ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಿ- ರೈತರ, ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಿ – ರೈತ ಸಂಘ

ಶ್ರೀನಿವಾಸಪುರ,ಮೇ.26: ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಕೊಳತೆ ಮಾವು ಸಮೇತ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗ ಹೋರಾಟ ಮಾಡಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮಾವಿಗೆ ಪ್ರಸಿದ್ದಿ ಆಗಿರುವ ತಾಲ್ಲೂಕಿನಲ್ಲಿ ಮಾವು ಮಾರುಕಟ್ಟೆಯ ಅಭಿವೃದ್ದಿಗೆ ಆದ್ಯತೆ ನೀಡುವಲ್ಲಿ 40 ವರ್ಷಗಳಿಂದ ರಾಜಕೀಯ ಮಾಡುತ್ತಿರುವ ರೆಡ್ಡಿ ಸ್ವಾಮಿರವರು ಸಂಪೂರ್ಣವಾಗಿ ವಿಪಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ಹಾಗೂ ಜನಪ್ರತಿನಿದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಿದ್ದರೆ ಮಾರುಕಟ್ಟೆ ಕೆರೆ ಕುಂಟೆಯಾಗಿ ಮಾರ್ಪಟ್ಟು ವರ್ಷದ ಪಸಲು ಒಂದೇ ದಿನದಲ್ಲಿ ಸುರಕ್ಷತೆಯಿಲ್ಲದೆ ಟನ್ ಮಾವಿನ ಮೇಲೆ ಸಾವಿರ ರೂಪಾಯಿ ಕಡಿತ ಮಾಡುವ ಮುಖಾಂತರ ಹರಾಜು ನಡೆಯುತ್ತಿದೆ. ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರ ನಷ್ಟ ತುಂಬಿಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.
ತುತ್ತು ಅನ್ನಕ್ಕಾಗಿ ಹೊರ ರಾಜ್ಯಗಳಿಂದ ಮಾವು ಕೀಳಲು ಹಾಗೂ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿರಲಿ ಗುಣಮಟ್ಟದ ಊಟವಿಲ್ಲ ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ ಕುಡಿಯುವ ನೀರಿಲ್ಲ, ಕಲುಷಿತ ನೀರೇ ಹಾಗೂ ಬಯಲೇ ಶೌಚಾಲಯಕ್ಕೆ ಗತಿಯಾಗಿದೆ ಅಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯ ಕೂಪವಾಗಿದೆ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಚುನಾಯಿತ ಶಾಸಕರು ನೆಪಮಾತ್ರಕ್ಕೆ ಸಭೆ ಕರೆದು ಪತ್ರಿಕಾ ಮಾದ್ಯಮದ ಮುಂದೆ ಕಾಣಿಸಿಕೊಂಡು ಹೋದರೆ ಮತ್ತೆ ವರ್ಷ ಮಾರುಕಟ್ಟೆಯ ಕಡೆ ತಲೆ ಹಾಕುವುದಿಲ್ಲವೆಂದು ಆರೋಪ ಮಾಡಿದರು.
ಸಾವಿರಾರು ಜನ ಕೆಲಸ ನಿರ್ವಹಿಸುವ ಮಾರುಕಟ್ಟೆಯಲ್ಲಿ ಆಸ್ಪತ್ರೆ ಪೋಲಿಸ್‍ಠಾಣೆ ಸಿ,ಸಿ ಕ್ಯಾಮಾರಗಳ ವ್ಯವಸ್ಥೆಯಿಲ್ಲ, ರಾತ್ರಿ ಆದರೆ ಕುಡುಕರ ಕಾಟ ಇದರ ಜೊತೆಗೆ ಸಿಬ್ಬಂದಿಯ ನೆಪದಲ್ಲಿ ಸರ್ಕಾರಕ್ಕೆ ಬರುವ ಆದಾಯವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಕಿಡಿಕಾರಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಮಾವು ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆ. ವರ್ಷದ ರೈತರ ಬೆವರ ಹನಿಯನ್ನು ಒಂದೇ ದಿನದಲ್ಲಿ ಮಳೆರಾಯ ಕಸಿದುಕೊಂಡರೆ ಉಳಿದ ಭಾಗವನ್ನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮೀಟರ್ ಬಡ್ಡಿದಂದೆಯಂತೆ ಕಮೀಷನ್ ಪಡೆಯುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಆದಿಕಾರಿಗಳು ಆಲಿಕಲ್ಲು ಮಳೆಯಲ್ಲಿ ಕೊಚ್ಚಿ ಹೋಗಿದ್ದಾರೆಂದು ವ್ಯಂಗ್ಯವಾಡಿದರು.
ಒಂದು ಕಡೆ ಕಮೀಷನ್ ಹಾವಳಿ ಮತ್ತೊಂದು ಕಡೆ ಯಾವುದೇ ಮಂಡಿಯಲ್ಲೂ ಪರವಾನಗಿ ಪಡೆದಿರುವ ಜಿ.ಎಸ್.ಟಿ ಸಮೇತ ರಸೀದಿಯನ್ನು ನೀಡುವುದಿಲ್ಲ ಜೊತೆಗೆ ವ್ಯಾಪಾರಸ್ಥರು ಮತ್ತು ದಲ್ಲಾಳರ ಒಳ ಒಪ್ಪಂದಿಂದ ಹರಾಜಿನಲ್ಲೂ ರೈತರಿಗೆ ಮೋಸ ಆಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆ ಇದೆ .
ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ರೈತರ ತೋಟದಿಂದ ಮಾರುಕಟ್ಟೆಗೆ ಮಾವು ಸಾಗಿಸಲು ಉಚಿತ ವಾಹನ ವ್ಯವಸ್ಥೆ ಮಾಡುವ ಜೊತೆಗೆ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂಧು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರವರು ಸಿಬ್ಬಂದಿ ಕೊರತೆ ಜೊತೆಗೆ ಅನುದಾನ ಇಲ್ಲ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವು, ಸಹದೇವಣ್ಣ, ಮುನಿರಾಜು, ಶೇಕ್‍ಶಪಿಹುಲ್ಲಾ, ತೆರ್ನಹಳ್ಳಿ ಭದ್ರೇಗೌಡ, ಹೆಬ್ಬರಿ ರಾಮಕೃಷ್ಣ, ರತ್ನಪ್ಪ ಕೋಳತೂರು ಭಾಸ್ಕರ್, ರಾಜೇಶ್, ವಿಜಯ್‍ಪಾಲ್, ದೇವರಾಜ್, ಗಿರೀಶ್, ಶೈಲ, ರಾಧಮ್ಮ, ಮುಂತಾದವರಿದ್ದರು.

