ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು

JANANUDI.COM NETWORK

 

ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬದಿಂದ ಹಿಂದುಳಿದ ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ 2 ಲಕ್ಷ ರೂ.ಮೌಲ್ಯದ ಆಹಾರ ಪದಾರ್ಥಗಳ ನೆರವು

 

 

ಜಗತ್ತಿಗೆ ಮಹಾಮಾರಿಯಾಗಿ ಕೊರೊನಾ ಕಾಡುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಆದರೂ ಅಲ್ಲಲ್ಲಿ ಮಾನವೀಯತೆಯ ಒರತೆ ಚಿಮ್ಮುತ್ತಲೇ ಇದೆ. ಗಾವಳಿ ಹಳ್ಳಾಡಿಯ  ಆಸುಪಾಸಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ,ಬಡ ಕೂಲಿಕಾರ್ಮಿಕ 70 ಕುಟುಂಬಗಳಿಗೆ  ಎಲೆ ಮರೆಯ ಕಾಯಿಯಂತೆ ಇರುವ ನಮ್ಮ ಮಹೇಶ್ ನಾರಾಯಣ ಶೆಣೈ ಗಾವಳಿ ಕುಟುಂಬವು ಸುಮಾರು 2ಲಕ್ಷ ರೂ.ಮೌಲ್ಯದ ದೈನಂದಿನ ಆಹಾರ ಪದಾರ್ಥಗಳನ್ನು ಸಹಾಯದ ರೂಪದಲ್ಲಿ ನೀಡಿದೆ.

ಇಂತಹ ನಿಸ್ಪೃಹ ಮನಸ್ಸಿನ ವ್ಯಕ್ತಿತ್ವದವರಾಗಿ ಮನುಕುಲದ ಉದ್ಧಾರಕ್ಕಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ಸಹಾಯಗೈದ ಸಹಾಯ ಮಾಡಿದ ಗಾವಳಿ ಕುಟುಂಬಕ್ಕೆ ಕ್ರತಜ್ಞತೆಯನ್ನು  ಸಲ್ಲಿಸಲಾಯಿತು.