್ತು ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ಇಂದಿನ ಮಕ್ಕಳು ಹೆತ್ತವರ ಮಾತನ್ನು ಕೇಳುವುದಕ್ಕಿಂತಲೂ ಅವರ ನಡೆ ನುಡಿಯನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ತಂದೆ ತಾಯಿ ಮಕ್ಕಳಿಗೆ ಆದರ್ಶರಾಗಿರಬೇಕೆಂದು ತಿಳಿಸಿದರು .ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಯಶಂಕರ ಕೆ ಅವರು ಸ್ವಾಗತಿಸಿ ,ವಿದ್ಯಾರ್ಥಿ ಆಕಾಶ್ ವಂದಿದಸಿದರು. ಬಹುಮಾನಿತರ ಪಟ್ಟಿಯನ್ನು ಕುಮಾರಿ ಅನನ್ಯ ಭಟ್ ವಾಚಿಸಿ, ಕುಮಾರಿ ಚೈತ್ರಿಕ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ನಡೆದ ವಾರ್ಷಿಕ ಮಹಾಸಭೆಯಲ್ಲಿ 2023- 24 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾಗಿ ವಂದನೀಯ ಗುರು ಡಾ. ಲೆಸ್ಲಿ ಸಿ ಡಿಸೋಜ, ಗೌರವಾಧ್ಯಕ್ಷರಾಗಿ ಪ್ರಾಂಶುಪಾಲರಾದ ಶ್ರೀ ಜಯಶಂಕರ್ ಕೆ, ಅಧ್ಯಕ್ಷರಾಗಿ ಶ್ರೀ ಸುಧೀರ್ ಜೂಡ್ ಡಿಸೋಜಾ, ಉಪಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಡಿಸೋಜಾ, ಖಜಾಂಚಿಯಾಗಿ ಶ್ರೀಮತಿ ಸಾನಿಯಾ, ಕಾರ್ಯದರ್ಶಿಯಾಗಿ ಮರಿಯ ಜೆಸಿಂತಾ ಫ಼ುರ್ಟಾಡೊ ಮತ್ತು ಹೊಸ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಕಾಲೇಜಿನಲ್ಲಿ ಹಿರಿಯ ಇತಿಹಾಸ ಉಪನ್ಯಾಸಕಿ ಶ್ರೀಮತಿ ಮರಿಯ ಜೆಸಿಂತಾ ಪುರ್ಟಾಡೊ , ನೂತನವಾಗಿ‌ ಆಯ್ಕೆಯಾದ ವಿಧ್ಯಾರ್ಥಿ ನಾಯಕ ಪವನ್ ಹಾಗೂ ಉಪ ನಾಯಕ ಕನಿಷ್ಕ್ ಪೂಜಾರಿಯನ್ನು ಅಭಿನಂದಿಸಲಾಯಿತು.

ಶಿರ್ವ ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

ಶಿರ್ವ: ಇಂದಿನ ವಿವಿಧ ಕ್ಷೇತ್ರಗಳಲ್ಲಿ ದತ್ತಾಂಶ ಸಮಸ್ಯೆಗಳನ್ನು,ಪರಿಹರಿಸಲು ಡೇಟಾ ವಿಜ್ಞಾನವನ್ನು ಬಳಸುವ ಮೂಲಕ ದತ್ತಾಂಶ ಗಣಿಗಾರಿಕೆ, ಯಂತ್ರ ಕಲಿಕೆ ಮತ್ತು ಅಂಕಿಅಂಶಗಳ ವಿಶ್ಲೇಷಣೆಯ ಸಂಯೋಜನೆಯಾಗಿದೆ. ಯುವಕರು ಇಂತಹ ಡೇಟಾ ವಿಜ್ಞಾನದ ಕೌಶಲ್ಯಗಳನ್ನು ಕಲಿಯುವ ಮೂಲಕ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳಿಗೆ ಉತ್ತಮ ನಿರ್ಧಾರಗಳನ್ನು ನೀಡುವ ಮೂಲಕ ಉತ್ತಮ ಉಪಾದಿಗಳನ್ನು ಪಡೆಯಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಏರ್ಪಡಿಸಿದ ಡಿಜಿಟಲ್ ಟೆಕ್ನಾಲಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ,ಡೇಟಾ ಸೈನ್ಸ್ ಮತ್ತು ಉದ್ಯೋಗ ಅವಕಾಶಗಳು ಎಂಬ ವಿಶೇಷ ಉಪನ್ಯಾಸದಲ್ಲಿ ಮಂಗಳೂರಿನ ಕಾಗ್ನೆಟಿವ್ ಸೊಲ್ಯೂಷನ್ಸ್ ನ ಅಸಿಸ್ಟೆಂಟ್ ಹೆಚ್ ಆರ್ ಲೀಡರ್ಟೀಮ್ ಕುಮಾರಿ ಕೃತಿಕಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು ಪ್ರಸ್ತುತ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆಗಳಿಂದಾಗಿ ಕಂಪ್ಯೂಟರ್ ಪದವೀಧರರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲೇ ಉದ್ಯಮ ಕೌಶಲ್ಯಗಳನ್ನು ಕಲಿಯುವ ಮೂಲಕ ಉದ್ಯಮದ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ಹೇಳಿದರು.