ಶ್ರೀನಿವಾಸಪುರ ಮುಳಬಾಗಿಲು – ಲಾರಿ ಮತ್ತು ಈಚರ್ ನಡುವೆ ಮುಖಾಮುಖಿ ಡಿಕ್ಕಿ – ಒಬ್ಬರು ಸ್ಥಳದಲ್ಲಿಯೇ ಸಾವು

ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದ ಸಮೀಪ, ಶ್ರೀನಿವಾಸಪುರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಲಾರಿ ಮತ್ತು ಈಚರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಒಬ್ಬರು ಸ್ಥಳದಲ್ಲಿಯೇ ಸತ್ತು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ತಮಿಳು ನಾಡಿನ ಈಚರ್ ಚಾಲಕ ಸತ್ಯ (35) ಸ್ಥಳದಲ್ಲಿಯೇ ಸತ್ತಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದು, ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಲ್ಲಿ ಲಾರಿ ಹಾಗೂ ಈಚರ್ ನಜ್ಜುಗುಜ್ಜಾಗಿದ್ದು, ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮುಂಬೈ ಅಜಿತ್ ಶೆಟ್ಟಿ ಅವರಿಗೆ ಸನ್ಮಾನ


ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಮಹಾ ಪೋಷಕರು, ಗೌರವ ಸದಸ್ಯರಾದ ಮುಂಬೈ ಅಜಿತ್ ಶೆಟ್ಟಿಯವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರು ಸಾಮಾಜಿಕ ಚಿಂತಕರಾಗಿದ್ದು ಧಾರ್ಮಿಕವಾಗಿ ಸೇವೆಯನ್ನು ಸಲ್ಲಿಸಿದ್ದು ಹಾಗೂ ಯಕ್ಷಗಾನ ಕಲಾ ಪೋಷಕರಾಗಿ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ಸೇವೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ ಮೊದಲಾದವರಿದ್ದರು.

