ಬೆಳ್ಮಣ್ಣು ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕ ಚಂದ್ರಶೇಖರ್ ರಾವ್ ಗೆ ಗೌರವಿಸಲಾಯಿತು.

ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ಣು:  ಅಂತರಾಷ್ಟ್ರೀಯ ಸಂಸ್ಥೆಯಾದ  ರೋಟರಿ ಕ್ಲಬ್  ಬೆಳ್ಮಣ್ಣು , ಶಿಕ್ಷಕರ ದಿನಾಚರಣೆ ಅಂಗವಾಗಿ  ಅತ್ಯುತ್ತಮ  ಶಿಕ್ಷಕ  ಪುರಸ್ಕೃತರಾಗಿರುವ  ನಂದಳಿಕೆ   ಪಡುಬೆಟ್ಟು  ಶಾಲೆಯ ಮುಖ್ಯಶಿಕ್ಷಕ ರಾಗಿರುವ  ನಂದಳಿಕೆ  ಚಂದ್ರಶೇಖರ್ ರಾವ್  ಇವರನ್ನು  ರೋಟರಿ ಸಂಸ್ಥೆ ಈ ವರ್ಷದ ಅತ್ಯುತ್ತಮ ಶಿಕ್ಷಕ  ಪ್ರಶಸ್ತಿ ನೀಡಿ  ಗೌರವಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವ   ರೋ.  ಸುಭಾಷ್ ಕುಮಾರ್  ನಂದಳಿಕೆ  ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪೂರ್ವ ಜಿಲ್ಲಾ  ಉಪ ಗವರ್ನರ್  ಆಗಿರುವ  ರೋ ಸೂರ್ಯಕಾಂತ್ ಶೆಟ್ಟಿ  ಅಭಿನಂದನಾ ಭಾಷಣ  ಮಾಡಿದರು. ಈ ಕಾರ್ಯಕ್ರಮದಲ್ಲಿ    ರೋಟೇರಿಯನ್ ಸತ್ಯಪ್ರಸಾದ್ ಶೆಟ್ಟಿ, ರೋ ರಾಜೇಶ್  ಸಾಲಿಯನ್ ಉಪಸ್ಥರಿದ್ದರು, ಕಾರ್ಯದರ್ಶಿ  ರೋ ರವಿರಾಜ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.