ಬೀಜಾಡಿ: ನಾಗಮಂಡಲೋತ್ಸವ ಹಸಿರು ಹೊರೆಕಾಣಿಕೆ ಮೆರವಣಿಗೆ

ಕುಂದಾಪುರ: ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವಾ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆ ನಡೆಯಿತು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಚಾಲನೆ ನೀಡಿ ಶುಭ ಹಾರೈಸಿದರು. ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಪುರಮೆರವಣಿಗೆ ಸಂಚಾಲಕ ರಾಮನಾಯ್ಕ್, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಚಂಡೆವಾದನ, ಬ್ಯಾಂಡ್, ಭಜನೆ, ನಾಮಸಂಕೀರ್ತನೆ ಸೇರಿದಂತೆ ಕಳಸ ಹಿಡಿದ ಮಹಿಳೆಯರು ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಿದವು.


ಮಾ.12ರಂದು ಬೆಳಿಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿವಿಧ ಧಾಮಿ೯ಕ ಕಾರ್ಯಕ್ರಮಗಳು ಜರುಗಲಿದೆ. ಮಾ.13ರಂದು ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಧಾಮಿ೯ಕ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.

ಜೆಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ಕುಂದಾಪುರ ಚೈತನ್ಯ ವ್ರದ್ಧಾಶ್ರಮ ಸಭಾಗಂಣದಲ್ಲಿ ಜರುಗಿತು

ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ಕುಂದಾಪುರ ದ ಚೈತನ್ಯ ವ್ರಶಾಶ್ರಮ ಸಭಾಗಂಣದಲ್ಲಿ ಜರುಗಿತು
ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ವನ್ನು ಕುಂದಾಪುರ ದ ಪುರಸಭೆ ಮಾಜಿ ಸದ್ಯಸೆ ಸಿಸಿಲಿ ಕೋಟ್ಯಾನ್ ಉದ್ಘಾಟನೆ ನೆರೆವೇರಿಸಿದರು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ಗಿರೀಶ್ ಹೆಬ್ಬಾರ್ ಕಾರ್ಯಕ್ರಮ ದ ನಿಯೋಜಕರಾದ ರೇಷ್ಮಾ ಕೋಟ್ಯಾನ್ ಉಪಸ್ಥಿತರಿದ್ದರು
ಕೌಶಲ್ಯ ಅಭಿವೃದ್ಧಿ ಹಾಗು ಮಾಹಿತಿ ಕಾರ್ಯಕ್ರಮ ವನ್ನು ವಲಯ ತರಬೇತಿ ಹಾಗು ಜೆಸಿಐ ಕಲ್ಯಾಣಪುರ ದ ಅಧ್ಯಕ್ಷ ರಾದ ಅನಿತಾ ನರೇಂದ್ರ ತರಬೇತಿ ನೀಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಮಹ್ಹಿಳಾ ಅಧ್ಯಕ್ಷೆ ಪ್ರೇಮ ಸ್ವಾಗತಿಸಿ ಪೂರ್ವ ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್ ವಂದಿಸಿದರು

International Women’s Day Celebration held at Shubadha Centre, Suralpady

Mangaluru, Mar 8: Shubadha Social Service Centre, Suralpady celebrated International Women’s Day on March 8, 2023 at 06:30pm at Shubadha short stay home for women, Suralpady, Kinnikambla. St Raymond’s Degree College, Vamanjoor NSS unit collaborated with the programme.

Mrs Anitha Norbert DSouza, the Panchayat member of Ganjimat Gram Panchayat was the chief guest. Sr Anna Maria BS the Secretary of Shubadha Society, Suralpady presided over the programme. Sr Herita Monthi Mathias BS the Director of Shubadha Centre, Sr Jessy Crasta the Principal of St Raymond’s Degree College, Dr Sujana NSS Programme Coordinator, Mrs Theresa Rego the senior woman form the locality, Mrs Sumathi, the President of Deepa SHG Suralpady were present on the dais.  

Sr Anna Maria BS in her presidential address spoke about the history of Women empowerment and highlighted some of the facts wherein women should assert their rights in the family and society. She highlighted the achievements of great female personalities. She assured the women present on the occasion to carry on women empowerment activities in the neighbourhood. NSS students performed two dances and entertained the audience. Sr Herita Mathias BS welcomed the guests and the members present. She also conducted the spot games. The winners were awarded on the occasion.

