ಕುಂದಾಪುರ ಚರ್ಚ್ ರಸ್ತೆಯ ಮನೆ ಆವರಣದಲ್ಲಿ ಹೆಬ್ಬಾವು ಹಿಡಿಯಲಾಯಿತು. ಜನ ಬೆಳಕಿನೊಂದಿಗೆ ನಡೆದಾಡಬೇಕು

ಕುಂದಾಪುರ, ಮಾ.14: ಕುಂದಾಪುರ ಚರ್ಚ್ ರಸ್ತೆಗೆ ಸಂಬಂಧಿಸಿದ ಕಾನ್ವೆಂಟ್ ಕ್ರಾಸ್ ರಸ್ತೆಯ ಒಸ್ವಲ್ಡ್ ಕರ್ವಾಲ್ಲೊ ಮನೆಯ ನೆರೆಮನೆಯ ಆವರಣದಲ್ಲಿ ನಿನ್ನೆ ರಾತ್ರಿ ಹೆಬ್ಬಾವು ಕಂಡು ಬಂದಿದೆ. ಕೊನೆಗೆ ಅದನ್ನು ಹಿಡಿಯಲಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವುದೇ ಈ ವಾರ್ತೆಯ ಮುಖ್ಯ ಉದ್ದೇಶ.

ಸ್ಥಳೀಯ ಪ್ರದೇಶದಲ್ಲಿ ಈಗ ತಾಪಮಾನ ಹೆಚ್ಚಾಗಿದ್ದು, ಬಿಲ, ಪೊದೆಯಲ್ಲಿ, ಮಣ್ಣಿನ ಒಳಗಡೆ ಇರುವ ಸರಿಸ್ರಪಗಳು, ತಾಪಮಾನ ತಾಳದೆ ಹೊರಗೆ ಬರುತ್ತವೆ, ನಮ್ಮ ಪರಿಸರದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಬಂದು ಸುತ್ತಾಡುತ್ತೀವೆ ಎಂದು ತಿಳಿದು ಬಂದಿದೆ, ಹಾಗಾಗಿ ಜನ ಜಾಗ್ರತೆ ವಹಿಸಬೇಕು. ಸಂಜೆ, ರಾತ್ರೆ ಹೊತ್ತು ನಿಮ್ಮ ಮನೆ ಆವರಣದಲ್ಲಿ, ದಾರಿ, ರಸ್ತೆ ಬದಿಯಲ್ಲಿ ನೆಡೆಯುವಾಗ ಅಥವ ತಮ್ಮ ಕೆಲಸಗಳನ್ನು ಮಾಡುತ್ತೀರುವಾಗ, ಅಥವಾ ವಾಕಿಂಗ್ ಮಾಡುತ್ತೀರುವಾಗ ಜಾಗ್ರತೆ ವಹಿಸಬೇಕು. ಭಯಂಕ ವಿಷಜಂತುಗಳು ಹೊರಬಂದು ಅಡಗಿಕೊಂಡಿರುವ ಸಾಧ್ಯತೆ ಇದೆ. ಆದರಿಂದ ಜನರು ಜಾಗ್ರತೆಯನ್ನು ವಹಿಸಬೇಕು

ಅರಭಿಕೊತ್ತನೂರು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾರ್ಗದರ್ಶನ ಸಮಯ ವ್ಯರ್ಥ ಮಾಡದಿರಿ,ಶ್ರದ್ಧೆಯಿಂದ ಅಭ್ಯಾಸ ಮಾಡಿ- ಬಾಲಾಜಿ ಕರೆ

ಕೋಲಾರ:- ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಇನ್ನೂ ಕೇವಲ 15 ದಿನಗಳು ಮಾತ್ರವಿದೆ, ಪ್ರತಿಕ್ಷಣವೂ ಉಪಯುಕ್ತವಾಗಿದೆ, ಸಮಯ ವ್ಯರ್ಥ ಮಾಡದೇ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭ ಎಂದು ಜಿಲ್ಲಾ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಹಿರಿಯ ಉಪನ್ಯಾಸಕ ಬಾಲಾಜಿ ಕರೆ ನೀಡಿದರು.
ಮಂಗಳವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಮಾರ್ಗದರ್ಶನ ನೀಡಿದ ಅವರು, ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಓದಲು ಕಿವಿಮಾತು ಹೇಳಿದರು.
ಹೊರಗಿನ ತಿಂಡಿ ತಿನ್ನದೇ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ನಿರಂತರ ಅಭ್ಯಾಸ ಮಾಡಿ ಶೇ.100 ಸಾಧನೆಗೆ ಪರಿಶ್ರಮ ಹಾಕಿ ಎಂದು ತಿಳಿಸಿದ ಅವರು, ಬೆಳಗಿನ ಜಾವ 5 ಗಂಟೆಗೆ ಏಳುವ ಅಭ್ಯಾಸ ಮಾಡಿಕೊಳ್ಳಿ, ಪರೀಕ್ಷೆಗೆ ಇನ್ನು ಕೇವಲ 14 ದಿನವಿದ್ದು, ಅನುಭವಿ ಶಿಕ್ಷಕರು ಪರೀಕ್ಷೆಗೆ ಅತಿ ಮುಖ್ಯವಾದ ಪ್ರಶ್ನೆಗಳನ್ನು ಓದಲು ಮಾರ್ಗದರ್ಶನ ನೀಡುವುದರಿಂದ ಶಾಲೆಗೆ ಗೈರಾಗದಿರಿ ಎಂದು ಸೂಚಿಸಿ, ಏಕಾಗ್ರತೆ ಬರುವಂತಾಗಲು ಹಲವಾರು ಸೂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಪಠ್ಯಪುಸ್ತಕ ಅಭ್ಯಾಸ ಮಾಡಿ ಎಂದ ಅವರು, ತರಗತಿಯಲ್ಲಿ ಶಿಕ್ಷಕರ ಬೋಧನೆ ಸಂದರ್ಭದಲ್ಲಿ ಏಕಾಗ್ರತೆಯಿಂದ ಆಲಿಸಿ, ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಯಾವುದೇ ಆತಂಕವಿಲ್ಲದೇ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದರು.
ರಾತ್ರಿ 10-30 ಗಂಟೆಯವರೆಗೂ ಓದುವ ಅಭ್ಯಾಸ ರೂಢಿಸಿಕೊಳ್ಳಲು ಸಲಹೆ ನೀಡಿದ ಅವರು, ಯಾವುದೇ ಪ್ರಶ್ನೆ ಕುರಿತು ಗೊಂದಲವಿದ್ದರೆ ಯಾವುದೇ ಮುಜುಗರಕ್ಕೆ ಒಳಗಾಗದೇ ನಿಮ್ಮ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ಓದುವರಿಂದ ಮಾತ್ರವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.100 ಅಂಕ ಪಡೆಯಲು ಸಾಧ್ಯ ಎಂದ ಅವರು, ಇಲಾಖೆ ನೀಡಿರುವ `ನನ್ನನ್ನೊಮ್ಮೆ ಗಮನಿಸಿ’ ವಿಷಯವಾರು ಅಭ್ಯಾಸ ಪ್ರತಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಯಾವುದೇ ವಿದ್ಯಾರ್ಥಿ ತೇರ್ಗಡೆಯಾಗುವುದು ಕಷ್ಟವಲ್ಲ, ಆದರೆ, ಪರಿಪೂರ್ಣ ಅಂಕ ಗಳಿಸಬೇಕೆಂಬ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಆಳವಾಗಿ ಅಭ್ಯಾಸ ಮಾಡಬೇಕೆಂದರು.
ಶಾಲೆಯಲ್ಲಿ ಉತ್ತಮ ಸಂಪನ್ಮೂಲ ಶಿಕ್ಷಕರಿದ್ದು, ಅವರ ನೆರವು ಪಡೆಯಿರಿ, ನಿಮ್ಮ ಗುರಿ ಕೇವಲ ಪರೀಕ್ಷೆ ಆಗಿರಲಿ, ಪರೀಕ್ಷೆ ಮುಗಿಯುವವರೆಗೂ ನಿಮ್ಮ ಉಳಿದೆಲ್ಲಾ ಆಟೋಟ ಇತರೆ ಚಟುವಟಿಕೆಗಳನ್ನು ನಿಯಂತ್ರಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಹಿರಿಯ ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಸುಗುಣಾ,ಲೀಲಾ, ಫರೀದಾ, ಚೈತ್ರ, ಶ್ರೀನಿವಾಸಲು ಮತ್ತಿತರರಿದ್ದರು.

ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು:ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಮುಖಂಡರು ಹೇಳುವುದರ ಮೂಲಕ ಅಲ್ಪ ಸಂಖ್ಯಾತರ ಮತ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ ಎಂಬುದು ಪ್ರಜ್ಞಾವಂತ ಮತದಾರರಿಗೆ ತಿಳಿದಿದೆ ಎಂದು ಹೇಳಿದರು.
ಕಾಂಗ್ರೆಸ್ ಹಿಂದಿನಿಂದಲೂ ಅಲ್ಪ ಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಈಗ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರೂ ಕಾಂಗ್ರೆಸ್ ನಿಂದ ಅಂತ ಕಾಯ್ದುಕೊಳ್ಳುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿಯಾಗಿದ್ದರೆ, ಅದು ನಾನು ಶಾಸಕನಾಗಿದ್ದ 4 ಅವಧಿಯಲ್ಲಿ ಮಾತ್ರ. ಶಾಸಕ ರಮೇಶ್ ಕುಮಾರ್ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ಜನರ ಎದುರು ಕಣ್ಣೀರು ಸುರಿಸಿ, ಮಾತಿನಿಂದ ಹೊಟ್ಟೆ ತುಂಬಿಸುತ್ತಿದ್ದಾರೆ. ಜಾಕೀರ್ ಹುಸೇನ್ ಮೊಹಲ್ಲಾ ನಿರ್ಮಿಸಿದ್ದು ನಾನು ಶಾಸಕನಾಗಿದ್ದ ಅವಧಿಯಲ್ಲಿ. ಆದರೆ ಈಗ ಅದು ಅಭಿವೃದ್ಧಿ ಕಾಣದೆ ತಿಪ್ಪೆಯಂತಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಏಜಾಜ್ ಮಾತನಾಡಿ, ಬಿಜೆಪಿ ಅಲ್ಪ ಸಂಖ್ಯಾತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್, ಬಿಜೆಪಿ ಬಿ ಟೀಂನಂತೆ ವರ್ತಿಸುತ್ತಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಅಲ್ಪ ಸಂಖ್ಯಾತರ ಆಶಾಕಿರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಂಥ ನಾಯಕರಿಂದ ಅಂತರ ಕಾಯ್ದುಕೊಳ್ಳಬೇಕು. ಜೆಡಿಎಸ್ ಬೆಂಬಲಿಸಬೇಕು ಎಂದು ಹೇಳಿದರು.
ಅಂಜುಮನ್ ಸಂಸ್ಥೆ ಮುಖ್ಯಸ್ಥ ಜಮೀರ್ ಅಹ್ಮದ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸಮಾಡಿ ಗೆಲ್ಲಿಸಿದ್ದು ಗುಟ್ಟಾಗಿ ಉಳಿದಿಲ್ಲ. ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣರಾದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಕಲ್ಲುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೆಲ್ಲವನ್ನೂ ಸಹಿಸದ ಅನ್ಯ ಪಕ್ಷಗಳ ಮತದಾರರು ಜೆಡಿಎಸ್ ಕಡೆ ವಾಲುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಮುಖಂಡರಾದ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಬಿ.ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ರವಿ, ವೇಣುಗೋಪಾಲರೆಡ್ಡಿ, ಜಗನ್ನಾಥ್, ಪುರಸಭೆ ಸದಸ್ಯರಾದ ವಹೀದಾ ಬೇಗಂ, ಶಬ್ಬೀರ್ ಖಾನ್, ರಸೂಲ್ ಖಾನ್, ಜಬೀನ್ ತಾಜ್, ನಸೀರ್ ಅಹ್ಮದ್ ಖಾನ್, ಸೈಯದ್ ನಿಜಾಮುದ್ದೀನ್, ರಿಯಾನಾಖಾನಂ, ಜಯಲಕ್ಷ್ಮಿ ಇದ್ದರು.

ಶ್ರೀನಿವಾಸಪುರದಲ್ಲಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಶ್ರೀನಿವಾಸಪುರ: ಪಟ್ಟಣದಲ್ಲಿ ಭಾನುವಾರ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕನಕ ಸಮುದಾಯ ಭವನದ ಸಮೀಪ ವಿಶೇಷವಾಗಿ ನಿರ್ಮಿಸಲಾಗಿದ್ದ ವಿಶಾಲವಾದ ಪೆಂಡಾಲ್ ಕೆಳಗಿನ ಭವ್ಯ ವೇದಿಕೆಯಲ್ಲಿ, ತಿರುಪತಿಯಿಂದ ತರಲಾಗಿದ್ದ ದೇವರ ವಿಗ್ರಹಗಳಿಗೆ ಪುಷ್ಪಾಲಂಕಾರ ಮಾಡಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನ ಕಲ್ಯಾಣ ಮಹೋತ್ಸವ ಕಣ್ತುಂಬಿಕೊಂಡರು. ಕಲ್ಯಾಣೋತ್ಸವದ ನಡುವೆ ಭಕ್ತಾದಿಗಳಿಂದ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತ್ತು. ತಿರುಪತಿಯಿಂದ ಆಗಮಿಸಿದ್ದ ಆಗಮ ಪಂಡಿತರು ಕಲ್ಯಾಣೋತ್ಸವ ನೆರವೇರಿಸಿದರು. ವೇದ ಪಂಡಿತ ಶೇಷಾದ್ರಿ ರಾಷ್ಟ್ರಾಶೀರ್ವಾದ ಮಾಡಿದರು.
ಕಲ್ಯಾಣೋತ್ಸವದ ಬಳಿಕ, ಭಾಗವಹಿದ್ದ ಎಲ್ಲರಿಗೂ ತಿರುಪತಿ ಲಾಡು ವಿತರಿಸಲಾಯಿತು.
ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ರಾಜಶೇಖರರೆಡ್ಡಿ, ಶಂಕರೇಗೌಡ, ನಾರಾಯಣರೆಡ್ಡಿ, ಶಿವಣ್ಣ, ಮಂಜುನಾಥ, ಮುನಿರೆಡ್ಡಿ, ಮುಳ್ಳಳ್ಳಿ ಚೌಡರೆಡ್ಡಿ, ರಾಜಣ್ಣ, ಯಲ್ದೂರು ಶಿವಣ್ಣ, ಶ್ರೀರಾಮ್ ಉತ್ಸವದ ನೇತೃತ್ವ ವಹಿಸಿದ್ದರು.
ರಸ ಸಂಜೆ: ಸಂಜೆ ಜಬರ್‍ದಸ್ತ್ ಭಾಸ್ಕರ್ ತಂಡದಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

The fifteenth convocation ceremony was held at Thokkattu Ranipur Rishivana

Thokkattu Ranipur : Fifteenth Convocation ceremony was held at Ryshivana on 13 March at 6.00 pm. Fr Charles Serrao, Rector of the Infant Jesus Shrine offered the Holy Eucharist and delivered a meaningful homily. Fr Deep Fernandes, the Chief guest of the day, released the souvenir. 25 Sisters received the certificates. Fr Archibald Gonsalves, the Director presented the convocation Address. Sr Sugandhi thanked one and all. Several priests and nuns witnessed the event.

