ರಾಜೇಂದ್ರ ಭಟ್ ಅವರಿಗೆ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

 

 

ರಾಜೇಂದ್ರ ಭಟ್ ಅವರಿಗೆ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

 

 

ಪೇಜಾವರ ಶ್ರೀಯವರಿಂದ ಉದ್ಘಾಟನೆಗೊಂಡಿರುವ ಮುಂಬೈ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ 22ನೇ ವಾರ್ಷಿಕ ಧಾರ್ಮಿಕ ಮತ್ತು ಸಾಂಸ್ಕøತಿಕ ಉತ್ಸವವು ಡಿ. 21ರಂದು ಮಂಬೈಯ ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ ಸಮೀಪದ ಪೆಟ್ರೋಲ್ ಪಂಪ್ ಮತ್ತು ಫಾಯರ್ ಬ್ರಿಗೇಡ್ ಸಮೀಪದ ಶ್ರೀ ಅದಮಾರು ಮಠದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜೇಂದ್ರ ಭಟ್ ಕೆ. ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಗೌರವಿಸಲಿದ್ದಾರೆ.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ, ವಿಕಸನ ರಾಷ್ಟ್ರ ಮಟ್ಟದ ತರಬೇತುದಾರು, ಭಾರತೀಯ ಜೇಸಿಐನ ವಲಯ 15ರ ಪೂರ್ವವಲಯಾಧ್ಯಕ್ಷರು, ಟಿವಿ ನಿರೂಪಕರು, ಪ್ರಬುದ್ಧ ಭಾಷಣಕಾರರು, ಕಾರ್ಕಳ ತಾಲೂಕು ಇನ್ನ ಗ್ರಾಮದ ಎಂ.ವಿ.ಶಾಸ್ತ್ರೀ ಫ್ರೌಢಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರ ಸಾಧನೆಯನ್ನು ಪರಿಗಣಿಸಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್‍ರವರ ಅಧ್ಯಕ್ಷತೆಯ ಪ್ರತಿಷ್ಠಾನದಿಂದ ಈ ಗೌರವವನ್ನು ಸ್ವೀಕರಿಸುತ್ತಿದ್ದಾರೆ.