ಸಚಿವಾಲಯದಿಂದ ಅನುಮೋದನೆ ಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳ ವಿತರಣೆ

JANANUDI.COM NETWORK

 

 

ಸಚಿವಾಲಯದಿಂದ ಅನುಮೋದನೆ ಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳ ವಿತರಣೆ

 

 

 

ಕುಂದಾಪುರ, ಜೂ. 19: ಕೊವೀಡ್ 19 ರೋಗವನ್ನು ತಡೆಕಟ್ಟುವ ಸಲುವಾಗಿ ಆಯುಷ್ ಸಚಿವಾಲಯದಿಂದ ಅನುಮೋದನೆ ಗೊಂಡ ರೋಗ ನಿರೋಧಕ ಔಷಧಿಗಳಾದ ಸಂಶಮಣಿ ಮತ್ತು ಆರ್ಕ್ ಅಜೀಬ್ ಗಳನ್ನು ಜೂನ್ 19 ರಂದು ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಯ ಘಟಕದಲ್ಲಿ ವಡೇರ್ ಹೊಬ್ಳಿಯ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಹಾಗೂ ಅವರ ಅವಲಂಬಿತ ಸುಮಾರು 50 ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ವಿತರಣೆಯನ್ನು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ|ನಾಗಭೂಷಣ ಉಡುಪ ಇವರು ನೇರವೆಸಿದರು. ಇಲ್ಲಿನ ಹಿರಿಯ ವೈದ್ಯಾಧಿಕಾರಿ ಡಾ|ಅಶೋಕ್ ಹೆಚ್. ಆಯುರ್ವೇದದ ಪ್ರಾಮುಖ್ಯತೆ ಮತ್ತು ಔಷಧಿಗಳನ್ನು ಬಳಸುವ ರೀತಿಯನ್ನು ವಿವರಿಸಿದರು.
ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಡಾ|ಸೋನಿ ಡಿಕೋಸ್ತಾ ಮಾತನಾಡಿ ಸಂಘದ ಸದಸ್ಯರು ಮುಂದಿನ ದಿನಗಳಲ್ಲಿ ಆಯುರ್ವೇದದ ಸದುಪಯೋಗವನ್ನು ಪಡೆಯುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಅವಲಂಬಿತರು ಹಾಜರಿದ್ದರು.