ಸಾಂಸ್ಕøತಿಕ ಸ್ಪರ್ಧೆಗಳಲ್ಲಿ  ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು:  ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

JANANUDI.COM NETWORK

 

 

ಸಾಂಸ್ಕøತಿಕ ಸ್ಪರ್ಧೆಗಳಲ್ಲಿ  ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು:  ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

 

ತಾ- 30-11-19 ರಂದು ಚಿಕ್ಕಮಗಳೂರಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವಲಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನಗಳಿಸಿ ರಾಜ್ಯಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸುವ ಅರ್ಹತೆಗಳಿಸಿದ್ದಾರೆ. ಅಭಿಲಾಷ್ ಹತ್ವಾರ್ ಹಾಗೂ ಭರತ್ ಬಿ. ದ್ವಿತೀಯ ಪಿ.ಯು.ಸಿ. ಕ್ವಿಜ್‍ನಲ್ಲಿ ಪ್ರಥಮ, ಶಾನಲ್ ಪ್ರಜ್ವಲ್ ಸಾಲಿನ್ಸ್ ಹಾಗೂ ಸ್ತುತಿ ಪ್ರಥಮ ಪಿ.ಯು.ಸಿ. ಕ್ವಿಜ್‍ನಲ್ಲಿ ತೃತೀಯ, ರೋಹಿತ್ ಆಚಾರ್ಯ ಡ್ರಾಯಿಂಗ್‍ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕಾಲೇಜಿನ ಸಂಚಾಲಕರಾದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ. ಬಿ.ಎಂ. ಸುಕುಮಾರ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು & ಅದ್ಯಾಪಕರು ಇವರನ್ನು ಅಭಿನಂದಿಸಿದ್ದಾರೆ.