ಬೆಂಗಳೂರು: ಕುಡಿಯುವ ನೀರಿನ ಟ್ಯಾಂಕ್ಗೆ ಬಿದ್ದು ಮಹಿಳೆ ಆತ್ಮಹತ್ಯೆ: ಅಪಾರ್ಟ್ಮೆಂಟ್ ನವರು 3 ದಿನ ಅದೇ ನೀರು ಬಳಸಿದ್ದರು

JANANUDI.COM NETWORK

.

ಬೆಂಗಳೂರು: ಅಪಾರ್ಟ್​ಮೆಂಟ್​ನ ಕುಡಿಯುವ ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕದ ನ್ಯೂ ಟೌನ್​ನ ನಾಲ್ಕನೆ ಹಂತದಲ್ಲಿ ನಡೆದಿದೆ. 

 ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅವರು ಶುಕ್ರವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಯಿತು

    ಗೌರಿ ನಾಗರಾಜ್ ಮೃತ ಮಹಿಳೆ. ಹಣಕಾಸು ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತಂಕಕಾರಿ ವಿಷಯ ಅಂದರೆ ಕಳೆದ ಮೂರು ದಿನದಿಂದ ಇದೇ ಟಾಂಕಿಯ ನೀರನ್ನು ಅಪಾರ್ಟ್​ಮೆಂಟ್​ ನಿವಾಸಿಗಳು ಸ್ನಾನಕ್ಕೆ, ಕುಡಿಯುವುದಕ್ಕೆ ಹಾಗೂ ಮನೆ‌ ಕೆಲಸಕ್ಕೆ ಎಲ್ಲದಕ್ಕು  ಬಳಸಿದ್ದರು. ಇದೀಗ ಟ್ಯಾಂಕಿಯಲ್ಲಿ ಶವ ಪತ್ತೆಯಾಗಿದ್ದು ತಿಳಿದು, ಅಪಾರ್ಟ್​ಮೆಂಟ್​ನವರು ಭಯಭೀತಗೊಂಡಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆಂದು ಹೇಳಲಾಗುತ್ತದೆ

    ಸದ್ಯ ಮೃತ ದೇಹ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಮಹಿಳೆಗೆ ಕರೊನಾ‌ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆಯಿಂದ ತಿಳಿಯಬೇಕಾಗಿದೆ. ಘಟನೆಯ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಮ್ರತಳು ಡೆತ್​ನೋಟ್ ಬರೆದಿಟ್ಟಿದ್ದು ಪತ್ತೆಯಾಗಿದೆ.

ಮೃತ ಗೌರಿ ಸುಮಾರು ಹತ್ತು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದು, ಜಯಸೂರ್ಯ ಬಿಲ್ಡರ್ಸ್ ಮೇಲೆ ಆರೋಪ‌ ಮಾಡಿದ್ದಾರೆ. ಹಣ ಕೊಡಬೇಕು ಎಂದು ಜಯಸೂರ್ಯ ಬಿಲ್ಡರ್ಸ್​ನ ಮೂರು ಸದಸ್ಯರಾದ ಗೋಪಿ, ಭಾರ್ಗವ್ ಹಾಗೂ ದೇವರಾಜೇಂದ್ರಪ್ಪ ಎಂಬುವರ ವಿರುದ್ಧ ದೂರಿ ಬರೆದಿದ್ದಾರೆ. ಮೃತ ಗೌರಿನಾಗರಾಜ್ ಸೈಟ್ ಕೊಡಿಸುವ ವ್ಯವಹಾರ ಮಾಡುತ್ತಿದ್ದರು. ಸದ್ಯ ಮಹಿಳೆಯ ಡೆತ್ ನೋಟ್ ಆಧಾರದ ಮೇಲೆ ಜಯಸೂರ್ಯ ಬಿಲ್ಡರ್ಸ್​ನ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.