ಬಜೆಟ್‍ನಲ್ಲಿ ಮಾವು,ರೇಷ್ಮೇ,ಟಮೋಟೊಗೆ ಬೆಂಬಲ ಬೆಲೆ ಘೋಷಣೆ ಮಾಡಲು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಲು ನಿರ್ಣಯ

ಶ್ರೀನಿವಾಸಪುರ,ಜೂ:27, ಬಜೆಟ್‍ನಲ್ಲಿ ಮಾವು , ರೇಷ್ಮೇ, ಟಮೋಟೊ ಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಜು.1 ರ ಶನಿವಾರ ಇಂದಿರಾ ಭವನ್ ವೃತ್ತದಲ್ಲಿ ನಷ್ಟ ಬೆಳೆ ಸಮೇತ ಹೋರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರೆದಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಹತ್ತಾರು ವರ್ಷಗಳಿಂದ ಮಾವು ,ಟೊಮೋಟೋ, ರೇಷ್ಮೇ ಬೆಳೆಗಾರರ ಬದಕು ಬೀದಿಗೆ ಬೀಳುತ್ತಿದೆ ಲಕ್ಷಾಂತರ ಬಂಡವಾಳ ಹಾಕಿ ಬೆಳೆದಂತಹ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಅತಿವೃಷ್ಠಿ, ಅನಾವೃಷ್ಟಿ ಪ್ರಕೃತಿ ವಿಕೋಪಗಳು ರೋಗ ಭಾದೆಗೆ ಸಂಪೂರ್ಣ ರೈತರ ವರ್ಷದ ಬೆವರ ಹನಿ ಒಂದೇ ದಿನದಲ್ಲಿ ನಿರು ಪಾಲಾಗುತ್ತಿದ್ದರೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಸರ್ಕಾರಗಳು ವಿಪಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳ ರೈತ ವಿರೋದಿ ದೋರಣೆ ವಿರುದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಕುಟುಂಬಗಳಿಗೆ ಸ್ವಾಭಿಮಾನ ಬದುಕುಕೊಟ್ಟ ರೇಷ್ಮೆ ಬೆಳೆಗಾರರು ಬೆಲೆ ಇಲ್ಲದೆ ಬೀದಿಗೆ ಬಿದ್ದಿರುವ ಜೊತೆಗೆ ಹತ್ತಾರು ವರ್ಷಗಳಿಂದ ಟೊಮೋಟೋ, ಮಾವುಗೆ ಬಾಧಿಸುತ್ತಿರುವ ರೋಗಗಳು ಲಕ್ಷಂತರ ರೂ ನೀಡಿ ಔಷಧಿ ಖರೀದಿ ಮಾಡಿ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ರೋಗಗಳು ಅಷ್ಟರ ಮಟ್ಟಿಗೆ ಔಷಧಿಗಳು ನಕಲಿ ಆಗಿದ್ದು, ಬಜೆಟ್‍ನಲ್ಲಿ ನಕಲಿ ಹಾವಳಿ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಬೆಳೆ ಬೆಲೆ ಇಲ್ಲದೆ ನಷ್ಟವಾದಾಗ ಪಸಲು ರಕ್ಷಣೆ ಮಾಡಲು ಮಾವು ಬೆಳೆಗಾರರಿಗೆ ಮಾವು ಸಂಸ್ಕರಣ ಘಟಕಗಳಿಲ್ಲ, ಟಮೋಟೋ ರಕ್ಷಣೆ ಕೃಷಿ ಆದಾರಿತ ಕೈಗಾರಿಕೆಗಳಿಲ್ಲ, ಒಟ್ಟಾರೆಯಾಗಿ ರೈತರ ಗೋಳು ಕೇಳುವವರಿಲ್ಲದರಾಗಿದ್ದಾರೆಂದು ಅವ್ಯವಸ್ಥೆಯ ವಿರುದ್ದ ಕಿಡಿ ಕಾರಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ ಪ್ರತಿ ಬಜೆಟ್‍ನಲ್ಲೂ ಕೋಲಾರ ಜಿಲ್ಲೆಯನ್ನು ಸರ್ಕಾರಗಳು ಕಡೆಗಣಿಸುತ್ತಿವೆ. ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಜಲ್ವಂತ ಸಮಸ್ಯೆಗಳು ಹಾಗೂ ಅಭಿವೃದ್ದಿಗೆ ಅನುಧಾನ ತರುವಲ್ಲಿ ಸ್ಥಳಿಯ ಶಾಸಕರು ವಿಪಲವಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್‍ನಲ್ಲಿ ಮಾವು, ಟೊಮೋಟೊ , ರೇಷ್ಮೇ ಗೆ ಬೆಂಬಲ ಬೆಲೆ ಘೋಷಣೆ ಮಾಡುವ ಜೊತೆಗೆ ಕೃಷಿ ಆಧಾರಿತ ಕೈಗಾರಿಕೆಗಳು, ಮಾವು ಸಂಸ್ಕರಣ ಘಟಕಗಳ ಸ್ಥಾಪನೆಗೆ ಅನುಧಾನ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ರೈತಕುಲವನ್ನು ರಕ್ಷಣೆ ಮಾಡಬೇಕೆಂದು ಜು.1 ರಂದು ನಷ್ಟ ಬೆಳೆ ಸಮೇತ ಇಂದಿರಾ ವೃತ್ತ ಬಂದ್ ಮಾಡುವ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವ ನಿರ್ಣಯವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ತೆರ್ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಸಹದೇವಣ್ಣ, ಶೇಕ್‍ಶಪಿವುಲ್ಲಾ, ಕಲ್ಲೂರು ವೆಂಕಟ್, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಭಾಸ್ಕರ್, ವಿಶ್ವ, ರಾಜೇಶ್, ಶೈಲಜ, ಚೌಡಮ್ಮ, ನಾಗರತ್ನ, ರಾಧಮ್ಮ, ಮುಂತಾದವರಿದ್ದರು.

ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜ್ ಮಾಂಡುನ್ ಹಾಡ್ತಾ; ಕಥಾ ಪಾಠ್ ಶಿಂಕಳ್ 4


ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜ್ ಮಾಂಡುನ್ ಹಾಡ್ತಾ ಕಥಾ ಪಾಠ್ ಶಿಂಕಳ್ 4. ಕೊಂಕಣಿ ಕಥಾಂಚೆರ್ ಅಧ್ಯನಾಚಿಂ ರಾಷ್ಟ್ರೀಯ್ ಮಟ್ಟಾಚೆ ವೆಬಿನಾರ್ ಜುಲಾಯ್ 1 ವೆರ್ ಸನ್ವಾರಾ, ಸಾಂಜೆರ್ 4.30-6.00 ವೊರಾ ಪರ್ಯಾಂತ್ ಚಲ್ತೆಲೆಂ.
ಹ್ಯಾ ವೆಬಿನಾರಾಂತ್ ಪಾಕಿವಂತ್ ಲೇಕಕ್ ಸಿರಿವಂತ್ ಹಾಚಿ ಸವಿಸ್ತಾರ್ ಒಳೊಕ್ ಕರುನ್ ದಿತೆಲೆಂ. ವೆಬಿನಾರಾಚಿ ಮಾಹೆತ್ ಆನಿ ಅಹ್ವಾನ್ ಪತ್ರ್ ಹಾಂಗಾಸರ್ ಆಸಾ. ವೆಬಿನಾರಾಂತ್ ಭಾಗ್ ಘೆತೆಲ್ಯಾನಿ ಸಂಪರ್ಕ್ ಕರ್ಚೊ.

