ಬೀಜಾಡಿ ಮಿತ್ರ ಸಂಗಮದ 23ನೇ ವಾರ್ಷಿಕೋತ್ಸವ: ತಾಂತ್ರಿಕ ಶಿಲ್ಪಿ ರಾಮಚಂದ್ರ ಆಚಾರ್ಯ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ

JANANUDI.COM NETWORK

 

ಬೀಜಾಡಿ ಮಿತ್ರ ಸಂಗಮದ 23ನೇ ವಾರ್ಷಿಕೋತ್ಸವ:
ತಾಂತ್ರಿಕ ಶಿಲ್ಪಿ ರಾಮಚಂದ್ರ ಆಚಾರ್ಯ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ

 

 

ಬೀಜಾಡಿ:ಮಿತ್ರ ಸಂಗಮ ಜನಪರ, ಸಮಾಜ ಪರ ಕಾರ್ಯಕ್ರಮವನ್ನು ಸಂಘಟಿಸಿದ್ದನ್ನು ಕಂಡರೆ ಇಂತಹ ಸಂಘಟನೆಗಳು ಪ್ರತಿ ಊರಿನಲ್ಲೂ ಇದ್ದರೆ ಆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ.ಈ ಸಂಸ್ಥೆ ಬೀಜಾಡಿ ಪರಿಸರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 23ನೇ ವಾರ್ಷಿಕೋತ್ಸವ, ನಮ್ಮೂರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿಯನ್ನು ತಾಂತ್ರಿಕ ಶಿಲ್ಪಿ ಕೋಟ ರಾಮಚಂದ್ರ ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು.ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿವೃತ್ತ ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೋಟ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಆಗಮಿಸಿ ಶುಭ ಹಾರೈಸಿದರು.
ಸ್ಥಳಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಅಶಕ್ತರಿಗೆ ಸಹಾಯಧನ,ಬಡ ಕುಟುಂಬಕ್ಕೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರ ಬಿ.ಎನ್ ವರದಿ, ಶ್ರೀಕಾಂತ ಭಟ್ ಸಂದೇಶ, ಅನುಪ್ ಕುಮಾರ್ ಬಿ.ಆರ್, ಗಿರೀಶ್ ಕೆ.ಎಸ್, ಶ್ರೀನಿಧಿ ಭಟ್ ಸನ್ಮಾನ ಪತ್ರ, ಪ್ರದೀಪ್ ದೇವಾಡಿಗ, ರಾಜೇಶ್ ಆಚಾರ್ಯ ಪ್ರತಿಭಾ ಪುರಸ್ಕøರದ ಪಟ್ಟ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೀಜಾಡಿ ಮೂಡು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು, ಜೀ ಕನ್ನಡ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಮಿಣ್ಕ್ ಸಿಂಚನಾ ಕೋಟೇಶ್ವರ ಅವರ ಡ್ರಾಮಾ ಅಭಿನಯ, ಯಕ್ಷಗಾನದ ಮಿಂಚುಳ್ಳಿ ಸುಶ್ಮಿತಾ ಸಾಲಿಗ್ರಾಮ ಇವರಿಂದ ಯಕ್ಷ ನಾಟ್ಯ ವೈಭವ, ಸಾಸ್ತಾನ ಸಾಧನಾ ಕಲಾ ತಂಡ ಇವರಿಂದ ಸಾಮಾಜಿಕ ನಗೆ ನಾಟಕ ಕಿತಾಪತಿ ಕಿಟ್ಟಿ ಪ್ರದರ್ಶನಗೊಂಡಿತು.
ಚಿತ್ರ//16ಸಿಬಿ1//ಶನಿವಾರ ಬೀಜಾಡಿ ಮಿತ್ರ ಸಂಗಮದ 23ನೇ ವಾರ್ಷಿಕೋತ್ಸವದಲ್ಲಿ ತಾಂತ್ರಿಕ ಶಿಲ್ಪಿ ರಾಮಚಂದ್ರ ಆಚಾರ್ಯ ಅವರಿಗೆ ನಮ್ಮೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.