ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ  ಶ್ರೀ ಮುನೇಶ್ವರ ಸ್ವಾಮಿದೇವಾಲಯದ ಆವರಣದಲ್ಲಿ  200 ಸಸಿಗಳನ್ನು ನಾಟಿ ಮಾಡಲು ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷ ಎಸ್. ಶಿವಮೂರ್ತಿಯಿಂದ ಚಾಲನೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ನುಕ್ಕನಹಳ್ಳಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿದೇವಾಲಯದಆವರಣದಲ್ಲಿ ಸುಮಾರು 200 ಸಸಿಗಳನ್ನು ನಾಟಿ ಮಾಡಲುರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದಎಸ್. ಶಿವಮೂರ್ತಿ ಚಾಲನೆ ನೀಡಿದರು.
ದೇವಾಲಯದಕೌಂಪೌಂಡ್ ಸುಮಾರು 3 ಎಕರೆಜಾಗದಲ್ಲಿ ನೇರಳೆ, ಬೆಟ್ಟದ ನಲ್ಲಿ, ಆಲ, ಬೇವು, ಕಾಡು ಬಾದಾಮಿ, ಹುಣಸೆ, ಹೊಂಗೆ ಗಿಡಗಳನ್ನು ನಾಟಿ ಮಾಡಲಾಯಿತು.
ಆವರಣದ ಸುತ್ತಲೂ ಈಗಾಗಲೆ ಕಲ್ಲುಚಪ್ಪಡಿಇದ್ದು, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದಕಬ್ಬಿಣದಗೇಟ್ ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಶ್ರೀನಿವಾಸಪುರರೋಟರಿ ಸೆಂಟ್ರಲ್ ಕಾರ್ಯದರ್ಶಿ Éಹೆಚ್. .ಎನ್. ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾನ್ಸಿಎಸ್.ಎನ್. ಮಂಜುನಾಥರೆಡ್ಡಿ, ಜಿ ಎಸ್‍ಆರ್. ಎಸ್.ವಿ. ಸುಧಾಕರ್, ಸದಸ್ಯರಾದಆನಂದ್ ಮೊದಲಾದವರು ಹಾಜರಿದ್ದರು