ಬಾಲಕಾರ್ಮಿಕ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು:ನ್ಯಾಯಾಧೀಶ ಶ್ರೀ ಸುನಿಲ್ ಎಸ್ ಹೊಸಮನಿ

ಕೋಲಾರ : ಬಾಲಕಾರ್ಮಿಕ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು . ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುನಿಲ್ ಎಸ್ ಹೊಸಮನಿ ಅವರು ತಿಳಿಸಿದರು . 

ಇಂದು ಮೌಲಾನ ಅಜಾದ್ ಮಾದರಿ ಶಾಲೆ , ದರ್ಗಾಮೊಹಲ್ಲಾ , ಕೋಲಾರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕಾರ್ಮಿಕ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಯಾವುದೇ ಮಕ್ಕಳು ಗ್ಯಾರೇಜ್ , ಹೋಟೆಲ್ , ಮಟನ್ , ಚಿಕನ್ ಶಾಪ್‌ಗಳಲ್ಲಿ ಕೆಲಸಕ್ಕೆ ಹೋಗಬಾರದೆಂದು ತಿಳಿಸಿದರು .

ಶಿಕ್ಷಣ ಮಕ್ಕಳ ಮೂಲ ಹಕ್ಕಾಗಿದೆ ಸಮಾಜದಲ್ಲಿ ಬಾಲಕಾರ್ಮಿಕರನ್ನು ಕಂಡರೆ ಅಂತವರನ್ನು ಗುರುತಿಸಿ ಶಾಲೆಗೆ ಸೇರಿಸುವುದು ಪ್ರತಿಯೊಬ್ಬರ ಕರ್ತವ್ಯ ಮಕ್ಕಳು ಬಾಲ್ಯಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. 

ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಶಬಾನಾ ಅಜ್ಜಿರವರು ಮಾತನಾಡಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ , 1986 ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜೆಯ ( ವಾರೆಂಟ್ ರಹಿತ ಬಂಧಿಸಬಹುದಾದ ) ಅಪರಾಧವಾಗಿದೆ . 

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ , 1986 ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ .20,000 / – ರಿಂದ ರೂ .50,000 / -ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ . 

ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು . 

ಹಿರಿಯ ವಕೀಲರಾದ ಶ್ರೀ ಕೆ.ಆರ್.ಧನರಾಜ್‌ರವರು ಮಾತನಾಡಿ ಮಕ್ಕಳು ಮತ್ತು ಮಹಿಳೆಯರಿಗೆ ಜಿಲ್ಲಾ ಕಾನೂನು ಸೇ ಪ್ರಾಧಿಕಾರದಿಂದ ಉಚಿತ ಕಾನೂನು ನೆರವನ್ನು ಪಡೆಯ ಬಹುದಾಗಿದ್ದು , ಮಕ್ಕಳು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದರು .

 ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕುಮಾರಿ ಶೃತಿ ಡಿ ಹಾಗೂ ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .

Holy Redeemer English Medium School : School Reopening Ceremony

Holy Redeemer English Medium School had its School Reopening of the new academic year 2023-2024 on May 31st. School’s new correspondent Rev Fr Walter Oswald D’Mello was the chief guest. Headmaster Rev Fr Clifford Pinto, Parish Pastoral Council Vice President Walter Monis, PTA Vice President Bonaventure Pinto and PTA Secretary Wilma Fernandes were present. Headmaster introduced and welcomed the new correspondent and two new Teachers. Correspondent wished well and blessed the students. Headmaster told about various activities, rules and regulations. Teachers sang wishing song and action songs. Teachers Elvita Pais welcomed, Saritha Rodrigues proposed the vote of thanks and Preetha D’Souza compered the programme.

Moment of Marian Prayer for Synod of Bishops held in Rosario Cathedral Mangalore

MANGALORE, MAY 31: Most Rev. Dr Peter Paul Saldanha, Bishop of Mangalore celebrated the MOMENT OF MARIAN PRAYER FOR THE SYNOD in Rosario Cathedral during the early morning mass on May 31, 2023. 

The General Secretariat of the Synod in Rome has requested Episcopal Conferences worldwide to arrange for the celebration of a “Moment of Marian Prayer” on 31 May 2023 — the liturgical memorial of the Visitation of the Blessed Virgin Mary and the conclusion of the Marian Month — in preparation for and prayerful expectation of the XVI Ordinary General Assembly of the Synod of Bishops. 

The CCBI Office bearers, unanimously felt that, just as the inauguration of the Synodal Journey had taken place in each Diocese, this celebration too should be held in each Diocese on the indicated date, either in the Cathedral or in one or more Marian shrines of the territory. 

Responding to this call the celebration of the “Moment of Marian Prayer” was held in Our Lady of Rosary Cathedral. The Holy Eucharist was celebrated at 7.00 am by Most Rev. Dr Peter Paul Saldanha followed by short adoration.

 Msgr. Maxim L. Noronha, Vicar General, Rev. TrishanD’souza, Secretary to the Bishop, Rev. Fr Alfred Pinto, Parish Priest, Rev. Fr Vinod Lobo, Socius& Rev. Fr Santhosh D’Souza, Resident Priest concelebrated the mass. 

Report and Pics: Fr Vinod Lobo, Rosario Cathedral

ಕೆದಿಂಜೆ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ, ಬರೆಯುವ ಪುಸ್ತಕ, ಕೊಡೆ, ಲೇಖನಾ ಸಾಮಾಗ್ರಿ ವಿತರಣೆ

ಕೆದಿಂಜೆ ಶಾಲೆ : ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ, ಬರೆಯುವ ಪುಸ್ತಕ, ಕೊಡೆ, ಲೇಖನಾ ಸಾಮಾಗ್ರಿ ವಿತರಣೆ
ಕೆದಿಂಜೆ ಶ್ರೀ ವಿದ್ಯಾ ಬೋದಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಅತ್ಯಂತ ವಿಜಂಭೃಣೆಯಿಂದ ಬುಧವಾರ ಜರಗಿತು. ಆ ಪ್ರಯುಕ್ತ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತ ಪಠ್ಯ ಪುಸ್ತಕ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ದಾನಿಗಳಾದ ಮುಂಬೈ ಸದಾಶಿವ ಪುತ್ರನ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಎನ್. ಸುಧಾಕರ್ ರಾವ್ ಅವರ ಪ್ರಯೋಜಕತ್ವದಲ್ಲಿ ಉಚಿತ ಬರೆಯುವ ಪುಸ್ತಕ, ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಕೊಡೆಗಳ ಹಸ್ತಾಂತರ, ನಿವೃತ್ತ ಮುಖ್ಯ ಶಿಕ್ಷಕ ಕೆ. ಅನಿಲ್ ಕುಮಾರ್ ಅವರ ಪ್ರಯೋಜಕತ್ವದಲ್ಲಿ ಉಚಿತ ಲೇಖನಾ ಸಾಮಾಗ್ರಿಗಳ ಕೊಡುಗೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಯು. ಶೇಷಗಿರಿ ಕಾಮತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮುಂಬೈ ಸದಾಶಿವ ಪುತ್ರನ್, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎನ್. ತುಕಾರಾಮ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಅನಿಲ್ ಕುಮಾರ್, ಎನ್. ಸುಧಾಕರ್ ರಾವ್, ನಿವೃತ್ತ ಶಿಕ್ಷಕಿ ಸರೋಜಿನಿ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಪದ್ಮಶ್ರೀ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಬೋಳ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘದ ಅಧ್ಯಕ್ಷ ಉದಯ ಅಂಚನ್ ಬೋಳ ಮೊದಲಾದವರಿದ್ದರು.
ದಾನಿಗಳಾದ ಮುಂಬೈ ಸದಾಶಿವ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಸಹಶಿಕ್ಷಕಿ ರೇಖಾ ಪೈ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಗೌರವಶಿಕ್ಷಕಿಯರಾದ ಮಮತಾ ಪೂಜಾರಿ, ಜಯಲಕ್ಷ್ಮೀ, ಭಾರತಿ ಆಚಾರ್ಯ ಮೊದಲಾದವರಿದ್ದರು.

FMHMC INAUGURATES THE STUDENTS’ COUNCIL FOR 2023-24

The Inaugural ceremony of the Students’ Council 2023-24 was held on May31st 2023at Father Muller Auditorium, Deralakatte.

The programme commenced by the procession of the former and the newlyelected office bearers followed by invoking the blessings of the almighty by a prayer song.

Dr VilmaD’souza, Vice Principal andStaff Advisor – Students’ Council welcomed gathering and introduced the Chief Guest Dr Alwyn V D’Sa,Associate Professor of English and Controller of Examinations, St Aloysius College (Autonomous), Mangalore. Rev FrAshwinCrasta presented the floral bouquet to Rev Fr Richard Aloysius Coelho and Dr PrabhuKiran to Dr Alwyn V D’Sa.

Principal Dr E S J PrabhuKiranwelcomed the new office bearers. Former President of the Students’Council, Mr Sarang Paul handed over the college flag to the newly elected President, Mr Deron Maben.  Followed by other office bearers handing over their duties to the new office bearers: Ms Sushmitha- General Secretary, Ms Sandra Shruthi S – Magazine Secretary,  MrAlan Jinson-Sports Secretary, Mr KhushiSuvarna-Cultural Secretary and then Principal administered the oath of the office bearers.

The Students’ Council was formally inaugurated by lighting the lamp by the dignitaries and newly elected President& General Secretory. The Chief Guest felicitated the outgoing office bearers and members of Students’ council with a memento as a token of appreciation.Mr Sarang Paul delivered the farewell speech. It was followed by acceptance speech by Mr Deron Maben.

Rev FrRoshanCrasta, Administrator, FMHMCH&HPD, in his message congratulated the newly elected members, thanked the former Students’ Council on behalf of the management and recognised the services rendered, leadership executed and initiatives taken. He mentioned that communication is a vital force in leadership and he appealed the student council to work as a team to strive towards the welfare of the students and management by upholding the motto of the institution.

In the inaugural address Chief Guest, Dr Alwyn V D’Sacongratulated the management for having conducting such programmes with perfection. He told that students’council job is to enhance the image of the institution, to be compassionate and empathetic. He insisted the newly elected president and team to work with the students.

Following which the Chief Guest was presented with a memento as a token of gratitude by Rev Fr Richard Aloysius Coelho, Director, FMCI.

Rev Fr Richard Aloysius Coelho, in his presidential addresscongratulated all the students council members. He emphasized that the Young leaders should look for people’s progress, work as team and follow the ethos, mission of the institution and be a bridge between students and management.

The vote of thanks was proposed by Ms Sushmitha, General Secretary and the programme was concluded with the Institution Anthem.

Dr Harshitha N and Dr ShreyankKotiancompered the programme.

ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾರರ ಪಟ್ಟಿ ತಯಾರಿಯ ಸಿಬ್ಬಂದಿ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ : ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸಲು ನೇಮಕಗೊಂಡಿರುವ ಸಿಬ್ಬಂದಿ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಸೂಚಿಸಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ಮೇ 29 ರಿಂದ ಜೂನ್‌4ರವರೆಗೆ ಕ್ಷೇತ್ರ ವಿಂಗಡಣೆ ಅಧಿಸೂಚನೆ ಕೋಷ್ಠಕದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸಬೇಕು. ಗಡಿ ಭಾಗದಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಬೇಕು.

ಜೂನ್ 5 ರಿಂದ 13 ರವರೆಗೆ ಮುದ್ರಕರಿಂದ ಪ್ರಥಮ ಜೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಜೂನ್ 14 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಬೇಕು. ಜೂನ್ 19 ರಂದು ಆಕ್ಷೇಪಣೆ ಸಲ್ಲಿಸಲು ಕೊನೆ ದಿನ. ಜೂನ್ 22 ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕೊನೆ ದಿನ.

ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಜೂನ್ 25 ರಂದು ಮುದ್ರಕರಿಂದ ಅಗತ್ಯ ಬದಲಾವಣೆ ಮಾಡಿಸಿ , ಅಂತಿಮ ಚೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಜೂನ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸುಮಾರು 25 ವರ್ಷಗಳಲ್ಲಿ ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳಬಹುದು ಎಂಬುದು ತಿಳಿಸಿಕೊಡುತ್ತದೆ-ಇಒ ಕೃಷ್ಣಪ್ಪ