Ms Vinutha Kulal the Lecturer from St Raymond’s Degree College expressed sentiments of gratitude on the occasion for all the guests and the participants. Ms Nathasha Noronha NSS student leader compeered the day’s programme. Mrs Theresa Rego was honoured being a senior most woman among the participants. There were around 60 participants such as neighbourhood women, Deepa SHG members, St Raymond’s College staff and NSS students, Shubadha staff and inmates were present for the programme. It was winded at 8.00pm. The refreshments were served on the occasion. 

Report by; Sr Anna Maria BS

2022 ರ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ರೇಂಕ್ ಗಳು

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್‍ಕಾಲೇಜಿಗೆಎಂಟು ರ್ಯಾಂಕ್‍ಗಳು ದೊರಕಿವೆ.
ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರುತಾಲೂಕಿನಯಡ್ತೆರೆಗ್ರಾಮದಗೋವಿಂದ ಪೂಜಾರಿಅವರ ಪುತ್ರಿ ದೀಕ್ಷಾಅವರಿಗೆ ನಾಲ್ಕನೇ ರ್ಯಾಂಕ್ ಮತ್ತು ಬೈಂದೂರುತಾಲೂಕಿನಕೊಡೇರಿಗ್ರಾಮದ ಕೃಷ್ಣ ಪೂಜಾರಿಅವರಅವರ ಪುತ್ರಿರಮಿತಾಅವರಿಗೆಆರನೇರ್ಯಾಂಕ್‍ಕುಂದಾಪುರದಕಂದಾವರಗ್ರಾಮದ ನಾಗಭೂಷಣಅವರ ಪುತ್ರಿ ಸ್ಪೂರ್ತಿಅವರಿಗೆಎಂಟನೇರ್ಯಾಂಕ್, ಬೈಂದೂರುತಾಲೂಕಿನ ಗೋಳಿಹೊಳೆ ಗ್ರಾಮದರವೀಂದ್ರ ಶೆಟ್ಟಿಅವರ ಪುತ್ರರಕ್ಷಿತ್‍ಕುಮಾರ್ ಶೆಟ್ಟಿಅವರಿಗೆಒಂಬತ್ತನೇರ್ಯಾಂಕ್‍ದೊರೆತಿದೆ.
ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿಉತ್ತರಕನ್ನಡಜಿಲ್ಲೆಯಕುಮಟಾತಾಲೂಕಿನಗುರುದತ್ತ ಪೈ ಅವರ ಪುತ್ರ ಸನತ್‍ಗುರುದತ್ತ ಪೈ ಅವರಿಗೆ ಏಳನೇ ರ್ಯಾಂಕ್‍ದೊರೆತಿದೆ.
ಬಿ ಕಾಂ ಪರೀಕ್ಷೆಯಲ್ಲಿಕುಂದಾಪುರದತಾಲೂಕಿನಕೋಟೇಶ್ವರಗ್ರಾಮದ ಪ್ರಸನ್ನ ಹೆಬ್ಬಾರ್‍ಇವರ ಪುತ್ರಿಪ್ರತೀಕ್ಷಾಇವರಿಗೆಒಂಬತ್ತನೇರ್ಯಾಂಕ್‍ದೊರೆತಿದೆ.
ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿಕುಂದಾಪುರದ ಹೆಮ್ಮಾಡಿಗ್ರಾಮದಅಬ್ದುಲ್‍ರೆಹಮಾನ್‍ಅವರ ಪುತ್ರಿ ಶಾಹಿನಾ ಅವರಿಗೆಆರÀನೇರ್ಯಾಂಕ್ ಮತ್ತುಕುಂದಾಪುರದ ಆಸ್ಟಿನ್ ಮೆಂಡೊನ್ಸಾಅವರ ಪುತ್ರಿ ಅಲಸ್ಟಿನ್ ಮೆಂಡೊನ್ಸಾಅವರಿಗೆ ಏಳನೇ ರ್ಯಾಂಕ್‍ದೊರೆತಿದೆ.
ಇವರಿಗೆಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ ವಿಜೇತರು:
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್‍ಕಾಲೇಜಿನಇಬ್ಬರೂ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊರಕಿವೆ.
ಎ.ಬಿ ಶೆಟ್ಟ ಶತಮಾನೋತ್ಸವ ಸಮಿತಿ, ಬಂಟ್ಸ್‍ಯಾನೆ ನಾಡವರ ಸಂಘ ಮಂಗಳೂರುಇವರುಕೊಡುವಎ.ಬಿ ಶೆಟ್ಟಿ ನಗದು ಬಹುಮಾನವುಬಿಕಾಂ ವಿದ್ಯಾರ್ಥಿನಿಎಸ್.ಕುಮಾರ್‍ಅವರ ಪುತ್ರಿ ಪಂಚಮಿ)ಅವರಿಗೆದೊರೆತಿದೆ.
ಶ್ರೀ ಮಹಾವೀರಕಾಲೇಜು ಮೂಡಬಿದ್ರಿ ಇವರು ನೀಡುವಡಾ.ಟಿ.ಎಮ್.ಎ ಪೈ ನಗದು ಬಹುಮಾನವು ಬಿ.ಎಸ್.ಸಿ ವಿದ್ಯಾರ್ಥಿನಿಕುಂದಾಪುರದಚಂದ್ರಶೇಖರಅವರ ಪುತ್ರಿ ದೀಪ್ತಿ ಶೇರೇಗಾರ್‍ಅವರಿಗೆದೊರೆತಿದೆಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ಮಾ.15 : ಸ್ವರ್ಣ ಪಲ್ಲಕ್ಕಿ ಪುರಪ್ರವೇಶ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರಿಗೆ ಸಮರ್ಪಣೆಯಾಗಲಿರುವ ಸ್ವರ್ಣ ಪಲ್ಲಕ್ಕಿಯ ಪುರಪ್ರವೇಶ ಮಾ.15 ರಂದು ಬುಧವಾರ ಜರುಗಲಿದೆ. ಅಂದು ಸಾಯಂಕಾಲ ಘಂಟೆ 6ಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಶಾಸ್ತ್ರಿ ಸರ್ಕಲ್‍ನಲ್ಲಿ ಸ್ವಾಗತಿಸಿ ಪುರ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂಬುದಾಗಿ ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಮಾ.19 ಸ್ವರ್ಣ ಪಲ್ಲಕ್ಕಿ ಸಮರ್ಪಣೆ
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಪಲ್ಲಕ್ಕಿಯ ಸಮರ್ಪಣಾ ಸಮಾರಂಭ ಮಾ.19 ರಂದು ಆದಿತ್ಯವಾರ ಜರುಗಲಿದೆ. ಅಂದು ಮಧ್ಯಾಹ್ನ ಘಂಟೆ 3ಕ್ಕೆ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸ್ವರ್ಣ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ ಎಂಬುದಾಗಿ ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಕೋಟೆಶ್ವರ ಚರ್ಚಿನ ಧರ್ಮಗುರುಗಳಾದ ವಂ|ಸಿರಿಲ್ ಮಿನೆಜೆಸ್ ಇವರ 75 ನೇ ಹುಟ್ಟುಹಬ್ಬದ ಸಂಭ್ರಮ