The Apostolic Carmel, Karnataka organises a seminar on NCF to its Kindergarten teachers

The Education Commission of the Apostolic Carmel, Karnataka Province organised a seminar for its Kindergarten facilitators on National Curriculum at Foundational level (NCF) on Saturday, March 11, 2023 at Mount Carmel Central School, Mangaluru. The program commenced invoking God’s blessings by Ladyhill preparatory school teachers.  The LKG children of Mount Carmel welcomed the gathering with a graceful dance.  Principal Sr Melissa welcomed the gathering and introduced the resource person Mr Som Shubhra K from Mumbai.

The seminar was inaugurated by illuminating the lamp by Sr Maria Sudeepa AC, Secretary of the Apostolic Carmel Educational Society, Mr Som Shubgra K and Mr Chethan from Orient Blackswan Publications, Sr Ida Barboza, the coordinator of Education Commission, Sr Carissima, the administrator and principal Sr Melissa.

The resource person Mr Som Shubgra K began the session briefing about National Curriculum in the New Education Policy. He mentioned all the stages of education and specifically highlighted the foundational stage, i.e 3+2 for the age group 4 to 8 years.  He emphasised learning should take place through the play way method where the facilitators believe in the ability of the child to learn by themselves. This was supported by a few activities.  He further spoke on the aims of NEP 2020, namely health, safety and nutrition, motor skills, hygiene, communication with the prime care giver, peer relationship, sitting tolerance, ethical development and forming all-round good habits. 

Post snacks, he discussed the goals: Foundational Literacy and Numeracy supported by age appropriate strategies, belongingness to the Indian traditions encouraged by play way method and the crucial role played by families and communities in the life of every child. 

He further brought to light the main domains of work:  physical and motor, cognitive, socio-emotional-ethical, cultural/artistic with special regard to communication and early language, literacy and numeracy. 

He spoke on foundational language and literacy which plays an important part in the holistic development of a child.  He urged the facilitators to encourage communication through drama and role play.  At the end of it, he touched on the five steps of learning process namely: adhithi (introduction), bhodh (conceptual understanding), abhyas (practice), prayog (application) and prasar (expansion). 

Then, teachers of Carmel School, Mangaluru presented a few creative and interesting ways of narrating stories. The teachers of the host school conducted a game on numeracy which matched the play way method of the seminar and the teachers of St Agnes Preparatory School, Bendore demonstrated the correct way to teach the letters of the alphabet.

The seminar was sponsored by Orient Blackswan Publications and Mr. Chethan, the Area Sales Manager was present.  Teacher Dayonara of the host school compeered the programme and teacher Iona from St Cecily’s Preparatory School, Udupi delivered the vote of thanks.

The seminar ended with the feeling “We welcome NEP”. One could hear nothing but discussion on NEP at the fellowship lunch. The teachers left the venue with confidence and determination to implement NEP at the foundational level.   

ವಿದ್ಯಾರ್ಥಿಗಳು ತಾಯಿ ಬಗ್ಗೆ ಪೂಜ್ಯ ಭಾವನೆ ಹೊಂದಬೇಕು. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು:ಅಶ್ವತ್ಥನಾರಾಯಣ್

ಶ್ರೀನಿವಾಸಪುರ: ವಿದ್ಯಾರ್ಥಿಗಳು ತಾಯಿ ಬಗ್ಗೆ ಪೂಜ್ಯ ಭಾವನೆ ಹೊಂದಬೇಕು. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ್ ಹೇಳಿದರು.
ರಾಜಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಬೇಕು. ಸಮಯ ಪಾಲನೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ತಮಗಾಗಿ ದುಡಿಯುವ ಪೋಷಕರ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಬೆಳೆದ ಮೇಲೆ ತಂದೆ ತಾಯಿ ಸೇವೆ ಮಾಡಲು ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ, ಈ ಶಾಲೆ ರಾಜ್ಯ ಮಟ್ಟದಲ್ಲಿ ಮಾದರಿ ಶಾಲೆ ಎಂದು ಗುರುತಿಸಲ್ಪಟ್ಟಿದೆ. ಹಾಗಾಗಿ ಶಾಲಾಭಿವೃದ್ಧಿಗೆ ವಿಶೇಷ ಗಮನ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ, ಕಾನ್ವೆಂಟ್ ಮಾದರಿಯಲ್ಲಿ ಶಾಲೆ ನಡೆಸಲಾಗುವುದು. ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ವ್ಯಾನ್ ಸೌಲಭ್ಯ ಕಲ್ಪಿಸಲಿದೆ. ಕನ್ನಡ ಮಾಧ್ಯಮದ ಜತೆಗೆ ಇಂಗ್ಲೀಷ್ ಮಾಧ್ಯಮದಲ್ಲೂ ಬೋಧನೆ ಮಾಡಲಾಗುವುದು ಎಂದು ಹೇಳಿದರು.
ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು. ತಪ್ಪದೆ ಶಾಲೆಗೆ ಕಳಿಸುವುದರ ಜತೆಗೆ, ಮನೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಶಾಲೆಗೆ ಮೈಕ್ ಸೆಟ್ ಕೊಡುಗೆ ನೀಡಿದರು. ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಅವರ ಸೇವೆಗಾಗಿ ನನ್ನ ದುಡಿತದ ಸ್ವಲ್ಪ ಭಾಗವನ್ನು ವ್ಯಯಿಸುತ್ತಿದ್ದೇನೆ. ಸರ್ಕಾರಿ ಶಾಲಾ ಮಕ್ಕಳಿಗೆ ಏನೇ ನೆರವು ನೀಡಿದರೂ ಮನಸ್ಸಿಗೆ ಸಂತೋಷವಾಗುತ್ತದೆ. ಈ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳ ಜತೆ ದಾನಿಗಳ ನೆರವಿನ ಅಗ್ಯವಿದೆ ಎಂದು ಅವರು ಹೇಳಿದರು.
ಬಿಆರ್‍ಪಿ ಮಲ್ಲಿಕಾರ್ಜುನ್ ಮಾತೃಸೇವೆ ಮಹತ್ವ ಹಾಗೂ ವಿಜ್ಞಾನದ ಕೊಡುಗೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ತಾಯಂದರಿಗೆ ಮಡಿಲು ತುಂಬಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ತಾಯಂದಿರಿಗೆ ಪಾದ ಪೂಜೆ ಏರ್ಪಡಿಸಲಾಗಿತ್ತು.
ಅಕ್ಷರ ಸಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ, ಸಿಆರ್‍ಪಿ ಚಂದ್ರಶೇಖರ್, ಶಿಕ್ಷಕ ಮಂಜುನಾಥ್, ಸೋಮಶೇಖರ್, ನಾಗರಾಜ್, ಶ್ರೀನಿವಾಸ್, ಮಂಜುನಾಥ್, ವೆಂಕಟೇಶಪ್ಪ, ಆಂಜಿನಪ್ಪ, ಎಸ್‍ಡಿಎಂಸಿ ಅಧ್ಯಕೆ ಸುಮಾ, ಸದಸ್ಯರು ಹಾಗೂ ವಿದ್ಯಾರ್ಥಿಗಳ ತಾಯಂದಿರು ಇದ್ದರು.

ಬೀಜಾಡಿ: ಏಕಪವಿತ್ರ ನಾಗಮಂಡಲೋತ್ಸವ ಧಾಮಿ೯ಕ ಸಭಾ ಕಾರ್ಯಕ್ರಮ

ಮನುಷ್ಯ ಜೀವಿಯನ್ನು ಕಾಪಾಡುವ ದೊಡ್ಡ ಶಕ್ತಿ ನಾಗದೇವರಿಗಿದೆ. ಕರಾವಳಿ ಭಾಗದಲ್ಲಿ ನಾಗದೇವರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟು ಆರಾಧನೆಯನ್ನು ಮಾಡಲಾಗುತ್ತದೆ. ಈ ನೆಲೆಯಲ್ಲಿ ಸೇವಾಕರ್ತರು ಮಾಡಿದ ಈ ಸೇವೆಯಿಂದ ಇಡೀ ಜಗತ್ತೇ ಲೋಕ ಕಲ್ಯಾಣವಾಗುವಂತೆ ನಾಗದೇವರು ಅನುಗ್ರಹಿಸಲಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ನುಡಿದರು.
ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವಾ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನವಾದ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಸೋಮವಾರ ಜರುಗಿದ ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾಮಿ೯ಕ ಉಪನ್ಯಾಸ ನೀಡಿ ಮಾತನಾಡಿ, ದೈವರಾಧನೆ ಮತ್ತು ನಾಗರಾಧನೆಯ ಹಿಂದೆ ಈ ಮಣ್ಣಿನ ಸೊಗಡಿದೆ. ಅವಿಭಜಿತ ಜಿಲ್ಲೆಗಳಲ್ಲಿ ಬಿಟ್ಟರೇ ಬೇರೆ ಜಿಲ್ಲೆಗಳಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಈ ಕ್ಷೇತ್ರಗಳೆಲ್ಲವೂ ದೇವಭೂಮಿ ಎನ್ನಬಹುದು ಎಂದರು.

ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ, ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.
ಈ ಸಂದರ್ಭ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ಯಕ್ಷಗುರು ಕಡ್ಲೆ ಗಣಪತಿ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಂಡಿತ್ತು.
ಬಿ.ಆರ್.ಅರವಿಂದ್ ಕೋಟೇಶ್ವರ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ವಂದಿಸಿದರು.

ಕುಂದಾಪುರ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ, ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆ

ಕುಂದಾಪುರ: ಕರ್ನಾಟಕ ಕಾರ್ಯನಿರತ ಸಂಘ ಉಡುಪಿ‌ ಜಿಲ್ಲಾ ಸಂಘದ ಅಧೀನ ಸಂಸ್ಥೆಯಾದ   ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇದರ ನೂತನ ತಾಲೂಕು ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ ಹಾಗೂ ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆಯಾಗಿದ್ದಾರೆ.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ನಾಗರಾಜ ರಾಯಪ್ಪನಮಠ  ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಚಂದ್ರಮ ತಲ್ಲೂರು, ರಾಘವೇಂದ್ರ ಪೈ, ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ ಕುಂಭಾಶಿ ಹಾಗೂ ರಾಘವೇಂದ್ರ ಬಳ್ಕೂರು, ಕೋಶಾಧಿಕಾರಿಯಾಗಿ ಲೋಕೇಶ್ ಆಚಾರ್ಯ, ಕಾರ್ಯಕಾರಿ‌ ಸಮಿತಿ ಸದಸ್ಯರಾಗಿ ಉದಯ ಕುಮಾರ್, ಶಶಿಧರ ಹೆಮ್ಮಾಡಿ, ಮಂಜುನಾಥ ಶೆಣೈ ಜನ್ನಾಡಿ, ಸತೀಶ್ ಆಚಾರ್ಯ ಉಳ್ಳೂರು, ವಿನಯ್ ಪಾಯಸ್, ರಾಮಕೃಷ್ಣ ಹೇರಳೆ, ಶ್ರೀಕಾಂತ ಹೆಮ್ಮಾಡಿ, ಸಂತೋಷ್ ಕುಂದೇಶ್ವರ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ನಿರ್ಗಮಿತ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರು ನೂತನ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭಹಾರೈಸಿದರು.

ಈ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಸಂಘದ ರಜತ ಮಹೋತ್ಸವ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.