ಶ್ರೀನಿವಾಸಪುರ 1 : ವಿದ್ಯಾರ್ಥಿಗಳಿಗೆ ಬಹುತೇಕವಾಗಿ ಸುಮಾರು 25 ವರ್ಷಗಳಲ್ಲಿ ತಮ್ಮ ಜೀವನವನ್ನು ಯಾವ ರೀತಿಯಾಗಿ ನಿರ್ಧರಿಸಿಕೊಳ್ಳಬಹುದು ಎಂಬುದು ತಿಳಿಸಿಕೊಡುತ್ತದೆ. ಎಂದು ಇಒ ಕೃಷ್ಣಪ್ಪ ಹೇಳಿದರು.
ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಮತ್ತು ಸಮವಸ್ತ್ರಗಳನ್ನು ವಿತರಿಸಿ ಮಾಡಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಂಸ್ಕಾರವಂತ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು ಕರೆ ನೀಡಿದರು.
ಪುರಸಭೆ ಮುಖ್ಯ ಅಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ವಿದ್ಯಾರ್ಥಿ ದಸೆಯಿಂದಲೇ ಹಿರಿಯರನ್ನು , ಗುರುಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದರು ಕೆರೆ ನೀಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ ಮಾತನಾಡಿ ಸರ್ಕಾರದ ಮಧ್ಯಾಹ್ನದ ಬಿಸಿ ಊಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಬಳಸಿಕೊಂಡು ಉತ್ತಮವಾದ ವಿಧ್ಯಾಭ್ಯಾಸವನ್ನು ಮುಂದುವರಿಸಿಬೇಕೆಂದು ಹೇಳಿದರು.
ಕೋಲಾರ ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ ಮಾತಾನಡಿ ಸರ್ಕಾರದ ಸವಲತ್ತುಗಳೊಂದಿಗೆ ದಾನಿಗಳು ಹಾಗು ಕಂಪನಿ ವತಿಯಿಂದ ಜಿಲ್ಲಾದ್ಯಾಂತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ಗೆಳೆಯರ ಬಳಗದವರು ನಿರಂತರವಾಗಿ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಈ ಸದಾವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿ ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು. ಈ ಶಾಲೆಗೆ ರಾಜ್ಯಮಟ್ಟದಲ್ಲಿ ಸ್ವಚ್ಚ ವಿದ್ಯಾಲಯ ಪುರಸ್ಕಾರ ಮತ್ತು ಅಭಿಮಾನಿ ಸಾರ್ವಜನಿಕ ಶಾಲಾ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.
ಶಾಲೆಯ ಹೆಬ್ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮಕ್ಕಳಿಗೆ ಗುಲಾಬಿ ನೀಡಿ, ಸಿಹಿಹಂಚಿ, ಸ್ವಾಗತ ಕೋರಿದರು.
ಶಾಲೆಯ ಮುಖ್ಯ ಶಿಕ್ಷಕ ಬೈರೇಗೌಡ ಮಾತನಾಡಿದರು. ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್,ಶ್ರೀನಿವಾಸ್, ಎಸ್‍ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ, ಉಪಾಧ್ಯಕ್ಷ ರಜೀಯ ಸುಲ್ತಾನ, ಸದಸ್ಯರಾದ ಮಂಜುಳ, ಶ್ರೀನಿವಾಸ್ ಶಿಕ್ಷಕರಾದ ವಿಜಯಮ್ಮ, ಶಶಿಕಲಾ, ಶ್ರೀದೇವಿ,ಗೌರಮ್ಮ, ಅಶ್ವಿನಿ, ಗೀತಾಂಜಲಿ, ರಾಮಚಂದ್ರಪ್ಪ, ಮಹೇಶ್, ಚೇತನ್, ಪ್ರಸನ್ನ, ನಾರಾಯಣಸ್ವಾಮಿ, ಬಿ.ವಿ.ನಾರಾಯಣಸ್ವಾಮಿ ಇದ್ದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸ

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಿದ್ದ, ಶಾಲೆಗೆ ಬಂದ ಮಕ್ಕಳಿಗೆ ಮುಖ್ಯ ದ್ವಾರದಲ್ಲೇ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಶಿಕ್ಷಕರಾದ ಸಿದ್ದೇಶ್ವರಿ,ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು ಮತ್ತಿತರರಿದ್ದರು.

