ಆರ್ ಧ್ರುವನಾರಾಯಣ್ ರವರಿಗೆ ನುಡಿ ನಮನ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ : ಅಗಲಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಕಾರ್ಯಧ್ಯಕ್ಷರು,ಉಡುಪಿ ಜಿಲ್ಲೆಯ ಪಕ್ಷದ ಉಸ್ತುವಾರಿಗಳಾದ ಶ್ರೀ ಧ್ರುವನಾರಾಯಣ್ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನೆರವೇರಿಸಲಾಯಿತು . ಆರ್ ದ್ರುವ ನಾರಾಯಣ್ ಓರ್ವ ಸಜ್ಜನ ರಾಜಕಾರಣಿ, ಮಿಗುತಾರೆಯಂತೆ ಎಲ್ಲರ ಮೆಚ್ಚುಗೆಯ ಪಾತ್ರರಾಗಿ, ಪಕ್ಷದ ಸಂಘಟನಾ ಚತುರರಾಗಿ, ಶಾಸಕರಾಗಿ ,ಸಂಸದರಾಗಿ ಅವರು ಬಿಟ್ಟು ಹೋಗಿರುವ ಹೆಜ್ಜೆಯ ಗುರುತು ಯಾರೂ ಮರೆಯುವಂತಿಲ್ಲ .ಸದಾ ಅಧ್ಯಯನಶೀಲರಾದ ಅವರು ಸಾಕಷ್ಟು ಜನಾನುರಾಗಿದ್ದರು. ಅವರ ಅಗಲುವಿಕೆಯಿಂದ ರಾಜ್ಯ ಒಬ್ಬ ಧಿಮಂತ ನಾಯಕನನ್ನು ಕಳೆದುಕೊಂಡಿದೆ’ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರು ನುಡಿ ನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ವಿಧಾನಸಭೆಯ ಚುನಾವಣೆ ಆಕಾಂಕ್ಷಿಗಳಾದ ಶಾಮಲಾ ಭಂಡಾರಿ ,ಮೊಳಹಳ್ಳಿ ದಿನೇಶ ಹೆಗ್ಡೆ ,ಅಶೋಕ ಪೂಜಾರಿ, ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ ಶ್ರದ್ಧಾಂಜಲಿಯ ಮಾತುಗಳನ್ನು ಆಡಿದರು.
ಸಭೆಯಲ್ಲಿ ಹಿರಿಯರಾದ ಸತೀಶ್ ಕಿಣಿ, ಮಹಿಳಾ ಅಧ್ಯಕ್ಷೇ ದೇವಕಿ ಸಣ್ಣಯ್ಯ, ಯುವ ಅಧ್ಯಕ್ಷ ಇಶ್ಚಿತಾರ್ಥ ಶೆಟ್ಟಿ , ಜಿಲ್ಲಾ ಸೋಷಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಪ್ರಭಾವತಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಶಿವಕುಮಾರ್,ರಾಕೇಶ ಶೆಟ್ಟಿ,ಅಶ್ವತ್ ಕುಮಾರ್, ಸುಜನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ, ವಿಜಯದರ್ ಕೆ ವಿ, ಭಾಸ್ಕರ ಶೆಟ್ಟಿ ,ಕಾಳಪ್ಪ ಪೂಜಾರಿ, ಎಚ್ ಗಂಗಾಧರ ಶೆಟ್ಟಿ, ಸುಭಾಶ ಪೂಜಾರಿ, ರಾಮಕೃಷ್ಣ ಭಟ್, ಅಭಿಜಿತ್ ಪೂಜಾರಿ ,ಶಶಿ ರಾಜ್ ಪೂಜಾರಿ, ಆಶಾ ಕರ್ವಾಲೋ ,ಎನ್ ರೇವತಿ ಶೆಟ್ಟಿ ,ವಾಣಿ ಆರ್ ಶೆಟ್ಟಿ, ಕೋಡಿ ಸುನಿಲ್ ಪೂಜಾರಿ ,ಕೇಶವ್ ಭಟ್, ಬಿ ಗಿರಿಜಾ ಶಂಕರ್, ಮೆಬಲ್ ಡಿಸೋಜಾ, ವೇಲ ಬ್ರಗಾಂಜಾ , ಜೋಸೆಫ್ ರೆಬೆಲ್ಲೋ, ಜೊಯ್ಸಟನ್ ಡಿಸೋಜಾ, ಕೃಷ್ಣ ಮೊಗವೀರ ,ಸಂಪತ್ ಶೆಟ್ಟಿ, ವೇಣುಗೋಪಾಲ್, ಸಚಿನ್ ಕುಮಾರ್, ಕಡಗಿ ಪ್ರಭಾಕರ್, ಗುರುರಾಜ್ ಹಲಸನಾಡು, ಪುರಂದರ ಶೆಟ್ಟಿ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಕೋಣಿ ನಾರಾಯಣಚಾರ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಅಶೋಕ್ ಸುವರ್ಣ ವಂದಿಸಿದರು.