ಸ್ಥಳಾವಕಾಶದ ಕೊರತೆಯಿಂದ ನಲುಗುತ್ತಿರುವ ಎಪಿಎಂಸಿ ಮಾರುಕಟ್ಟೆಕಾಯಕಲ್ಪ,ಮೌಲಸೌಲಭ್ಯ ಒದಗಿಸಲು ಕ್ರಮ-ಜಿಲ್ಲಾಧಿಕಾರಿ ಅಕ್ರಂಪಾಷಾ

ಕೋಲಾರ:- ಜಾಗದ ಸಮಸ್ಯೆಯಿಂದ ಬಳಲುತ್ತಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯ ಕಾಯಕಲ್ಪಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಜಿಲ್ಲಾಧಿಕಾರಿ ಅಕ್ರಂಪಾಷಾ ಭರವಸೆ ನೀಡಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳು, ವಿವಿಧ ಮಂಡಿ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
1979ರಲ್ಲಿ ಆರಂಭವಾಗಿರುವ ಕೋಲಾರ ಮಾರುಕಟ್ಟೆಯು ಅಂದಿನಿಂದಲೂ ಅಷ್ಟೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳು ಹೆಚ್ಚಾಗಿವೆ. ಹೀಗಾಗಿ ಸೌಕರ್ಯಗಳನ್ನು ಕಲ್ಪಿಸಿ ಆಧುನಿಕ ಮಾರುಕಟ್ಟೆಯಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಮತ್ತು ಹೆಚ್ಚುವರಿ ಜಾಗದ ಬೇಡಿಕೆ ಈಡೇರಿಕೆಗೆ ಕ್ರಮವಹಿಸುವುದಾಗಿಯೂ ತಿಳಿಸಿದರು.
ಎಪಿಎಂಸಿಯಲ್ಲಿರುವ ಮೂಲಭೂತ ಸೌಕರ್ಯಗಳು, ರೈತರು, ಮಂಡಿ ಮಾಲೀಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಅರಿತುಕೊಂಡಿದ್ದೇನೆ. ಮೂಲಭೂತ ಸೌಕರ್ಯ, ಕುಡಿಯುವ ನೀರು, ರಸ್ತೆ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹೆಚ್ಚಿನ ಸ್ಥಳಾವಕಾಶ ಬೇಕಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ, ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಪ್ರಮುಖವಾಗಿ ಟೊಮೇಟೊ ಮಾರುಕಟ್ಟೆಗೆ ಮಡೇರಹಳ್ಳಿ ಸಮೀಪ 36 ಎಕರೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಟೇಕಲ್ ಭಾಗದಲ್ಲಿನ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ, ಕೆಲಸವಿಲ್ಲದೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಲ್ಲುಕುಟುಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ನಾನೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುನಃ ಚರ್ಚಿಸಲಾಗುವುದು. ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ನಗರ ಪ್ರದೇಶಗಳಲ್ಲಿ ಸಮಸ್ಯೆಯಿಲ್ಲದಿರುವುದು ಹಾಗೂ ಗ್ರಾಮೀಣ ಭಾಗದ 2-3 ಕಡೆಗಳಲ್ಲಿ ಸಮಸ್ಯೆಯಿರುವುದು ಕಂಡುಬಂದಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮವಹಿಸಿದ್ದಾರೆ. ಸದ್ಯ ನಗರ ಪ್ರದೇಶದಲ್ಲಿ ಕೇವಲ 3 ಟ್ಯಾಂಕರ್ ಮಾತ್ರವೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಸದ್ಯದ ಮಾರುಕಟ್ಟೆ ವಿಸ್ತೀರ್ಣವು 18.31 ಎಕರೆಯಿದ್ದು, ಮಡೇರಹಳ್ಳಿ ಸಮೀಪ ಅರಣ್ಯ ಇಲಾಖೆಯ 36 ಎಕರೆಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡತವು ಕೇಂದ್ರ ಸರಕಾರದ ಹಂತದಲ್ಲಿದ್ದು, ಅದನ್ನು ವಿಲೇವಾರಿ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಎಪಿಎಂಸಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 75ರ ಸರ್ವೀಸ್ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು. ಕಸ ವಿಲೇವಾರಿಗೆ ಕನಿಷ್ಠ 5 ಎಕರೆ ಜಾಗ ಮಂಜೂರು ಮಾಡಿಕೊಡುವ ಜತೆಗೆ ಸಿಬ್ಬಂದಿ ಕೊರತೆಯನ್ನು ನಿವಾರಿಸಿಕೊಡುವಂತೆ ಮನವಿ ಮಾಡಿದರು.
ಕೆ.ಎನ್.ಎನ್. ಮಂಡಿ ಮಾಲೀಕ ಕೆ.ಎನ್.ಪ್ರಕಾಶ್ ಮಾತನಾಡಿ, ಸ್ವಚ್ಛತೆ ಸಮಸ್ಯೆ ಹೆಚ್ಚಾಗಿದ್ದು, 10 ಎಕರೆ ಜಾಗ ನೀಡಿದರೆ ಅನುಕೂಲವಾಗಲಿದೆ. ನೀರಿನ ವ್ಯವಸ್ಥೆ ಕಲ್ಪಿಸಬೇಕು. ತರಕಾರಿ ಮಾರಾಟಗಾರರಿಕೆ ವ್ಯವಸ್ಥಿತವಾಗಿ ಅಂಗಡಿಗಳನ್ನು ಮಾಡಿಕೊಡದೆ ತೊಂದರೆಯಾಗುತ್ತಿದ್ದು ಫೆಡರೇಶನ್ ಜಾಗವನ್ನು ಎಪಿಎಂಸಿ ಸುಪರ್ದಿಗೆ ಪಡೆದು, ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದರು.
ಹೈವೇ ಪ್ರಾಧಿಕಾರದವರು ನಮ್ಮ ರಸ್ತೆಯನ್ನು ಹಾಳು ಮಾಡಿದ್ದು, ಡಾಂಬರೀಕರಣ ಮಾಡಿಸಿಕೊಡಬೇಕು. ಸಿಬ್ಬಂದಿ ಕೊರತೆ ನೀಗಿಸಬೇಕು, ಮಾರುಕಟ್ಟೆಯಲ್ಲಿ ರೈತ ಭವನ ನಿರ್ಮಿಸಿಕೊಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಡಿಸಿ ಗಮನಕ್ಕೆ ತಂದರು. ಇದಕ್ಕೆ ಡಿಸಿ ಅಕ್ರಂ ಪಾಷಾ ಸಮಸ್ಯೆಗಳನ್ನು ಬಗೆಹರಿಸಿ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.
ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಮಂಡಿಗಳ ಮಾಲೀಕರಾದ ಕೆ.ವಿ.ಸಿ.ಗೋವಿಂದಪ್ಪ, ಕೆ.ಎನ್.ಎಂ. ಶ್ರೀನಿವಾಸ್, ಎಸ್.ವಿ.ಟಿ.ಸುರೇಶ್, ಎಂ.ಎಸ್.ಆರ್.ಶಂಕರ್, ಎಸ್.ಎಂ.ಎಸ್.ಸಂತೋಷ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಮುನಿರಾಜು, ಕಚೇರಿಯ ಮೂರ್ತಿ, ಅರುಣಾ ಮತ್ತಿತರರಿದ್ದರು.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸುಂದರವಾದ ಬರವಣಿಗೆ ಅಗತ್ಯ:ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್

