ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಅನನ್ಯ ಭಟ್ ಮತ್ತು ಮೈಸೂರು ಎಕ್ಸ್ ಪ್ರೆಸ್ ನ ಸಂಗೀತ ಕಲರವ 

JANANUDI.COM NETWORK
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಅನನ್ಯ ಭಟ್ ಮತ್ತು ಮೈಸೂರು ಎಕ್ಸ್ ಪ್ರೆಸ್ ನ ಸಂಗೀತ ಕಲರವ 
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ 15ನೇ ವರ್ಷದ ಆಚರಣೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾದ ಕನ್ನಡದ  ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ಪ್ರಸಿದ್ಧ ಮೈಸೂರು ಎಕ್ಸ್ ಪ್ರೆಸ್ಸ್ ರಾಕ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ನೆರೆದ ಜನರ ಸಂಪೂರ್ಣ  ಮನೋರಂಜನೆಗೆ ಸಾಕ್ಷಿಯಾಯಿತು. ಕೆ ಜಿ ಎಫ್, ಉಗ್ರಂ, ಅಂಜನೀಪುತ್ರ, ಅಂತಹ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರುರು, ಬಿಗ್ ಬಾಸ್  ನ ಚಂದನ್ ಆಚಾರ್ ಆಗಮನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಿತು. ಕಾರ್ಯಕ್ರಮ ದ ನಿರೂಪಣೆಯನ್ನ ಪ್ರಸಿದ್ಧ ಆರ್ ಜೆ ಯಾಗಿರುವ ಸ್ಫೂರ್ತಿ ಯವರು ನಡೆಸಿ ಕೊಟ್ಟರು. 
ಕಾರ್ಯಕ್ರಮ ಕೊನೆಯಲ್ಲಿ ನಡೆದ ಡಿಜೆ ರಂಜು ಸಾರಥ್ಯದಲ್ಲಿ ನಡೆದ ಡಿಜೆ ನೈಟ್ ನಲ್ಲಿ ವಿದ್ಯಾರ್ಥಿಗಳು ಕುಣಿದು ತಮ್ಮ ಸಂತೋಷವನ್ನ ಹೆಚ್ಚಿಸಿಕೊಂಡರು.