ಅಕ್ರಮ್ ಪಾಷ ಅವರನ್ನು ಕೋಲಾರದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

ಕೋಲಾರ : ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಇಡೀ ದೇಶದ ಗಮನ ಸೆಳೆಯುವಂತೆ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ
ಅಕ್ರಮ್ ಪಾಷ ಅವರನ್ನು ಕೋಲಾರದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲೂಕಿನಲ್ಲಿ ಪೊಲಿಟಿಕಲ್ ಸೈನ್ಸ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಬಳಿಕ ಕೆಎಸ್ ಅಧಿಕಾರಿಯಾಗಿ ಸೇವೆಯನ್ನು ಆರಂಭಿಸಿದ ಅಕ್ರಂ ಪಾಷಾ ಅವರು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರೋಬೇಷನರಿ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕೊಡಗು ಜಿಲ್ಲೆಯ ಉಪವಿಭಾಗಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ನಂತರ ಚಿಕ್ಕಬಳ್ಳಾಪುರ ‌ಜಿಲ್ಲಾ ಉಸ್ತುವಾರಿ ಸಚಿವ ದಿವಂಗತ ಪ್ರೋ. ಡಾ. ಮುಮ್ತಾಝ್ ಅಲೀ ಖಾನ್ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅಕ್ರಂಪಾಷ ಅವರು ತಮ್ಮ ಅವಧಿಯಲ್ಲಿ ವಿಭಿನ್ನ ಸೇವೆಯ ಮೂಲಕ ಗಮನ ಸೆಳೆದಿದ್ದಾರೆ.

ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆ ತಂದು ವಿಶೇಷವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದರು ಅದೇ ರೀತಿಯಲ್ಲಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ವಖ್ಫ್ ಮಂಡಳಿಯ ಸದಸ್ಯರಾಗಿ ಕೆ.ಎ.ಎಸ್ ಅಸೋಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ 2016ರಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ‌.

ಕರ್ನಾಟಕ ರಾಜ್ಯ ಮಟ್ಟರವಲ್ಲದೆ ಇಡೀ ದೇಶದ ಜನರನ್ನು ತಲ್ಲಣಗೊಳಿಸಿದ ಕೋರೊನಾ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಮಂಡಳಿಯ ಮೂಲಕ ಅನೇಕ ರೀತಿಯ ಸೇವಾ ಸೌಲಭ್ಯಗಳನ್ನು ಕೂಲಿ ಕಾರ್ಮಿಕರಿಗೆ ಒದಗಿಸಿ ಮಾದರಿಯಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ಕೋಲಾರದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಅಕ್ರಂಪಾಷ ಅವರು ಕೋಲಾರ ಜಿಲ್ಲೆಯ ಇತಿಹಾಸ ಮತ್ತು ಸ್ಥಳೀಯ ಸಮಸ್ಯೆಗಳನ್ನು ಆರತ್ತಿದ್ದಾರೆ ಹೀಗಾಗಿ ಅವರು ಕೋಲಾರ ಜಿಲ್ಲಾಧಿಕಾರಿಯಾಗಿ ತಮ್ಮ ಸೇವಾ ಕಾರ್ಯದ ಮೂಲಕ ಮತ್ತಷ್ಟು ಜನಪ್ರಿಯ ಅಧಿಕಾರಿಯಾಗಲು ಅವಕಾಶ ಲಭಿಸಿದೆ.

Rev. Fr George K A is the new Rector of Our Lady of Health Basilica Harihar / ಹರಿಹರ ಆರೋಗ್ಯ ಮಾತಾ ಬೆಸಿಲಿಕಾದ ನೂತನ ರೆಕ್ಟರ್ ಆಗಿ ರೆ.ಫಾ ಜಾರ್ಜ್ ಕೆ.ಎ

Davanagere, Harihar, June 18,2023: Most Rev. Dr Francis Serrao SJ, Bishop of Diocese of Shimoga appointed Rev. Fr George K A as the New Rector of Our Lady of Health, Minor Basilica, Harihar. He assumed his responsibility on June 18,2023 at 7:30am in front of Bishop’s representative Rev. Fr Duming Dias.