ಶ್ರೀನಿವಾಸಪುರ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸುಂದರವಾದ ಬರವಣಿಗೆ ಅಗತ್ಯ. ಬರವಣಿಗೆಯಲ್ಲಿ ಸ್ಪಷ್ಟತೆ ಇಲ್ಲವಾದಲ್ಲಿ ಮೌಲ್ಯಮಾಪಕರಿಗೆ ಓದಲು ಸಾಧ್ಯವಾಗುವುದಿಲ್ಲ ಎಂದು ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಸ್ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸ್ಟ್ಯಾಂಡರ್ಡ್ ರೈಟಿಂಗ್ ಕಾಂಪಿಟಿಷನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರು ಹೇಳುವಂತೆ ಮಕ್ಕಳು ಸುಂದರ ಬರವಣಿಗೆ ಬರೆಯಲು ಸಾಧ್ಯವಾಗಲು, ಚಿತ್ರ ಕಲೆ ಕಲಿಸಬೇಕು. ಚಿತ್ರ ಬರೆಯುವುದನ್ನು ಕಲಿತ ಮಗು ಸುಂದರವಾದ ಬರವಣೆಗೆ ಬರೆಯಬಲ್ಲದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ವಿದ್ಯಾರ್ಥಿನಿಯರಿಗೆ ಸುಂದರ ಬರವಣಿಗೆ ಬರೆಯುವ ಬಗ್ಗೆ ಮಾರ್ಗದರ್ಶನ ನೀಡಿದರು. ಬಿಸ್ ಮೆಂಟರ್ ವೇಣುಗೋಪಾಲ್, ಉಪನ್ಯಾಸಕರಾದ ಎನ್.ವಾಸು, ಪಿ.ಎಸ್.ಮಂಜುಳ, ಮಂಜುನಾಥರೆಡ್ಡಿ, ವೀಣಾ, ಜಿ.ಕೆ.ನಾರಾಯಣಸ್ವಾಮಿ, ಗೋಪಾಲನ್, ಗೋಪಿನಾಥ್ ಇದ್ದರು.