Rachana Catholic Chamber of Commerce and Industry organized a unique program for women

Mangalore : Rachana Catholic Chamber of Commerce and Industry held a unique program for Women.
International Women’s Day celebration was held on 12 March Sunday evening at Mangalore Club.
Mrs. Glady Alvares, Mrs.  Sharon Dsouza n Mrs. Salomi Deepa Lobo spoke about their journey as Women entrepreneurs n professionals.
Mrs. Divya Dsouza of M. Dsouza n sons was the chief gues. She spoke about her journey from being a corporate to a Woman Entrepreneur.
There were 23 other Women entrepreneurs who were invited as special guests. These were achievers in their own field. From aged 75 yrs of age to just in late twenties from various fields. These were recognised and a memento was presented to each of them.
Program began with a prayer song. Rachana Secretary Mrs. Lavina Monteiro welcomed the gathering on behalf of the President. Rachana Treasurer Mrs. Eulalia Dsouza was the convener  & moderator of the program.
Mr. Vincent Cutinha President of Rachana in his message mentioned that women play an important role in the family n the society.
Mrs. Marjorie Texera introduced Divya Dsouza to the gathering. Divya Dsouza in her message mentioned that a woman can achieve what she does with the support of a man. In her case initially her father n then her father in law.
There were almost 50 women present for the program.
In all, the program was well appreciated by many Joint Secretary Mr. Philip Pereira proposed vote of thanks. Meeting ended with fellowship and dinner.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) ಮಂಗಳೂರು ಇದರ ವತಿಯಿಂದ ಮಹಿಳಾ ದಿನಾಚರಣೆ

ಕಥೊಲಿಕ ಸಭಾ ಮಂಗಳೂರು ಪ್ರದೇಶ (ರಿ.) ಹಾಗೂ ಎಲ್ಲಾ ವಲಯಗಳ ಸಹಕಾರದೊಂದಿಗೆ 2023 ಮಾರ್ಚ್ 12 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಬೆಳಿಗ್ಗೆ ಕೇಂದ್ರದ ಆದ್ಯಾತ್ಮಿಕ ನಿರ್ದೇಶಕರು ಹಾಗೂ ಬಿಜೈ ಚರ್ಚಿನ ಗುರುಗಳಾದ ವಂದನೀಯ ಗುರು ಡಾ|ಜೆ.ಬಿ ಸಲ್ಡಾನ್ಹಾರವರು ಪವಿತ್ರ ಪೂಜೆಯನ್ನು ನೆರವೇರಿಸಿದರು.
ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಥೊಲಿಕ ಸಭಾ ಕೇಂದ್ರಿಯ ಅಧ್ಯಕ್ಷಾರದ ಶ್ರೀ ಸ್ಟ್ಯಾನಿ ಲೋಬೊರವರು ಅಧಕ್ಷ್ಷ ಸ್ಥಾನವನ್ನು ವಹಿಸಿದರು. ಉದ್ಘಾಟಕರಾಗಿ ಆದ್ಯಾತ್ಮಿಕ ನಿರ್ದೇಶಕರು ವೇದಿಕೆಯಲ್ಲಿ ಹಾಜರಿದ್ದರು.
12 ವಲಯದ 12 ಸ್ತ್ರೀ ಹಿತಾ ಸಂಚಾಲಕಿಯರು ದೀಪದ ಮೂಲಕ ವೇದಿಕೆಗೆ ಆಗಮಿಸಿದ ಬಳಿಕ ಅಧ್ಯಾತ್ಮಿಕ ನಿರ್ದೇಶಕರು ವೇದಿಕೆಯಲ್ಲಿ ದೀಪವನ್ನು ಗಣ್ಯರೊಂದಿಗೆ ಸೇರಿ ಉರಿಸಿದ ಬಳಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ತದನಂತರ ತಮ್ಮ ಉದ್ಘಾಟನ ಭಾಷಣದಲ್ಲಿ ಲಿಂಗ ಸಮಾನತೆ ಇನ್ನೂ ಕನಸಾಗಿದೆ. ಪ್ರತಿಯೊಬ್ಬ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಂಡರು. ಪ್ರತಿಯೊಬ್ಬ ಹೆಣ್ಣು ಮಗುವಿಗೆ ಗಂಡು ಮಗುವಿನಂತೆಯೇ ಸಮಾನ ಗೌರವವನ್ನು ನೀಡಲು ಶ್ರಮಿಸಬೇಕು ಎಂದು ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಹಾಗೂ ಯುವತಿಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರಲ್ಲಿ ಒಬ್ಬರಾದ ಕು| ಮಿಶೆಲ್ ಕ್ವೀನಿ ಡಿಕೋಸ್ತಾ IಖS ಇವರು ಮಾತಾನಾಡಿ ಪ್ರತಿಯೊಬ್ಬ ಮಹಿಳೆಯ ಯಶಸ್ಸು ಇತರ ಮಹಿಳೆಗೆ ಸ್ಪೂರ್ತಿಯಾಗಬೇಕು. ಯುವಜನರನ್ನು ಅವರಿಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಪ್ರೇರೇಪಿಸಬೇಕು. ಸರ್ಕಾರದ ಮೂಲಕ ಆಧಾರಿತವಾದ ಸೇವೆಗಳಿಗೆ ಒತ್ತು ನೀಡಬೇಕು. ಸಮಾನತೆಯನ್ನು ಅಳವಡಿಸಿಕೊಂಡು ಮುನ್ನಡೆಯಿರಿ ಎಂದು ಕರೆಗೊಟ್ಟರು.
ಪ್ರಮುಖ ಅತಿಥಿಯಾದ ಹಿಲ್ಡಾ ಡಿಸಿಲ್ವಾ , ನಿವೃತ್ತ ವೈಸ್ ಪ್ರಿನ್ಸಿಪಾಲ್ ಮಿಲಾಗ್ರಿಸ್ ಕಾಲೇಜ್, ಕಲ್ಯಾಣ್‍ಪುರ್ ಇವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಹಿಳೆಯರು ಆರ್ಷಣೆಯ ಕೇಂದ್ರಬಿಂದು. ಪುರುಷರು ಏನು ಮಾಡಬಹುದೋ ಅದನ್ನು ಮಹಿಳೆಯೂ ಮಾಡಬಹುದು. ನಾವು ನಮ್ಮ ಕುಟುಂಬಗಳನ್ನು ನೋಡಬೇಕು .ನಾವು ನಮ್ಮ ಮಕ್ಕಳೊಂದಿಗೆ ಬಹಳ ಪ್ರೀತಿಯಿಂದ ವ್ಯವಹರಿಸಬೇಕು. ಒಬ್ಬ ಮಹಿಳೆ ತನ್ನ ಮಕ್ಕಳಿಗೆ ಮಾದರಿಯಾಗಲು ಸಾಧ್ಯವಾಗದಿದ್ದರೆ, ಮಹಿಳಾ ದಿನಾಚರಣೆಗೆ ಹೆಚ್ಚಿನ ಮಹತ್ವವಿಲ್ಲ್ ಎಂದು ನುಡಿದರು.
ನಮ್ಮ ಕುಟುಂಬದಲ್ಲಿ, ನಮ್ಮ ನೆರೆಹೊರೆಯಲ್ಲಿ ನಮ್ಮ ನಡತೆಯ ಮೂಲಕ ಬದಲಾವಣೆಯನ್ನು ತರುವ ಎಂದು ನೆರೆದಿರುವರಲ್ಲಿ ಕೇಳಿಕೊಂಡರು
ಮುಖ್ಯ ಅತಿಥಿ- ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ- ಬೆಥನಿ ಪ್ರೊವಿನ್ಶಿಯಲೇಟ್ ಪ್ರೊವಿನ್ಶಿಯಲ್ ಸುಪಿರಿಯರ್ ಮಾತನಾಡಿ ಮೌಲ್ಯಗಳು ಅಗತ್ಯ. ಪ್ರತಿಯೊಬ್ಬ ಮಹಿಳೆಯು ನಾಯಕತ್ವ ಮತ್ತು ಜವಾಬ್ದಾರಿ ಮೂಲಕ ಮನೆ ಮತ್ತು ಸಮಾಜದಲ್ಲಿ ಸುಧಾರಣೆಯನ್ನು ಮಾಡಬಹುದು ಎಂದು ಕೇಳಿಕೊಂಡರು.
