ಮರವಂತೆಯ  ಮೀನು ವ್ಯಾಪಾರಿಯ ಕೊಲೆ ಯತ್ನ: ಮಹಾರಾಷ್ಟ್ರದ ನಾಲ್ವರು ಶಾರ್ಪ್ ಶೂಟರಗಳ ಬಂಧನ

JANANUDI.COM NETWORK

 

 

ಮರವಂತೆಯ  ಮೀನು ವ್ಯಾಪಾರಿಯ ಕೊಲೆ ಯತ್ನ: ಮಹಾರಾಷ್ಟ್ರದ ನಾಲ್ವರು ಶಾರ್ಪ್ ಶೂಟರಗಳ ಬಂಧನ

 

 

ಕುಂದಾಪುರ: ಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಮರವಂತೆಯ ಮರವಂತೆ  ಮೊಹಮ್ಮದ್ ಶಾಖೀರ್ ಮೀನು ವ್ಯಾಪಾರಿಯೊರ್ವರ ಮೇಲೆ ಕೊಲೆ ಯತ್ನ ನಡೆಸಲು ಮಹಾರಾಷ್ಟ್ರದ ರತ್ನಗಿರಿಯಿಂದ ಮಾರಕಾಯುಧಗಳೊಂದಿಗೆ ಬಂದಿದ್ದ ನಾಲ್ವರು ಆರೋಪಿಗಳನ್ನು  ಕಾರ್ಯಾಚರಣೆ ನಡೆಸಿ ಕುಂದಾಪುರ ಪೊಲೀಸರು ಬಂಧಿಸಿ ಸಂಭವಿಸಬಹುದಾದ ದುರಂತವೊಂದನ್ನು ತಪ್ಪಿಸಿರುವ ಘಟನೆ ಶುಕ್ರವಾರ ಕುಂದಾಪುರದಲ್ಲಿ ನಡೆದಿದೆ.

 

 

ಕಳೆದ 2 ವರ್ಷಗಳಿಂದ ಮರವಂತೆ ನಿವಾಸಿ ಮೊಹಮ್ಮದ್ ಶಾಖೀರ್ ಹಾಗೂ ರತ್ನಗಿರಿಯ ದಾನೀಶ್ ಪಾಟೀಲ್ ಎಂಬವರ ಜೊತೆ ಮೀನು ವ್ಯವಹಾರ ನಡೆಯುತಿತ್ತು. ಈ ವ್ಯವಹಾರದಲ್ಲಿ ಶಾಖೀರ್‌ಗೆ ೫೦ ಲಕ್ಷ ಬಾಕಿ ಇರುವುದಾಗಿ ಕರೆ ಮಾಡಿದ್ದ ದಾನಿಶ್ ತಿಳಿಸಿದ್ದ. ಶಾಖೀರ್ ನಾನು ಪಡೆದ ಮೀನುಗಳಿಗಿಂತಲೂ ಹೆಚ್ಚು ಹಣ ನೀಡಿದ್ದಾಗಿ ತಿಳಿಸಿ ಕರೆಯನ್ನು ಕರೆ ಕಟ್ ಮಾಡಿದ್ದ ಎನ್ನಲಾಗಿದೆ.. ಇದರಿಂದ ಕುಪಿತಗೊಂಡಿದ್ದ ದಾನೀಶ್ ಪದೆ ಪದೆ ಕರೆ ಮಾಡಿ ಹಣ ಕೊಡವಂತೆ ಹೇಳುತ್ತಿದ್ದ. ಶಾಖೀರ್ ತಂದೆಗೂ ಕರೆ ಮಾಡಿ ಹಣಕ್ಕಾಗಿ ಪೀಡಿಸಿದ್ದ ಎಂದು ಹೇಳಲಾಗಿದೆ.. ಹಣ ನೀಡದೆ ಇದ್ದರೆ ಕುಂದಾಪುರಕ್ಕೆ ಬಂದು ನೋಡಿಕೊಳ್ಳುವುದಾಗಿ ಬೆದರಿಕೆ ನೀಡಿದ್ದಾಗಿ ಶಾಖೀರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಣ ಕೊಡದಿದ್ದರೆ ಶಾಖೀರನನ್ನು ಮುಗಿಸುವ ಪ್ಲ್ಯಾನ್
ಶಾಖೀರನಿಂದ ಹಣ ಪಡೆಯು ಯೋಜನೆ ರೂಪಿಸಿದ್ದ ದಾನೀಶ್ ಪಾಟೀಲ್ ಶುಕ್ರವಾರ ಬೆಳಿಗ್ಗೆ ತನ್ನ ೩ ಸ್ನೇಹಿತರ ಜತೆ ಕುಂದಾಪುರಕ್ಕೆ ಬಂದಿದ್ದ. ನಗರದ ಹೊರವಲಯದ ಹಂಗಳೂರು ಜೂಲಿಯೊ  ಖಾಸಗಿ ವಸತಿ ಗ್ರಹದಲ್ಲಿ ಕೊಠಡಿ ಪಡೆದುಕೊಂಡಿದ್ದ ಆರೋಪಿಗಳು ಹಂಗಳೂರಿನಲ್ಲಿ ಇದ್ದ ಶಾಖೀರ್ ಅವರ ಪ್ಲಾಟ್‌ಗೆ ಹೋಗಿ ಹಣ ಕೊಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಲೆಕ್ಕಾಚಾರಕ್ಕಾಗಿ ಲಾಡ್ಜ್‌ಗೆ ಬರುವಂತೆ ಬೆದರಿಸಿದ್ದ

