ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ನಿರ್ಗತಿಕರ ಮಾಶಾಸನವನ್ನು ವಿತರಣೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ನಿರ್ಗತಿಕರ ಮಾಶಾಸನವನ್ನು ವಿತರಣೆ
************************************************************************************

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕೋಲಾರ ಜಿಲ್ಲಾ ಶ್ರೀನಿವಾಸಪುರ ತಾಲೂಕಿನದಾಂದ್ಯಂತ ಒಟ್ಟು-105ಬಡಕುಟುಂಬಗಳಿಗೆ ನಿರ್ಗತಿಕರ ಮಾಶಾಸನವನ್ನು ನೀಡುತ್ತಿದ್ದು, ಪ್ರಸ್ತುತ ರೋಣೂರು ವಲಯದ ಸೋಮಾಯಾಜಲಪಲ್ಲಿ ಕಾರ್ಯಕ್ಷೇತ್ರದಲ್ಲಿ ದಿನಾಂಕ : 08.07.2020ರಂದು ಲಕ್ಷ್ಮಮ್ಮ, ನಂಜಮ್ಮ, ನಾರೆಪ್ಪ& ವೆಂಕಟಲಕ್ಷ್ಮಮ್ಮ ಎಂಬುವರಿಗೆಪ್ರತಿ ತಿಂಗಳು ರೂ.750/-ರಂತೆನೂತನವಾಗಿ ಮಾಶಾಸನ ಮಂಜೂರಾಗಿದ್ದು, ರೋಣೂರು ವಲಯದ ಮೇಲ್ವಿಚಾರಕರಾದ ಶ್ರೀಯುತ ನರಸಿಂಹಮೂರ್ತಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಯುತ ಎಸ್.ಆರ್ ವೆಂಕಟೇಶ್‍ರಾವ್‍ ಹಾಗೂ ಸೋಮಯಾಜಲಪಲ್ಲಿ ಬಾಬುರಾವ್, ಮುನಿರೆಡ್ಡಿಮತ್ತು ಸೇವಾ ಪ್ರತಿನಿಧಿಯಾದ ಅಶ್ವತ್ಥಮ್ಮ, ಸಿದ್ದಪ್ಪ, ಮಂಜಳ ಹಾಗೂ ಸುವಿಧಾ ಸಹಾಯಕಿ ಮಂಜುಳರವರ ಉಪಸ್ಥಿತಿಯಲ್ಲಿ ಮಾಶಾಸನವನ್ನು ವಿತರಿಸಲಾಯಿತು.