He succeeded Rev. Fr Anthony Peter, who served the Basilica from June, 2017 to June 2023. On completion of his term of six years term he is transferred to St. Theresa Little Flower of Jesus Church,  Shikaripura. 

Rev. Fr George K A hails from Our Lady of Assumption Church,  Hiriyur,  Chitradurga District. He did his primary education at Hiriyur. He studied Philosophy at St. Joseph’s Inter Diocesan Seminary, Jeppu,  Mangalore. He did his Regency at Our Lady of Health Basilica, Harihar from 1993-1994.

He completed his Theology at Sr. Peter’s Pontifical Seminary, Bangalore. He was Ordained on June 8,1998 at Our Lady of Assumption Church, Hiriyur. This year he celebrated his Silver Jubilee as a Priest. 

Ever since then he has rendered his services at Sacred Heart Cathedral,  Shivamogga thought in the Schools there. Then he served at St. Anthony’s Church, Karehalli, Bhadravati Taluk. There he built a new Church, which is a small Shrine today.

Then he served at St. Little Flower Theresa’s Church and as HM of the School there. He gave a new face-lift to the school over there. Then he was sent to Infant Jesus Church and School at Challakere.

In the month of May 2023, Bishop Francis Serrao SJ appointed him as Rector of Our Lady of Health, Basilica, Harihar. He assumed is responsibility on June 18,2023.

On Jube 18th at 7:30am Harihar Parishioners as well as pilgrims received Rev. Fr George K A. Rev. Fr Duming Dias was Bishop’s representative did the formalities of handing over the charges from Rev. Fr Anthony Peter to Rev. Fr George K A. 

People and pilgrims of Harihar, Basilica thanked Rev. Fr Anthony Peter. 

Fr George K A is a very good pastor as well as educationist. He has served the Diocese selflessly in various fields last twenty five years.

ಹರಿಹರ ಆರೋಗ್ಯ ಮಾತಾ ಬೆಸಿಲಿಕಾದ ನೂತನ ರೆಕ್ಟರ್ ಆಗಿ ರೆ.ಫಾ ಜಾರ್ಜ್ ಕೆ.ಎ

ದಾವಣಗೆರೆ, ಹರಿಹರ, ಜೂನ್ 18,2023: ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರ್ ಲೇಡಿ ಆಫ್ ಹೆಲ್ತ್, ಮೈನರ್ ಬೆಸಿಲಿಕಾ, ಹರಿಹರದ ನೂತನ ರೆಕ್ಟರ್ ಆಗಿ ರೆ.ಫಾ. ಜಾರ್ಜ್ ಕೆ. ಅವರನ್ನು ನಿಯುಕ್ತರನ್ನಾಗಿ ಮಾಡಿದ್ದಾರೆ. ಅವರು ಜೂನ್ 18,2023 ರಂದು ಬೆಳಿಗ್ಗೆ 7:30 ಕ್ಕೆ ಬಿಷಪ್ ಅವರ ಪ್ರತಿನಿಧಿ ರೆವ. ಫಾದರ್ ಡುಮಿಂಗ್ ಡಯಾಸ್ ಅವರ ಮುಂದೆ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.

ಅವರು ಜೂನ್, 2017 ರಿಂದ ಜೂನ್ 2023 ರವರೆಗೆ ಬೆಸಿಲಿಕಾದಲ್ಲಿ ಸೇವೆ ಸಲ್ಲಿಸಿದ ರೆವ. ಆಂಥೋನಿ ಪೀಟರ್ ಅವರ ಉತ್ತರಾಧಿಕಾರಿಯಾದರು. ಅವರ ಆರು ವರ್ಷಗಳ ಅವಧಿಯ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಸೇಂಟ್ ಥೆರೆಸಾ ಲಿಟಲ್ ಫ್ಲವರ್ ಆಫ್ ಜೀಸಸ್ ಚರ್ಚ್,  ಶಿಕಾರಿಪುರಕ್ಕೆ ವರ್ಗಾಯಿಸಲಾಗುತ್ತದೆ.

ರೆವ. ಜಾರ್ಜ್ ಕೆ ಎ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್‌ನಿಂದ ಬಂದವರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರಿಯೂರಿನಲ್ಲಿ ಮಾಡಿದರು. ಅವರು ಸೈಂಟ್ ಜೋಸೆಫ್ ಇಂಟರ್ ಡಯೋಸಿಸನ್ ಸೆಮಿನರಿ, ಜೆಪ್ಪು,  ಮಂಗಳೂರಿನಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು 1993-1994 ರವರೆಗೆ ಹರಿಹರದ ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾದಲ್ಲಿ ತಮ್ಮ ರೀಜೆನ್ಸಿಯನ್ನು ಮಾಡಿದರು.

ಅವರು ತಮ್ಮ ದೇವತಾಶಾಸ್ತ್ರವನ್ನು ಬೆಂಗಳೂರಿನ ಸೀನಿಯರ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯಲ್ಲಿ ಪೂರ್ಣಗೊಳಿಸಿದರು. ಅವರು ಜೂನ್ 8, 1998 ರಂದು ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್‌ನಲ್ಲಿ ದೀಕ್ಷೆ ಪಡೆದರು. ಈ ವರ್ಷ ಅವರು ಅರ್ಚಕರಾಗಿ ತಮ್ಮ ರಜತ ಮಹೋತ್ಸವವನ್ನು ಆಚರಿಸಿದರು.

ಅಂದಿನಿಂದ ಅವರು ತಮ್ಮ ಸೇವೆಯನ್ನು ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ಸಲ್ಲಿಸಿದ್ದಾರೆ,  ಶಿವಮೊಗ್ಗ ಅಲ್ಲಿನ ಶಾಲೆಗಳಲ್ಲಿ ಯೋಚಿಸಿದ್ದಾರೆ. ನಂತರ ಭದ್ರಾವತಿ ತಾಲೂಕಿನ ಕಾರೇಹಳ್ಳಿಯ ಸಂತ ಅಂತೋನಿ ಚರ್ಚ್ ನಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಹೊಸ ಚರ್ಚ್ ಅನ್ನು ನಿರ್ಮಿಸಿದರು, ಅದು ಇಂದು ಒಂದು ಸಣ್ಣ ದೇವಾಲಯವಾಗಿದೆ.

ನಂತರ ಸೇಂಟ್ ಲಿಟ್ಲ್ ಫ್ಲವರ್ ಥೆರೇಸಾ ಚರ್ಚ್ ನಲ್ಲಿ ಹಾಗೂ ಅಲ್ಲಿನ ಶಾಲೆಯ ಎಚ್ ಎಂ ಆಗಿ ಸೇವೆ ಸಲ್ಲಿಸಿದರು. ಅಲ್ಲಿದ್ದ ಶಾಲೆಗೆ ಹೊಸ ಮುಖವನ್ನು ಕೊಟ್ಟರು. ನಂತರ ಚಳ್ಳಕೆರೆಯ ಇನ್‌ಫೆಂಟ್ ಜೀಸಸ್ ಚರ್ಚ್ ಮತ್ತು ಶಾಲೆಗೆ ಕಳುಹಿಸಲಾಯಿತು.

ಮೇ 2023 ರಲ್ಲಿ, ಬಿಷಪ್ ಫ್ರಾನ್ಸಿಸ್ ಸೆರಾವೊ SJ ಅವರನ್ನು ಅವರ್ ಲೇಡಿ ಆಫ್ ಹೆಲ್ತ್, ಬೆಸಿಲಿಕಾ, ಹರಿಹರದ ರೆಕ್ಟರ್ ಆಗಿ ನೇಮಿಸಿದರು. ಅವರು ಜೂನ್ 18,2023 ರಂದು ಜವಾಬ್ದಾರಿಯನ್ನು ವಹಿಸಿಕೊಂಡರು.

ಜು.18ರಂದು ಬೆಳಗ್ಗೆ 7:30ಕ್ಕೆ ಹರಿಹರ ಪ್ಯಾರಿಷಿಯನ್ನರು ಹಾಗೂ ಯಾತ್ರಾರ್ಥಿಗಳು ಬರಮಾಡಿಕೊಂಡರು. .

ಹರಿಹರ, ಬೆಸಿಲಿಕಾದ ಜನರು ಮತ್ತು ಯಾತ್ರಾರ್ಥಿಗಳು ರೆ.ಫಾ.ಆಂಟನಿ ಪೀಟರ್ ಅವರಿಗೆ ಧನ್ಯವಾದ ಅರ್ಪಿಸಿದರು.

ಫಾದರ್ ಜಾರ್ಜ್ ಕೆ ಎ ಉತ್ತಮ ಪಾದ್ರಿ ಮತ್ತು ಶಿಕ್ಷಣತಜ್ಞ. ಕಳೆದ ಇಪ್ಪತ್ತೈದು ವರ್ಷಗಳಿಂದ ಧರ್ಮಪ್ರಾಂತ್ಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆ ಪ್ರಯುಕ್ತ 108 ಲೀಟರ್ ಕ್ಷೀರಾಭಿಷೇಕ

ಪಟ್ಟಣದ ಎಂಜಿ ರಸ್ತೆಯಲ್ಲಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆ ಪ್ರಯುಕ್ತ 108 ಲೀಟರ್ ಕ್ಷೀರಾಭಿಷೇಕ ಕಾರ್ಯಕ್ರಮವು ತಾಲೂಕು ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಮೋಹನಾಚಾರಿ ನೇತೃತ್ವದಲ್ಲಿ ನಡೆಯಿತು. ಅರ್ಚಕ ಮಂಜುನಾಥಚಾರಿ ನಡೆಸಿಕೊಟ್ಟರು. ಮುಖಂಡರಾದ ರುದ್ರಪ್ಪ ಚಾರಿ, ಕೆ.ರತ್ನಚಾರಿ, ಕಾಳಾಚಾರಿ, ರವಿಚಂದ್ರಚಾರಿ, ರಾಮಚಂದ್ರಚಾರಿ, ಕೆ.ರಾದಮ್ಮ, ಕಾಳಮ್ಮ, ರಮೇಶ್ ಇದ್ದರು.

ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಜೂ.20 ರಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಎಸ್‍ಎಸ್‍ಎ ನಡೆಯಲಿದೆ

ಕೋಲಾರ:- 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2 ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ವಿಶೇಷ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗಳು ಹಾಗೂ ನಿರ್ಧಿಷ್ಟ ಪಡಿಸಿದ ವೃಂದದ (ಕನಿಷ್ಠ 03 ರಿಂದ 05 ವರ್ಷದೊಳಗಡೆ) ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಜೂ.20 ರಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಎಸ್‍ಎಸ್‍ಎ ಇಲ್ಲಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಸಂಬಂಧ ಶಿಕ್ಷಕರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್‍ನ ವೇಳಾಪಟ್ಟಿ ಬಿಡುಗಡೆ ಮಾಡಿರುವ ಅವರು, ಜೂ.20 ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆಗೆ ಸಂಬಂಧಿಸಿದಂತೆ ಬಂಗಾರಪೇಟೆ , ಕೆ.ಜಿ.ಎಫ್, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಬ್ಲಾಕ್ ಹಂತದ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೂ.21ರ ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲಾ ಹಂತದಲ್ಲಿ ಬ್ಲಾಕ್ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದ್ದು, ಈಗಾಗಲೇ ಹೆಚ್ಚುವರಿ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಶಿಕ್ಷಕರು ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಜೂ.22 ರ ಪೂರ್ವಾಹ್ನ ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಡಿ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೂ.23 ರಂದು ಪೂವಾಹ್ನ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂ.26 ರ ಪೂರ್ವಾಹ್ನ ಜಿಲ್ಲಾ ಹಂತದಲ್ಲಿ ನಿರ್ದಿಷ್ಠ ಪಡಿಸಿದ ಹುದ್ದೆಗಳ ಕೌನ್ಸಿಲಿಂಗೆ ನಂತರ ಉಳಿಕೆಯಾಗುವ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮ ನಡೆಯಲಿದ್ದು, ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ನಿರ್ದಿಷ್ಠ ಪಡಿಸಿದ ಶಿಕ್ಷಕರಿಗೆ ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜುಲೈ 11 ರಿಂದ ಜು.12ರವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ತಾಲ್ಲೂಕು ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ. ಹಾಗೆಯೇ ಜು.15 ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದ್ದು, ಜು.17 ರಂದು ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕನಿಷ್ಠ(03 ರಿಂದ 05 ವರ್ಷದೊಳಗಡೆ) ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್


ಜೂ. 20 ರ ಪೂವಾಹ್ನ ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಬ್ಲಾಕ್ ಹಂತ ಹೆಚ್ಚುವರಿ ಶಿಕ್ಷಕರಿಗೆ ನಡೆಯಲಿದೆ, ಹಾಗೆಯೇ ಜೂ.21 ರಂದು ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲಾ ಹಂತ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.
ಜೂ.22 ರಂದು ಅಪರಾಹ್ನ ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಂತೆ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ.
ಜೂ.23 ರಂದು ಅಪರಾಹ್ನ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ. ಇದಾದ ನಂತರ ಜೂ.26 ರಂದು ಪೂವಾಹ್ನ ಜಿಲ್ಲಾ ಹಂತದಲ್ಲಿ ನಿರ್ದಿಷ್ಠ ಪಡಿಸಿದ ಹುದ್ದೆಗಳ ಕೌನ್ಸಿಲಿಂಗೆ ನಂತರ ಉಳಿಕೆಯಾಗುವ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಡಿ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ನಿರ್ದಿಷ್ಠ ಪಡಿಸಿದ ಶಿಕ್ಷಕರಿಗೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.
ಜು.13 ರಿಂದ ಜುಲೈ 14 ರವರೆಗೂ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ತಾಲ್ಲೂಕು ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ. ಜುಲೈ 15ರ ಅಪರಾಹ್ನ ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ, ಜುಲೈ 17 ಶುಕ್ರವಾರ ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕನಿಷ್ಠ 03 ರಿಂದ 05 ವರ್ಷದೊಳಗಡೆಯಂತೆ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಕೌನ್ಸಿಲಿಂಗ್‍ಗೆ ಬರುವ ಶಿಕ್ಷಕರಿಗೆ ಸೂಚನೆಗಳು


ವರ್ಗಾವಣೆ ಪಟ್ಟಿಯಲ್ಲಿರುವ ಶಿಕ್ಷಕರು ವೇಳಾ ಪಟ್ಟಿಯಲ್ಲಿ ಸೂಚಿಸಿರುವ ದಿನಾಂಕಗಳಂದು ಸೂಚಿಸಿರುವ ಸಮಯಕ್ಕೆ ಕೌನ್ಸಿಲಿಂಗ್‍ಗೆ ಹಾಜರಾಗುವುದು. ತಡವಾಗಿ ಬಂದಲ್ಲಿ ನಿಮ್ಮ ಕ್ರಮ ಸಂಖ್ಯೆ ಮುಂದೆ ಹೋಗಿದ್ದಲ್ಲಿ ಆನ್‍ಲೈನ್ ಕೌನ್ಸಿಲಿಂಗ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ಕೌನ್ಸಿಲಿಂಗ್‍ಗೆ ಹಾಜರಾಗುವುದು. ಕೌನ್ಸಿಲಿಂಗ್ ಹಾಜರಾಗುವ ಶಿಕ್ಷಕರು ಸಾಂದರ್ಭಿಕ ರಜೆ ಪಡೆದು ಕೌನ್ಸಿಲಿಂಗ್‍ಗೆ ಹಾಜರಾಗುವುದು. ಯಾವುದೇ ಕಾರಣಕ್ಕೂ ಅನ್ಯ ಕಾರ್ಯ ನಿಮಿತ್ತ ಒಒಡಿ ಎಂದು ಪರಿಗಣಿಸುವುದಿಲ್ಲ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಶೈಕ್ಷಣಿಕ ಸಾಮಾಗ್ರಿಗಳನ್ನು ಬಳಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಕಾಣಬೇಕು : ಬಿಇಒ ವಿ.ಉಮಾದೇವಿ

ಶ್ರೀನಿವಾಸಪುರ : ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಶೈಕ್ಷಣಿಕ ಸಾಮಾಗ್ರಿಗಳನ್ನು ಬಳಿಸಿಕೊಂಡು ಶೈಕ್ಷಣಿಕ ಪ್ರಗತಿ ಕಾಣುವಂತೆ ವಿದ್ಯಾರ್ಥಿಗಳಿಗೆ ಬಿಇಒ ವಿ.ಉಮಾದೇವಿ ಕರೆ ನೀಡಿದರು.

ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಮೀಪ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶನಿವಾರ ಮಣಿಪುರಂ ರಿತಿ ಜ್ಯೂಲರೀಸ್ ವತಿಯಿಂದ ೨೫೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರವು ಪ್ರತಿಯೊಬ್ಬ ಮಗುವು ಶಿಕ್ಷಣವನ್ನು ಪಡೆಯಲೇ ಬೇಕೆಂಬ ನಿಟ್ಟಿನಲ್ಲಿ ಅನೇಕ ಯೋಜನೆಗಳ ಮುಖಾಂತರ ಶಿಕ್ಷಣ ಪಡೆಯಲು ಪ್ರೋತ್ಸಾಹ ಮಾಡುತ್ತಿದೆ.  ವಸತಿ ಶಾಲೆಯಲ್ಲಿ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಿಗಿಸಿದೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು. ಶಿಸ್ತು, ಗುರಿಯೊಂದಿಗೆ ತಮ್ಮ ಜೀವನದ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ಕಲಿಕೆ ನಿರಂತರವಾಗಿ ಇರಬೇಕು ಇದರೊಂದಿಗೆ ಉತ್ತಮ ಪರಿಶ್ರಮದೊಂದಿಗೆ ತಮ್ಮ ಗುರಿಯನ್ನು ಸಾಧಿಸುವಂತೆ ತಿಳಿಸಿದರು. 

ಹೆಣ್ಣು ಮಗುವೊಂದು ಕಲಿತರೆ ಶಾಲೆಯೊಂದು ತೆರದಂತೆ ಅದರಂತೆ ಹೆಣ್ಣುಮಕ್ಕಳು ಉತ್ತಮ ರೀತಿಯಲ್ಲಿ ಓದಿ ಉನ್ನತ ಮಟ್ಟವನ್ನೇರಬೇಕು ಎಂದರು. ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತವಾಗಿ ೪ ವರ್ಷಗಳಿಂದ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಆ ನಿಟ್ಟಿನಲ್ಲಿ ೬೮ ಪ್ರೌಡಶಾಲೆಗಳು ಇದ್ದು, ದಾನಿಗಳು ಮೂಲಭೂತ ಸೌಲಭ್ಯಗಳ ಕೊರತೆ ಇರುವ ಶಾಲೆಗಳಿಗೆ ತಮ್ಮಿಂದಾಗುವ ಸಹಕಾರ ನೀಡಬೇಕು ಎಂದು ದಾನಿಗಳ ಬಳಿ ಮನವಿ ಮಾಡಿದರು.

ಮಣಿಪುರಂ ರೀತಿ ಜ್ಯೂಲರೀಸ್ ಸೌತ್ ಇಂಡಿಯಾ ಮಾರಕಟ್ಟೆ ಮುಖ್ಯಸ್ಥ ಪೆರುಮಾಳ್ ಮಾತನಾಡಿ ನಮ್ಮ ಕಂಪನಿಯು ೧೯೪೯ರಲ್ಲಿ  ಚಿಕ್ಕ ಸಂಸ್ಥೆಯಾಗಿ ಪ್ರಾರಂಭವಾಗಿ ಇಂದು ಐದು ಸಾವಿರ ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಸಹ ತಮ್ಮ ಗುರಿಯನ್ನು ಸಾಧಿಸಿಸಲು ಹಂತ ಹಂತವಾಗಿ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು. 

ಪ್ರಾಂಶುಪಾಲ ವೆಂಕಟೇಶಪ್ಪ ಮಾತನಾಡಿ ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರಿ ಕರಣವಾಗಿದೆ. ಖಾಸಗಿ ಶಾಲೆಗಳು ನೀಡುವ ಆಸೆ, ಆಮೀಷಗಳಿಗೆ ಒಳಪಟ್ಟು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಆದರೆ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಮೌಲ್ಯಯುತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿ ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾವಂತರಾಗುವAತೆ ತಿಳಿಸಿದರು. 

ಮಣಿಪುಂ ರಿತಿ ಜ್ಯೂಲರೀಸ್ ಜಿಲ್ಲಾ ಶಾಖೆ ವ್ಯವಸ್ಥಾಪಕ ಫವಾಸ್, ಫೈನಾನ್ಸ್ ಏರಿಯಾ ಮುಖ್ಯಸ್ಥ ಸುರೇಶ್, ಮಣಿಪುರಂ ಬಾರಿಕೋಟ್ ವ್ಯವಸ್ಥಾಪಕ ಪಾಳ್ಯ ಆನಂದ್‌ನಾಯಕ್, ಸಿಬ್ಬಂದಿಗಳಾದ ನಾರಾಯಣಸ್ವಾಮಿ, ಎಂ.ಎನ್. ಆನಂದ್,  ಇಸಿಒ ಕೋದಂಡಪ್ಪ, ಶಿಕ್ಷಕರಾದ ರೆಡ್ಡಪ್ಪ, ಪ್ರತಿಮಾ, ಟಿ.ವಿ.ಮುನಿರಾಜು ಇದ್ದರು. 

ಗೃಹ ಸಚಿವ ಪರಮೇಶ್ವರವರಿಗೆ ಜನಮೆಚ್ಚಿದ ಜನನಾಯಕ ಪ್ರಶಸ್ತಿ ಪ್ರಧಾನ

ಕೆ.ಜಿ.ಎಫ್., ಜೂ. 17 : ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ಕಲ್ಯಾಣ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ನೂತನ ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರಿಗೆ ಜನಮೆಚ್ಚಿದ ಜನನಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೃಹ ಸಚಿವರ ಗೃಹ ಕಛೇರಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ|| ಪೂರ್ಣೇಶನ್‍ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಜೆ.ರಾಜೇಶ್, ಪ್ರಧಾನ ಕಾರ್ಯದರ್ಶಿ ಡಾ|| ಆರ್.ಪ್ರಭುರಾಂ, ಖಜಾಂಚಿ ಜೀವನದಿಯರಾಜೇಶ್ ಅವರುಗಳು ಉಪಸ್ಥಿತರಿದ್ದರು. ನಿವೃತ್ತ ಐಎಎಸ್ ಡಾ|| ತಂಗರಾಜ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರು ಈ ಹಿಂದೆಯೂ ಸಹ ಹಲವು ಬಾರಿ ಸಚಿವರಾಗಿದ್ದು, ಜನಾನುರಾಗಿಯಾಗಿ ಉತ್ತಮ ಹೆಸರು ಗಳಿಸಿದ್ದರು. ಜನಮೆಚ್ಚಿನ ಜನನಾಯಕರಾಗಿ ಹೊರಹೊಮ್ಮಿರುವ ಪರಮೇಶ್ವರ್ ಅವರನ್ನು ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ಕಲ್ಯಾಣ ಸಂಘದ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ಕಲ್ಯಾಣ ಸಂಘದ ಪದಾಧಿಕಾರಿಗಳು, ಹಲವು ಮುಖಂಡರುಗಳು ಭಾಗವಹಿಸಿದ್ದರು.

ಸ್ನೇಹಾಲಯವು ಚಿತ್ರದುರ್ಗದ ಹಿರಿಯೂರಿನ ಶ್ರೀ ಕೆಂಚಣ್ಣರ ಸಂತೋಷದಾಯಕ ಪುನರ್ವಸತಿಗೆ ಸಾಕ್ಷಿಯಾಯಿತು

ದಿನಾಂಕ 19/01/2021 ರಂದು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೇಫ್ ಕ್ರಾಸ್ತಾ ಅವರು ಉಪ್ಪಳ, ಕಾಸರಗೋಡು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಕೆಂಚಣ್ಣ ಎಂಬ ವ್ಯಕ್ತಿಯನ್ನು ರಕ್ಷಿಸಿದರು. ಅವರು ಮಾನಸಿಕ ಅಸ್ವಸ್ಥತರಂತೆ ತೋರುತ್ತಿದ್ದುದ್ದಲ್ಲದೆ ಅತ್ಯಂತ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದರು.

ಅನ್ನ ಆಹಾರವಿಲ್ಲದೆ ಅತ್ಯಂತ ದಯನೀಯಸ್ಥಿತಿಯಲ್ಲಿದ್ದ ಈತನನ್ನು ಮುಂದಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು . ಮನೋವೈದ್ಯಕೀಯ ಸಲಹೆಗಾರರು ಮತ್ತು ವೈದ್ಯಕೀಯತಂಡವು ಅವರಿಗೆ ಸೂಕ್ತ ಆರೈಕೆಮತ್ತು ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಯಿತು.

ಔಷಧಿಗಳಜೊತೆಗೆ, ವಿವಿಧ ಚಿಕಿತ್ಸಕ ಚಟುವಟಿಕೆಗಳು ಮತ್ತು ಸಮಾಲೋಚನೆ ಅವಧಿಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಪ್ರೆರೇಪಿಸಲಾಯಿತು . ಅವರು ನೀಡಿದ ಮಾಹಿತಿಯ ಆಧಾರದ ಮೇಲೆ, ನಮ್ಮ ಸಾಮಾಜಿಕ ಕಾರ್ಯಕರ್ತರು ಅವರ ಕುಟುಂಬವನ್ನು ತಲುಪಲು ಸಾಧ್ಯವಾಯಿತು. ಫೋನ್ ಮೂಲಕ ಕೌಟುಂಬಿಕ ಸಮಾಲೋಚನೆಯಲ್ಲಿ ಕೆಂಚಣ್ಣ ಕೂಡ ಭಾಗವಹಿಸಿದರು . ತದನಂತರ ಮನೋವೈದ್ಯಕೀಯ ಸಮಾಜ ಸೇವಕರು ದಿನಾಂಕ 18/06/2023 ರಂದು ಸ್ನೇಹಾಲಯದಲ್ಲಿ ಕೌಟುಂಬಿಕ ಮಿಲನವನ್ನುಆಯೋಜಿಸದರು . ಕೆಂಚಣ್ಣಅವರನ್ನು ಬರಮಾಡಿಕೊಳ್ಳಲು ಅವರ ಪತ್ನಿ ಹಾಗೂ ತಾಯಿ ಸ್ನೇಹಾಲಯಕ್ಕೆ ಆಗಮಿಸಿದರು. ಜೀವಂತ ವಿರುವ ಹಾಗೂ ಸುಸ್ಥಿತಿಯಲ್ಲಿರುವ ಆತನನ್ನು ಕಂಡು ಪತ್ನಿ ಹಾಗೂ ತಾಯಿ ಕಣ್ಣೀರಿಟ್ಟರು. ಕೆಂಚಣ್ಣ ಮತ್ತೆ ತನ್ನ ಕುಟುಂಬವನ್ನು ಹಾಗೂ ಮನೆಯನ್ನು ಸೇರುವುದು ನಿಜಕ್ಕೂ ಸ್ನೇಹಾಲಯ ಕುಟುಂಬಕ್ಕೆ ಸಂತೋಷ ಮತ್ತುಆನಂದದಾಯಕವಾಗಿದೆ .ಸ್ನೇಹಾಲಯವು ಈ ವರೆಗೆ ಸುಮಾರು 950 ಕ್ಕಿಂತಲೂ ಅಧಿಕ ಪುನರ್ಮಿಲನಕ್ಕೆ ಸಾಕ್ಷಿಯಾಗಿದ್ದು, ಅನಾಥರಾಗಿ ರಸ್ತೆ ಬದಿಯಲ್ಲಿ ಶೋಚನೀಯಯ ಸ್ಥಿತಿಯಲ್ಲಿದ್ದವರು, ಹೀಗೆ ಗುಣಮುಖರಾಗಿ ಮತ್ತೆ ತಮ್ಮ ಕುಟುಂಬವನ್ನುಸೇರಿದಾಗ ಅದು ನಮಗೆ ನಿಜವಾದ ತೃಪ್ತಿ ಮತ್ತು ಸಂತೋಷವನ್ನು ನೀಡುತ್ತದೆ’ ಎಂದು ಬ್ರದರ್ ಜೋಸೇಫ್ ಕ್ರಾಸ್ತಾ ತಿಳಿಸಿದರು.