ವಾಪಾಸಾಗಿದ್ದಾರೆ. ಸಂಜೆ 6.30ರ ವೇಳೆಗೆ ಸ್ನೇಹಿತ ಸುಹೈಲ್‌ನೊಂದಿಗೆ ಕಾರಿನಲ್ಲಿ ಕುಂದಾಪುರದತ್ತ ಹೋಗುತ್ತಿದ್ದ ಶಾಖೀರ್‌ನನ್ನು ಹಂಗಳೂರಿನ ಭಾಷಾ ಟ್ರಾನ್ಸ್‌ಪೋರ್ಟ್ ಬಳಿಯಲ್ಲಿ ಅಡ್ಡ ಹಾಕಿದ್ದ ಆರೋಪಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಅವರಿಂದ ತಪ್ಪಿಸಿಕೊಂಡಿದ್ದ ಶಾಖೀರ್, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ಕುಂದಾಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:
ದೂರು ದಾಖಲಿಸಿಕೊಂಡ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಪೊಲೀಸ್ ತಂಡ ರಚಿಸಿ ಆರೋಪಿಗಳ ಬಂಧನಕ್ಕಾಗಿ ಕಾಯಾಚರಣೆ ನಡೆಸಿದ್ದಾರೆ. ಆರೋಪಿಗಳ ಕಾರನ್ನು ಬೆಂಬತ್ತಿದ ಪೊಲೀಸರು ಕೋಟೇಶ್ವರದ ಫ್ಲೈಓವರ್ ಬಳಿ ಕಾರನ್ನು ತಡೆದು ಮಹಾರಾಷ್ಟ್ರದ ರತ್ನಗಿರಿಯ ನಿವಾಸಿ ದಾನೀಶ್ ಪಾಟೀಲ್(34), ಅಝೀಂ ಕಾಜಿ(39), ಮುಖಾದ್ದರ್(34) ಹಾಗೂ ಪ್ರಸಾದ್(47) ಎನ್ನುವವರನ್ನು ಬಂಧಿಸಿದ್ದಾರೆ. ಇವರುಗಳು ಶಾರ್ಪ್ ಶೂಟರಗಳೆಂದು ತಿಳಿದು ಬಂದಿದೆ. . ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಎರಡು ದೊಡ್ಡ ಚೂರಿ, ಒಂದು ಬಟನ್ ಚಾಕು, ಸ್ಕ್ರೂಡ್ರೈವರ್ ಹಾಗೂ ಮಹಾರಾಷ್ಟ್ರ ನೋಂದಣಿಯ ಜೈಲೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಾಪುರದ ಉಪ ಎಎಸ್‌ಪಿ ಹರಿರಾಂಶಂಕರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

 

 

ಪೊಲೀಸರ ಕಾರ್ಯಚರಣೆ ಮೆಚ್ಚುಗೆ ಪಡೆದಿದೆ
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಎಸ್‌ಐ ಸುಧಾಕರ್, ಹೆಡ್ ಕಾನ್ಸ್‌ಟೇಬಲ್‌ಗಳಾದ ಮಂಜು, ಸಂತೋಷ್, ಜೋಸೇಫ್, ಚಂದ್ರ ಶೆಟ್ಡಿ, ರಾಜು ನಾಕ್, ರಾಘವೇಂದ್ರ, ಕಾನ್ಸ್‌ಟೇಬಲ್‌ಗಳಾದ ಅಶ್ವಿನ್, ಶಾಂತಾರಾಮ್, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ್, ಪ್ರಸನ್ನ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು