ಮತದಾನವೆಂದರೆ ಸಂವಿಧಾನದ ಪ್ರಕಾರ ೧೮ ವರ್ಷ ತುಂಬಿದ ಪ್ರಾಯದ ಪ್ರತಿಯೊಬ್ಬರು ಆ ಪವಿತ್ರ ಹಕ್ಕನ್ನು ಚಲಾಯಿಸಲೇಬೇಕು:ಜಿ.ಎಸ್.ಸತೀಶ್‌ಕುಮಾರ್

ಶ್ರೀನಿವಾಸಪುರ ೧ : ಮತದಾನವೆಂದರೆ ನಮ್ಮ ದೇಶದ ಸಂವಿಧಾನದ ಪ್ರಕಾರ ೧೮ ವರ್ಷ ತುಂಬಿದ ಪ್ರಾಯದ ಪ್ರತಿಯೊಬ್ಬರು ಆ ಪವಿತ್ರ ಹಕ್ಕನ್ನು ಚಾಲಾಯಿಸಲೇಬೇಕು. ನಮ್ಮ ಮತ ಬಹಳ ಪವಿತ್ರವಾದದ್ದು, ಅದು ನಮ್ಮ ಹಕ್ಕು ಅದರ ಜೊತೆಗೆ ನಮ್ಮ ಕರ್ತವ್ಯವೂ ಇದೆ. ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗು ತಾ.ಪಂ.ಇಒ ಜಿ.ಎಸ್.ಸತೀಶ್‌ಕುಮಾರ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಚಾಲಕರಿಗೆ ಪ್ರಯಾಣಿಕರಿಗೆ ಮತದಾನದ ಅರಿವು ಕರಪತ್ರಗಳನ್ನು ನೀಡುವುದರ ಮೂಲಕ ಮಾತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರಿಗೆ ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಮತ್ತು ಅವರ ಭವಿಷ್ಯಕ್ಕೆ ಮತದಾನ ಎಷ್ಟು ಮುಖ್ಯ ಎನ್ನುವದರ ಕುರಿತು ವಿವರಿಸಿದರು ಹಾಗು ಮೇ ೧೦ ರಂದು ನಡೆಯುವ ಸಾವರ್ತ್ರಿಕ ಚುನವಾಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು, ಮಾಡಿಸಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವು ಗ್ರಾಮಗಳಲ್ಲಿನ ಹಿರಿಯರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಿ, ಮತದಾನ ಮಾಡಲಿಲ್ಲವೆಂದರೆ ದೇಶದ ಪರಿಸ್ಥಿತಿ ಏನಾಗುತ್ತದೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಕಡ್ಡಾಯವಾಗಿ ಮತದಾನವನ್ನು ಮಾಡಿಸುವುದಕ್ಕೆ ಪ್ರೇರೇಪಣೆ ನೀಡಿ ಮತದಾನವನ್ನು ಮಾಡಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಬಸ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮತದಾನದ ಕರಪತ್ರ ನೀಡುವುದರ ಮೂಲಕ ಹಾಗು ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.
ತಾ.ಪಂ.ಸಹಾಯಕ ನಿರ್ದೇಶಕ ರಾಮಪ್ಪ, ತಾ.ಪಂ ಸಿಬ್ಬಂದಿಗಳಾದ ಲಕ್ಷ್ಮಿಶ್ ಕಾಮತ್ , ಚೇತನ್ , ಪುರಸಭೆಯ ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನಚಂದ್ರ, ಸಿಬ್ಬಂದಿಗಳಾದ ಸುರೇಶ್, ಸಂತೋಷ, ಪ್ರತಾಪ್,ಎಸ್.ಶಿವಪ್ರಸಾದ್ ಇದ್ದರು.

ಭಂಡಾರ್ಕಾರ್ಸ್ : ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ ಸ್ವಸ್ಥವಾಗಿ ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು. ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿ ಪ್ರಕಟಿತ ಪುಸ್ತಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ, ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ರಾಮಚಂದ್ರ ಆಚಾರ್ಯ ಕನ್ನಡ ವಿಭಾಗದ ಮುಖ್ಯಸ್ಥರಾದ ಮೈತ್ರಿ ಉಪಸ್ಥಿತರಿದ್ದರು.

ಸಹಕಾರದ ನಿರೀಕ್ಷೆಯಲ್ಲಿ ಅಸಹಾಯಕ ಬದುಕು


ಕುಂದಾಪುರ : ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬೆಡ್ಡಿನ ಮೇಲೆ ಸೂರನ್ನು ದ್ರಷ್ಟಿಸುತ್ತಾ ಉದ್ದಕ್ಕೂ ಮೈ ಚೆಲ್ಲಿ ಬಿದ್ದಿರುವ ಇವರ ಹೆಸರು ಚಂದ್ರ ದೇವಾಡಿಗ.ಊರು ಬೈಂದೂರು ತಾಲೂಕಿನ ಕಂಬದ ಕೋಣೆ. ಕೂಲಿ ನಾಲಿಯ ಜತೆ ತೆಂಗಿನ ಮರದ ಕಾಯಿ ಕೀಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಇವರದ್ದು ಪತ್ನಿ ಹಾಗೂ 2 ಪುಟ್ಟ ಮಕ್ಕಳ ಸಣ್ಣ ಸಂಸಾರ.ಅವತ್ಯಾಕೋ ವಿಧಿ ಕಾರಣವಿಲ್ಲದೆ ಮುನಿದು ಬಿಟ್ಟಿತು. ಪಕ್ಕದ ಗ್ರಾಮದೊರ್ವರ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿದರು.ಅದೇನಾಯಿತೋ ಗೊತ್ತಿಲ್ಲ ತಲೆ ಸುತ್ತು ಬಂದ ಅನುಭವ ಅಷ್ಟೇ. ಎರಡು ದಿನಗಳ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಗ ಸೊಂಟದ ಕೆಳಗೆ ಚಲನೆಯೇ ಇರಲಿಲ್ಲ. ನರ, ಮೂಳೆಗಳು ಚದುರಿಹೋಗಿವೆ.ಇದೆ ಸ್ಥಿತಿಯಲ್ಲಿ ಎರಡೂವರೆ ವರ್ಷಗಳು ಸರಿದಿವೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೊತ್ತೊಯ್ದರೂ ಪರಿಣಾಮ ಮಾತ್ರ ಶೂನ್ಯ. ಈಗಾಗಲೇ ಸಾಲ ಸೋಲಮಾಡಿ ಹಲವು ಲಕ್ಷಗಳನ್ನು ಚಿಕಿತ್ಸೆಗಾಗಿ ವ್ಯಯಿಸಿ ಜೀವಚ್ಛವದಂತೆ ಬಿದ್ದುಕೊಂಡಿರುವ ಪತಿಗೆ ಹೆಗಲಿಗೆ ಹೆಗಲು ನೀಡುತ್ತಿರುವ ಪತ್ನಿಯ ಕಣ್ಣುಗಳಲ್ಲಿ ಭವಿಷ್ಯದ ಕರಾಳತೆ. ಬದುಕನ್ನು ಇನ್ನೂ ಅಚ್ಚರಿಯಿಂದ ದಿಟ್ಟಿಸುತ್ತಿರುವ ಮುಗ್ಧ ಪುಟ್ಟ ಮಕ್ಕಳ ಮನದಲ್ಲಿ ಅಯ್ಯೋ ನಮ್ಮ ಅಪ್ಪನಿಗೆ ಹೀಗೇಕಾಯ್ತು ಎಂಬ ಉತ್ತರ ಸಿಗದ ಪ್ರೆಶ್ನೆ. ಆಸಹಾಯಕತೆ ಎದುರು ಸ್ವಾಭಿಮಾನ ಮುದುಡಿಹೋಗಿದೆ. ಬೇರೆ ದಾರಿ ಕಾಣದೆ ಸಹಾಯಕ್ಕಾಗಿ ಯಾಚಿಸಿದ್ದಾರೆ. ನಿಮ್ಮ ಪುಟ್ಟ ಸಹಕಾರವೇ ಆ ಅಭಾಗ್ಯ ಕುಟುಂಬಕ್ಕೆ ಬ್ರಹತ್ ಸಹಾಯದಂತೆ ದಯವಿಟ್ಟು ಸ್ಪಂದಿಸಿ.
ಚಂದ್ರ, ಖಾತೆ ನ.8012500102705801
Ifsc: KARB 0000801,ಕರ್ನಾಟಕ ಬ್ಯಾಂಕ್ ,ಕಂಬದ ಕೋಣೆ
.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ33ನೇ ಪದವಿ ಪ್ರದಾನ ಸಮಾರಂಭ

ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಷನ್ ಸೆಂಟರ್‍ನಲ್ಲಿದಿನಾಂಕ29.04.2023ರಂದುಹಮ್ಮಿಕೊಳ್ಳಲಾಗಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ದತಿಯಲ್ಲಿಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸಂಸ್ಥೆಯು‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort)ಎಂಬ ಧ್ಯೇಯೊಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ. ಈ ಮಹಾವಿದ್ಯಾಲಯವುರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್‍ಇಲಾಖೆ, ನವದೆಹಲಿ ಇವುಗಳ ಮಾನ್ಯತೆ ಪಡೆದಿದೆ.ಔಷಧಿಶಾಸ್ತ್ರೀಯ ವಿಚಕ್ಷಣೆಗೆ (Pharmacovigilence) ಪ್ರಾದೇಶಿಕ ಕೇಂದ್ರವಾಗಿದ್ದು, ಇತ್ತೀಚಿಗೆರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಎಲ್ಲಾ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವಕೇಂದ್ರವನ್ನಾಗಿಗುರುತಿಸಲ್ಪಟ್ಟಿದೆ.ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (NAAC) ‘A’’ಗ್ರೇಡ್ ಶ್ರೇಯಾಂಕವನ್ನು ಪಡೆದುಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಈ ಸಂಸ್ಥೆಯು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ 7 ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ನಡೆಸುತ್ತಿದೆ.

ಪದವಿ ಪ್ರದಾನ ಸಮಾರಂಭವು29.04.2023ರಂದು (ಶನಿವಾರ) ಬೆಳಿಗ್ಗೆ 10.00 ಗಂಟೆಗೆಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಲಿದೆ.ಸಮಾರಂಭದಅಧ್ಯಕ್ಷತೆಯನ್ನುಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ವಂದನೀಯಡಾ. ಪೀಟರ್ ಪೌಲ್ ಸಲ್ದಾನ್ಹಾರವರು ವಹಿಸಲಿದ್ದಾರೆ ಹಾಗೂ ವಿನಾಯಕ ಮಿಷನ್‍ರಿಸರ್ಚ್ ಫೌಂಡೇಶನ್, ಡೀಮ್ಡ್‍ಟು. ಬಿ.ಯುನಿವರ್ಸಿಟಿ.ಸೇಲಂ, ತಮಿಳುನಾಡು ಇದರಉಪಕುಲಪತಿಯಾದಡಾ. ಪಿ. ಕೆ.ಸುಧೀರ್‍ರವರು ಮುಖ್ಯಅತಿಥಿಯಾಗಿ ಪದವೀಧರರನ್ನು ಸನ್ಮಾನಿಸಲಿದ್ದಾರೆಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್‍ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಈ ದಿನ 97 ಹೋಮಿಯೋಪಥಿ ಪದವಿ ಹಾಗೂ18 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು.ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯಘೋಷಿಸಿದಸ್ನಾತಕೋತ್ತರ ಪದವಿಯ ವಿವಿಧ ವಿಶೇಷತೆಗಳಲ್ಲಿ 10ರ್ಯಾಂಕ್‍ಗಳನ್ನು ಪಡೆದ ಪ್ರತಿಬಾನ್ವಿತ ವಿದ್ಯಾರ್ಥಿಗಳನ್ನುಇದೇ ಸಂದರ್ಭದಲ್ಲಿಗೌರವಿಸಲಾಗುವುದು.

