ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನಪರ ಆಡಳಿತ ಕೊಡಲು ಸಾಧ್ಯ – ಕುಂದಾಪುರದಲ್ಲಿ ನಾಮಪತ್ರ ಸಲ್ಲಿಕೆಕಿಂತ ಮುಂಚೆ ಪ್ರಚಾರ ಸಭೆ

ಕುಂದಾಪುರ, ಇಂದು ಎಲ್ಲಾ ವಿಧದಿಂದ ಬೆಲೆ ಏರಿಕೆಯಿಂದ ಜನ ತತ್ತರ್ರಿಸಿ ಹೋಗಿದ್ದಾರೆ. ಇಂತಹ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಮಾತ್ರ ಪರಿಹಾರ ನೀಡಲು ಸಾಮರ್ಥ್ಯ ಹೊಂದಿದೆ’ ಎಂದು ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.  ಅವರು ಗುರುವಾರ ದಿನ  ಕುಂದಾಪುರ ಶಾಸ್ತ್ರಿ ಸರ್ಕಲ್‌ ಬಳಿ ಕಾಂಗ್ರೆಸ್‌, ಅಭ್ಯರ್ಥಿ ದಿನೇಶ್‌ ಹೆಗ್ಡೆಮೊಳಹಳ್ಳಿ ಅವರ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದರು.

      ಸುಧೀರ್‌ ಕುಮಾರ್‌ ಮರೋಳಿ ಮಾತನಾಡಿ ಕೋಮು ದ್ವೇಶಷದ ಬೆಂಕಿ ಹಚ್ಚುವರು ನಮಗೆ ಬೇಡ, ಮನೆ ಮನೆಗಳಲ್ಲಿ” “ದೀಪ ಉರಿಸುವವರು  ಬೇಕು, ಉರಿ ನಂಜು ಕಾರುವವರು: ಬೇಡ; ಪ್ರೀತಿ ಹಂಚುವವರು ಬೇಕು’ ಎಂದರು.

   ಡಿಸಿಸಿ ವಕ್ತಾರ ವಿಕಾಸ ಹೆಗ್ಡೆ ಯುವ ಕಾಂಗ್ರೆಸ್‌ ‘ ಅಧ್ಯಕ್ಷರಾಗಿ, 3 ಅವಧಿ ಮೊಳಹಳ್ಳಿ ಪಂಚಾಯತ್‌ ಸದಸ್ಯರಾಗಿ, । ಅವಧಿ ಅಧ್ಯಕ್ಷರಾಗಿ, 20 ವರ್ಷಗಳಿಂದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸೇವೆ ಮತ್ತು ಅನುಭವ ಹೊಂದಿದ ದಿನೇಶ್ ಹೆಗ್ಡೆಯವರನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಗೆದ್ದರೆ ನೀಡುವ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸಬೇಕು. ಕಾಂಗ್ರೆಸ್‌ ಸರಕಾರದಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ ಎಂದರು.

   ವಿಧಾನಪರಿಷತ್‌ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಉದ್ಭಾಟಿಸಿದರು. ಮಾಜಿ ಸಚಿವ. ವಿನಯ ಕುಮಾರ್‌ ಸೊರಕೆ, ` ಕೆಪಿಸಿಸಿ ಪದಾಧಿಕಾರಿ ಎಂ.ಎ. ಗಫೂರ್‌, ಕೆಪಿಸಿಸಿ ಸದಸ್ಯ ಪ್ರಕಾಶ್‌ ಚಂದ್ರ ಶೆಟ್ಟಿ ಕೆಪಿಸಿಸಿ ಸದಸ್ಯ ಸತೀಶ್‌ ಕಿಣಿ ಬೆಳ್ವೆ, ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ, ಕುಂದರ್‌ ಕೋಟ, ಬೈಂದೂರು ಅಧ್ಯಕ್ಷ ಮದನ್ ಕುಮಾರ್‌, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಪಕ್ಶದ ವಿವಿಧ ಪದಾಧಿಕಾರಿಗಳಾದ ಕ್ರಷ್ಣದೇವ ಕಾರಂತ ಕೋಣಿ, ನಾಗರಾಜ ಶೆಟ್ಟಿ, ಹಾಲಾಡಿ, ದೇವಕಿ ಸಣ್ಣಯ್ಯ, ರೇಖಾ ಸುವರ್ಣ, ಇಚ್ಚಿತಾರ್ಥ್ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಬಿ.ಹಿರಿಯಣ್ಣ, ದೇವಾನಂದ ಶೆಟ್ಟಿ, ಸದಾನಂದ ಶೆಟ್ಟಿ,ಸದಾನಂದ ಶೆಟ್ಟಿ, ವಡಂಬಳ್ಳಿ ಜಯರಾಮ ಶೆಟ್ಟಿ, ಸುಜನ,  ಸುಧಾಕರ ಶೆಟ್ಟಿ ಕಿಶನ್‌ ಹೆಗ್ಡೆ ಸೌರವ್‌ ಬಲ್ಲಾಳ್‌, ಮಹೇಶ್‌ ಹೆಗ್ಡೆ | ವಲಿವೇರಾ, ಉದಯ ಕುಮಾರ್‌ ಶೆಟ್ಟಿ ವಂಡ್ಸೈ ಹರೀಶ್‌ ಕಿಣಿ, ದಿನೇಶ್‌ ಪತ್ರ: ಮುರಳಿ ಶೆಟ್ಟಿ ಸಂತೋಷ ಶೆಟ್ಟ ಹಾಲಾ ಉಪಸ್ಥಿತರಿದ್ದರು.

ವಿನೋದ್‌ ಕ್ರಾಸ್ಪೊ ನಿರ್ವಹಿಸಿದರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪಸಾದ್‌ ಶೆಟ್ಟಿ ಕಾನ್ಮಕ್ಕಿ ಸ್ವಾಗತಿಸಿದರು. ದಿನೇಶ್‌ ಹೆಗ್ಡೆಯವರ ನಾಮಪತ್ರ ಸಲ್ಲಿಕೆಗೆ ಮುನ್ನ ಆನೆಗುಡ್ಡೆ ಮತ್ತು ಕುಂದೇಶ್ವರ ದೇವಾಲಯಕ್ಕೆ ನೀಡಿದರು.

ಕುಂದಾಪುರ: ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ ಹೆಗ್ಡೆ ನಾಮಪತ್ರ ಸಲ್ಲಿಕೆ

ಕುಂದಾಪುರ ; ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಎ.13ರಂದು ಕುಂದಾಪುರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ  ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ರಶ್ಮಿ ಎಅ.ಆರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ ಹೆಗ್ಡೆ, ಹಾಲಾಡಿ ಶ್ರೀನವಾಸ ಶೆಟ್ಟರು ಸ್ಪರ್ಧೆ ಮಾಡದೇ ಇರುವುದರಂದ ನಮಗೆ ಸುಲಭವಾಗಿದೆ. ಹಾಗೇ ಕಾಂಗ್ರೆಸ್ ಪಕ್ಷ ಗೆಲ್ಲುವ ವಾತವರಣ ಉಂಟಾಗಿದೆ, ಹಲವಾರು ಕಾರ್ಯಕ್ರಮಗಳನ್ನು ಎರ್ಪಡಿಸಿದ ಜೊತೆ, ಮಹಿಳಾ ಸಮಾವೇಶ ಯಶಸ್ವಿಯಾಗಿ ಎರ್ಪಟ್ಟಿದೆ. ಪ್ರತಾಪಚಂದ್ರ ಶೆಟ್ಟರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

   ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.