ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿಗೆ ಕಾರ್ತಿಕ ಲಕ್ಷದೀಪೋತ್ಸವ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿಗೆ ಕಾರ್ತಿಕ ಲಕ್ಷದೀಪೋತ್ಸವ

 

 

ಕೋಲಾರ:- ತಾಲ್ಲೂಕಿನ ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆ ಹಾಗೂ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ, ಭಜನೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕಾರ್ತಿಕ ಕಡೆ ಸೋಮವಾರದ ವಿಶೇಷವಾಗಿ ಬೆಟ್ಟದಲ್ಲಿನ ಮಾರ್ಕಂಡೇಶ್ವರ ಸ್ವಾಮಿಗೆ ಇಡೀ ಎರಡೂ ದಿನ ಪೂಜಾ ಕಾರ್ಯಗಳು ನಡೆಯಲಿದ್ದು, ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮದ ಉಸ್ತುವಾರಿಯನ್ನು ಕನ್ವಿನರ್ ವೇಣುಗೋಪಾಲಗೌಡ, ಖಜಾಂಚಿ ಸಿ.ಎಂ.ವೆAಕಟೇಶಪ್ಪ, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿರಾಮು, ವಕ್ಕಲಿಗರ ಸಂಘದ ನಿರ್ದೇಶಕ ರಾಮು, ಜಿನ್ನಹಳ್ಳಿ ಮುನಿವೆಂಕಟಪ್ಪ, ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷಿö್ಮ ಮಂಜುನಾಥ್, ಗ್ರಾಮದ ವಿನಾಯಕ ಭಕ್ತ ಮಂಡಳಿ ಸದಸ್ಯರು ವಹಿಸಿಕೊಂಡಿದ್ದು, ಅನಿಲ್ ಕುಮಾರ್ ಅನ್ನಸಂತರ್ಪಣೆ ಮಾಡಲಿದ್ದಾರೆ.