2016-17 ನೇ ಸಾಲಿನ ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನುಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಪದವೀಧರೆಡಾ. ಆಶ್ರಿತಾ ಬಿ.ಎ. ಹಾಗೂಸ್ನಾತಕೋತ್ತರ ಪದವಿಯ ಮೆಟಿರಿಯಾ ಮೆಡಿಕಾ ವಿಭಾಗದಲ್ಲಿಅತ್ಯುತ್ತಮಅಂಕ ಗಳಿಸಿರುವ ಡಾ.ರೆಮ್ಯಾ ವರ್ಗೀಸ್‍ಪಡೆದಿರುವರು. ಹಾಗೂ ಸೆಂಟ್ರಲ್‍ಕೌನ್ಸಿಲ್‍ಆಫ್‍ರಿಸರ್ಚ್‍ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು 2019-20ರ ಹೋಮಿಯೋಪಥಿಸೈಕ್ಯಾಟ್ರಿ ವಿಭಾಗದಡಾ. ಸುದೀಪ್ತಿ ಸಿಂಗ್ ರವರು ಪಡೆದಿದ್ದುಇವರೆಲ್ಲರನ್ನೂ ಈ ಸಂದರ್ಭದಲ್ಲಿಗೌರವಿಸಲಾಗುವುದು. ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವಅಧ್ಯಕ್ಷೀಯಚಿನ್ನದ ಪದಕವನ್ನುಅಂದುಘೋಷಿಸಲಿದ್ದುಕಳೆದ 5ಳಿ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಶಿಕ್ಷಕೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆದೊರಕಲಿದೆ. ಅದೇರೀತಿ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷಬಹುಮಾನದೊಂದಿಗೆ ಸನ್ಮಾನಿಸಲಾಗುವುದು.ಈ ವರ್ಷ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿ 25 ವರ್ಷ ಪೂರ್ಣಗೊಂಡಿದ್ದು, ಸ್ನಾತಕೋತ್ತರ ಪದವಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಇದೇ ಮೇ ತಿಂಗಳ 6 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರು ಬೈಕ್ ಮುಖಾಮುಖಿ ಡಿಕ್ಕಿ : ಸ್ಕೂಟರ್ ಸವಾರ ಧರ್ಮಗುರು ಸ್ಟೀವನ್ ಲೋಬೊ ಸಹೋದರ, ಮ್ರತ್ಯು ವಶ, ಸಹಸವಾರ ಗಂಭೀರ

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ.

ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಅಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ‌.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಂದೀಪ್ ಲೋಬೊ ವೆಲ್ಡಿಂಗ್ ವ್ರತ್ತಿಯಲ್ಲಿ ಕಾಂಟೆಕ್ಟ್ ಮಾಡುವರಾಗಿದ್ದು, ಸಹ ಸವಾರ ಇವರ ಜೊತೆ ಕೆಲಸ ಮಾಡುವನಾಗಿದ್ದು, ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀವೇಗದ ಹಾಗೂ ಅಜಾಕರಕತೆಯಿಂದ ಚಾಲನೆ ಮಾಡಿಕೊಂಡು ಬಂದ ರಿಟ್ಜ್ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಸಂದೀಪ್ ಲೋಬೊ ಅಮ್ಟಾಡಿ ಗ್ರಾಮದ ಗೋರೆಮಾರ್ ನಿವಾಸಿ ಹೆರಾಲ್ಡ್ ಲೋಬೊ ಮತ್ತು ಐರಿನ್ ಲೋಬೊ ದಂಪತಿಯ ಹಿರಿಯ ಮಗನಾಗಿದ್ದರು. ಅವರು ತಂದೆಯ ಕಾಂಟ್ರೆಕ್ಟ್ ವ್ರತ್ತಿಯನ್ನೆ ಮುಂದುವರಿಸುತಿದ್ದರು.
ಅಪಘಾತದಿಂದ ಗಾಯಗೊಂಡಿದ್ದ ಸಂದೀಪ್ ಲೋಬೋ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು,ಅಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮ್ರತ್ಯುವಶವಾದ ಸಂದೀಪ್ ಲೋಬೊ ಕಾರ್ಮೆಲ್ ಮೇಳದ ಧರ್ಮಗುರು ವಂ|ಸ್ಟೀವನ್ ಲೋಬೊ ಅವರ ಹಿರಿಯ ಸಹೋದರನಾಗಿರುವನೆಂದು ತಿಳಿದು ಬಂದಿದೆ. ಇವರು ಪತ್ನಿ ಮತ್ತು ಮೂವರು ಮಕ್ಕಳನ್ನು, ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಮು ಗಲಭೆಯ ಕಾರಣ 30 ವರ್ಷಮನೆಯಿಂದ ದೂರವಾದ ಹುಸೇನ್ ಸ್ನೇಹಾಲಯದಿಂದ ಮರಳಿ ಮನೆಗೆ ತಲುಪಿದರು


