ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು 

JANANUDI.COM NETWORK

 

 

ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು 

 

 

 

 

ಕುಂದಾಪುರ, ಜೂ.28: ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ , ಬ್ಲಾಕ್ ಅಧ್ಯಕ್ಷರುಗಳಾದ ಶಂಕರ್ ಕುಂದರ್,  ಹರಿಪ್ರಸಾದ್ ಶೆಟ್ಟಿ ,ಡಿಜಿಟಲ್ ಯೂತ್ ಕಾಂಗ್ರೆಸ್ ಸಂಯೋಜಕರು ರೋಶನ್ ಶೆಟ್ಟಿ ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಯೋಗೀಶ್ ಇನ್ನಾ ,  ಅವರು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಡಿಜಿಟಲ್ ಯೂತ್ ಗಳಿಗೆ ಪ್ರತಿಜ್ಞಾ ಕಾರ್ಯಕ್ರಮದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ನಡೆಸಿ ಮಾತನಾಡಿದರು
      ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ , ಯುವ ಮುಖಂಡರಾದ ವಿಕಾಸ್ ಹೆಗ್ಡೆ , ವಿಶ್ವಾಸ್ ಶೆಟ್ಟಿ , ಸಂಪತ್ ಶೆಟ್ಟಿ ,ರಕ್ಷಿತ್ ಪೂಜಾರಿ , ಮುನಾಫ್ ಕೋಡಿ , ಗಣೇಶ ,ರೋಶನ ಬರೆಟ್ಟೋ,ಹೆಮಂತ ಕುಮಾರ ಕೆ,ಮಹಮದ ಸಲಾಮ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಚಂದ್ರಶೇಖರ ಖಾರ್ವಿ,ನಾರಾಯಣ ಆಚಾರಿ,ಕೇಶವ ಭಟ್,ಶಿವಕುಮಾರ್ ಅಣ್ಣಯ್ಯ ಪುತ್ರನ್,ಅಶೋಕ್ ಸುವರ್ಣ,ಸದಾನಂದ ಖಾರ್ವಿ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು , ಪ್ರತೀ ಪಂಚಾಯತ್ ವ್ಯಾಪ್ತಿಯ ಯುವ ಕಾಂಗ್ರೆಸ್ ಸಮಿತಿ ನಾಯಕರು ಉಪಸ್ಥಿತರಿದ್ದರು .
ವಿಶ್ವಾಸ್ ಅಮೀನ್ , ಶಂಕರ್ ಕುಂದರ್ , ಕಿಶನ್ ಹೆಗ್ಡೆ ಸಮಯೋಚಿತ ಮಾತನಾಡಿದರು .
    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ ಬಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.