ಶ್ರೀನಿವಾಸಪುರದಲ್ಲಿ ಸ್ಥಳೀಯ ಕೆಎಸ್‍ಆರ್‍ಟಿಸಿ ನೌಕರರ ಸಂಘದ ವತಿಯಿಂದ ಗುರುವಾರ ಅಂಬೇಡ್ಕರ್ ದಿನಾಚರಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸ್ಥಳೀಯ ಕೆಎಸ್‍ಆರ್‍ಟಿಸಿ ನೌಕರರ ಸಂಘದ ವತಿಯಿಂದ ಗುರುವಾರ ಅಂಬೇಡ್ಕರ್ ದಿನಾಚರಣೆ ಆಚರಿಸಲಾಯಿತು.
ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಉದ್ಯಾನದಲ್ಲಿನ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ತಾಲ್ಲೂಕು ಕಚೇರಿ ಆವರಣದಲ್ಲಿ ಬೆಳ್ಳಿ ರಥದಲ್ಲಿ ಅಳವಡಿಸಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಂಘದ ನೌಕರರು ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿ ಜಯಘೋಷ ಮಾಡಿದರು.

ಸರ್ಕಾರ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ವೀರಭದ್ರಸ್ವಾಮಿ

ಶ್ರೀನಿವಾಸಪುರ: ಸರ್ಕಾರ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ವೀರಭದ್ರಸ್ವಾಮಿ ಆಗ್ರಹಪಡಿಸಿದರು.
ಪಟ್ಟಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂಘಟನೆ ತಾಲ್ಲೂಕು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆ ಪರಿಣಾಮವಾಗಿ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಿತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆ ಜಾರಿಗೊಳಿಸಿ ವಾಪಸ್ ಪಡೆಯಲು ಮುಂದಾಗಲಿಲ್ಲ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ, ತೋಟಗಾರಿಕಾ ಇಲಾಖೆ ನಿರ್ಲಕ್ಷ್ಯದಿಂದ ತೋಟದ ಬೆಳೆಗಳು ರೋಗಪೀಡಿತವಾಗಿವೆ. ರೈತರು ಅದೃಷ್ಟದ ಬೆಳೆ ಎಂದು ನಂಬಿರುವ ಟೊಮೆಟೊ ಮುದುಡು ರೋಗ ಪೀಡಿತವಾಗಿದೆ. ಯಾವುದೇ ಔಷಧ ಸಿಂಪರಣೆ ಮಾಡಿದರೂ ರೋಗ ವಾಸಿಯಾಗುತ್ತಿಲ್ಲ. ಗಿಡದ ಬೆಳವಣಿಗೆ ಕುಂಠಿತಗೊಂಡು, ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಸರ್ಕಾರ, ಕೃಷಿ ಹಾಗೂ ತೋಟದ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿರುವ ರೋಗಗಳ ಅಧ್ಯಯನಕ್ಕೆ ತಜ್ಞರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಬೇಕು. ರೋಗ ಪೀಡತ ಬೆಳೆಗಳ ರಕ್ಷಣೆಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಬೈರಾರೆಡ್ಡಿ, ವೀರಪ್ಪರೆಡ್ಡಿ, ನಾರಾಯಣಸ್ವಾಮಿ, ಶ್ರೀಧರ್, ಅಸ್ಲಂಪಾಷ ಇದ್ದರು.

ಚಾರ್ತರ್ಮಾಸದ ಸಮಯದಲ್ಲಿ ಭಕ್ತಿ ಮತ್ತು ತಪಸ್ಸು ಇತರ ತಿಂಗಳುಗಳಲ್ಲಿ ಮಾಡುವುದಕಿಂತ ಹೆಚ್ಚಿನ ಪುಣ್ಯ ಪಡೆಯಬಹುದು

ರಾಯಲ್ಪಾಡು 1 :ಈ ಚಾರ್ತರ್ಮಾಸದ ಸಮಯದಲ್ಲಿ ಭಕ್ತಿ ಮತ್ತು ತಪಸ್ಸು ಇತರ ತಿಂಗಳುಗಳಲ್ಲಿ ಮಾಡುವುದಕಿಂತ ಹೆಚ್ಚಿನ ಪುಣ್ಯವನ್ನು ಮತ್ತು ಭಕ್ತಿ ಮತ್ತು ತಪಸ್ಸಿನಿಂದ ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಶುದ್ಧವಾಗುವುದು ಮತ್ತು ಶುದ್ಧವಾದ ಮನಸ್ಸು ಮಾತ್ರ ದೇವರಿಗೆ ಸಂಪರ್ಕ ಹೊಂದುತ್ತದೆ ಎಂದು ಚಾರ್ತಮಾಸ್ಯೆ ಸೇವಾ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಆಖಿಲ ಕರ್ನಾಟಕ ಬ್ರಾಹ್ಮಣರ ಸಂಘದ ಮಾಹಾ ಸಭೆಯ ಉಪಾಧ್ಯಕ್ಷ ಬಿ.ಎಸ್.ರಾಘವೇಂದ್ರಭಟ್ ಹೇಳಿದರು.
ರಾಯಲ್ಪಾಡಿನ ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರದಲ್ಲಿ ಗುರುವಾರ ಬೆಂಗಳೂರಿನ ಚಾರ್ತಮಾಸ್ಯೆ ಸೇವಾ ಸಮಿತಿ ವತಿಯಿಂದ ಹರಿಹರ ಮಠದ ಸ್ವಾಮಿಗಳು ಚಾರ್ತಮಾಸದ ಆಹ್ವಾನ ಪತ್ರಿಕೆಯನ್ನು ನೀಡಿ ಮಾತನಾಡಿದರು.
ಚಾರ್ತರ್ಮಾಸದ ಮೊದಲ ಆಹ್ವಾನ ಪತ್ರಿಕೆಯನ್ನು ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರ ಸಂಸ್ಥಪಾಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ರವರಿಗೆ ವಿತರಿಸಿದರು.
ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರ ಸಂಸ್ಥಪಾಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ಮಾತನಾಡಿ ಆತ್ಮಜ್ಞಾನದಿಂದಲೇ ಮುಕ್ತಿ ದೊರಕುವುದು ನಿಜ , ಆದರೆ ಜ್ಞಾನಮಾರ್ಗವನ್ನು ಹಿಡಿಯಲಾರದವನು ಭಗವಂತನನ್ನು ಭಕ್ತಿಯಿಂದ ಪೂಜಿಸಬೇಕು. ಭಕ್ತಿ ಸಾಮನ್ಯ ಜನರಿಗಷ್ಟೇ ಮೀಸಲಲ್ಲ ,ಭಗವಂತನ ದೃಷ್ಟಿಯಲ್ಲಿ ಬಡವ -ಶ್ರೀಮಂತನೆಂಬ ಬೇಧಬಾವವಿಲ್ಲ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಹ ಕಾರ್ಯದರ್ಶಿ ಡಾ|| ಪಿ.ಎಸ್.ರಾಜೇಂದ್ರಪ್ರಸಾದ್, ಹರಿಹರ ಮಠದ ಸೇವಾ ಸದಸ್ಯ ಡಾ|| ಜಯಂತಿ ಆಗಸ್ತ್ಯ , ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಸ್.ಅಂಜನ್‍ಕುಮಾರ್‍ಶರ್ಮ, ಕೆ.ಸತೀಶ್ ಶಾಸ್ತ್ರಿ, ಕೆ.ಎಸ್.ಅರುಣ್‍ಕುಮಾರ್, ಜಿಲ್ಲಾ ಸಹ ಸಂಚಾಲಕರಾದ ಎಸ್.ಸುಬ್ರಮಣ್ಯ, ನವೀನ್‍ಬಾಬು ಇದ್ದರು.