ವಿದ್ಯಾರ್ಥಿಗಳುು ಮಾದಕ ಪದಾರ್ಥ ಸೇವನೆಯಿಂದ ದೂರವಿರಬೇಕು : ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ

ಶ್ರೀನಿವಾಸಪುರ: ವಿದ್ಯಾರ್ಥಿಗಳುು ಮಾದಕ ಪದಾರ್ಥ ಸೇವನೆಯಿಂದ ದೂರವಿರಬೇಕು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪೊಲೀಸ್ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾದಕ ವಸ್ತು ವಿರೋಧಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತು ಸೇವನೆ ಮತ್ತು ಅಕ್ರಮ ಮಾರಾಟ ಕಾನೂನು ಬಾಹಿರ. ನಗರ ಪ್ರದೇಶದ ಕೆಲವು ವಿದ್ಯಾರ್ಥಿಗಳು ಅಂಥ ದಂಧೆಯಲ್ಲಿ ತೊಡಗಿರುವುದು ದುರದೃಷ್ಟಕರ ಬೆಳವಣಿಗೆ. ಮಾನವೀಯತೆ ಮರೆಯುವಂತೆ ಮಾಡುವ, ಅಪರಾಧ ಪ್ರೋತ್ಸಾಹಿಸುವ ಹಾಗೂ ಆರೋಗ್ಯಕ್ಕೆ ಮಾರಕವಾದ ಮಾದಕ ದ್ರವ್ಯ ಸೇವನೆ ಮಾಡಬಾರದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಮದ್ಯಪಾನ ಮತ್ತು ಅಮಲು ಪದಾರ್ಥ ಸೇವನೆ ಮನುಷ್ಯನ್ನು ದುರ್ಬಲಗೊಳಿಸುತ್ತದೆ. ಮಾದಕ ಪದಾರ್ಥಕ್ಕೆ ದಾಸನಾದ ವ್ಯಕ್ತಿ ಮಾನವೀಯತೆ ಮರೆತು ವರ್ತಿಸುವುದುಂಟು. ಆದ್ದರಿಂದಲೇ ಗಾಂಧೀಜಿ ಮದ್ಯಪಾನ ವ್ಯಕ್ತಿಯ ಆತ್ಮವನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜನರಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಅದು ಬಡತನ ಮತ್ತು ಅಪರಾಧಕ್ಕೆ ಕಾರಣವಾಗುತ್ತದೆ ಎಂಬ ಸತ್ಯ ತಿಳಿಸಬೇಕು. ಯಾವುದೇ ಕಾರಣಕ್ಕೂ ಮಾದಕ ಪದಾರ್ಥ ಮುಟ್ಟಬಾರದು ಎಂದು ಹೇಳಿದರು.
ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಉಪನ್ಯಾಸಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಅಮಲು ಪದಾರ್ಥ ಸೇವನೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು.
ಉಪ ಪ್ರಾಂಶುಪಾಲ ಶ್ರೀಧರ್, ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.

St Agnes PU College : Leadership Training Session

Mangalore : Albert Einstein once said, “A leader is one who out of clutter, brings out simplicity,… out of discord, harmony… and out of difficulty, opportunity.” Being a leader is not easy as it requires tremendous courage, vision, hard work and willingness to take risks.

 St Agnes PU College conducted a session on leadership for the newly elected student cabinet members, class representatives of I and II PUC and their assistants on 24 June 2023. The purpose of the workshop was to tap into their latent potential, and bring it to the fore while also streamlining it. The cabinet members were inspired and girded by a sense of purpose to set forth and draw a blue print for the new academic year 2023-24.

Fr Felix Victor, a dynamic trainer was the resource person for the day.He spoke on the traits of a good leader and how these qualities can be learned and implemented. Through this interactive session, he exhorted them to establish clear communication with their peers and emphasized the need for honesty and integrity. He also said that the ability to think on their feet and face challenges head on, staying focused were all indicators of a good leader.

Sr Janet Sequeira, the Vice Principal welcomed the resource person. MsPrival Dsouza, the College President proposed the vote of thanks.