ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಹಿರಿಯರಾದ ಕೆ.ಜಿ.ರಮಾನಂದ ಊಟದ ವ್ಯವಸ್ಥೆ ಮಾಡಿದರು

JANANUDI.COM NETWORK

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಅನಾಥರಿಗೆ: ಹಿರಿಯರಾದ ಕೆ.ಜಿ.ರಮಾನಂದ ಊಟದ ವ್ಯವಸ್ಥೆ ಮಾಡಿದರು

 

 

ಕುಂದಾಪುರ ಎ. 11.ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರೆ , ಕೆಲಸ ಕಾರ್ಯಾಕ್ಕೆ ಹೋಗಿ ಬರುವಂತ ಜನರಿಗೆ ಊಟ ಇಲ್ಲದೆ ಇದ್ದವರಿದ್ದಾರೆ, ಹಾಗೇ ಬಸ್ ಸ್ಟ್ಯಾಂಡ್ ಮತ್ತಿತರ ಕಡೆ ಇರುವ ಅನಾಥರಿದ್ದಾರೆ. ಇಂತವರಿಗಾಗಿ ಕುಂದಾಪುರ  ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಹಿರಿಯ ನಾಗರಿಕ ವೇದಿಕೆಯ ಮಾಜಿ ಅಧ್ಯಕ್ಷರಾದ ಕೆ.ಜಿ,ರಮಾನಂದ   ನಿನ್ನೆ ದಿನ (10-4-2020) ಮಧ್ಯಾನದ ಊಟದ ವ್ಯವಸ್ಥೆಯನ್ನು  ಮಾಡಿದರು.