ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ 

JANANUDI.COM NETWORK

 

 

ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ 

 

 

ಕುಂದಾಪುರ, ಎ.15: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಇವತ್ತು ಕುಂದಾಪುರ ಪೆÇಲೀಸ್ ಉಪ ಅಧಿಕಾರಿಗಳ ಆಫಿಸಿನಲ್ಲಿ ವಲಯದ ಗ್ರಹದಳದ (ಹೋಮ್ ಗಾಡ್ರ್ಸ್) 30 ಮಂದಿಗೆ ಉಚಿತ ಆಹಾರ ಸಾಮಾಗ್ರಿ ಹಾಗೂ 200 ಮಾಸ್ಕ್ ಗಳನ್ನು ವಿತರಣೆ ಮಾಡಿದರು. ಅಲ್ಲದೆ ಕಲ್ಕತ್ತಾ ಮತ್ತು ಆಸ್ಸಾಮ್ ಮೂಲದ ಕಾರ್ಮಿಕರಿಗೂ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಹಾಗೂ ಕುಂದಾಪುರ ಹೋಲಿ ರೋಜರಿ ಚರ್ಚಿಗೆ 10 ಮಂದಿಗೆ ಆಗುವಸ್ಟು ಉಚಿತ ಆಹಾರ ಸಾಮಾಗ್ರಿಗಳ ಕಿಟ್ಟನ್ನು ಅಲ್ಲಿಯ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಹಾಗೂ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರಿಗೆ ಹಸ್ತಾಂತರ ಮಾಡಲಾಯಿತು.
ಕಳೆದ ವಾರದಿಂದ ನಮ್ಮ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದ ವಿವಿಧ ಭಾಗಗಳಲ್ಲಿನ ವಲಸೆ ಕಾರ್ನಿಕರಿಗೆ ಮಾಸ್ಕ್, ಸೀರೆ, ಸಾಬೂನು, ಟೆಂಟ್, ಮತ್ತು ಬೆಡ್ ಸೀಟಗಳನ್ನು ವಿತರಿಸುತ್ತಾ ಬಂದಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ್ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ ಆಚಾರ್ಯ, ಸೋನಿ ಡಿಕೋಸ್ತಾ, ಅಬ್ದುಲ್ ಬಶೀರ್, ನಾರಾಯಣ ದೇವಾಡಿಗ, ಮತ್ತು ವೀರೆಂದ್ರ ಗುತ್ತಾಲ್ ಇವರುಗಳು ಹಾಜರಿದ್ದರು.