ಗಣ್ಯ ಅತಿಥಿ – ಮಾನ್ಯ ರೋಯ್ ಕ್ಯಾಸ್ತೆಲಿನೊ – ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯವರು ತಮ್ಮ ನುಡಿಗಳಲ್ಲಿ ಮಹಿಳೆಯರ ಸಾಧನೆಗಳನ್ನು ಪ್ರಶಂಶಿಸಿದರು ಹಾಗೂ ಎಲ್ಲಾ ಗೌರವಾನ್ವಿತರನ್ನು ಶ್ಲಾಘಿಸಿ ಅಭಿನಂದಿಸಿದರು. ರಾಜಕೀಯದಲ್ಲಿ ಮಹಿಳೆಯರ ಪಾತ್ರ ಅಗತ್ಯ ಎಂದು ತಿಳಿಸಿ, ಕ್ಯಾಥೋಲಿಕ್ ಸಭೆಯ ಉತ್ತಮ ಕಾರ್ಯಕ್ಕಾಗಿ ಅಭಿನಂದಿಸಿದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಮಾನ್ಯ ಸ್ಟ್ಯಾನಿ ಲೋಬೊ ಇವರು ಅಧ್ಯಕ್ಷರ ನುಡಿಯಲ್ಲಿ ಸಮಾಜಕ್ಕೆ ನಮ್ಮ ಸೇವೆಯು ಪ್ರಮುಖವಾದುದು. ಯಾವುದೇ ಸಮಸ್ಯೆಗಳನ್ನು ಎದುರಿಸಿ ಅದನ್ನು ಜಯಿಸಬೇಕು ಎಂದು ಕರೆಗೊಟ್ಟರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಉಪಾಧ್ಯಕ್ಷರಾದ ಶ್ರೀ ವಿನೋದ್ ಪಿಂಟೊರವರು ನೆರೆದಿದ್ದ ಎಲ್ಲರನ್ನೂ ಸ್ವಾಗತಿಸಿದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಸ್ತ್ರೀ-ಸಶಕ್ತೀಕರಣ ಸಂಚಾಲಕಿಯಾದ ಶ್ರೀಮತಿ ಲವೀನಾ ಪಿಂಟೊ ಧನ್ಯವಾದವನ್ನು ಸಮರ್ಪಿಸಿದರು.
ಎಪಿಸ್ಕೋಪಲ್ ಸಿಟಿ ವಲಯದ ಮಾಜಿ ಅಧ್ಯಕ್ಷರಾದ ಶ್ರೀ ಪ್ಯಾಟ್ರಿಕ್ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.

Holy Redeemer School Annual Parents Teachers Meeting

Holy Redeemer English Medium School Parent Teacher Association Annual Meeting was held on 11th March. Fr Alwyn Serrao, Principal of St Anthony’s Degree College, Naravi was the Chief guest. He gave a comprehensive information about the New Education Policy. Correspondant Fr Joseph Cardoza presided. Mrs Shanthi Pereira, PTA Secretary presented the report. Headmaster Fr Clifford Pinto explained the school plan and activities. PTA Vice President Mr Bonaventure Pinto, Members and Parents were present. Teachers Mrs Anitha welcomed, Ms. Vinitha Moras thanked and Mrs Renita Lasrado compered the program. All other staff cooperated and organised the meeting.

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ  ಪ್ರಾಂಶುಪಾಲರಾದ ಪ್ರೊಫ಼ೆಸರ್ ಜೆನಿಫರ್ ಮಿನೆಜೆಸ್ ಲಿಂಗ ಸಮಾನತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮಧ್ಯಾಹ್ನ ವಿವಿಧ ಮನರಂಜನಾ ಸ್ಪರ್ದೆಗಳನ್ನು ಆಯೋಜಿಸಲಾಗಿದ್ದು ಕಾಲೇಜಿನ ಎಲ್ಲ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.

