ಹುತ್ಮಾತ ಯೋಧರಿಗೆ ಶ್ರಧಾಂಜಲಿ- ಬ್ಲಾಕ್ ಕಾಂಗ್ರೆಸ್ ಕುಂದಾಪುರ

JANANUDI.COM NETWORK

 

 

ಹುತ್ಮಾತ ಯೋಧರಿಗೆ ಶ್ರಧಾಂಜಲಿ- ಬ್ಲಾಕ್ ಕಾಂಗ್ರೆಸ್ ಕುಂದಾಪುರ 

 

 

 

ಕುಂದಾಪುರ, ಜೂ.18: ಭಾರತ ಚೀನ ಗಡಿ ರೇಖೆಯಲ್ಲಿ ಸೋಮವಾರ ರಾತ್ರಿ ನಡೆದಂತ ಹಿಂಸಾತ್ಮಕ ಸಂಘರ್ಷದಲ್ಲಿ ವೀರ ಮರಣವನ್ನು ಹೊಂದಿದ ಭಾರತ ಸೇನೆಯ ಕಮಾಂಡರ್ ಸೇರಿ 20 ಯೋಧರ ಆತ್ಮಕ್ಕೆ ಶ್ರದ್ದಾಂಜಲಿಯನ್ನು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಛೇರಿಯಲ್ಲಿ ಸಂಜೆ 5 ಗಂಟೆಗೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸನ ಮಾಜಿ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ‘ಚೀನಾ ದೇಶ ಒಂದು ಬಲಿಷ್ಟ ದೇಶವಾಗಿದ್ದರೂ, ಇಂತಹ ಮೋಸದ ಕಾರ್ಯಚರಣೆಯನ್ನು ಮಾಡಿದ್ದು ಸರಿಯಲ್ಲ. ಇದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ಭಾರತ ದೇಶಕ್ಕೆ ಇದೆ’ ಎನ್ನುತ್ತಾ ಅಗಲಿದ ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಹಿರಿಯ ನಾಯಕರಾದ ಕೆ.ಎಫ್.ಟಿ.ಸಿ. ಮಾಜಿ ಅಧ್ಯಕ್ಷರಾದ ಬಿ.ಹಿರಿಯಣ್ಣನವರು ಮಾತನಾಡಿ ‘ದೇಶಕ್ಕೆ ಗಟ್ಟಿ ನಾಯಕತ್ವದ ಕೊರತೆಯಿದೆ. ಇಂತಹ ಸಾವು ನಮ್ಮ ಯೋಧರಿಗೆ ಬರಬಾರದಿತ್ತು.ಗುಪ್ತಚರ ಇಲಾಖೆಯ ವೈಪಲ್ಯವಿರುವುದು ಸ್ಪಷ್ಟವಾಗಿದೆಯೆಂದು’ ಯೋಧರಿಗೆ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಅಗಲಿದ ಯೋಧರ ಭಾವ ಚಿತ್ರಕ್ಕೆ ಪುಷ್ಪಾಚರಣೆ ಮತ್ತು ಮೌನ ಪ್ರಾರ್ಥನೆ ನೆರವೇರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿ ಪ್ರಸಾದ್ ಶೆಟ್ಟಿ ಕಾನ್ಮಕ್ಕಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಐ.ಟಿ. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರ ಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಮಹ್ಮದ್ ಅಶ್ಪಕ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ, ಡಿಜಿಟಲ್ ಯುತ್ ತಾಣದ ಸಂಯೋಜಕ ರೋಶನ್ ಶೆಟ್ಟಿ, ಮಾಜಿ ಪುರಸಭಾ ಸದಸ್ಯರಾದ ಪ್ರಭಾಕರ ಕೋಡಿ, ಸದಾನಂದ ಖಾರ್ವಿ, ಅಶೋಕ ಸುವರ್ಣ, ಜ್ಯೋತಿ ಡಿ ನಾಯ್ಕ್ ಕೋಡಿ, ಸುನೀಲ್ ಪೂಜಾರಿ, ವಿರೇಂದ್ರ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.