ಕೋಟೆಶ್ವರ, ಮಾ.11 : ಕೋಟೆಶ್ವರ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಇವರ 75 ನೇ ಹುಟ್ಟು ಹಬ್ಬದ ಸಂಭ್ರಮವನ್ನು ಕೋಟೆಶ್ವರ ಚರ್ಚಿನ ವಿಶ್ವಾಸಿಗಳು, ಅವರು ಹುಟ್ಟಿದ ದಿನವೇ, ಮಾರ್ಚ್ 10 ರಂದು ಸಂಜೆ ಆಚರಣೆಯನ್ನು ಚರ್ಚಿನಲ್ಲಿ ಆಚರಿಸಿದರು.
ಮೊದಲಿಗೆ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಅವರು ದೇವರಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕಟ್ಕಕೆರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಅಲ್ವಿನ್ ಸೀಕ್ವೆರಾ ತಮ್ಮ ಸಂದೇಶದಲ್ಲಿ “ವಂ|ಸಿರಿಲ್ ಮಿನೆಜೆಸ್ ಅವರು ಜೀವನದಲ್ಲಿ ಸುದಿರ್ಘ ಪಯಣ ಮಾಡಿದ್ದಾರೆ, ದೇವರು ಅವರಿಗೆ 75 ವರ್ಷದ ಜಿವಿತವನ್ನು ಅನುಗ್ರಹಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬದ ಅಮ್ರತ್ಸೋವನ್ನು ಆಚರಿಸುತ್ತಿದ್ದೆವೆ, ಅವರು ಬೆಳೆದು ಬರುತ್ತಾ, ತಮ್ಮ ಜೀವನ ನನ್ನದಲ್ಲ ಎಂದು ತಿಳಿದುಬಂದು ಅವರು ತಮ್ಮ ಜೀವನವನ್ನು ಯೇಸು ಕ್ರಿಸ್ತರಿಗೆ ಅರ್ಪಿಸಲಿಕ್ಕಾಗಿ, ಯಾಜಕರಾಗಲು ಬಯಸಿ ಬಹಳ ಹಿಂದೆ ಅವರು ಯಾಜಕಿ ದೀಕ್ಷೆ ಪಡೆದು, ಇಂದು ಅವರು ಒರ್ವ ಉತ್ತಮ ಧರ್ಮಗುರುಗಳಾಗಿ ಹೆಸರು ಪಡೆದಿದ್ದಾರೆ. ಅವರು ತಮ್ಮ ಧರ್ಮಗುರುಗಳ ಜೀವನದಲ್ಲಿ ಇತರರ ಬಗ್ಗೆ ಚಿಂತಿಸುವುದು, ಕಾಳಜಿ ವಹಿಸುವುದು ಹೆಚ್ಚಾಗಿತ್ತು. ಎಲ್ಲಾ ವೇಳೆ ಅವರು ಇತರರಿಗೆ ಒಳಿತಾಗಲು ಪ್ರಯತ್ನಿಸಿದರು. ಅವರ ಜೀವನ ತಾಳ್ಮೆ, ನಯ ವಿನಯಗಳಿಂದ ಕೂಡಿದ್ದು ಅವರ ಜೀವನ ನಮಗೆ ಒಂದು ಪ್ರೇರಣೆಯಾಗಿದೆ” ಎಂದು ಸಂದೇಶ ನೀಡಿ “ಮುಂದೆ ದೇವರು ಇನ್ನೂ ಹೆಚ್ಚು ಅಯರಾರೋಗ್ಯ ನೀಡಲಿ” ಎಂದು ಶುಭ ಹಾರೈಸಿದರು.
ಹುಟ್ಟು ಹಬ್ಬದ ಆಚರಣೆಯ ವೇಳೆ ವಂ|ಸಿರಿಲ್ ಮಿನೆಜೆಸ್ “ತಮಗೆ ಇಷ್ಟು ಪ್ರೀತಿ ಕಾಳಜಿ ವಹಿಸಿ ನನ್ನ 75 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದಕ್ಕೆ ಚರ್ಚಿನ ಜನತೆಗೆ, ಪಾಲನ ಮಂಡಳಿಗೆ, ಹುಟ್ಟು ಹಬ್ಬದ ಕ್ರತಜ್ಞಪೂರ್ವಕ ಬಲಿದಾನದಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದ ಫಾ|ಆಲ್ವಿನ್ ಸಿಕ್ವೇರಾ, ಫಾ| ದೀಪ್ ಫೆರ್ನಾಡಿಸ್ ಫಾ|ಫ್ರಾನ್ಸಿಸ್ ಸೋಜಾ, ಪಾಲನಮಂಡಳಿ ಉಪಾಧ್ಯಕ್ಷ ತಿಯೋದೊರ್ ಡಿಮೆಲ್ಲೊ, ಕೋಟೆಶ್ವರ ಸಂತ ಆಂತೋನಿ ವ್ರದ್ದಾಶ್ರಮದ ಮುಖ್ಯಸ್ಥೆ ಸಿಸ್ಟರ್ ಅವಿತಾ ಮೊಂತೇರೊ ಇವರಿಗೆ ಮತ್ತು ತಮ್ಮ ಹುಟ್ಟುಹಬ್ಬ ಆಚರಣೆಗೆ ಸಹಕರಿಸಿದವರಿಗೆಲ್ಲ ಕ್ರತಜ್ಞತೆ ಸಲ್ಲಿಸಿದರು.
ಚರ್ಚಿನ ಆಯೋಗಗಳ ಸಂಚಾಲಕಿ ವಿವೀಟಾ ಡಿಆಲ್ಮೇಡಾ, ಫಾ|ಸಿರಿಲ್ ಮಿನೆಜೆಸ್ ಇವರ ಪರಿಚಯ ನೀಡಿದರು. ಪಾಲನಮಂಡಳಿ ಕಾರ್ಯದರ್ಶಿ ಮರಿಯಾ ಮಸ್ಕರೇನ್ಹಸ್ ಧನ್ಯವಾದಗಳನ್ನು ಅರ್ಪಿಸಿದರು. ಸದಸ್ಯೆ ವೀಣಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.