ಎರಡನೇ ದಿನದಂದು ಶ್ರೀಮತಿ ಜುಡಿತ್ ಮೆಂಡೋನ್ಸಾ ಲಿಂಗ ಸಮಾನತೆಯ ಕುರಿತು ಮಾತನಾಡಿ “ಎಲ್ಲಾ ಕೆಲಸಗಳನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾಗಿ ಮಾಡಬಹುದು’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಜೇಸಿಐ ಕುಂದಾಪುರದ ಸಂಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಜೆಸಿಐ ಕುಂದಾಪುರ ಸಿಟಿ ಮಹಿಳಾ ವಿಭಾಗದ ಅಧ್ಯಕ್ಷೆ ಎಂ.ಎಸ್.ಪ್ರೇಮಾ, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ.ಸೋನಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ.ಅಕ್ಷತಾ ನಾಯಕ್ ಸಂಯೋಜಿಸಿದರು ಮತ್ತು ಮೇಬಲ್, ಪ್ರೊ.ಜಗದೀಶ್ ಮತ್ತು ಪ್ರೊ.ಪಾವನ ಕಾರ್ಯಕ್ರಮಗಳನ್ನು ನಿರೂಪಿಸಿದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಾಪತ್ತೆ ಆಗಿರುವ ಸಚಿವ ಮುನಿರತ್ನ, ಶಾಸಕ ಹೆಚ್.ನಾಗೇಶ್‍ ನಾಪತ್ತೆ, ಹುಡುಕಿ ಕೊಡಿ- ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡರಿಂದ ಮುಖ್ಯ ಮಂತ್ರಿಗಳಿಗೆ ಒತ್ತಾಯ

ಕಾಣೆಯಾದ ಶಾಸಕ ಹೆಚ್.ನಾಗೇಶ್‍

ಮುಳಬಾಗಿಲು, ಮಾ.11: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಾಪತ್ತೆ ಆಗಿರುವ ಉಸ್ತುವಾರಿ ಸಚಿವರಾದ ಮುನಿರತ್ನ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕರದಾದ ಹೆಚ್.ನಾಗೇಶ್‍ರು ನಾಪತ್ತೆಯಾಗಿದ್ದು ಹುಡುಕಿಕೊಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಮುಖ್ಯ ಮಂತ್ರಿಗಳನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು ಚುನಾವಣೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಮುಳುಬಾಗಿಲು ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್‍ರವರು ಜನ ಸಾಮಾನ್ಯರ ಕೈಗೆ ಸಿಗದೆ ನಾಪತ್ತೆ ಆಗಿದ್ದಾರೆ. ತಾಲ್ಲೂಕಿನಾದ್ಯಾಂದ ಹೆಜ್ಜೆ ಹೆಜ್ಜೆಗೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸುತ್ತಿರುವ ಕಾಮಗಾರಿಗಳ ಗುದ್ದಲಿ ಪೂಜೆಗೆ ಮಾತ್ರ ಸೀಮಿತವಾಗಿರುವ ಜೊತೆಗೆ ಹದಗೆಟ್ಟಿರುವ ರಸ್ತೆಗಳು ನಿಯಂತ್ರಣಕ್ಕೆ ಬಾರದ ಬೆಳೆಯ ರೋಗಗಳು ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಜನರ ಮದ್ಯೆ ಇದ್ದು, ಜನ ನಾಯಕನಾಗಬೇಕಾದ ಶಾಸಕರು ನಾಪತ್ತೆಯಾಗಿ ಕಚೇರಿಗೂ ಬೀಗ ಹಾಕುವ ಮೂಲಕ ಜನ ವಿರೋದಿ ನೀತಿಯನ್ನು ಅನುಸರಿಸುತ್ತಿದ್ದಾರೆ.