ಶಾಸಕ ಕೊತ್ತೂರು ಮಂಜುನಾಥ್‍ರ ನುಡಿದಂತೆ ನಡೆಯ ಫಲಶೃತಿಅರಾಭಿಕೊತ್ತನೂರು ಶಾಲೆಗೆ ಡ್ರೈನೇಜ್ ಕಾಮಗಾರಿಗೆ ಸೂಚನೆ

ಕೋಲಾರ:- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದ ನೂತನ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಶಾಲೆಯ ಆವರಣದಲ್ಲಿ ಮಳೆಯ ಜೌಗು ನೀರು ಹರಿಸಲು ಡ್ರೈನೇಜ್ ನಿರ್ಮಾಣ ಮತ್ತಿತರ ಕಾಮಗಾರಿಗಳ ಕುರಿತು ಮಾಡಿದ ಮನವಿಗೆ ಸ್ಪಂದಿಸಿದ್ದು, ಇದೇ ದಿನ ನಡೆದ ಅಧಿಕಾರಿಗಳ ಸಭೆಯಲ್ಲೇ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಿ ನುಡಿದಂತೆ ನಡೆಯುವೆ ಎಂಬುದನ್ನು ಸಾಕ್ಷೀಕರಿಸಿದರು.
ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಅವರು ಶಾಸಕರಾದ ನಂತರ ನಡೆದ ಮೊದಲ ಶಾಲಾ ಭೇಟಿ, ಕಾರ್ಯಕ್ರಮದ ಫಲಶೃತಿ ಎಂಬಂತೆ ಶಾಸಕರು ತಕ್ಷಣ ಕಾರ್ಯಪ್ರವೃತ್ತರಾಗಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕರು ಶಾಲೆಯ ಕಂಪ್ಯೂಟರ್‍ಲ್ಯಾಬ್, ವಿಜ್ಞಾನ ಪ್ರಯೋಗಾಲಯ ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪ್ರದೀಪ್ ಕುಮಾರ್,ಎಸ್‍ಡಿಎಂಸಿ ಅಧ್ಯಕ್ಷ ಮಹೇಂದ್ರ ಮತ್ತಿತರರು
ಬೆಟ್ಟದ ತಪ್ಪಲಲ್ಲಿ ಇರುವ ಶಾಲೆ ಇದಾಗಿದ್ದು, ಮಳೆ ಬಂದರೆ ಜೌಗು ನೀರು ಇಡೀ ಆವರಣದಲ್ಲಿ ಹರಿಯುವುದರಿಂದ ಮಕ್ಕಳ ಆಟೋಟಗಳಿಗೆ ಆಗುತ್ತಿರುವ ತೊಂದರೆ ಕುರಿತು ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಶಾಸಕರು ಈ ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ನೆರವು ಒದಗಿಸುವ ಮೂಲಕ ಇದನ್ನು ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿಸುವ ಭರವಸೆ ನೀಡಿ ಕಾರ್ಯಕ್ರಮ ಮುಗಿಸಿ ಹೊರಟರು.


ಸಭೆ ಫಲಶೃತಿ ಎಸ್ಟಿಮೇಟ್‍ಗೆ ಸೂಚನೆ


ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅರಾಭಿಕೊತ್ತನೂರು ಶಾಲೆಗೆ ನೀಡಿದ ಭರವಸೆ ಈಡೇರಿಸುವ ಸಂಕಲ್ಪದೊಂದಿಗೆ ನುಡಿದಂತೆ ನಡೆದ ಶಾಸಕ ಕೊತ್ತೂರು ಮಂಜುನಾಥ್, ಸಣ್ಣ ನೀರಾವರಿ ಇಂಜಿನಿಯರ್‍ಗೆ ಸೂಚನೆ ನೀಡಿ, ನಾಳೆಯೇ ಶಾಲೆಗೆ ಭೇಟಿ ನೀಡಿ ಅಂದಜುಪಟ್ಟಿ ತಯಾರಿಸಿ ನೀಡುವಂತೆ ಆದೇಶಿಸುವ ಮೂಲಕ ನುಡಿದಂತೆ ನಡೆದಿದ್ದು, ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಫಲಶೃತಿ ಎಂಬಂತಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಮುಳಬಾಗಿಲಿನಲ್ಲಿ ಸರ್ಕಾರಿ ಶಾಲೆಗಳಿಗೆ ನೆರವಾಗುವ ಮೂಲಕವೇ ತಮ್ಮ ಸಮಾಜಸೇವೆಗೆ ಮುನ್ನುಡಿ ಬರೆದು ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಕೋಲಾರದಲ್ಲೂ ಸರ್ಕಾರಿ ಶಾಲೆಗಳ ಕುರಿತು ಹೊಂದಿರುವ ಕಾಳಜಿ, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಸಂಕಲ್ಪ ನಿಜಕ್ಕೂ ಆದರ್ಶವಾಗಿದೆ.