ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿದ್ದ ಕೋಣಿ ರಮೇಶ್ ಹೆಬ್ಬಾರ್ ನಿಧನ

JANANUDI.COM NETWORK

 

 

ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿದ್ದ ಕೋಣಿ ರಮೇಶ್ ಹೆಬ್ಬಾರ್ ನಿಧನ. 

 

 

 

 

ಮುಂಬೈ ಸಿಮನ್ಸ ಕಂಪೆನಿಯ ಚೀಫ್ ಇಂಜಿನಿಯರ್ ಆಗಿ ಹಲವು ಮಹತ್ವದನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಹೊಂದಿರುವ ಕುಂದಾಪುರ ಕೋ ಣಿ ಗ್ರಾಮದ ರಮೇಶ್ ಹೆಬ್ಬಾರ್(80) ಮೇ.30ರಂದು ರಾತ್ರಿ ನಿಧನರಾದರು.
ಕೋಣಿ ಪಂಚಾಯತ್ ಮಾಜಿ ಅಧ್ಯಕ್ಷ ಮಾಧವ ಹೆಬ್ಬಾರರ ಸಹೋದರರಾಗಿರುವ ಇವರುಸಮಾಜ ಸೇವಕರಾಗಿ,ದಾನಿಗಳಾಗಿ ಗ್ರಾಮದ ಅಭಿವೃಧ್ದಿಯಲ್ಲೂ ತೊಡಗಿಸಿಕೊಂಡಿದ್ದರು
ಪತ್ನಿ ನಿಧನರಾಗಿದ್ದು,ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಖ್ಯಾತ ಲೇಖಕ,ಜೇಸಿ ರಾಷ್ಟ್ರೀಯ ತರಬೇತುದಾರ,ರಕ್ಷಣಾ ಇಲಾಖೆಯ ಡಿ ಆರ್ ಡಿ ಒ ಸಂಪರ್ಕಾಧಿಕಾರಿ ಕೆ.ಜಯಪ್ರಕಾಶ್ ರಾವ್ ಅವರ ಭಾವ.