ಕಷ್ಟ ಹೇಳಿಕೊಳ್ಳಲು ಬರುವ ಜನ ಸಾಮಾನ್ಯರು ಕಚೇರಿಯ ಬೀಗ ನೋಡಿ ವಾಪಸ್ಸು ಹೋಗುವ ಜೊತೆಗೆ ಕಷ್ಟಕ್ಕೆ ಸ್ಪಂದಿಸದ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದು ಮುಳಬಾಗಿಲು ಕ್ಷೇತ್ರದ ಸಮಸ್ಯೆಯಾದರೆ ಇನ್ನೂ ತೋಟಗಾರಿಕಾ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನಂ ರವರು ಸಹ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ತಮ್ಮ ಪಕ್ಷದ ಆಭ್ಯರ್ಥಿಗಳಿಗೆ ಚುನಾವಣೆ ಖರ್ಚಿಗೆ ಕೋಟಿ ಕೋಟಿ ಹಣ ನೀಡುವ ಇವರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮಾರುಕಟ್ಟೆಯ ಜಾಗದ ಸಮಸ್ಯೆ, ರಸ್ತೆ, ಕುಡಿಯುವ ನೀರು, ಗ್ರಾಮೀಣ ಪ್ರದೇಶಗಳ ಜನರ ಕಷ್ಟಕ್ಕೆ ಸ್ಪಂದಿಸದೇ ನಾಪತ್ತೆ ಆಗಿರುವುದು ದುರಾದೃಷ್ಟಕರ ಇನ್ನೂ ನೆಪ ಮಾತ್ರಕ್ಕೆ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಚೇರಿಯಿದ್ದು, ಪ್ರತಿ ದಿನ ಕಚೇರಿಗೆ ಬೀಗ ಹಾಕಿರುತ್ತಾರೆ ಹೊರತು ಯಾವುದೇ ಪ್ರಯೋಜನವಿಲ್ಲ,
ಇಷ್ಟವಿಲ್ಲದ ಉಸ್ತುವಾರಿ ಸಚಿವರ ಸ್ಥಾನ ಪಡೆದು ಹೋದ ಪುಟ್ಟ ಬಂದಾ ಪುಟ್ಟ ಎಂಬ ಗಾದೆಯಂತೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರು ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್‍ರವರನ್ನು ಹುಡುಕಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫಾದರ್ ಮುಲ್ಲರ್ ಹೋಮಿಯೋಪಥಿ :38 ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್ ಉದ್ಘಾಟನಾ ಸಮಾರಂಭ


ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 38ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್‍ನ್ನು ದಿನಾಂಕ10.03.2023ರಂದು ಬೆಳಿಗ್ಗೆ 10.30ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾರದಕೃಷ್ಣ ಹೋಮಿಯೋಪಥಿ ಮೆಡಿಕಲ್ ಕಾಲೇಜ್, ಕುಲಸೇಕರ, ಕನ್ಯಕುಮಾರಿ ಇಲ್ಲಿನ ಮೆಟಿರಿಯಾ ಮೆಡಿಕಾ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ನಾತಕೋತ್ತರ ಕೋರ್ಸ್‍ಗಳ ಸಂಯೋಜಕರಾದ ಡಾ. ವಿನ್‍ಸ್ಟನ್ ವರ್ಗೀಸ್ ವಿ.,ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂ ದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್‍ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗಿರೀಶ್ ನಾವಡಯು.ಕೆ, ಯು.ಜಿ.ಶೈಕ್ಷಣಿಕ ಉಸ್ತುವಾರಿ ಡಾ.ಜಸಿಂತಾ ಮೊಂತೆರೋ ಹಾಗೂ ಹೊಸ ಬ್ಯಾಚ್‍ನ ವಿದ್ಯಾರ್ಥಿ ಪ್ರತಿನಿದಿ üಉದ್ಘಾಟನಾ ಸಮಾರಂಭದಲ್ಲಿಭಾಗವಹಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿ’ಸೋಜರವರು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಡಾ.ವಿನ್‍ಸ್ಟನ್ ವರ್ಗೀ¸ ಸಂದೇಶದಲ್ಲಿ ಮಾನವರ ದು:ಖವನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಸುರಕ್ಷಿತ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತುಕಡಿಮೆ ವೆಚ್ಚದಾಯಕವಾದ ಸಮಗ್ರ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿರುವುದು ವಿದ್ಯಾರ್ಥಿಗಳ ಅದ್ರಷ್ಟವೆಂದು ಹೇಳಿದರು. ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಹಾಗೂ ವೈಯುಕ್ತಿಕ ಬೆಳವಣಿಗೆಗೆ ಫಾದರ್ ಮುಲ್ಲರ್ ಹೋಮಿಯೋಪಥಿ ಸಂಸ್ಥೆಯಿಂದ ದೊರೆತ ಪೆÇ್ರೀತ್ಸಾಹವನ್ನು ವಿವರಿಸುತ್ತಾ ಫಾದರ್ ಅಗಸ್ಟಸ್ ಮುಲ್ಲರ್, ಡಾ. ಸ್ಯಾಮುವೆಲ್ ಹಾನ್ನಿಮನ್ ಮತ್ತು ಹೋಮಿಯೋಪಥಿಯ ಇತರ ದಿಗ್ಗಜರೊಂದಿಗೆ ಸಂಬಂಧ ಹೊಂದಿದ್ದು ಮಹತ್ವದ ಇತಿಹಾಸ ಮತ್ತು ಪರಂಪರೆ ಇರುವ ಫಾದರ್ ಮುಲ್ಲರ್ ಸಂಸ್ಥೆಯನ್ನು ತಮ್ಮ ವೈದ್ಯಕೀಯ ಶಿಕ್ಷಣಕ್ಕೆ ಆರಿಸಿಕೊಂಡಿದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಆಡಳಿತಾದಿಕಾರಿಯಾದ ವಂದನೀಯ ರೋಶನ್‍ಕ್ರಾಸ್ತಾರವರು ಗುಣಮಟ್ಟದ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಪ್ರವರ್ತಕ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ಸಂಸ್ಥೆಯನ್ನು ಆಯ್ಕೆ ಮಾಡಿರುವವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳು ನಿರಂತರವಾಗಿ ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ಹೊಂದಿಕೆಯಾಗಬೇಕು, ಜ್ಞಾನದಿಂದ ನವೀಕರಿಸಬೇಕು ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಕ್ಲಿನಿಕಲ್ ಅನುಭವದ ಮೂಲಕ ಸಮರ್ಥ ಹೋಮಿಯೋಪಥಿಗಳಾಗಬೇಕೆಂದು ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೊಸ ವಿದ್ಯಾರ್ಥಿಗಳನ್ನು ಫಾದರ್ ಮುಲ್ಲರ್ ಸಂಸ್ಥೆಗೆ ಸ್ವಾಗತಿಸಿ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಸ್ವಯಂ ಶಿಸ್ತಿನ ಮೂಲಕ ಯಶಸ್ವಿ ಹೋಮಿಯೋಪಥಿ ವೈದ್ಯರಾಗಬೇಕೆಂದು ಒತ್ತಾಯಿಸಿದರು.
ಶೈಕ್ಷಣಿಕ ಉಸ್ತುವಾರಿ ಡಾ.ಜಸಿಂತಾ ಮೊಂತೆರೋರವರು ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.ಡಾ. ಅನುಷ ಜಿ. ಸನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು
.

ಬೀಜಾಡಿ: ನಾಗಮಂಡಲೋತ್ಸವ ಧಾಮಿ೯ಕ ಕಾರ್ಯಕ್ರಮ ನೇರವೆರಿತು – ಮಾ.13 ಇಂದು ನಾಗಮಂಡಲೋತ್ಸವ


ಕುಂದಾಪುರ: ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವಾ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಕಾರ್ಯಕ್ರಮಗಳು ಭಾನುವಾರದಿಂದ ಆರಂಭಗೊಂಡವು.
ವೇದಮೂತಿ೯ ಶ್ರೀ ಮಧುಸೂಧನ ಬಾಯಿರಿ ಮಣೂರು ಇವರ ನೇತೃತ್ವದಲ್ಲಿ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೀ ಗಣಯಾಗ, ಪವಮಾನ ಹೋಮ, ಆಯುತ ಸಂಖ್ಯಾತಿಲ ಹೋಮ, ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ವಾಸ್ತು ರಾಕ್ಷೊಘ್ನ ಹೋಮ, ದಿಗ್ಬಲಿ ಕಾರ್ಯಕ್ರಮಗಳು ನಡೆಯಿತು.
ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಮಾ.13 ಇಂದು ನಾಗಮಂಡಲೋತ್ಸವ
ಮಾ.13ರಂದು ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಧಾಮಿ೯ಕ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.