

ಪಟ್ಟಣದ ಎಂಜಿ ರಸ್ತೆಯಲ್ಲಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆ ಪ್ರಯುಕ್ತ 108 ಲೀಟರ್ ಕ್ಷೀರಾಭಿಷೇಕ ಕಾರ್ಯಕ್ರಮವು ತಾಲೂಕು ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಮೋಹನಾಚಾರಿ ನೇತೃತ್ವದಲ್ಲಿ ನಡೆಯಿತು. ಅರ್ಚಕ ಮಂಜುನಾಥಚಾರಿ ನಡೆಸಿಕೊಟ್ಟರು. ಮುಖಂಡರಾದ ರುದ್ರಪ್ಪ ಚಾರಿ, ಕೆ.ರತ್ನಚಾರಿ, ಕಾಳಾಚಾರಿ, ರವಿಚಂದ್ರಚಾರಿ, ರಾಮಚಂದ್ರಚಾರಿ, ಕೆ.ರಾದಮ್ಮ, ಕಾಳಮ್ಮ, ರಮೇಶ್ ಇದ್ದರು.