05.04.2012 ರಂದು ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರು ಮಂಜೇಶ್ವರ ರೈಲು ನಿಲ್ದಾಣದಲ್ಲಿ ದೈಹಿಕವಾಗಿ ವಿಕಲಚೇತನರು ಮತ್ತು ಮಾನಸಿಕವಾಗಿ ತೊಂದರೆಗೀಡಾದ ನಿರ್ಗತಿಕರನ್ನು ರಕ್ಷಿಸಿದರು. ಮತ್ತು ಅವರನ್ನು ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಮಂಜೇಶ್ವರಕ್ಕೆ ದಾಖಲಿಸಲಾಗಿದೆ. ಅವರನ್ನು ಹುಸೇನ್ ಎಂದು ಹೆಸರಿಸಲಾಯಿತು. ಕೆಲ ತಿಂಗಳ ಹಿಂದೆ ತಂಡದ ಸದಸ್ಯರಿಗೆ ತನ್ನ ಹೆಸರು ಹಸೈನ್ ಎಂದು ಹೇಳಲು ಆರಂಭಿಸಿದ್ದ ಆತ ಬೆಂಗಳೂರಿನ ಹಿರಿಯೂರಿನವನು. ಈತನ ಸ್ವದೇಶಿ ವಿವರಗಳಿಗಾಗಿ ಹುಡುಕಾಟ ಮುಂದುವರಿದಿದ್ದು, ಈತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದವನೆಂದು ತಂಡಕ್ಕೆ ತಿಳಿದು ಬಂದಿದೆ. ಅವರ ಸಹೋದರಿ ಮತ್ತು ಇತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ನಂತರ ಅವರು ಸ್ನೇಹಾಲಯದಲ್ಲಿ ವಾಸಿಸುತ್ತಿರುವ ಬಗ್ಗೆ ತಿಳಿದು ಆಶ್ಚರ್ಯ ಮತ್ತು ಸಂತೋಷವಾಯಿತು.
ಕೂಡಲೇ ಮಂಜೇಶ್ವರಕ್ಕೆ ಪ್ರಯಾಣಿಸಿ ಸ್ನೇಹಾಲಯ ತಲುಪಿದರು. ಇಂದು 26.04.2023 ರಂದು ಸ್ನೇಹಾಲಯ ಕುಟುಂಬವು ಕಾಣೆಯಾದ 30 ವರ್ಷಗಳ ನಂತರ ಹುಸೇನ್ ಅವರ ಸಂತೋಷದ ಪುನರ್ಮಿಲನಕ್ಕೆ ಸಾಕ್ಷಿಯಾಯಿತು. ಗಲಭೆ, ಕೋಮುಗಲಭೆ ಮತ್ತು ಕರ್ಫ್ಯೂ ಸಂದರ್ಭದಲ್ಲಿ ಭಯದ ಕಾರಣದಿಂದ ಅವರು ತಮ್ಮ ಊರನ್ನು ತೊರೆದರು ಮತ್ತು ಅವರನ್ನು ಮತ್ತೆ ಭೇಟಿಯಾಗುವ ಭರವಸೆಯನ್ನು ಕಳೆದುಕೊಂಡರು ಎಂದು ಕುಟುಂಬ ಸದಸ್ಯರು ಹಂಚಿಕೊಂಡರು. ಅವನ ಹೆತ್ತವರು ತೀರಿಕೊಂಡರು ಮತ್ತು ಅವನ ಇತರ ಒಡಹುಟ್ಟಿದವರು ಅವನನ್ನು ಕೆಟ್ಟದಾಗಿ ಕಾಣೆಯಾಗಿದ್ದರು. ಅವನನ್ನು ಮತ್ತೆ ನೋಡುವುದು ಮತ್ತು ಅವನನ್ನು ಮರಳಿ ಪಡೆಯುವುದು ಅವರಿಗೆ ನಿಜವಾಗಿಯೂ ನಂಬಲಾಗದ ಸಂಗತಿಯಾಗಿದೆ. ಅವರ ಸಹೋದರಿಯರು ಮತ್ತು ಸೋದರಳಿಯರು ಸ್ನೇಹಾಲಯದ ಸೇವೆಯನ್ನು ಶ್ಲಾಘಿಸಿದರು ಮತ್ತು ಹುಸೇನ್ ಅವರಿಗೆ ಮನೆಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿದ ಮತ್ತು ಅವರ ಪುನರ್ಮಿಲನದಲ್ಲಿ ಅವರ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು. ಮತದಾನ ಪವಿತ್ರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ರಕ್ಷಣೆ ನಿಸ್ವಾರ್ಥ ಮತದಾರರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಲು ಮನವಿ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥರೆಡ್ಡಿ, ಸಿಡಿಪಿಒ ಶೋಭಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು. ರಥೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು, ಬಿರುಬಿಸಿಲು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮಸ್ಥರಿಂದ ಪಾನಕ ಸೇವೆ ನೀಡಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಶಿವಾರೆಡ್ಡಿ, ಉಮಾದೇವಿ, ಕೆ.ಎಚ್.ಕೃಷ್ಣಪ್ಪ, ಜಯಣ್ಣ, ಶಿವಾನಂದ, ವೆಂಕಟೇಶ್, ಅಶೋಕ್, ರೆಡ್ಡಪ್ಪ, ಶ್ರೀನಿವಾಸ್, ಅರ್ಜುನ್, ರಂಗಸ್ವಾಮಿಶೆಟ್ಟಿ ಇದ್ದರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ, ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗರನ್ನು ವಜಾಗೊಳಿಸಿ- ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ

ಕೋಲಾರ,ಏ.26: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ರವರು ದಿನದ 24 ಗಂಟೆ ಎರಡು ವರ್ಷದ ಹಸುಗೂಸಿನಿಂದ 80 ವರ್ಷದ ವೃದ್ದೆ ಮಹಿಳೆಯವವರೆಗೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಚಾರ, ವರದಕ್ಷಿಣೆ ಕಿರುಕುಳ ಹೀಗೆ ಒಂದಲ್ಲಾ ಒಂದು ಪ್ರಕರಣ ನಡೆಯುತ್ತಿರುವಾಗ ಮಹಿಳೆಯರಿಗೆ ರಕ್ಷಣೆ ಕೊಡಬೇಕು ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಇಡಬೇಕೆಂದು ಸಾರ್ವಜನಿಕ ಭಾಷಣಗಳಲ್ಲಿ ಉದ್ದಅಗಲ ಮಾತನಾಡುವ ದೇಶದ ಮಾನ್ಯ ಪ್ರಧಾನ ಮಂತ್ರಿಗಳೇ ಮಹಿಳೆಯರಿಗೆ ರಕ್ಷಣೆ ಇದೆಯೇ? ಎಂಬುಂದು ನಿಮ್ಮ ಅನಿಸಿಕೆಯೇ ಅಥವಾ ಮಹಿಳೆಯರನ್ನು ಪುರಾತನ ಕಾಲದಂತೆ ಮನೆಯ 4 ಗೋಡೆಗಳ ಮದ್ಯೆ ಕೂಡಿ ಹಾಕುವ ಹುನ್ನಾರವೇ ಎಂದು ಪ್ರಶ್ನೆ ಮಾಡಿದರು.
3 ತಿಂಗಳಿಂದ ಮಹಿಳಾ ಕುಸ್ತಿಪಟುಗಳು ಶರಣ್‍ಸಿಂಗ್ ವಿರುದ್ದ ಆರೋಪಗಳ ಸುರಿಮಳೆಯೇ ಸುರಿಸಿ ಹೆಣ್ಣಾಗಿ ಹುಟ್ಟಿರುವ ನಮಗೆ ಈ ಶಿಕ್ಷೆ ಬೇಕೇ ಹೆಣ್ಣು ಸಂಸಾರಕ್ಕೆ ಮಾತ್ರ ಸೀಮಿತವಾಗಬೇಕೇ ಎಂದು ಏನಾದರೂ ಸಾಧನೆ ಮಾಡಿ ಜನ್ಮ ಕೊಟ್ಟ ತಂದೆ ತಾಯಿಗೆ ದೇಶಕ್ಕೆ ಕೀರ್ತಿ ತರುವ ಛಲ ಇರುವ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಕಾಮುಕ ಸಂಸದರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ತಮ್ಮ ಪಕ್ಷದ ಸಂಸದರೆಂದು ಅವರನ್ನು ರಕ್ಷಣೆ ಮಾಡಲು ಹೋರಟಿದ್ದೀರೆಯೇ ದೇಶದ ಹೆಣ್ಣೂ ಮಕ್ಕಳ ಮೇಲೆ ನಿಮಗೆ ಗೌರವ ಇದ್ದರೆ ಕೂಡಲೇ ಕುಸ್ತಿಪಟುಗಳಿಗೆ ಮಾನಸಿಕ ಹಿಂಸೆ ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಂಸದರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ದ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ದೇಶದ ಗೌರವ ಕೀರ್ತಿ ಹೊರಟಿರುವ ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ನೀಡಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡಿದರು.