ಸ್ಥಳದಲ್ಲಿ ಐಪಿಎಲ್ ಬೆಟ್ಟಿಂಗ್ ಕುಂದಾಪುರದ ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ : 7 ಜನರ ಬಂದನ- ಹೈದ್ರಾಬಾದ್ ಸನ್ ರೈಸರ ಹಾಗೂ ಕಿಂಗ್ಸ ಇಲೇವನ್ ಪಂಜಾಬ್ ಮ್ಯಾಚ್

JANANUDI.COM NETWORK

ಕುಂದಾಪುರ, ದಿನಾಂಕ  08.09.2020 ರಂದು   19:10 ಗಂಟೆಗೆ ಅರೋಪಿಗಳು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಮಾಕೇಟ್  ಬಳಿ  ಸಾರ್ವಜನಿಕ   ಸ್ಥಳದಲ್ಲಿ  ಅಕ್ರಮವಾಗಿ ಗುಂಪು ಗೂಡಿಕೊಂಡು ಅಂದು  ನಡೆಯುತಿದ್ದ ಐಪಿಎಲ್ ಮ್ಯಾಚನ್ ಟೀಮ್‌ಗಳಾದ     ಹೈದ್ರಾಬಾದ್ ಸನ್ ರೈಸರ ಹಾಗೂ  ಕಿಂಗ್ಸ ಇಲೇವನ್ ಪಂಜಾಬ್ ಕ್ರಿಕೆಟ್  ಸ್ಕೋರ್‌‌ನ  ಮೇಲೆ  0 ಯಿಂದ  9  ಸಂಖ್ಯೆ ಒಳಗೆ ಯಾವುದಾದರು  ಸಂಖ್ಯೆಗೆ  200/- ರೂ   ಕಟ್ಟಿದರೆ,  ಅದಕ್ಕೆ ವಿನ್ನಿಂಗ್    ನಂಬ್ರಕ್ಕೆ  1500/ ರೂ  ಕೊಡುವುದಾಗಿ ಹೇಳುತ್ತಾ  ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ  ಆಟ  ಆಡುತ್ತಿದ್ದರು ,

ಈ ಸಮಯದಲ್ಲಿ  ಖಚಿತ  ಮಾಹಿತಿಯಂತೆ ದಾಳಿ ನಡೆಯಿಸಿದ  ಶಂಕರನಾರಾಯಣ ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀಧರ ನಾಯ್ಕ ಮತ್ತು ತಂಡ ಕ್ರಿಕೆಟ್ ಬೆಟ್ಟಿಂಗ್  ಜುಗಾರಿ  ಆಟಕ್ಕೆ  ಬಳಸಿದ  ಮೊಬೈಲ್ ಪೋನ್-1  ನಗದು ಹಣ  3300/- ಕ್ರಿಕೆಟ್  ಸ್ಕೋರನ  ಸಂಖ್ಯೆ ಬರೆದ   ಚೀಟಿಯನ್ನು  ವಶಪಡಿಸಿಕೊಂಡು ಆರೋಪಿಗಳಾದ 7 ಜನರರನ್ನು ಬಂದಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಬಂದಿತರ ವಿವರ ಈ ರೀತಿ ಇದೆ ಸುಬ್ರಹ್ಮಣ್ಯ ಕೊಠಾರಿ (36), ತಂದೆ: ಮಂಜುನಾಥ ಕೊಠಾರಿ,ಸಂತೋಷ ಶೆಟ್ಟಿ (26) ತಂದೆ: ರಾಜೀವ ಶೆಟ್ಟಿ, ಕಿರಣ್ ಪೂಜಾರಿ( 19), ತಂದೆ: ಚಂದ್ರಪೂಜಾರಿ, ವಿವೇಕ ಶೆಟ್ಟಿ (29)ತಂದೆ: ಶೇಖರ ಶೆಟ್ಟಿ, ಅಕ್ಷಯ ಪೂಜಾರಿ(23) ತಂದೆ: ಅಶೋಕ ಪೂಜಾರಿ, ಜಯ ಶೆಟ್ಟಿ(36) ತಂದೆ:ನಾರಾಯಣ ಶೆಟ್ಟಿ, ಅಪ್ಸರ್ ಪ್ರಾಯ 25 ವರ್ಷತಂದೆ ಅನ್ವರ ಭಾಷ