ಸಂತ್ರಸ್ತರ ನೆರವಿಗಾಗಿ ಕೆಥೊಲಿಕ್ ಸಭಾ ಕುಂದಾಪುರ ವಲಯದಿಂದ ನಗದು ಮತ್ತು ಅಗತ್ಯ ವಸ್ತುಗಳ ಕೊಡುಗೆ

JANANUDI.COM NETWORK

ಸಂತ್ರಸ್ತರ ನೆರವಿಗಾಗಿ ಕೆಥೊಲಿಕ್ ಸಭಾ ಕುಂದಾಪುರ ವಲಯದಿಂದ ನಗದು ಮತ್ತು ಅಗತ್ಯ ವಸ್ತುಗಳ ಕೊಡುಗೆ

ಕುಂದಾಪುರ, ಆ.22: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರ ನೆರವಿಗಾಗಿ ಕೆಥೊಲಿಕ್ ಸಭಾ ಕುಂದಾಪುರ ವಲಯವು , ವಲಯದ ಚರ್ಚಗಳ ಸಹಾಯದಿಂದ  4,28,947.00 ರೂಪಾಯಿ ಮೌಲ್ಯದ ಅಗತ್ಯ ವಸ್ತುಗಳು ಹಾಗೂ 50,500   ರೂಪಾಯಿಗಳನ್ನು ಸಂತ್ರಸ್ತರಿಗೆ ವಿತರಿಸಲು ಉಡುಪಿ ಧರ್ಮ ಪ್ರಾಂತ್ಯಕ್ಕೆ ಕಳುಹಿಸಿ ಕೊಡಲಾಯಿತು.

   ಕುಂದಾಪುರ ವಲಯದ  ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಮತ್ತು ಕುಂದಾಪುರದ್ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಮತ್ತು    ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಪದಾಧಿಕಾರಿಗಳು ಹಾಜರಿದ್ದರು. ಸಂಗ್ರಹಿಸಿದ ವಸ್ತುಗಳನ್ನು ಕಾರವಾರ, ಶಿವಮೊಗ್ಗ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಿಗೆ ಸ್ವತಃ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪ್ರತಿನಿಧಿಗಳ ತೆರಳಿ ನೆರೆಪೀಡಿತ ಸಂತ್ರಸ್ತರಿಗೆ ಹಸ್ತಾಂತರಿಸಲಿದ್ದಾರೆ.