ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ

JANANUDI.COM NETWORK

 

 

ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ 

 

 

ಕುಂದಾಪುರ, ಎ.19: ಸ್ಥಳಿಯ ಆದರ್ಶ ಆಸ್ಪತ್ರೆ ತನ್ನ ಸಂಗಮ್  ಸೇತುವೆ ಹತ್ತಿರ ನೂತನ  ಕಟ್ಟಡದಲ್ಲಿ  ತನ್ನ ಕಾರ್ಯವ್ಯಾಪ್ತಿಯನ್ನು ಆರಂಭಿಸಿ ಕೆಲವು ತಿಂಗಳುಗಳೇ ಆಗಿದ್ದು. ಈ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೊರೊನಾ ಐಸೋಲೇಶನ್ ವಾರ್ಡ್ ಆಗಿ ಮಾರ್ಪಡಲು ಆಡಳಿತ ಮಂಡಳಿ ಬಿಟ್ಟು ಕೊಟ್ಟಿದ್ದು, ಇದೀಗ ಇಲ್ಲಿ ಕೊರೊನಾ ಶಂಕೆಯ ಗಂಟಲು ದ್ರವ ಪರೀಕ್ಷಾ ಕೇಂದ್ರವನ್ನು ಕುಂದಾಪುರ ಸಹಾಯಕ ಆಯುಕ್ತರಾದ ಕೆ.ರಾಜು ಉದ್ಘಾಟಿಸಿದರು.

   ಇದನ್ನು ರೋಟರಿ, ಕುಂದಾಪುರ, ಸಿದ್ದಾಪುರ   ವೆಲ್ ಫೇರ್‍  ಚಾರಿಟೇಬಲ್ ಟ್ರಸ್ಟ್ ವತಿಯಿಂದ 40 ಸಾವಿರ ವೆಚ್ಚದ ಈ ಉಪಕರಣೆಯನ್ನು ನೀಡಿದ್ದಾರೆ. ಈ ಸಂದರ್ಭ  ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ|ನಾಗಭೂಶಣ್ ಉಡುಪ, ರೋಟರಿ ಕ್ಲಬ್ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿದರು.

    ಈ ಸಂದರ್ಭದಲ್ಲಿ ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಡಾ|ರಾಜಾರಾಮ್ ಶೆಟ್ಟಿ , ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ, ಫಿಜಿಶಿಯನ್  ಡಾ|ನಾಗೇಶ್ ಮತ್ತಿ ಇತರ ವೈದ್ಯರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.